ಆ್ಯಪ್ನಗರ

ಸೂಪರ್ ಮಾರ್ಕೆಟ್‍ನಲ್ಲಿ ಸರಕು ಕೊಳ್ಳಲು ಬಂದ ನಟ ಅಲ್ಲು ಅರ್ಜುನ್ ಫೋಟೋ ವೈರಲ್

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹೈದರಾಬಾದಿನ ಸೂಪರ್ ಮಾರ್ಕೆಟ್ ಒಂದರಕ್ಕೆ ಸ್ವತಃ ತಾವೇ ಬಂದು ಸರಕುಗಳನ್ನು ತೆಗೆದುಕೊಳ್ಳುತ್ತಿರುವ ಫೋಟೋ ವೈರಲ್ ಆಗಿದೆ. ಸಾಮಾನ್ಯರಂತೆ ಮುಖಕ್ಕೆ ಮಾಸ್ಕ್, ಕೈಗಳಿಗೆ ಗ್ಲೌಸ್ ಧರಿಸಿ ಕಾಣಿಸಿಕೊಂಡಿರುವ ಅವರ ಸರಳತೆಗೆ ಅಭಿಮಾನಿಗಳು ಬೆರಗಾಗಿದ್ದಾರೆ.

Vijaya Karnataka Web 28 Mar 2020, 12:10 am

ಕೊರೊನಾ ಭಯಕ್ಕೆ ಸೆಲೆಬ್ರಿಟಿಗಳು ಸಹ ಜನಸಾಮಾನ್ಯರಂತೆ ಸರಳ ಜೀವನಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಕೊರೊನಾ ವಿರುದ್ಧದ ಹೋರಾಟದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ದೇಶದಾದ್ಯಂತ ಲಾಕ್‍ಡೌನ್ ಘೋಷಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಸೆಲೆಬ್ರಿಟಿಗಳಿಂದ ಹಿಡಿದು ಜನಸಾಮನ್ಯರು ಈಗ ಮನೆಗೆ ಸೀಮಿತರಾಗಿದ್ದಾರೆ.
Vijaya Karnataka Web ಅಲ್ಲು ಅರ್ಜುನ್


ಅಗತ್ಯ ವಸ್ತುಗಳನ್ನು ಕೊಳ್ಳಲು ಬೆಳಗಿನ ಸ್ವಲ್ಪ ಸಮಯ ಲಾಕ್‍ಡೌನ್‍ಗೆ ವಿನಾಯಿತಿ ನೀಡಲಾಗಿದೆ. ಈ ಸಮಯದಲ್ಲಿ ಜನ ಮನೆಯಿಂದ ಹೊರಬಂದು ಅಗತ್ಯ ವಸ್ತು, ತರಕಾರಿ ಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಅದೇ ರೀತಿ ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ತನ್ನ ಕುಟುಂಬಕ್ಕೆ ಬೇಕಾದ ಸರಕುಗಳನ್ನು ಕೊಳ್ಳಲು ಸಾಮಾನ್ಯರಂತೆ ಸೂಪರ್ ಮಾರ್ಕೆಟ್‍ನಲ್ಲಿ ಕಾಣಿಸಿಕೊಂಡಿದ್ದಾರೆ

ಹೈದರಾಬಾದಿನ ಜೂಬ್ಲಿ ಹಿಲ್ಸ್‌ನ ಸೂಪರ್ ಮಾರುಕಟ್ಟೆಯಲ್ಲಿ ಸರಕುಗಳನ್ನು ಖರೀದಿಸುತ್ತಾ ಕಾಣಿಸಿದರು. ಮುಖಕ್ಕೆ ಮಾಸ್ಕ್, ಗ್ಲೌಸ್ ಧರಿಸಿದ್ದ ಅವರು ತನಗೆ ಬೇಕಾದ ವಸ್ತುಗಳನ್ನು ಖರೀದಿಸಿ ಬಿರಬಿರನೆ ಹೊರಟು ಹೋಗಿದ್ದಾರೆ. ಈಗ ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಅಲ್ಲು ಅರ್ಜುನ್ ಸರಳತೆಗೆ ಅಭಿಮಾನಿಗಳು ಸಹ ಬೆರಗಾಗಿದ್ದಾರೆ.
ಇನ್ನು ಕೊರೊನಾ ವಿರುದ್ದ ಹೋರಾಡಲು ಅಲ್ಲು ಅರ್ಜುನ್ ರೂ.1.25 ಕೋಟಿ ಪರಿಹಾರ ನಿಧಿಗೆ ನೀಡಿದ್ದಾರೆ. ಆಂಧ್ರ ಪ್ರದೇಶ್, ತೆಲಂಗಾಣ, ಕೇರಳ ರಾಜ್ಯಗಳಿಗೆ ಸೇರಿ ಈ ಮೊತ್ತವನ್ನು ನೀಡಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಒಂದನ್ನೂ ರಿಲೀಸ್ ಮಾಡಿದ್ದಾರೆ.

ಅಲ್ಲು ಅರ್ಜುನ್ ಮೇಲೆ ಕೋಪಗೊಂಡ 'ಮೆಗಾ ಸ್ಟಾರ್' ಚಿರಂಜೀವಿ ಫ್ಯಾನ್ಸ್!

"ಕೊರೊನಾ ವೈರಸ್ ಜಗತ್ತನೇ ನಡುಗಿಸುತ್ತಿದೆ. ಅಷ್ಟೇ ಅಲ್ಲದೆ ನಮ್ಮ ಜೀವನ ಶೈಲಿಯನ್ನೇ ಬದಲಾಯಿಸಿದೆ. ಇಂತಹ ಸಮಯದಲ್ಲಿ ವೈದ್ಯರು, ಸರ್ಸ್‌ಗಳು, ಮಿಲಿಟರಿ, ಪೊಲೀಸ್, ನಮಗಾಗಿ ತುಂಬಾ ಕಷ್ಟಪಡುತ್ತಿರುವವರ ಬಗ್ಗೆ ಮಾತನಾಡಬೇಕಾಗಿದೆ. ಅವರ ಸ್ಫೂರ್ತಿಯಿಂದ ನನ್ನ ಕೈಲಾದ ಸಣ್ಣ ಸಹಾಯ ಮಾಡಬೇಕೆಂದಿದ್ದೇನೆ. ಆಂಧ್ರ ಪ್ರದೇಶ್, ತೆಲಂಗಾಣ, ಕೇರಳ ಸರಕಾರಕ್ಕೆ ರೂ. 1. 25 ಕೋಟಿ ಪರಿಹಾರ ನಿಧಿಗೆ ನೀಡುತ್ತಿದ್ದೇನೆ" ಎಂದಿದ್ದಾರೆ.

ಕೈಗಳನ್ನು ಆಗಾಗ ಸ್ವಚ್ಛಗೊಳಿಸಿಕೊಳ್ಳುತ್ತಾ, ಸ್ವಯಂ ನಿರ್ಬಂಧದಲ್ಲಿ ಇರುವ ಮೂಲಕ ಕೊರೊನಾ ಸೋಂಕನ್ನು ನಿವಾರಿಸಬಹುದು. ಅತಿ ಶೀಘ್ರದಲ್ಲೇ ಕೊರೊನಾ ಅಂತ್ಯವಾಗಬೇಕು ಎಂದು ಬಯಸುತ್ತಿದ್ದೇನೆ ಎಂದಿದ್ದಾರೆ. ಮನೆಯಲ್ಲಿ ತನ್ನ ಕುಟುಂಬದ ಜೊತೆಗೆ, ಮಕ್ಕಳೊಂದಿಗೆ ಕಳೆಯುತ್ತಿದ್ದಾರೆ ಅಲ್ಲು ಅರ್ಜುನ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌