ಆ್ಯಪ್ನಗರ

ಬೈಕ್‌ನಲ್ಲಿ ಕೇರಳ ಟ್ರಿಪ್‌ ಮುಗಿಸಿಕೊಂಡು ಬಂದ ನಟ ದರ್ಶನ್‌ & ಫ್ರೆಂಡ್ಸ್‌! ಇಲ್ಲಿವೆ ನೋಡಿ ಫೋಟೋಗಳು

'ಚಾಲೆಂಜಿಂಗ್ ಸ್ಟಾರ್‌' ದರ್ಶನ್ ಮತ್ತು ಅವರ ಸ್ನೇಹಿತರ ಬಳಗ ಎರಡು ದಿನಗಳ ಹಿಂದೆ ಕೇರಳಕ್ಕೆ ಬೈಕ್‌ನಲ್ಲಿ ಪ್ರವಾಸ ಹೋಗಿತ್ತು. ಇದೀಗ ಆ ತಂಡ ಬೆಂಗಳೂರಿಗೆ ಮರಳಿದ್ದು, ಈ ಜರ್ನಿ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.

Vijaya Karnataka Web 20 Dec 2020, 10:06 pm
ಎರಡು ದಿನಗಳ ಹಿಂದೆ ಕೇರಳಕ್ಕೆ ಟ್ರಿಪ್ ಹೋಗಿದ್ದ ದರ್ಶನ್ & ಫ್ರೆಂಡ್ಸ್‌ ವಾಪಸ್‌ ಆಗಿದ್ದಾರೆ. ದರ್ಶನ್‌ ಜೊತೆ ಚಿಕ್ಕಣ್ಣ, ಪ್ರಜ್ವಲ್ ದೇವರಾಜ್‌, 'ರಾಬರ್ಟ್' ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ಯಶಸ್, ಪನ್ನಗ ಭರಣ ಸೇರಿದಂತೆ 15ಕ್ಕೂ ಅಧಿಕ ಜನರ ತಂಡ ಈ ಬೈಕ್ ಟ್ರಿಪ್‌ನಲ್ಲಿ ಭಾಗಿಯಾಗಿತ್ತು. ಈ ಮೊದಲು ಮಡಿಕೇರಿಗೆ ಹೋಗಿಬಂದಿದ್ದ ಈ ಬಳಗ, ಈಗ ಕೇರಳದ ಸುಂದರ ತಾಣಗಳನ್ನು ನೋಡಿಕೊಂಡು ಬಂದಿದೆ.
Vijaya Karnataka Web darshan


ಗುಂಡ್ಲುಪೇಟೆಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡ ಪೊಲೀಸರು
ದರ್ಶನ್ ಅವರ ತಂಡ ಕೇರಳದಿಂದ ಮೈಸೂರಿಗೆ ಗುಂಡ್ಲುಪೇಟೆ ಮಾರ್ಗವಾಗಿ ವಾಪಸ್ ಆಗಿದೆ. ಇದೇ ಮಾರ್ಗವಾಗಿ ಬರುತ್ತಾರೆ ಎಂದು ಖಚಿತ ಮಾಹಿತಿ ಪಡೆದ ಗುಂಡ್ಲುಪೇಟೆ ಪೊಲೀಸ್ ಸಿಬ್ಬಂದಿ, ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಸಮೀಪದ ತಗ್ಗಲೂರು ಗೇಟ್ ಬಳಿ ತಂಡವನ್ನು ನಿಲ್ಲಿಸಿ, ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ದರ್ಶನ್‌ ಮಾತ್ರವಲ್ಲದೆ, ಚಿಕ್ಕಣ್ಣ ಜೊತೆಗೂ ಫೋಟೋ ತೆಗೆಸಿಕೊಂಡಿದ್ದಾರೆ ಪೊಲೀಸ್ ಸಿಬ್ಬಂದಿ.

ಫೇಸ್‌ಬುಕ್‌ನಲ್ಲಿ ಟ್ರಿಪ್ ಫೋಟೋ ಅಪ್‌ಲೋಡ್ ಮಾಡಿದ 'ಡಿ ಬಾಸ್'
ಸಾಮಾನ್ಯವಾಗಿ ದರ್ಶನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫೋಟೋಗಳನ್ನು ಅಪ್‌ಲೋಡ್ ಮಾಡುವುದಿಲ್ಲ. ಆಗಾಗ ಪ್ರೊಫೈಲ್ ಪಿಕ್ಚರ್ ಚೇಂಜ್ ಮಾಡುತ್ತಿರುತ್ತಾರೆ. ಆದರೆ, ಇದೀಗ ಕೇರಳ ಟ್ರಿಪ್ ಮುಗಿಸಿಕೊಂಡು ಬಂದಿರುವ ಅವರು, ನಾಲ್ಕು ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಆ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.

ಕನಸಿನ ಕಾರಿನಲ್ಲಿ 'ಡಿ ಬಾಸ್‌' ದರ್ಶನ್ ಜೊತೆ ರೌಂಡ್ಸ್‌ ಹೋಗಿಬಂದ ರಿಷಬ್‌ ಶೆಟ್ಟಿ!

'ರಾಬರ್ಟ್' ರಿಲೀಸ್‌ಗೆ ಕಾದಿರುವ ಫ್ಯಾನ್ಸ್
ಏಪ್ರಿಲ್‌ನಲ್ಲಿ ತೆರೆಗೆ ಬರಬೇಕಿದ್ದ 'ರಾಬರ್ಟ್' ಸಿನಿಮಾ ಕೊರೊನಾದಿಂದಾಗಿ ಇನ್ನೂ ಸಹ ತೆರೆಕಂಡಿಲ್ಲ. ಡಿ ಬಾಸ್ ಫ್ಯಾನ್ಸ್ ಅಂತೂ ಈ ಸಿನಿಮಾಕ್ಕಾಗಿ ತುಂಬ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, 2021ರ ಏಪ್ರಿಲ್‌ನಲ್ಲೇ 'ರಾಬರ್ಟ್' ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ. ಇನ್ನು, ಲಾಕ್‌ಡೌನ್‌ಗೂ ಮೊದಲು 'ರಾಜ ವೀರ ಮದಕರಿ ನಾಯಕ' ಶೂಟಿಂಗ್‌ ಆರಂಭಿಸಿದ್ದರು ಡಿ ಬಾಸ್. ಸದ್ಯ ಅದರ ಶೂಟಿಂಗ್ ನಿಂತಿದೆ. ಬಹುಶಃ ಜನವರಿಯಿಂದ ಪುನಃ ಆರಂಭಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.

ಸ್ಟಾರ್‌ ಸಿನಿಮಾ ಬಿಡುಗಡೆಗೆ ಹೆಚ್ಚಿದ ಒತ್ತಾಯ! ದರ್ಶನ್‌, ಸುದೀಪ್‌, ಧ್ರುವ, ಪುನೀತ್‌ ಚಿತ್ರ ರಿಲೀಸ್‌ ಯಾವಾಗ?



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌