ಆ್ಯಪ್ನಗರ

Hoysala: 'ಡಾಲಿ' ಧನಂಜಯ ನಟನೆಯ 'ಹೊಯ್ಸಳ' ಸಿನಿಮಾದ ಟೈಟಲ್‌ನಲ್ಲಿ ಬದಲಾವಣೆ ಆಗಿದ್ದೇಕೆ?

'ಡಾಲಿ' ಧನಂಜಯ ಮತ್ತು ಅಮೃತಾ ಅಯ್ಯಂಗಾರ್ ಮೂರನೇ ಬಾರಿಗೆ ಒಟ್ಟಿಗೆ ನಟಿಸಿರುವ ಸಿನಿಮಾ 'ಹೊಯ್ಸಳ'. ಈ ಸಿನಿಮಾವನ್ನು ಕೆಆರ್‌ಜಿ ಸ್ಟುಡಿಯೋಸ್ ಮೂಲಕ ನಿರ್ಮಾಣ ಮಾಡಲಾಗಿದೆ. ಸಿನಿಮಾವನ್ನು ಇದೇ ಮಾರ್ಚ್‌ 30ರಂದು ತೆರೆಗೆ ತರಲು ಚಿತ್ರತಂಡ ನಿರ್ಧಾರ ಮಾಡಿದೆ. ಕೊನೇ ಕ್ಷಣದಲ್ಲಿ ಇದೀಗ ಚಿತ್ರದ ಶೀರ್ಷಿಕೆಯಲ್ಲಿ ಬದಲಾವಣೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಅದಕ್ಕೆ ಕಾರಣವೇನು?

Authored byಅವಿನಾಶ್ ಜಿ. ರಾಮ್ | Vijaya Karnataka Web 14 Mar 2023, 1:45 pm

ಹೈಲೈಟ್ಸ್‌:

  • ನಟ 'ಡಾಲಿ' ಧನಂಜಯ ಅಭಿನಯದ 25ನೇ ಸಿನಿಮಾ 'ಹೊಯ್ಸಳ'
  • 'ಹೊಯ್ಸಳ' ಸಿನಿಮಾದಲ್ಲಿ ಗುರುದೇವ ಹೊಯ್ಸಳ ಎಂಬ ಪಾತ್ರ ಮಾಡಿರುವ ಡಾಲಿ
  • ನಿರ್ಮಾಪಕರು ಈಗ 'ಹೊಯ್ಸಳ' ಶೀರ್ಷಿಕೆಯಲ್ಲಿ ಬದಲಾವಣೆ ಮಾಡಲು ಮುಂದಾಗಿದ್ದಾರೆ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web HOYSALA
Hoysala: 'ಡಾಲಿ' ಧನಂಜಯ ನಟನೆಯ 'ಹೊಯ್ಸಳ' ಸಿನಿಮಾದ ಟೈಟಲ್‌ನಲ್ಲಿ ಬದಲಾವಣೆ ಆಗಿದ್ದೇಕೆ?
ನಟ 'ಡಾಲಿ' ಧನಂಜಯ ಅವರ ಕರಿಯರ್‌ಗೆ 'ಹೊಯ್ಸಳ' ಸಿನಿಮಾ ಬಹಳ ಮಹತ್ವವಾದದ್ದು. ಕಾರಣ, ಇದು ಅವರ 25ನೇ ಸಿನಿಮಾ. ಮಾರ್ಚ್ 30ರಂದು 'ಹೊಯ್ಸಳ' ಸಿನಿಮಾವನ್ನು ತೆರೆಗೆ ತರುವುದಕ್ಕೆ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ರೆಡಿ ಆಗಿದೆ. ಆದರೆ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ 'ಹೊಯ್ಸಳ' ಟೈಟಲ್‌ನಲ್ಲಿ ಬದಲಾವಣೆ ಆಗಿದೆ. ಆ ಕುರಿತು ನಟ 'ಡಾಲಿ' ಧನಂಜಯ ಅವರು ಮಾತನಾಡಿದ್ದು, ಶೀರ್ಷಿಕೆ ಬದಲಾವಣೆ ಕುರಿತು ಮಾತನಾಡಿದ್ದಾರೆ.

'ಗುರುದೇವ ಹೊಯ್ಸಳ' ಹೊಸ ಶೀರ್ಷಿಕೆ?

ಈ ಸಿನಿಮಾದಲ್ಲಿ ಧನಂಜಯ ಅವರು ಗುರುದೇವ ಹೊಯ್ಸಳ ಎಂಬ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದಾರೆ. 'ನಾವು ನಮ್ಮ ಸಿನಿಮಾದ ಶೀರ್ಷಿಕೆಯನ್ನು ರಾಮು ಫಿಲ್ಮ್ಸ್ ಜೊತೆ ಮಾತನಾಡಿ ಪಡೆದುಕೊಂಡಿದ್ದೆವು. 'ಹೊಯ್ಸಳ' ಶೀರ್ಷಿಕೆ ಅವರ ಬಳಿ ಇತ್ತು. ಆದರೆ ಈಗ ಇದೇ ಹೆಸರಿನಲ್ಲಿ ಮತ್ತೊಂದು ಸಿನಿಮಾ ಸೆನ್ಸಾರ್ ಆಗಿದೆಯಂತೆ. ಹಾಗಾಗಿ, ಈ ಸಿನಿಮಾದಲ್ಲಿ ನಾನು ನಟಿಸಿದರುವ 'ಗುರುದತ್ ಹೊಯ್ಸಳ' ಪಾತ್ರದ ಹೆಸರನ್ನೇ ಶೀರ್ಷಿಕೆ ಮಾಡಿ, ಅದೇ ಹೆಸರಿನಲ್ಲಿ ಸಿನಿಮಾ ಬಿಡುಗಡೆ ಮಾಡಲು ಸಿದ್ದರಾಗಿದ್ದೇವೆ..' ಎಂದು ಧನಂಜಯ ಹೇಳಿದ್ದಾರೆ.

Dhananjaya: ಸಿನಿಮಾವಾಗ್ತಿದೆ ಪೂರ್ಣಚಂದ್ರ ತೇಜಸ್ವಿಯವರ ಕಥೆ; ಡೇರ್ ಡೆವಿಲ್ ಮುಸ್ತಫಾ ಚಿತ್ರಕ್ಕೆ ಧನಂಜಯ ಸಾಥ್
'ಕೆಆರ್‌ಜಿ ಸ್ಟುಡಿಯೋಸ್ ಜೊತೆ 'ರತ್ನನ್ ಪ್ರಪಂಚ' ಸಿನಿಮಾ ಮಾಡಿದ ಮೇಲೆ ಒಂದು ಕನೆಕ್ಷನ್ ಶುರುವಾಯಿತು. ಆನಂತರ ಒಂದಷ್ಟು ಸಿನಿಮಾ ಮಾಡುವ ಪ್ಲ್ಯಾನ್ ಮಾಡಿಕೊಂಡೆವು. ಆಗ ಈ ಚಿತ್ರದ ಕಥೆ ಬಂತು. 'ಹೊಯ್ಸಳ' ಕಥೆ ಕೇಳಿದ ಮೇಲೆ ತುಂಬಾ ಇಷ್ಟವಾಯಿತು. ಆಗ ನಮಗೆ ಗೊತ್ತಾದ ಇನ್ನೊಂದು ವಿಚಾರವೆಂದರೆ, ಇದು ನನ್ನ ನಟನೆಯ 25ನೇ ಸಿನಿಮಾ ಎಂಬುದು. ಸಮಾಜಕ್ಕೆ ಎನಾದರೂ ಸಂದೇಶ ನೀಡಬೇಕು ಎಂಬ ಆಸೆ ನನಗೆ ಮೊದಲಿನಿಂದಲೂ ಇತ್ತು. ಜೊತೆಗೆ ಇಡೀ ಫ್ಯಾಮಿಲಿ ಒಟ್ಟಿಗೆ ಕುಳಿತು ನೋಡಬಹುದಾದ ಒಂದು ಕಥೆ 'ಹೊಯ್ಸಳ'ದಲ್ಲಿದೆ. ಸಮಾಜದ ಒಂದು ಗಂಭೀರ ವಿಚಾರವನ್ನ ಈ ಸಿನಿಮಾದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವೆ. ಒಳ್ಳೆಯ ಸಂದೇಶ ಇರುವ ಕಮರ್ಷಿಯಲ್ ಸಿನಿಮಾ ಇದು, ನಾನು ಈ ಚಿತ್ರಕ್ಕಾಗಿ ಕಾಯ್ತಾ ಇದ್ದೇನೆ. ಈ ಸಿನಿಮಾ ತುಂಬಾ ವಿಷಯಗಳ ಬಗ್ಗೆ ಮಾತಾಡುತ್ತದೆ..' ಎಂದು ಧನಂಜಯ ಹೇಳಿದ್ದಾರೆ.

Hoysala: ಡಾಲಿ ಧನಂಜಯ, ಅಮೃತಾ ಅಯ್ಯಂಗಾರ್ 'ಹೊಯ್ಸಳ' ಚಿತ್ರಕ್ಕೆ ಸಾಥ್ ಕೊಟ್ಟ 4 ಭಾಷೆಯ ಸ್ಟಾರ್ ನಟರು

ಹೊಯ್ಸಳದಲ್ಲಿ ವಿಲನ್ ಆದ ನವೀನ್ ಶಂಕರ್

'ಗುಳ್ಟು', 'ಹೊಂದಿಸಿ ಬರೆಯಿರಿ' ಸಿನಿಮಾಗಳ ನಟ ನವೀನ್ ಶಂಕರ್ ಅವರು 'ಹೊಯ್ಸಳ' ಸಿನಿಮಾದಲ್ಲಿ ವಿಲನ್ ಆಗಿದ್ದಾರೆ. 'ನನಗೆ ಈ ಸಿನಿಮಾದ ಅವಕಾಶ ಸಿಕ್ಕಿದ್ದು ತುಂಬ ಖುಷಿ ನೀಡಿದೆ. ನಾನಿಲ್ಲಿ ಬಲಿ ಅನ್ನೋ ಪಾತ್ರ ಮಾಡಿದ್ದು, ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಧನಂಜಯ ಅವರು ಈ ಹಿಂದೆ 'ಹೆಡ್ ಬುಷ್' ಚಿತ್ರದಲ್ಲಿ ನಟಿಸುವಂತೆ ಆಫರ್ ನೀಡಿದ್ದರು. ಆಗ ಅದು ಸಾಧ್ಯವಾಗಿರಲಿಲ್ಲ. ಹೊಯ್ಸಳದಲ್ಲಿ ಧನಂಜಯ ಜೊತೆ ಕೆಲಸ ಮಾಡಿದ್ದು ಖುಷಿ ನೀಡಿದೆ. ಇದೊಂದು ಅಪ್ಪಟ ಕಮರ್ಷಿಯಲ್ ಸಿನಿಮಾ. ಇಲ್ಲಿನ ಎಲ್ಲ ಪಾತ್ರಗಳಿಗೂ ತುಂಬ ಮಹತ್ವ ಇದೆ..' ಎಂದು ಹೇಳುತ್ತಾರೆ.

ಭಾಷೋಲ್ಲಂಘನ ಈಗ ಕನ್ನಡದ ಸ್ಟಾರ್ ಹೀರೋಗಳ ಸರದಿ; ದಳಪತಿ ವಿಜಯ್ ಅಖಾಡದಲ್ಲಿ ರಕ್ಷಿತ್ ಶೆಟ್ಟಿ ನಟನೆ?
ನಟಿ ಅಮೃತಾ ಅಯ್ಯಂಗಾರ್ ಅವರು ಧನಂಜಯ ಎದುರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಇದು ಧನು ಜೊತೆ ಅಮೃತಾ ನಟಿಸುತ್ತಿರುವ ಮೂರನೇ ಸಿನಿಮಾ. ಅವರಿಗಿಲ್ಲಿ ಪೊಲೀಸ್ ಅಧಿಕಾರಿ ಪತ್ನಿಯ ಪಾತ್ರ. ದಾದಾ ಎಂಬ ವಿಲನ್ ಪಾತ್ರದಲ್ಲಿ ಹಿರಿಯ ನಟ ಅವಿನಾಶ್‌ ಕಾಣಿಸಿಕೊಂಡಿದ್ದಾರೆ. ಇಡೀ ಸಿನಿಮಾದ ಕಥೆ ಬೆಳಗಾವಿ ಭಾಗದಲ್ಲಿ ನಡೆಯುತ್ತದೆ. ವಿಜಯ್ ಎನ್. ಅವರು ನಿರ್ದೇಶನ ಮಾಡಿದ್ದು, ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್ ಮೂಲಕ ಯೋಗಿ ಜಿ. ರಾಜ್ ಮತ್ತು ಕಾರ್ತಿಕ್ ಗೌಡ ಈ ಸಿನಿಮಾಗೆ ಹಣ ಹಾಕಿದ್ದಾರೆ. ಹಾಡುಗಳಿಗೆ ಅಜನೀಶ್ ಸಂಗೀತ ನೀಡಿದ್ದಾರೆ. ಅತೀ ಶೀಘ್ರದಲ್ಲೇ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ.
ಲೇಖಕರ ಬಗ್ಗೆ
ಅವಿನಾಶ್ ಜಿ. ರಾಮ್
'ವಿಜಯ ಕರ್ನಾಟಕ' ಡಿಜಿಟಲ್ ವಿಭಾಗದಲ್ಲಿ 2019ರ ಸೆಪ್ಟೆಂಬರ್‌ನಿಂದ ಪತ್ರಕರ್ತನಾಗಿ ಅವಿನಾಶ್ ಜಿ. ರಾಮ್ ಕೆಲಸ ಮಾಡುತ್ತಿದ್ದಾರೆ. ಚಿನ್ನದ ಪದಕದೊಂದಿಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ ಕಳೆದ 10 ವರ್ಷಗಳಿಂದ ಸಿನಿಮಾ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದೆ. ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ನಾಲ್ಕು ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಅವಿನಾಶ್‌ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ಪ್ರವಾಸ, ಓದು, ಸಂಗೀತ ಕೇಳುವುದು ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌