ಆ್ಯಪ್ನಗರ

ಶೀಘ್ರದಲ್ಲೇ ತಮಿಳು ಚಿತ್ರರಂಗಕ್ಕೆ ಡಾಲಿ ಧನಂಜಯ ಪದಾರ್ಪಣೆ

ವಿಜಯ್‌ ಮಿಲ್ಟನ್‌ ಅವರ ಸಿನಿಮಾ ಬಗ್ಗೆ ಅವರೇ ಮಾಹಿತಿ ನೀಡುತ್ತಾರೆ. ಒಳ್ಳೆ ಪಾತ್ರ ಸಿಕ್ಕರೆ ನಾನು ಯಾವುದೇ ಚಿತ್ರರಂಗದಲ್ಲಿಕೆಲಸ ಮಾಡಲು ರೆಡಿ ಎಂದಿದ್ದಾರೆ ನಟ ಡಾಲಿ ಧನಂಜಯ್. ಸದ್ಯ ಯುವರತ್ನ, ಪೊಗರು ಸಿನಿಮಾದಲ್ಲಿ ನೆಗೆಟಿವ್‌ ಶೇಡ್‌ ಇರುವ ಪಾತ್ರಗಳಲ್ಲಿನಟಿಸುತ್ತಿರುವ ಇವರು ಸಲಗದಲ್ಲಿ ಖಡಕ್‌ ಪೊಲೀಸ್‌ ಅಧಿಕಾರಿಯಾಗಿದ್ದಾರೆ.

Vijaya Karnataka 21 Oct 2019, 7:25 pm

* ಹರೀಶ್‌ ಬಸವರಾಜ್‌
Vijaya Karnataka Web dhananjay


ತಮಿಳಿನ ಖ್ಯಾತ ನಿರ್ದೇಶಕ ಕಮ್‌ ಸಿನಿಮಾಟೋಗ್ರಫರ್‌ ವಿಜಯ್‌ ಮಿಲ್ಟನ್‌ ಅವರ ಹೊಸ ಸಿನಿಮಾದಲ್ಲಿ ಡಾಲಿ ಧನಂಜಯ್‌ ನಟಿಸುವ ಸಾಧ್ಯತೆ ಇದೆ. ಈ ಮೂಲಕ ಅವರು ತಮಿಳು ಸಿನಿಮಾ ರಂಗಕ್ಕೂ ಕಾಲಿಟ್ಟಿದ್ದಾರೆ.

ತಮಿಳಿನಲ್ಲಿ ಹತ್ತಕ್ಕೂ ಹೆಚ್ಚಿನ ಸಿನಿಮಾಗಳಿಗೆ ಕ್ಯಾಮೆರಾಮ್ಯಾನ್‌ ಆಗಿ ಕೆಲಸ ಮಾಡಿರುವ ಅಜಗಜೈ ಇರುಕ್ಕಿರೈ ಬಯಮಣಿ ಎಂಬ ಚಿತ್ರದ ಮೂಲಕ ನಿರ್ದೇಶಕರಾದರು. ಆದಾದ ಮೇಲೆ ಗೋಲಿ ಸೋಡ ಚಿತ್ರದ ಮೂಲಕ ಖ್ಯತಿ ಗಳಿಸಿದರು. ಈ ಚಿತ್ರ ಕನ್ನಡಕ್ಕೂ ರಿಮೇಕ್‌ ಆಯಿತು. ಈಗ ವಿಜಯ್‌ ಮಿಲ್ಟನ್‌ ಕನ್ನಡದ ಪೊಗರು ಚಿತ್ರಕ್ಕೆ ಕ್ಯಾಮೆರ ಹಿಡಿದಿದ್ದು, ಜತೆಗೆ ಪಿಚ್ಚಕಾರನ್‌ ಖ್ಯಾತಿಯ ವಿಜಯ್‌ ಆಂಟೋನಿ ಜತೆ ಸಿನಿಮಾ ಮಾಡುತ್ತಿದ್ದಾರೆ. ಆ ಸಿನಿಮಾಗೆ ಡಾಲಿ ಧನಂಜಯ ಮುಖ್ಯ ಪಾತ್ರವೊಂದಕ್ಕೆ ಆಯ್ಕೆಯಾಗಿದ್ದಾರಂತೆ.

ರೇಂಜ್ ರೋವರ್ ಕಾರು ನೀವು ಕೊಡ್ಸಿದ್ದು: ನಟ ಧನಂಜಯ್

ಈ ಬಗ್ಗೆ ನಿರ್ದೇಶಕರನ್ನು ಕೇಳಿದರೆ 'ಧನಂಜಯ್‌ ಜತೆ ಪೊಗರು ಸಿನಿಮಾದಲ್ಲಿ ಕೆಲಸ ಮಾಡಿದ್ದೇನೆ. ಅವರೊಳಗೆ ಅದ್ಭುತ ಕಲಾವಿದ ಇದ್ದಾನೆ. ನನ್ನ ನಿರ್ದೇಶನದಲ್ಲಿ ಅವರು ನಟಿಸುವ ಬಗ್ಗೆ ನಾವಿಬ್ಬರೂ ಈಗಾಗಲೇ ಮಾತುಕತೆ ನಡೆಸಿದ್ದೇವೆ. ಅದರ ಬಗ್ಗೆ ಸದ್ಯದಲ್ಲೇ ಅನೌನ್ಸ್‌ ಮಾಡುತ್ತೇವೆ ಎನ್ನುತ್ತಾರೆ ವಿಜಯ್‌. ಕನ್ನಡದ ನಟನೊಬ್ಬನ ಆಯ್ಕೆ ಹಿಂದೆ ಅವರದ್ದೇ ಆದ ಕಾರಣವಿದೆ ಎನ್ನುವ ಅವರು, ಸದ್ಯಕ್ಕೆ ಅದರ ಬಗ್ಗೆ ಏನನ್ನು ನಾನು ಮಾತನಾಡುವುದಿಲ್ಲ ಎನ್ನುತ್ತಾರೆ.

'ವಿಜಯ್‌ ಮಿಲ್ಟನ್‌ ನಾನು ನಟಿಸಿರುವ ಪೊಗರು ಚಿತ್ರದ ಸಿನಿಮಾಟೋಗ್ರಾಫರ್‌. ಈ ಸಂದರ್ಭದಲ್ಲಿ ಒಟ್ಟಿಗೆ ಕೆಲಸ ಮಾಡೋಣ ಅಂತ ಹೇಳಿದ್ದರು. ಸದ್ಯಕ್ಕೆ ಮಾತುಕತೆ ಆಗಿದೆ ಮುಂದಿನ ವಿಚಾರವನ್ನು ಚಿತ್ರತಂಡವೇ ಹೇಳಲಿದೆ. ನಾನು ನನ್ನ ಬಡವ ರ‍್ಯಾಸ್ಕಲ್‌ ಸಿನಿಮಾದ ಚಿತ್ರೀಕರಣದಲ್ಲಿಬಿಝಿ ಇದ್ದೇನೆ' ಎಂದಿದ್ದಾರೆ ಧನಂಜಯ್‌.

Actor Dhananjay: ಮತ್ತೆ ಭೂಗತ ಜಗತ್ತಿಗೆ ಶರಣಾದ 'ಡಾಲಿ'
ಈಗಾಗಲೇ ತೆಲುಗಿನಲ್ಲಿ ರಾಮ್‌ ಗೋಪಾಲ್‌ ವರ್ಮಾ ಬ್ಯಾನರ್‌ನ ಚಿತ್ರವೊಂದರಲ್ಲಿ ಧನಂಜಯ ನಟಿಸಿದ್ದರು. ಈ ಸಿನಿಮಾ ತಮಿಳಿಗೂ ಡಬ್‌ ಆಗಿತ್ತು. ಹೀಗಾಗಿ ತಮಿಳು ಚಿತ್ರರಂಗಕ್ಕೆ ಧನಂಜಯ ಅವರ ಪರಿಚಯ ಕೂಡಾ ಇದೆ.

ಅಣ್ಣಾಮಲೈ ಪ್ರೇರಿತ ಎಸಿಪಿ ಪಾತ್ರದಲ್ಲಿ ಧನಂಜಯ್ ಸಖತ್ ಲುಕ್!

ಸದ್ಯ ಯುವರತ್ನ, ಪೊಗರು ಸಿನಿಮಾದಲ್ಲಿ ನೆಗೆಟಿವ್‌ ಶೇಡ್‌ ಇರುವ ಪಾತ್ರಗಳಲ್ಲಿ ನಟಿಸುತ್ತಿರುವ ಇವರು ಸಲಗದಲ್ಲಿ ಖಡಕ್‌ ಪೊಲೀಸ್‌ ಅಧಿಕಾರಿಯಾಗಿದ್ದಾರೆ. ಇದರ ಜತೆಯಲ್ಲಿ ತಮ್ಮದೇ ನಿರ್ಮಾಣ ಸಂಸ್ಥೆಯಲ್ಲಿತಯಾರಾಗುತ್ತಿರುವ ಬಡವ ರ‍್ಯಾಸ್ಕಲ್‌ನಲ್ಲಿ ಮಧ್ಯಮ ವರ್ಗದ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜತೆಗೆ ಹತ್ತಾರು ಕಥೆಗಳನ್ನು ಅವರು ಕೇಳುತ್ತಿದ್ದಾರೆ. ಈಗ ತಮಿಳಿನ ಖ್ಯಾತ ನಿರ್ದೇಶಕ ಮತ್ತ ನಟನ ಸಿನಿಮಾದಲ್ಲಿ ಒಳ್ಳೆ ಪಾತ್ರದ ಮೂಕ ಕಾಲಿವುಡ್‌ಗೂ ಕಾಲಿಡುವ ಸಾಧ್ಯತೆ ಇದೆ. ಹಾಗಾಗಿ ಧನಂಜಯ ಈಗ ತ್ರಿಭಾಷಾ ನಟರಾಗಿದ್ದಾರೆ.

ಸದ್ಯ ಆ ಪ್ರಾಜೆಕ್ಟ್ ಬಗ್ಗೆ ಏನು ಹೇಳುವುದಿಲ್ಲ. ಆದರೆ ಧನಂಜಯ ಅವರು ನಮ್ಮ ಟೀಮ್‌ನಲ್ಲಿರುತ್ತಾರೆ. ಈ ಬಗ್ಗೆ ನಮ್ಮ ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಅನೌನ್ಸ್‌ ಮಾಡುತ್ತದೆ.

-ವಿಜಯ್‌ ಮಿಲ್ಟನ್‌, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌