ಆ್ಯಪ್ನಗರ

9 ದಿನ ಮಹಿಳೆಯನ್ನು ಪೂಜಿಸುವ ನಾಡಿನಲ್ಲಿಯೇ ಮಹಿಳೆಯರ ಮೇಲೆ ದೌರ್ಜನ್ಯ ಜಾಸ್ತಿ: ವಿಜಯಲಕ್ಷ್ಮೀ ದರ್ಶನ್!

ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಪತ್ನಿ ಅವರು ನವರಾತ್ರಿ ವಿಚಾರವಾಗಿ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ. ಈ ಬಗ್ಗೆ ಪರ-ವಿರೋಧದ ಮಾತುಗಳು ಕೇಳಿಬರುತ್ತಿವೆ, ಹಾಗಾದರೆ ಅವರು ಹಾಕಿದ ಟ್ವೀಟ್ ಏನು ಹೇಳುತ್ತದೆ?

Authored byಟೀನಾ | Vijaya Karnataka Web 18 Oct 2020, 2:20 pm
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಟ್ವಿಟರ್‌ನಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ಅವರು ಅಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ದೇಶ ನವರಾತ್ರಿ ಆಚರಣೆ ಮಾಡುವ ಸಂಭ್ರಮದಲ್ಲಿದೆ. ಹೀಗಾಗಿ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ನವರಾತ್ರಿ ಶುಭಾಶಯ ತಿಳಿಸುತ್ತಿದ್ದರೆ, ವಿಜಯಲಕ್ಷ್ಮೀ ಅವರು ಬೇರೆಯದೇ ಆದ ಮಾತನಾಡಿದ್ದಾರೆ.
Vijaya Karnataka Web challenging star darshan wife vijayalakshmi tweet about navaratri
9 ದಿನ ಮಹಿಳೆಯನ್ನು ಪೂಜಿಸುವ ನಾಡಿನಲ್ಲಿಯೇ ಮಹಿಳೆಯರ ಮೇಲೆ ದೌರ್ಜನ್ಯ ಜಾಸ್ತಿ: ವಿಜಯಲಕ್ಷ್ಮೀ ದರ್ಶನ್!


ವಿಜಯಲಕ್ಷ್ಮೀ ಟ್ವೀಟ್ ಅರ್ಥವೇನು?
'ದೇಶದಲ್ಲಿ ಮಹಿಳೆಯ ಮೇಲೆ ಸಾಕಷ್ಟು ಅಪರಾಧ ಮಾಡಲಾಗುತ್ತಿದೆ, ಆದರೂ ಕೂಡ 9 ದಿನಗಳ ಕಾಲ ನವರಾತ್ರಿ ಆಚರಣೆ ಮಾಡುತ್ತೇವೆ' ಎಂದು ವಿಜಯಲಕ್ಷ್ಮೀ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಅನೇಕರು ಪ್ರತಿಕ್ರಿಯೆ ನೀಡಿದ್ದು, 'ಮಹಿಳೆಯ ಬೆಲೆ ಕೆಲವರಿಗೆ ತಿಳಿದಿಲ್ಲ. ನಮ್ಮ ಭರತಖಂಡದಲ್ಲಿ ಹಿಂದೂಗಳು ಸಾವಿರಾರು ವರ್ಷಗಳಿಂದಲೂ ಮಹಿಳೆಗೆ ದೇವರ ಸ್ಥಾನವನ್ನು ಕೊಟ್ಟಿದ್ದಾರೆ. ನಮ್ಮ ದೇಶ ಭಾರತವನ್ನು ಭಾರತಾಂಬೆಗೆ ಹೋಲಿಸುತ್ತೇವೆ. ಕರ್ನಾಟಕವನ್ನು ಕನ್ನಡಾಂಬೆಗೆ ಹೋಲಿಸಿ ಮಹಿಳೆಯರಿಗೆ ಗೌರವ ಕೊಡುತ್ತಿದ್ದೇವೆ. ಇತರ ಬೇರೆ ದೇಶಗಳಲ್ಲಿ ಬೇರೆ ಧರ್ಮಗಳಲ್ಲಿ ಮಹಿಳೆಯರಿಗೆ ಗೌರವವನ್ನು ಕೊಡುವುದನ್ನು ನೀವು ತೋರಿಸಿ' ಎಂದು ಉತ್ತರ ನೀಡಿದ್ದಾರೆ.

ವಿಜಯಲಕ್ಷ್ಮೀ ಟ್ವೀಟ್‌ಗೆ ಮಿಶ್ರ ಪ್ರತಿಕ್ರಿಯೆ
'ಅದರ ವಿರುದ್ಧ ಹೋರಾಡಿ ಬೇಡ ಎಂದವರಾರು ಅದನ್ನು ಬಿಟ್ಟು ನಿಮ್ಮ ಪ್ರಚಾರಕ್ಕಾಗಿ ಹಿಂದೂ ದೇವರುಗಳನ್ನು ಬಳಸಿಕೊಳ್ಳುವುದು ತಪ್ಪು, ಕ್ಷಮೆ ಕೇಳಿ ದೊಡ್ಡವರೆನಿಸಿಕೊಳ್ಳಿ' ಎಂಬ ಮಾತುಗಳು ಕೂಡ ಕೇಳಿಬಂದಿವೆ. ಕಠಿಣ ಕಾನೂನು ಕ್ರಮ ಇಲ್ಲದ ಕಾರಣ ಇಂಥ ದೌರ್ಜನ್ಯ ಆಗ್ತಿರೋದು. ನೀವು ದೂರಬೇಕಿರೋದು ಕಾನೂನನ್ನ, ನಮ್ಮ ಧರ್ಮ ಆಚರಣೆಗಳನ್ನಲ್ಲ. ಎಲ್ಲ ಧರ್ಮದಲ್ಲೂ ಇಂಥ ಜನ ಇರ್ತಾರೆ. ಒಂದೇ ಧರ್ಮದ ಮೇಲೆ ಅಪವಾದ ಹೊರಿಸೋದು ತಪ್ಪು' ಎಂದು ಕೆಲ ನೆಟ್ಟಿಗರು ಟ್ವೀಟ್ ಮಾಡಿದ್ದಾರೆ. ಒಟ್ಟಿನಲ್ಲಿ ವಿಜಯಲಕ್ಷ್ಮೀ ಟ್ವೀಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಯಶಸ್ವಿ ಉದ್ಯಮಿ ವಿಜಯಲಕ್ಷ್ಮೀ
ವಿಜಯಲಕ್ಷ್ಮೀ ಅವರು ಈಗ ಉದ್ಯಮಿಯಾಗಿದ್ದಾರೆ. ನೈಸರ್ಗಿಕ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಹೀಗಾಗಿ ಇವರಿಗೆ ಇತ್ತೀಚೆಗೆ ಉತ್ತಮ ಮಹಿಳಾ ಉದ್ಯಮಿ ಎಂಬ ಪ್ರಶಸ್ತಿ ಕೂಡ ಸಿಕ್ಕಿತ್ತು. 'ಕೊರೊನಾ ವೈರಸ್‌ ಸೋಂಕಿನಿಂದಾಗಿ ಸಣ್ಣ ಉದ್ಯಮಗಳು ತುಂಬ ತೊಂದರೆಯಲ್ಲಿವೆ. ತರಕಾರಿಗಳನ್ನು ಸ್ಥಳೀಯ ಅಂಗಡಿಗಳಿಂದ ಖರೀದಿ ಮಾಡಿ. ಅಮೆಜಾನ್, ಪಿಜ್ಜಾ, ಕೆಎಫ್‌ಸಿ, ಮ್ಯಾಕ್ ಡೊನಾಲ್ಡ್ ಲಾಕ್ ಡೌನ್ ಇದ್ದರೂ ಬದುಕುತ್ತವೆ. ಆದರೆ ಸಣ್ಣ ವ್ಯಾಪಾರಿಗಳ ಕಷ್ಟವನ್ನು ಹೇಳಿ ಮುಗಿಸಲಾಗೋದಿಲ್ಲ. ಅಕ್ಕಪಕ್ಕದ ಕಿರಾಣಿ ಅಂಗಡಿಗಳಿಗೆ ಹೋಗಿ ವ್ಯಾಪಾರ ಮಾಡಿ' ಎಂದು ವಿಜಯಲಕ್ಷ್ಮೀ ದರ್ಶನ್ ಕೆಲದಿನಗಳ ಹಿಂದೆ ಟ್ವೀಟ್ ಮಾಡಿದ್ದರು.
Also Read-'ಪಿಜ್ಜಾ, ಬರ್ಗರ್ ಬಿಡಿ, ಕಿರಾಣಿ ಅಂಗಡಿಗಳಿಗೆ ಹೋಗಿ' ಎಂದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌