ಆ್ಯಪ್ನಗರ

ಮನೆಯ ಜೂನ್ ತಿಂಗಳ ಕರೆಂಟ್ ಬಿಲ್ ನೋಡಿ ದರ್ಶನ್ ಹೀರೋಯಿನ್ ಕಾರ್ತೀಕಾ ನಾಯರ್ ಕಂಗಾಲು!

ಲಾಕ್‌ಡೌನ್ ಟೈಮ್‌ನಲ್ಲಿ ಮನೆಯಲ್ಲಿ ಎಲ್ಲರೂ ಹೆಚ್ಚು ಕಾಲ ಕಳೆದಿರೋದರಿಂದ ಕರೆಂಟ್ ಬಿಲ್ ಹೆಚ್ಚು ಬರುವುದು ಸಾಮಾನ್ಯ. ಆದರೆ ಕನ್ನಡದ 'ಬೃಂದಾವನ' ಸಿನಿಮಾದಲ್ಲಿ ನಟಿಸಿದ್ದ ನಟಿ ಕಾರ್ತೀಕಾ ನಾಯರ್ ಅವರ ಮನೆಯ ಕರೆಂಟ್ ಬಿಲ್ ಮಾತ್ರ ಸಿಕ್ಕಾಪಟ್ಟೆ ಬಂದಿದೆಯಂತೆ. ಇದಕ್ಕೆ ಕಾರಣ ಏನು?

Vijaya Karnataka Web 25 Jun 2020, 2:47 pm
ಕಳೆದ ಮೂರು ತಿಂಗಳಿಂದ ಲಾಕ್‌ಡೌನ್ ಕಾರಣಕ್ಕೆ ಎಲ್ಲರೂ ಮನೆಯಲ್ಲಿಯೇ ಸಮಯ ಕಳೆದಿದ್ದಾರೆ. ಹೀಗಾಗಿ ಕರೆಂಟ್ ಬಿಲ್ ಜಾಸ್ತಿ ಬರುವುದು ಸಾಮಾನ್ಯವಾಗಿದೆ. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಬೃಂದಾವನ' ಚಿತ್ರದ ನಾಯಕಿ ಕಾರ್ತಿಕಾ ನಾಯರ್ ಅವರ ಮನೆಯ ಜೂನ್ ತಿಂಗಳ ಬಿಲ್ ನಿಜಕ್ಕೂ ಎಲ್ಲರಿಗೂ ಶಾಕ್ ನೀಡಿದೆ.
Vijaya Karnataka Web darshan brindavana film heroine karthika nair complaints about electricity bill
ಮನೆಯ ಜೂನ್ ತಿಂಗಳ ಕರೆಂಟ್ ಬಿಲ್ ನೋಡಿ ದರ್ಶನ್ ಹೀರೋಯಿನ್ ಕಾರ್ತೀಕಾ ನಾಯರ್ ಕಂಗಾಲು!


ಕಾರ್ತೀಕಾ ಟ್ವೀಟ್ ಮಾಡಿ ಹೇಳಿದ್ದೇನು?
'ಮುಂಬೈನಲ್ಲಿ ಎಲೆಕ್ಟ್ರಿಸಿಟಿಯ ಸ್ಕ್ಯಾಮ್ ನಡೆಯುತ್ತಿದೆಯೇ? ನಮ್ಮ ಮನೆಯ ಜೂನ್ ತಿಂಗಳ ಕರೆಂಟ್ ಬಿಲ್ 1 ಲಕ್ಷ ರೂಪಾಯಿಗೆ ಹತ್ತಿರವಿದೆ. (ಲಾಕ್‌ಡೌನ್‌ನಲ್ಲಿ ಮೀಟರ್ ನೋಡದೆ ಅಳತೆ ಮಾಡಲಾಗುತ್ತದೆ)' ಎಂದು ಕಾರ್ತೀಕಾ ಟ್ವೀಟ್ ಮಾಡಿದ್ದಾರೆ. ಇದು ಕೇವಲ ಕಾರ್ತಿಕಾ ಗೋಳಲ್ಲ. ಮುಂಬೈನಲ್ಲಿ ಆಗುತ್ತಿರುವ ಕರೆಂಟ್ ಬಿಲ್ ಬಗ್ಗೆ ಹಲವರು ದೂರು ಸಲ್ಲಿಸುತ್ತಿದ್ದಾರೆ.

ಕರೆಂಟ್ ಬಿಲ್ ಬಗ್ಗೆ ಕಿಡಿಕಾರಿದ್ದ ಪ್ರಸನ್ನ
ಈ ಹಿಂದೆ ತಮಿಳು ನಟ ಪ್ರಸನ್ನ TANGEDCOದವರ ವಿರುದ್ಧ ಕಿಡಿಕಾರಿದ್ದರು. ಆಮೇಲೆ TANGEDCOದವರು ನಟ ಪ್ರಸನ್ನ ಈ ಹಿಂದಿನ ಬಿಲ್ ಪಾವತಿಸಿರಲಿಲ್ಲ, ಹೀಗಾಗಿ ಹಳೆಯದು ಸೇರಿಸಿ ಇಷ್ಟೊಂದು ಬಿಲ್ ಬಂದಿದೆ ಎಂದು ಸ್ಪಷ್ಟೀಕರಣ ನೀಡಿದ್ದರು. ಆಮೇಲೆ ಮಾತನಾಡಿದ್ದ ಪ್ರಸನ್ನ ಲಾಕ್‌ಡೌನ್ ವೇಲೆ ಕೆಲಸ ಮಾಡುತ್ತಿರುವವರಿಗೆ ನೋಯಿಸಬೇಕು ಎಂಬುದು ನಮ್ಮ ಉದ್ದೇಶವಲ್ಲ ಎಂದು ಹೇಳಿ ಜಾರಿಕೊಂಡಿದ್ದರು.

ಮೂರು ಪಟ್ಟು ದುಪ್ಪಟ್ಟು ಬಂದಿತ್ತು ಲಕ್ಷ್ಮೀ ರಾಯ್ ಮನೆಯ ಕರೆಂಟ್ ಬಿಲ್
ಈ ಹಿಂದೆ ನಟಿ ಲಕ್ಷ್ಮೀ ರಾಯ್ ಅವರು ಟ್ವಿಟರ್‌ನಲ್ಲಿ 'ನಮ್ಮ ಮನೆಯ ಎಲೆಕ್ಟ್ರಿಸಿಟಿ ಬಿಲ್‌ ನೋಡಿದೆ. ಪ್ರತಿ ತಿಂಗಳು ನಾನು ಎಷ್ಟು ಕಟ್ಟುತ್ತಿದ್ದೇನೋ ಅದಕ್ಕಿಂತ ದುಪ್ಪಟ್ಟು ಕರೆಂಟ್ ಬಿಲ್ ಬಂದಿದೆ. ಕಳೆದ ಮೂರು ತಿಂಗಳ ಬಿಲ್‌ ನೋಡಿದಾಗ, ಈ ಬಾರಿಯಂತೂ ತುಂಬ ದುಬಾರಿ ಆಗಿರುವುದು ಗೊತ್ತಾಯ್ತು. ಪದೇ ಪದೇ ಸಂಬಂಧಪಟ್ಟವರಿಗೆ ಸಂಪರ್ಕಿಸಲು ಯತ್ನಿಸುತ್ತಿದ್ದೇನೆ. ಟೋಲ್‌ಫ್ರೀ ನಂಬರ್‌ ಕೂಡ ಕೆಲಸ ಮಾಡುತ್ತಿಲ್ಲ. ಇದೇ ರೀತಿ ಎಷ್ಟು ಜನ ಕಷ್ಟಪಡುತ್ತಿರಬಹುದು ಅಂತ ಆಶ್ಚರ್ಯ ಆಗುತ್ತಿದೆ. ಸಂಬಂಧಪಟ್ಟವರನ್ನು ಸಂಪರ್ಕಿಸಲು ಯಾರಾದರೂ ನನಗೆ ಸಹಾಯ ಮಾಡಿ. ಕಷ್ಟಪಟ್ಟು ಸಂಪಾದಿಸಿದ ಹಣ ಹೀಗೆ ವ್ಯರ್ಥವಾಗುವುದು ಬೇಸರ ತಂದಿದೆ' ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದರು.

Also read-ನಟಿ ರಾಯ್‌ ಲಕ್ಷ್ಮಿಗೆ ಶಾಕ್‌ ಕೊಟ್ಟ ಕರೆಂಟ್‌ ಬಿಲ್‌

ಒಟ್ಟಾರೆಯಾಗಿ ಕರೆಂಟ್ ಬಿಲ್ ವಿಚಾರದಲ್ಲಿ ಹಲವು ಬಾರಿ ಸಮಸ್ಯೆ ಆಗಿದ್ದು ಇದೆ, ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಸಮಸ್ಯೆಗಳ ಕುರಿತು ಪೋಸ್ಟ್ ಮಾಡಿದಾಗ ಅವರಿಗೆ ಪರಿಹಾರ ಸಿಗಬಹುದು. ಆದರೆ ಸಾಮಾನ್ಯ ಜನರ ಗೋಳನ್ನು ಮಾತ್ರ ಹೇಳತೀರದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌