ಆ್ಯಪ್ನಗರ

Sudeep: ಬೆದರಿಕೆ ಪತ್ರ: ಕಿಚ್ಚ ಸುದೀಪ್ ವಿರುದ್ಧ ಮಾನಹಾನಿ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ ಪ್ರತಿಬಂಧಕಾದೇಶ

ಅಭಿನಯ ಚಕ್ರವರ್ತಿ ಸುದೀಪ್ ವಿರುದ್ಧ ಯಾವುದೇ ರೀತಿಯ ಮಾನಹಾನಿ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನ್ಯಾಯಾಲಯ ತಾತ್ಕಾಲಿಕ ಪ್ರತಿಬಂಧಕಾದೇಶ ನೀಡಿದೆ.

Authored byಹರ್ಷಿತಾ ಎನ್ | Vijaya Karnataka Web 11 Apr 2023, 11:54 pm

ಹೈಲೈಟ್ಸ್‌:

  • ಕಿಚ್ಚ ಸುದೀಪ್‌ಗೆ ಲಭಿಸಿತ್ತು ಎರಡು ಬೆದರಿಕೆ ಪತ್ರ
  • ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಪತ್ರದಲ್ಲಿ ಉಲ್ಲೇಖ
  • ಮಾನಹಾನಿ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್‌ನಿಂದ ಪ್ರತಿಬಂಧಕಾದೇಶ ತಂದ ಸುದೀಪ್

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web court issues restraining order to the media against telecasting defamatory news about kiccha sudeep
Sudeep: ಬೆದರಿಕೆ ಪತ್ರ: ಕಿಚ್ಚ ಸುದೀಪ್ ವಿರುದ್ಧ ಮಾನಹಾನಿ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ ಪ್ರತಿಬಂಧಕಾದೇಶ
ಕನ್ನಡ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ಗೆ ಎರಡು ಬೆದರಿಕೆ ಪತ್ರ ಲಭಿಸಿತ್ತು. ‘’ನಿಮ್ಮ ಖಾಸಗಿ ವಿಡಿಯೋಗಳನ್ನು ಲೀಕ್ ಮಾಡುತ್ತೇವೆ’’ ಎಂದು ಬೆದರಿಕೆ ಪತ್ರದಲ್ಲಿ ಕಿಡಿಗೇಡಿಗಳು ಉಲ್ಲೇಖಿಸಿದ್ದರು. ಅಷ್ಟೇ ಅಲ್ಲದೆ, ಬೆದರಿಕೆ ಪತ್ರದಲ್ಲಿ ಕಿಚ್ಚ ಸುದೀಪ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿತ್ತು. ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಸುದೀಪ್ ಅವರ ಆಪ್ತ, ನಿರ್ಮಾಪಕ ಜಾಕ್ ಮಂಜು ದೂರು ನೀಡಿದ್ದರು. ಐಪಿಸಿ ಸೆಕ್ಷನ್ 506, 504 ಅಡಿಯಲ್ಲಿ ಪ್ರಕರಣವನ್ನ ಪೊಲೀಸರು ದಾಖಲಿಸಿಕೊಂಡಿದ್ದರು. ಈಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ವಿರುದ್ಧ ಕಿಚ್ಚ ಸುದೀಪ್ ಪ್ರತಿಬಂಧಕಾಜ್ಞೆ ತಂದಿದ್ದಾರೆ.
ಹೌದು.. ಮಾಧ್ಯಮಗಳು ತಮ್ಮ ವಿರುದ್ಧ ಮಾನಹಾನಿ ಸುದ್ದಿ ಪ್ರಸಾರ ಮಾಡದಂತೆ ಪ್ರತಿಬಂಧಕಾದೇಶ ನೀಡುವಂತೆ ಕೋರಿ ಕಿಚ್ಚ ಸುದೀಪ್ 21ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಕಿಚ್ಚ ಸುದೀಪ್ ವಿರುದ್ಧ ಯಾವುದೇ ರೀತಿಯ ಮಾನಹಾನಿ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ತಾತ್ಕಾಲಿಕ ಪ್ರತಿಬಂಧಕಾದೇಶ ಹೊರಡಿಸಿದೆ.


ಮುನ್ನೆಚ್ಚರಿಕೆ ಕ್ರಮ

ಮಾನಹಾನಿ ಉಂಟುಮಾಡಲು ಕಿಡಿಗೇಡಿಗಳು ಫೇಕ್ ವಿಡಿಯೋಗಳನ್ನ ವೈರಲ್ ಮಾಡಬಹುದು ಎಂದು ಕಿಚ್ಚ ಸುದೀಪ್ ಈ ಮುನ್ನೆಚ್ಚರಿಕೆ ಕ್ರಮವನ್ನ ಕೈಗೊಂಡಿದ್ದಾರೆ.

Kiccha Sudeep: ಕಿಚ್ಚ ಸುದೀಪ್‌ಗೆ ಬೆದರಿಕೆ ಪತ್ರದ ಹಿಂದೆ ಮಾಜಿ ಕಾರು ಡ್ರೈವರ್ ಕೈವಾಡ?

ಕಿಚ್ಚ ಸುದೀಪ್ ಹೇಳಿದ್ದೇನು?

‘’ಕಿಡಿಗೇಡಿಗಳು ನನ್ನದಲ್ಲದ ಫೇಕ್ ವಿಡಿಯೋಗಳನ್ನ ವೈರಲ್ ಮಾಡಬಹುದು. ಅದರ ವಿರುದ್ಧ ಇದು ಮುನ್ನೆಚ್ಚರಿಕೆ ಕ್ರಮವಷ್ಟೇ. ಸಾಮಾಜಿಕ ಜಾಲತಾಣ ಸೇರಿದಂತೆ ಅನೇಕ ಡಿಜಿಟಲ್ ವೇದಿಕೆಗಳಿವೆ. ಅವುಗಳನ್ನ ದುರ್ಬಳಕೆ ಮಾಡಿಕೊಂಡು ಮಾನಹಾನಿ ಮಾಡುವ ಹುನ್ನಾರದ ವಿರುದ್ಧ ಈ ತಡೆಯಾಜ್ಞೆ ತಂದಿದ್ದೇವೆ’’ ಎಂದು ಮಾಧ್ಯಮಗಳಿಗೆ ಕಿಚ್ಚ ಸುದೀಪ್ ತಿಳಿಸಿದ್ದಾರೆ.

Kichcha Sudeep: ಬೆದರಿಕೆ ಹಾಕಿರೋರು ಚಿತ್ರರಂಗದವರೇ! ನಾನು ಯಾವುದಕ್ಕೂ ಹೆದರೋನಲ್ಲ - ಗುಡುಗಿದ ಕಿಚ್ಚ ಸುದೀಪ್

ಇದು ಚಿತ್ರರಂಗದವರದ್ದೇ ಕೆಲಸ ಎಂದಿದ್ದ ಕಿಚ್ಚ ಸುದೀಪ್

ಬೆದರಿಕೆ ಪತ್ರದ ವಿಚಾರವಾಗಿ ಮಾಧ್ಯಮಗಳೊಂದಿಗೆ ಈ ಹಿಂದೆ ಮಾತನಾಡಿದ್ದ ಕಿಚ್ಚ ಸುದೀಪ್, ‘’ಅಡ್ರೆಸ್ ಗೊತ್ತಿದೆ… ಪೋಸ್ಟ್ ಮಾಡಿದ್ದಾರೆ. ಆ ವಿಚಾರವೂ ಹೊರಗಡೆ ಬರುತ್ತೆ. ತೆಗೆಯುತ್ತೇನೆ ಹೊರಗೆ. ತೆಗೆಯದೆ ನಾನು ಸುಮ್ಮನೆ ಕೂರುವುದಿಲ್ಲ. ಎಲ್ಲಾ ಚಿತ್ರರಂಗದಲ್ಲೂ ಕೆಲವರು ಆಗದೆ ಇರೋರು ಇರುತ್ತಾರೆ. ನನ್ನ ಮಾತು ಏನಿದ್ದರೂ ಪ್ರೀತಿ ತೋರಿಸೋರಿಗೆ. ಪತ್ರ ಕಳುಹಿಸಿರೋರಿಗೂ ಒಂದು ಉತ್ತರ ಕೊಟ್ಟೇ ಕೊಡ್ತೀನಿ. ಯಾಕಂದ್ರೆ, ಅದು ಬೇರೆಯವರಿಗೂ ಪಾಠ ಆಗಬೇಕು’’

ನಟ 'ಕಿಚ್ಚ' ಸುದೀಪ್‌ಗೆ ಬೆದರಿಕೆ ಪತ್ರಗಳನ್ನು ಕಳುಹಿಸಿದ ಕಿಡಿಗೇಡಿ; ದೂರು ದಾಖಲು

‘’100% ಹೇಳ್ತೀನಿ. ಇದರಲ್ಲಿ ರಾಜಕೀಯ ಇಲ್ಲ. ಇದು ನಮ್ಮ ಚಿತ್ರರಂಗದಲ್ಲಿ ಇರೋರದ್ದೇ ಕೆಲವರದ್ದು ಕೆಲಸ. ಅದರಲ್ಲೂ ಯಾರೂ ಅಂತಲೂ ನನಗೆ ಗೊತ್ತು. ನಾನು ಯಾವುದಕ್ಕೂ ಹೆದರೋನಲ್ಲ. ಅದಂತೂ ಸತ್ಯ’’ ಎಂದಿದ್ದರು.
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌