ಕಳೆದ ವರ್ಷ ತೆರೆಕಂಡ 'D/o ಪಾರ್ವತಮ್ಮ' ಚಿತ್ರವು ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಹರಿಪ್ರಿಯಾ-ಸುಮಲತಾ ಅಂಬರೀಷ್ ಕಾಂಬಿನೇಷನ್ನಲ್ಲಿ ಈ ಸಿನಿಮಾ ಸಿದ್ಧಗೊಂಡಿತ್ತು. ಆ ಸಿನಿಮಾದ ಮೂಲಕ ಕೆ.ಎಂ. ಶಶಿಧರ್ ನಿರ್ಮಾಪಕನಾಗಿ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದರು. ಇದೀಗ ಅವರು ಪ್ರಜ್ವಲ್ ದೇವರಾಜ್ ನಾಯಕತ್ವದಲ್ಲಿ 'ವೀರಂ' ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಈ ಮಧ್ಯೆ ಹೊಸದೊಂದು ಸ್ಕ್ರಿಪ್ಟ್ ಅನ್ನು ಅವರೇ ಬರೆದಿದ್ದಾರೆ. ವಿಶೇಷವೆಂದರೆ, ಇದುವರೆಗೂ ನಟರಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಶಶಿಧರ್, ಈಗ ನಿರ್ದೇಶನಕ್ಕೂ ಕೈ ಹಾಕಿದ್ದಾರೆ.
ಸಕ್ಕರೆ ಕಾಯಿಲೆ ಬಗ್ಗೆ ಸಿನಿಮಾ
'ಹಲವು ದಿನಗಳಿಂದಲೂ ನನಗೆ ನಿರ್ದೇಶನದ ಮೇಲೆ ಒಲವು ಇತ್ತು. ರಮೇಶ್ ಅರವಿಂದ್ ಅವರ 'ಪುಷ್ಪಕ ವಿಮಾನ' ಚಿತ್ರಕ್ಕೆ ನಾನು ಕಾರ್ಯಕಾರಿ ನಿರ್ಮಾಪಕನಾಗಿದ್ದೆ. ನನಗೆ ನಿರ್ದೇಶನ ಮಾಡುವ ಕನಸಿತ್ತು. ಆಗಿನಿಂದಲೂ ನಿರ್ದೇಶಕರನ್ನು ಗಮನಿಸಿಕೊಂಡು ಬಂದಿದ್ದೆ. ಪ್ರಸ್ತುತ ಸಕ್ಕರೆ ಕಾಯಿಲೆ ಅನ್ನೋದು ಸರ್ವೇಸಾಮಾನ್ಯವಾಗಿದೆ. ಚಿಕ್ಕ ವಯಸ್ಸಿನವರಿಂದ ವೃದ್ಧರ ತನಕ ಎಲ್ಲರಿಗೂ ಈ ಕಾಯಿಲೆ ವಕ್ಕರಿಸಿಕೊಳ್ಳುತ್ತಿದೆ. ಅಲ್ಲದೆ, ಈ ಕಾಯಿಲೆ ಯಾವುದೇ ಕಾರಣಕ್ಕೂ ವಾಸಿಯಾಗುವುದಿಲ್ಲ. ಇದನ್ನು ಕಂಟ್ರೋಲ್ ಮಾಡಬಹುದಷ್ಟೇ. ಆದ್ದರಿಂದ ಈ ಬಗ್ಗೆ ಸಿನಿಮಾ ಮಾಡುವ ಮನಸ್ಸು ಮಾಡಿದ್ದೇನೆ' ಎನ್ನುತ್ತಾರೆ ಶಶಿಧರ್.
ಸ್ಕ್ರಿಪ್ಟ್ಗಾಗಿ ಸಾಕಷ್ಟು ಸಂಶೋಧನೆ
'ಈ ಸಿನಿಮಾದ ಸ್ಕ್ರಿಪ್ಟ್ಗಾಗಿ ಅನೇಕ ವೈದ್ಯರನ್ನು ಸಂಪರ್ಕ ಮಾಡಿದ್ದೇನೆ. ಕಾಯಿಲೆ ಕುರಿತು ಸಾಕಷ್ಟು ಸಂಶೋಧನೆ ನಡೆಸಿಯೇ ಸ್ಕ್ರಿಪ್ಟ್ ಮಾಡಿದ್ದೇನೆ. ಈಗಾಗಲೇ ಸಂಪೂರ್ಣವಾಗಿ ಕಥೆ-ಚಿತ್ರಕತೆ ಬರೆದಿದ್ದು, ಸಂಭಾಷಣೆ ಬರೆಯುವ ಕೆಲಸ ಸಾಗಿದೆ. ಇದೊಂದು ಹಾಸ್ಯದ ಜಾನರ್ ಮೇಲೆ ಸಾಗಲಿದೆ. ಇದುವರೆಗೂ ಸಾಕಷ್ಟು ಕಾಯಿಲೆಗಳನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಆದರೆ, ನನಗೆ ತಿಳಿದಿರುವಂತೆ ಜಗತ್ತಿನಲ್ಲೇ ಸಕ್ಕರೆ ಕಾಯಿಲೆ ಕುರಿತು ಇದುವರೆಗೂ ಯಾರೂ ಸಿನಿಮಾ ಮಾಡಿಲ್ಲ. ಸದ್ಯ ಕಲಾವಿದರ ಆಯ್ಕೆ ಮಾಡಬೇಕಿದೆ. ಕಥೆಗೆ ಸ್ಯೂಟ್ ಆಗುವಂತಹ ಕಲಾವಿದರೊಂದಿಗೆ ಮಾತುಕತೆ ನಡೆಸಿದ್ದೇನೆ. ಶೀಘ್ರದಲ್ಲೇ ಎಲ್ಲವೂ ಅಂತಿಮಗೊಳ್ಳಲಿದೆ. ಲಾಕ್ಡೌನ್ ಮುಗಿದ ಮೇಲೆ ಚಿತ್ರೀಕರಣ ಆರಂಭಗೊಳ್ಳಲಿದೆ' ಎಂದು ಮಾಹಿತಿ ನೀಡುತ್ತಾರೆ ಶಶಿಧರ್.
ಶ್ರುತಿ ಬಗ್ಗೆ ನೆನಪಿಸಿಕೊಂಡು ಬೇಸರ ಹೊರಹಾಕಿದ ಸ್ಯಾಂಡಲ್ವುಡ್ ನಟಿ ಹರಿಪ್ರಿಯಾ
ಯಾವ ದೇಶದಲ್ಲಿ ಶುಗರ್ ರೋಗಿಗಳು ಜಾಸ್ತಿ ಇದ್ದಾರೆ, ಯಾವ್ಯಾವ ಕಾರಣಕ್ಕೆ ಈ ಕಾಯಿಲೆ ಬರಲಿದೆ, ಬಂದಮೇಲೆ ಏನೆಲ್ಲ ಸಮಸ್ಯೆಗಳು ಶುರುವಾಗಲಿವೆ ಎಂಬ ವಿಚಾರಗಳನ್ನು ಶಶಿಧರ್ ತಿಳಿದುಕೊಂಡಿರುವ ಅವರು, ಅದನ್ನು ಹಾಸ್ಯದ ಹಳಿ ಮೇಲೆ ಸಿನಿಮಾವಾಗಿಸುವ ಪ್ರಯತ್ನದಲ್ಲಿದ್ದಾರೆ.
ಇದೇ ಮೊದಲ ಸಲ ರಿಯಲ್ ಸ್ಟಾರ್ ಉಪ್ಪಿಗೆ ಜೋಡಿಯಾದ ಹರಿಪ್ರಿಯಾ
ಸಕ್ಕರೆ ಕಾಯಿಲೆ ಬಗ್ಗೆ ಸಿನಿಮಾ
'ಹಲವು ದಿನಗಳಿಂದಲೂ ನನಗೆ ನಿರ್ದೇಶನದ ಮೇಲೆ ಒಲವು ಇತ್ತು. ರಮೇಶ್ ಅರವಿಂದ್ ಅವರ 'ಪುಷ್ಪಕ ವಿಮಾನ' ಚಿತ್ರಕ್ಕೆ ನಾನು ಕಾರ್ಯಕಾರಿ ನಿರ್ಮಾಪಕನಾಗಿದ್ದೆ. ನನಗೆ ನಿರ್ದೇಶನ ಮಾಡುವ ಕನಸಿತ್ತು. ಆಗಿನಿಂದಲೂ ನಿರ್ದೇಶಕರನ್ನು ಗಮನಿಸಿಕೊಂಡು ಬಂದಿದ್ದೆ. ಪ್ರಸ್ತುತ ಸಕ್ಕರೆ ಕಾಯಿಲೆ ಅನ್ನೋದು ಸರ್ವೇಸಾಮಾನ್ಯವಾಗಿದೆ. ಚಿಕ್ಕ ವಯಸ್ಸಿನವರಿಂದ ವೃದ್ಧರ ತನಕ ಎಲ್ಲರಿಗೂ ಈ ಕಾಯಿಲೆ ವಕ್ಕರಿಸಿಕೊಳ್ಳುತ್ತಿದೆ. ಅಲ್ಲದೆ, ಈ ಕಾಯಿಲೆ ಯಾವುದೇ ಕಾರಣಕ್ಕೂ ವಾಸಿಯಾಗುವುದಿಲ್ಲ. ಇದನ್ನು ಕಂಟ್ರೋಲ್ ಮಾಡಬಹುದಷ್ಟೇ. ಆದ್ದರಿಂದ ಈ ಬಗ್ಗೆ ಸಿನಿಮಾ ಮಾಡುವ ಮನಸ್ಸು ಮಾಡಿದ್ದೇನೆ' ಎನ್ನುತ್ತಾರೆ ಶಶಿಧರ್.
ಸ್ಕ್ರಿಪ್ಟ್ಗಾಗಿ ಸಾಕಷ್ಟು ಸಂಶೋಧನೆ
'ಈ ಸಿನಿಮಾದ ಸ್ಕ್ರಿಪ್ಟ್ಗಾಗಿ ಅನೇಕ ವೈದ್ಯರನ್ನು ಸಂಪರ್ಕ ಮಾಡಿದ್ದೇನೆ. ಕಾಯಿಲೆ ಕುರಿತು ಸಾಕಷ್ಟು ಸಂಶೋಧನೆ ನಡೆಸಿಯೇ ಸ್ಕ್ರಿಪ್ಟ್ ಮಾಡಿದ್ದೇನೆ. ಈಗಾಗಲೇ ಸಂಪೂರ್ಣವಾಗಿ ಕಥೆ-ಚಿತ್ರಕತೆ ಬರೆದಿದ್ದು, ಸಂಭಾಷಣೆ ಬರೆಯುವ ಕೆಲಸ ಸಾಗಿದೆ. ಇದೊಂದು ಹಾಸ್ಯದ ಜಾನರ್ ಮೇಲೆ ಸಾಗಲಿದೆ. ಇದುವರೆಗೂ ಸಾಕಷ್ಟು ಕಾಯಿಲೆಗಳನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಆದರೆ, ನನಗೆ ತಿಳಿದಿರುವಂತೆ ಜಗತ್ತಿನಲ್ಲೇ ಸಕ್ಕರೆ ಕಾಯಿಲೆ ಕುರಿತು ಇದುವರೆಗೂ ಯಾರೂ ಸಿನಿಮಾ ಮಾಡಿಲ್ಲ. ಸದ್ಯ ಕಲಾವಿದರ ಆಯ್ಕೆ ಮಾಡಬೇಕಿದೆ. ಕಥೆಗೆ ಸ್ಯೂಟ್ ಆಗುವಂತಹ ಕಲಾವಿದರೊಂದಿಗೆ ಮಾತುಕತೆ ನಡೆಸಿದ್ದೇನೆ. ಶೀಘ್ರದಲ್ಲೇ ಎಲ್ಲವೂ ಅಂತಿಮಗೊಳ್ಳಲಿದೆ. ಲಾಕ್ಡೌನ್ ಮುಗಿದ ಮೇಲೆ ಚಿತ್ರೀಕರಣ ಆರಂಭಗೊಳ್ಳಲಿದೆ' ಎಂದು ಮಾಹಿತಿ ನೀಡುತ್ತಾರೆ ಶಶಿಧರ್.
ಶ್ರುತಿ ಬಗ್ಗೆ ನೆನಪಿಸಿಕೊಂಡು ಬೇಸರ ಹೊರಹಾಕಿದ ಸ್ಯಾಂಡಲ್ವುಡ್ ನಟಿ ಹರಿಪ್ರಿಯಾ
ಯಾವ ದೇಶದಲ್ಲಿ ಶುಗರ್ ರೋಗಿಗಳು ಜಾಸ್ತಿ ಇದ್ದಾರೆ, ಯಾವ್ಯಾವ ಕಾರಣಕ್ಕೆ ಈ ಕಾಯಿಲೆ ಬರಲಿದೆ, ಬಂದಮೇಲೆ ಏನೆಲ್ಲ ಸಮಸ್ಯೆಗಳು ಶುರುವಾಗಲಿವೆ ಎಂಬ ವಿಚಾರಗಳನ್ನು ಶಶಿಧರ್ ತಿಳಿದುಕೊಂಡಿರುವ ಅವರು, ಅದನ್ನು ಹಾಸ್ಯದ ಹಳಿ ಮೇಲೆ ಸಿನಿಮಾವಾಗಿಸುವ ಪ್ರಯತ್ನದಲ್ಲಿದ್ದಾರೆ.
ಇದೇ ಮೊದಲ ಸಲ ರಿಯಲ್ ಸ್ಟಾರ್ ಉಪ್ಪಿಗೆ ಜೋಡಿಯಾದ ಹರಿಪ್ರಿಯಾ