ಆ್ಯಪ್ನಗರ

Darshan: 'ರಾಜಾ ವೀರ ಮದಕರಿ ನಾಯಕ' ಚಿತ್ರದ ಶೂಟಿಂಗ್ ಬಗ್ಗೆ ಇಲ್ಲಿದೆ ಬಿಗ್ ಅಪ್‌ಡೇಟ್!

'ಕುರುಕ್ಷೇತ್ರ' ಸಿನಿಮಾದಲ್ಲಿ ಪೌರಾಣಿಕ ಪಾತ್ರ ಮಾಡಿದ್ದ ನಟ ದರ್ಶನ್‌, 'ರಾಜಾ ವೀರ ಮದಕರಿ ನಾಯಕ' ಸಿನಿಮಾದಲ್ಲಿ ಐತಿಹಾಸಿಕ ಪಾತ್ರವೊಂದಕ್ಕೆ ಜೀವ ತುಂಬಲಿದ್ದಾರೆ. ಆ ಚಿತ್ರದ ಕುರಿತ ಅಪ್‌ಡೇಟ್ ಮಾಹಿತಿ ಇಲ್ಲಿದೆ.

Vijaya Karnataka Web 1 Dec 2020, 1:35 pm
'ಚಾಲೆಂಜಿಂಗ್ ಸ್ಟಾರ್' ದರ್ಶನ್ ಅಭಿಮಾನಿಗಳು 'ರಾಬರ್ಟ್' ಸಿನಿಮಾದ ರಿಲೀಸ್‌ಗೆ ಎಷ್ಟು ಕಾತರದಿಂದ ಕಾಯುತ್ತಿದ್ದಾರೋ, ಅಷ್ಟೇ ಕುತೂಹಲ, ನಿರೀಕ್ಷೆಯನ್ನು ಅವರ ಮುಂದಿನ ಸಿನಿಮಾ 'ರಾಜಾ ವೀರ ಮದಕರಿ ನಾಯಕ' ಮೇಲೂ ಇಟ್ಟುಕೊಂಡಿದ್ದಾರೆ. ಕೇರಳದಲ್ಲಿ ಈಗಾಗಲೇ ಒಂದು ಹಂತದ ಶೂಟಿಂಗ್ ಮುಗಿಸಿರುವ ತಂಡ, ಕೊರೊನಾದಿಂದಾಗಿ ಚಿತ್ರೀಕರಣಕ್ಕೆ ಬ್ರೇಕ್ ಹಾಕಿತ್ತು. ಇದೀಗ ಪುನಃ ಶೂಟಿಂಗ್ ಶುರು ಮಾಡುವುದಕ್ಕೆ ಅಣಿಯಾಗಿದ್ದು, ಲೊಕೇಷನ್‌ ಹುಡುಕಾಟ ಮುಂದುವರಿಸಿದೆ.
Vijaya Karnataka Web raja veera madakari nayaka


ಕುಮುಟಾದಲ್ಲಿ ಮದಕರಿ ನಾಯಕ ತಂಡ!
ಕುಮುಟಾದಲ್ಲಿರುವ ಮಿರ್ಜಾನ್ ಕೋಟೆ ಸುತ್ತಮುತ್ತ ಲೊಕೇಷನ್ ಹುಡುಕಾಟದಲ್ಲಿ ತಂಡ ಬ್ಯುಸಿ ಆಗಿದೆ. 'ರಾಜಾ ವೀರ ಮದಕರಿ ನಾಯಕ' ಚಿತ್ರದ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ಹಿರಿಯ ನಟ ದೊಡ್ಡಣ್ಣ, ಛಾಯಾಗ್ರಾಹಕ ಅಶೋಕ್ ಕಶ್ಯಪ್ ಸೇರಿದಂತೆ ಅನೇಕರು ಈ ತಂಡದಲ್ಲಿದ್ದು, ಲೊಕೇಷನ್‌ ಫೈನಲ್ ಮಾಡುತ್ತಿದ್ದಾರೆ. ಇದುವರೆಗೂ ಶೂಟಿಂಗ್ ಯಾವಾಗ ಶುರುವಾಗಬಹುದು ಎಂದು ಕಾತರದಿಂದ ಕಾದಿದ್ದ ಅಭಿಮಾನಿಗಳಿಗೆ ಈ ಸುದ್ದಿ ಖುಷಿ ನೀಡಿದೆ.

ಈ ಮೊದಲು ಆಗಸ್ಟ್‌ನಲ್ಲಿ ಶೂಟಿಂಗ್ ಶುರು ಮಾಡಬೇಕು ಎಂದು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಸದ್ಯ ಬೆಂಗಳೂರು, ಚಿತ್ರದುರ್ಗ, ಮುಂಬೈ, ಹೈದರಾಬಾದ್ ಮುಂತಾದ ಕಡೆ ಚಿತ್ರೀಕರಣ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈಗ ಕುಮುಟಾದಲ್ಲೂ ಶೂಟಿಂಗ್ ಮಾಡುವ ಸೂಚನೆ ಸಿಕ್ಕಿದೆ. ಈ ಸಿನಿಮಾಗೆ ಹಂಸಲೇಖ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಬಿ.ಎಲ್‌. ವೇಣು 'ರಾಜಾ ವೀರ ಮದಕರಿ ನಾಯಕ' ಚಿತ್ರಕ್ಕೆ ಸ್ಕ್ರಿಪ್ಟ್‌ ಬರೆದಿದ್ದಾರೆ.

'ಅಂಬರೀಷ್ ಅವರನ್ನು ನಾನು ದೇವರ ಥರ ಪೂಜಿಸುತ್ತೇನೆ'- ನಟ ದರ್ಶನ್‌

ಚಿತ್ರಕ್ಕಿನ್ನೂ ಫೈನಲ್ ಆಗಿಲ್ಲ ನಾಯಕಿ!
'ರಾಜಾ ವೀರ ಮದಕರಿ ನಾಯಕ' ಚಿತ್ರಕ್ಕೆ ಈವರೆಗೂ ನಾಯಕಿ ಯಾರೆಂಬುದು ಅಧಿಕೃತವಾಗಿಲ್ಲ. ಈ ಮೊದಲು ನಟಿ ರಮ್ಯಾ ಈ ಸಿನಿಮಾಗೆ ನಾಯಕಿಯಾಗಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿತ್ತಾದರೂ, ಅದು ನಿಜವಾಗಲಿಲ್ಲ. ಸ್ವತಃ ರಾಕ್‌ಲೈನ್ ವೆಂಕಟೇಶ್ ಆ ಬಗ್ಗ ಸ್ಟಷ್ಟನೆ ನೀಡಿದ್ದರು. 'ರಮ್ಯಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಬೇಕು ಎಂಬ ಯೋಚನೆಯನ್ನೇ ಮಾಡಿಲ್ಲ. ಚಿತ್ರದ ಬೇರೆ ಯಾವ ಪಾತ್ರಗಳಿಗೂ ಅವರನ್ನು ಆಯ್ಕೆ ಮಾಡಬೇಕು ಎಂದು ಯೋಚಿಸಿಲ್ಲ' ಎಂದು ತಿಳಿಸಿದ್ದರು. ಈ ಮಧ್ಯೆ ಬಹುಭಾಷಾ ನಟಿ ನಯನತಾರಾ ಹೆಸರು ಕೂಡ ಚಾಲ್ತಿಯಲ್ಲಿದೆ.

ಪಾಕಿಸ್ತಾನದಲ್ಲೂ ಶುರುವಾಯ್ತು ನಟ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಕಾರುಬಾರು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌