ಆ್ಯಪ್ನಗರ

ಕಮಿಷನರ್ ಕಚೇರಿಯ ಸಿಬ್ಬಂದಿಗೆ 'ಆಕ್ಟ್-1978' ಚಿತ್ರ ಪ್ರದರ್ಶನ ಏರ್ಪಡಿಸಿದ ಬೆಂಗಳೂರು ಡಿಸಿಪಿ!

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ ಅವರ 'ಆಕ್ಟ್-1978' ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದೀಗ ಸರ್ಕಾರಿ ಅಧಿಕಾರಿಗಳ ವಲಯದಿಂದಲೂ ಒಳ್ಳೆಯ ಸ್ಪಂದನೆ ಸಿಕ್ಕಿದ್ದು, ಮುಕ್ತಕಂಠದಿಂದ ಸಿನಿಮಾವನ್ನು ಹೊಗಳುತ್ತಿದ್ದಾರೆ.

Vijaya Karnataka Web 28 Nov 2020, 3:11 pm
ಯಜ್ಞಾ ಶೆಟ್ಟಿ, ಸಂಚಾರಿ ವಿಜಯ್, ಅಚ್ಯುತ್ ಕುಮಾರ್ ಮುಂತಾದವರು ನಟಿಸಿರುವ 'ಆಕ್ಟ್-1978' ಚಿತ್ರವು ಜನಮನ್ನಣೆ ಗಳಿಸಿ, ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಲಾಕ್‌ಡೌನ್‌ ನಂತರ ತೆರೆಕಂಡ ಹೊಸ ಸಿನಿಮಾ ಇದಾಗಿದ್ದು, ಜನರು ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದಾರೆ. ಇದೀಗ ಬೆಂಗಳೂರು ಡಿಸಿಪಿ ನಿಶಾ ಜೇಮ್ಸ್ ಅವರು 'ಆಕ್ಟ್ 1978' ಸಿನಿಮಾವನ್ನು ವೀಕ್ಷಿಸಿ, ಬಹಳ ಇಷ್ಟಪಟ್ಟು, ಸಿನಿಮಾದಲ್ಲಿರುವ ಸಂದೇಶ ಎಲ್ಲರಿಗೂ ತಲುಪಬೇಕು ಎಂಬ ಆಶಯದಿಂದ ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದಾರೆ.
Vijaya Karnataka Web act 1978


ನಿಶಾ ಅವರು ಸ್ವಯಂಪ್ರೇರಿತರಾಗಿ ಬೆಂಗಳೂರು ಕಮಿಷನರ್ ಕಛೇರಿಯ ಎಲ್ಲ ಸಿಬ್ಬಂದಿಗೆ ಪ್ರದರ್ಶನ ಏರ್ಪಡಿಸಿ ಸಿನಿಮಾ ತೋರಿಸಿದ್ದಾರೆ. ಸಿನಿಮಾ ನೋಡಿದ ಕಛೇರಿಯ ಸಿಬ್ಬಂದಿ ಭಾವುಕರಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 'ಇಂತಹ ಒಳ್ಳೆಯ ಸಿನಿಮಾಗಳು ಕನ್ನಡದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು' ಎಂದು ಹೇಳಿದ್ದಾರೆ. ಹೊಸದಾಗಿ ಸರ್ಕಾರಿ ಕೆಲಸಕ್ಕೆ ಸೇರಿದ ಸಿಬ್ಬಂದಿಯೊಬ್ಬರು, 'ತಾವು ಪ್ರಾಮಾಣಿಕವಾಗಿ ಸರ್ಕಾರಿ ಕೆಲಸ ಮಾಡುವುದಕ್ಕೆ ಈ ಸಿನಿಮಾ ನನಗೆ ಸ್ಪೂರ್ತಿಯಾಗಿದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ..

'ಆಕ್ಟ್-1978' ಸಿನಿಮಾ ಬಿಡುಗಡೆಯಾದ ಬಹುತೇಕ ಚಿತ್ರಮಂದಿರಗಳ ಬಾಕ್ಸ್ ಆಫೀಸ್ ಗಳಿಕೆ ಉತ್ತಮವಾಗಿದ್ದು, ಕೊರೊನಾ ಭಯದ ನಡುವೆಯೂ ಯುವಕರಿಂದ ವಯೋವೃದ್ಧರ ತನಕ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ಮತ್ತಷ್ಟು ಹೆಚ್ಚಿನ ಜನರಿಗೆ ತಲುಪಲಿದ್ದು, ಇತರೆ ರಾಜ್ಯಗಳಲ್ಲಿಯೂ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆಗಳಿವೆಯಂತೆ. ಈ ಎಲ್ಲ ಬೆಳವಣಿಗೆಯ ಆಧಾರದ ಮೇಲೆ ಹೇಳುವುದಾದರೆ 'ಚಿತ್ರಮಂದಿರಗಳಲ್ಲೇ ಸಿನಿಮಾ ಬಿಡುಗಡೆ ಮಾಡಬೇಕು' ಎಂಬ ತಂಡದ ನಿರ್ಧಾರಕ್ಕೆ ಯಶಸ್ಸು ಸಿಕ್ಕಿದೆ ಎಂದೇ ಹೇಳಲಾಗುತ್ತಿದೆ.

'ಚಿತ್ರಮಂದಿರಗಳಿಗೆ ಜೀವ ಬರಬೇಕು, ಮರಳಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರಬೇಕು, ಬೆಳ್ಳಿಪರದೆಯ ಸಿನಿಮಾ ಅನುಭವ ಪಡೆಯಬೇಕು, ಚಿತ್ರಮಂದಿರಗಳನ್ನು ನಂಬಿಕೊಂಡು ಬದುಕು ಕಟ್ಟಿಕೊಂಡಿರುವವರಿಗೆ ಉತ್ಸಾಹ ತುಂಬಬೇಕು, ಆ ಮೂಲಕ ಸಿನಿಮಾದ ನಿಜ ಸಂಭ್ರಮದ ವಾತಾವಾರಣ ನಿರ್ಮಾಣವಾಗಬೇಕು ಎಂಬುದು 'ಆಕ್ಟ್-1978' ಚಿತ್ರದ ನಿರ್ದೇಶಕ ಮಂಸೋರೆ ಹಾಗೂ ನಿರ್ಮಾಪಕ ದೇವರಾಜ್ ಅವರ ಆಶಯವಾಗಿತ್ತು.

ಚಿತ್ರಮಂದಿರದಲ್ಲೇ ರಿಲೀಸ್ ಆಗಲಿದೆ 'ಆಕ್ಟ್ 1978' ಸಿನಿಮಾ! ಚಿತ್ರತಂಡದ ಈ ನಿರ್ಧಾರಕ್ಕೆ ಕಾರಣವೇನು?

ಇನ್ನು, 'ಆಕ್ಟ್-1978' ಚಿತ್ರವು ತೆರೆಕಂಡು, ಯಶಸ್ಸಾಗುತ್ತಿದ್ದಂತೆಯೇ, ಸ್ಯಾಂಡಲ್‌ವುಡ್ ಚಟುವಟಿಕೆಗಳು ಗರಿಗೆದರಿವೆ. ಮುಂದಿನ ವಾರದ ವೇಳೆಗೆ ಸುಮಾರು 15 ಹೊಸ ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿರುವ ಮಾಹಿತಿ ಇದೆ. ಇದು ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ನೀಡಿದೆ. 'ಆಕ್ಟ್-1978' ಸಿನಿಮಾದ ಗೆಲುವು ಬರೀ ತಂಡದ ಗೆಲುವಲ್ಲ, ಪ್ರೇಕ್ಷಕರು, ನೆಟ್ಟಿಗರು, ಮಾಧ್ಯಮದವರು, ಚಿತ್ರಮಂದಿರದ ಸಿಬ್ಬಂದಿ ಹಾಗೂ ಮಾಲೀಕರ ಗೆಲುವು' ಎಂದು 'ಆಕ್ಟ್-1978' ತಂಡ ಹೇಳಿಕೊಂಡಿದೆ.

ಮಂಸೋರೆ ನಿರ್ದೇಶನದ 'Act-1978' ಸಿನಿಮಾಕ್ಕೆ ಸಾಥ್ ನೀಡಿದ ಪುನೀತ್ ರಾಜ್‌ಕುಮಾರ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌