ಆ್ಯಪ್ನಗರ

ಟಿಕ್‌ಟಾಕ್‌ನಿಂದ 5 ಕೋಟಿ ರೂ. ದುಡಿದು ಅದನ್ನೇ ದೇಣಿಗೆ ನೀಡಿದ ದರ್ಶನ್‌ ಸಿನಿಮಾದ ನಟಿ!

ಅನೇಕರು ಟಿಕ್‌ಟಾಕ್‌ಗೆ ಬೈಯುತ್ತಿದ್ದಾರೆ. ಆದರೆ ಈ ನಟಿ ಅದೇ ಟಿಕ್‌ಟಾಕ್‌ ಬಳಸಿಕೊಂಡು ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ. ಬರೋಬ್ಬರಿ 5 ಕೋಟಿ ರೂ. ಸಂಪಾದಿಸಿ ಆ ಹಣವನ್ನೇ ದೇಣಿಗೆಯಾಗಿ ನೀಡಿದ್ದಾರೆ.

Vijaya Karnataka Web 11 May 2020, 10:14 pm
ವಿಶ್ವಾದ್ಯಂತ ಕೊರೊನಾ ವೈರಸ್‌ ತಾಂಡವ ಆಡುತ್ತಿದೆ. ಚೀನಾದಿಂದ ಹರಡಿದ ಈ ವೈರಸ್‌ ಈಗ ಇಡೀ ಜಗತ್ತಿಗೆ ಕಾಟ ಕೊಡುತ್ತಿದೆ. ಹೀಗಿರುವಾಗ ಅದೇ ಚೀನಾ ಮೂಲದ ಟಿಕ್‌ಟಾಕ್‌ ಬಳಸುವುದು ಎಷ್ಟು ಸರಿ? ಇಂಥದ್ದೊಂದು ಚರ್ಚೆ ಅನೇಕ ದಿನಗಳಿಂದ ಸೋಶಿಯಲ್‌ ಮೀಡಿಯಾದಲ್ಲಿ ನಡೆಯುತ್ತಲೇ ಇದೆ.
Vijaya Karnataka Web ಊರ್ವಶಿ ರೌಟೇಲಾ


ಟಿಕ್‌ಟಾಕ್ ಬಳಸುವುದರ ವಿರುದ್ಧ ಯಾರು ಎಷ್ಟೇ ಕೂಗಾಡಿದರೂ ಅದನ್ನು ಬಳಸುವವರ ಸಂಖ್ಯೆ ಕಡಿಮೆ ಆಗಿಲ್ಲ. ಅಚ್ಚರಿ ಎಂದರೆ ಲಾಕ್‌ಡೌನ್‌ ಆದ ನಂತರವೇ ಕೋಟ್ಯಂತರ ಜನರು ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಬಳಸಲು ಆರಂಭಿಸಿದ್ದಾರೆ. ವಿಶೇಷ ಏನೆಂದರೆ ಇದೇ ಟಿಕ್‌ಟಾಕ್‌ ಮೂಲಕ ನಟಿ ಊರ್ವಶಿ ರೌಟೇಲಾ ಒಂದೊಳ್ಳೆಯ ಕೆಲಸ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಊರ್ವಶಿ ಸಖತ್‌ ಸಕ್ರಿಯ ಆಗಿರುತ್ತಾರೆ. ಹಾಟ್‌ ಫೋಟೋಗಳನ್ನು ಹಂಚಿಕೊಳ್ಳುತ್ತ ಅಭಿಮಾನಿಗಳನ್ನು ರಂಜಿಸುತ್ತಾರೆ. ಇತ್ತೀಚೆಗೆ ಅವರು ಟಿಕ್‌ಟಾಕ್‌ನಲ್ಲಿ ಫಿಟ್ನೆಸ್‌ಗೆ ಸಂಬಂಧಿಸಿದ ಆನ್‌ಲೈನ್‌ ಕ್ಲಾಸ್‌ ಮಾಡಿದ್ದರು. ಅದರಲ್ಲಿ ಡ್ಯಾನ್ಸ್‌ ಹೇಳಿಕೊಡುವ ಮೂಲಕ ಲಕ್ಷಾಂತರ ಮಂದಿಯನ್ನು ಟಿಕ್‌ಟಾಕ್‌ನತ್ತ ಸೆಳೆದುಕೊಂಡರು.

‘ಮಿಸ್ಟರ್ ಐರಾವತ’ ಬೆಡಗಿ ಊರ್ವಶಿ ರೌಟೇಲಾ ಮೇಲೆ ಉರಿದುಬಿದ್ದ ನೆಟ್ಟಿಗರು

ಡ್ಯಾನ್ಸ್‌ ಕಲಿಯಬೇಕು ಎನ್ನುವವರಿಗೆ ಮತ್ತು ಆ ಮೂಲಕ ತೂಕ ಇಳಿಸಿಕೊಳ್ಳುವ ಹಂಬಲ ಇರುವವರಿಗೆ ವಿವಿಧ ಪ್ರಕಾರದ ನೃತ್ಯಗಳನ್ನು ಊರ್ವಶಿ ಉಚಿತವಾಗಿ ಟಿಕ್‌ಟಾಕ್‌ನಲ್ಲಿ ಹೇಳಿಕೊಟ್ಟರು. ಅದನ್ನು ಬರೋಬ್ಬರಿ 1.8 ಕೋಟಿ ಜನರು ನೋಡಿದ್ದಾರೆ. ಅದರಿಂದ ಅವರಿಗೆ 5 ಕೋಟಿ ರೂ. ಆದಾಯ ಬಂದಿದೆ ಎನ್ನಲಾಗಿದೆ. ಆ ಹಣವನ್ನೇ ಅವರು ಕೊರೊನಾ ವೈರಸ್‌ ವಿರುದ್ಧ ಹೋರಾಡಲು ದೇಣಿಗೆಯಾಗಿ ನೀಡಿದ್ದಾರೆ.

ಟ್ವೀಟ್‌ ಕದ್ದ 'ಐರಾವತ' ಬೆಡಗಿಗೆ ನೆಟ್ಟಿಗರಿಂದ ಫುಲ್‌ ಕ್ಲಾಸ್‌! ಊರ್ವಶಿ ಯಾಕಿಂಥ ಕೆಲಸ ಮಾಡಿದ್ರು?

'ಇಂಥ ಕಷ್ಟದ ಸಮಯದಲ್ಲಿ ದೇಣಿಗೆ ನೀಡುತ್ತಿರುವ ಎಲ್ಲರಿಗೂ ನಾನು ಧನ್ಯವಾದ ತಿಳಿಸುತ್ತೇನೆ. ಸಿನಿಮಾ ಕಲಾವಿದರು ಮಾತ್ರವಲ್ಲದೆ, ರಾಜಕಾರಣಿಗಳು, ಸಂಗೀತಗಾರರು, ಅಥ್ಲೀಟ್‌ಗಳು ಹಾಗೂ ಜನಸಾಮಾನ್ಯರಿಗೂ ಧನ್ಯವಾದಗಳು. ನಾವು ಎಲ್ಲರೂ ಒಂದಾಗಿರಬೇಕು. ನಮಗೆ ಎಲ್ಲರ ಬೆಂಬಲ ಬೇಕು. ಯಾವ ದೇಣಿಗೆಯೂ ಚಿಕ್ಕದಲ್ಲ. ಎಲ್ಲರೂ ಜೊತೆಯಾಗಿ ಈ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡಬೇಕು' ಎಂದು ಊರ್ವಶಿ ಹೇಳಿದ್ದಾರೆ.

ನನಗೂ ಕುಟುಂಬವಿದೆ, ಉತ್ತರಿಸಬೇಕಿದೆ: ನಟಿ ಊರ್ವಶಿ ರೌಟೇಲಾ ಗರಂ!

ಹಿಂದಿ ಚಿತ್ರರಂಗದಲ್ಲೇ ಹೆಚ್ಚು ಸಕ್ರಿಯ ಆಗಿರುವ ಊರ್ವಶಿ ರೌಟೇಲಾ ಕನ್ನಡದ ಸಿನಿಪ್ರಿಯರಿಗೂ ಪರಿಚಿತ. 2015ರಲ್ಲಿ ದರ್ಶನ್‌ ಅಭಿನಯದ 'ಮಿಸ್ಟರ್‌ ಐರಾವತ' ಸಿನಿಮಾದಲ್ಲಿ ಅವರು ನಾಯಕಿಯಾಗಿ ನಟಿಸಿದ್ದರು. ಆ ಸಿನಿಮಾ ಬಳಿಕ ಅವರು ಮತ್ತೆ ದಕ್ಷಿಣ ಭಾರತದ ಕಡೆಗೆ ತಿರುಗಿ ನೋಡಿಲ್ಲ. ಸದ್ಯ ಹಲವು ಬಾಲಿವುಡ್‌ ಸಿನಿಮಾ ಆಫರ್‌ಗಳು ಅವರ ಕೈಯಲ್ಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌