ಆ್ಯಪ್ನಗರ

#FightAgainstCorona: ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಕಪಿಲ್ ಶರ್ಮಾ ಭಾರಿ ದೇಣಿಗೆ

ಕೊರೊನಾ ಮಣಿಸಲು ಹಲವಾರು ತಾರೆಗಳು ಕೈಜೋಡಿಸಿದ್ದು ಇದಕ್ಕಾಗಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಹಣಕಾಸು ನೆರವನ್ನೂ ನೀಡುತ್ತಿದ್ದಾರೆ. ಈ ವಿಚಾರದಲ್ಲಿ ಕಾಮಿಡಿಯನ್, ನಟ ಕಪಿಲ್ ಶರ್ಮಾ ಸಹ ಒಂದು ಹೆಜ್ಜೆ ಮುಂದಿದ್ದು ರಿಲೀಫ್ ಫಂಡ್ ಗೆ ಭಾರಿ ಪರಿಹಾರದ ಮೊತ್ತವನ್ನು ನೀಡಿದ್ದಾರೆ.

Vijaya Karnataka Web 26 Mar 2020, 8:27 pm
ಕೊರೊನಾ ಮಹಾಮಾರಿಯನ್ನು ಮಣಿಸಲು ಇಡೀ ದೇಶವೇ ಒಂದಾಗಿದೆ. ಇಪ್ಪತ್ತೊಂದು ದಿನಗಳ ಲಾಕ್‍ಡೌನ್‍ಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಹಲವಾರು ಕಿರುತೆರೆ ತಾರೆಗಳು ಲಾಕ್‍ಡೌನ್‍ಗೆ ಬೆಂಬಲ ಸೂಚಿಸಿದ್ದು ಮನೆಯಲ್ಲೇ ಇರುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
Vijaya Karnataka Web ಕಪಿಲ್ ಶರ್ಮಾ


ಕಾಮಿಡಿಯನ್, ನಟ ಕಪಿಲ್ ಶರ್ಮಾ ಅವರು ಕೊರೊನಾ ಮಣಿಸಲು ಕೈಜೋಡಿಸಿದ್ದು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ರೂ.50 ಲಕ್ಷಗಳನ್ನು ನೀಡಿದ್ದಾರೆ. ಈ ಬಗ್ಗೆ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಮಾಹಿತಿ ನೀಡಿದ್ದಾರೆ. "ನಾವೆಲ್ಲಾ ಒಗ್ಗಟ್ಟಾಗಿ ಹೋರಾಡಬೇಕಾದ ಸಮಯ ಇದು. ಕೊರೊನಾ ವಿರುದ್ಧ ಹೋರಾಡಲು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ರೂ. 50 ಲಕ್ಷ ದೇಣಿಗೆ ನೀಡುತ್ತಿದ್ದೇನೆ. ಪ್ರತಿಯೊಬ್ಬರೂ ಮನೆಯಲ್ಲೇ ಇರುವಂತೆ ವಿನಂತಿಸಿಕೊಳ್ಳುತ್ತಿದ್ದೇನೆ. ಸುರಕ್ಷಿತವಾಗಿರಿ, ಜೈ ಹಿಂದ್" ಎಂದಿದ್ದಾರೆ.

ಇದಕ್ಕೂ ಮುನ್ನ ದಿನಗೂಲಿ ಕಾರ್ಮಿಕರಿಗೆ ಸಹಾಯಹಸ್ತ ಚಾಚುವಂತೆ ಜನರಲ್ಲಿ ಮನವಿ ಮಾಡಿದ್ದರು ಕಪಿಲ್. ಲಾಕ್‍ಡೌನ್‍ನಿಂದಾಗಿ ಊಟಕ್ಕೂ ತೊಂದರೆಯಾಗಿರುವವರಿಗೆ ದವಸ-ಧಾನ್ಯ, ದಿನಸಿ ನೀಡಿ ಸಹಾಯ ಮಾಡುವಂತೆ ವಿನಂತಿಸಿಕೊಂಡಿದ್ದರು.

ಒಮ್ಮೆ ಕೋತಿಯೊಂದು ನನ್ನ ಕೆನ್ನೆಗೆ ಬಾರಿಸಿತ್ತು: ಪ್ರಿಯಾಂಕಾ ಚೋಪ್ರಾ

ಇದುವರೆಗೂ ಭಾರತದಲ್ಲಿ 649 ಮಂದಿಗೆ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಪಿಲ್ ಶರ್ಮಾ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದು ಸುರಕ್ಷಿತವಾಗಿರಿ, ಮನೆಯಲ್ಲೇ ಉಳಿಯಿರಿ ಎಂದಿದ್ದರು. ಬಳಿಕ 'ಜನತಾ ಕರ್ಫ್ಯೂ'ಗೂ ಬೆಂಬಲ ಸೂಚಿಸಿ ಪ್ರಧಾನಿ ಮೋದಿ ಅವರು ಹೇಳಿದಂತೆ ಸಂಜೆ ಬಾಲ್ಕನಿ ಬಳಿ ಬಂದು ಚಪ್ಪಾಳೆ ತಟ್ಟುವ ಮೂಲಕ ಕೊರೊನಾ ವಿರುದ್ಧ ಹೋರಾಡುತ್ತಿರುವವರಿಗೆ ಗೌರವ ಸೂಚಿಸಿದ್ದರು.

ಕಪಿಲ್ ಮುಂದೆ ಕನ್ನಡ ಮಾತನಾಡಿದ ಕಿಚ್ಚ ಸುದೀಪ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌