ಆ್ಯಪ್ನಗರ

'ಪರಭಾಷೆಯ ಹೀರೋಗಳಿಂದ ಒದೆ ತಿನ್ನಬೇಡಿ'! ಕನ್ನಡ ನಟರಲ್ಲಿ ಮನವಿ ಮಾಡಿದ 'ಡೆಡ್ಲಿ' ರವಿ ಶ್ರೀವತ್ಸ

ಕನ್ನಡ ಹೀರೋಗಳು ಪರಭಾಷೆಯಲ್ಲಿ ವಿಲನ್ ಪಾತ್ರ ಮಾಡುವುದು ಹೊಸತೇನಲ್ಲ. ಅದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದೀಗ ಆ ಬಗ್ಗೆ ಮಾತನಾಡಿದ್ದಾರೆ 'ಡೆಡ್ಲಿ ಸೋಮ' ಖ್ಯಾತಿಯ ನಿರ್ದೇಶಕ ರವಿ ಶ್ರೀವತ್ಸ.

ವಿಕ ವೆಬ್ ಡೆಸ್ಕ್ | Vijaya Karnataka Web 21 Apr 2020, 8:17 pm
ಕನ್ನಡದಲ್ಲಿ ಹೀರೋ ಆಗಿ ಮಿಂಚಿದ ಅನೇಕ ತಾರೆಯರು ಪರಭಾಷೆಯಲ್ಲಿ ವಿಲನ್ ಆಗಿದ್ದನ್ನು ನೋಡಿದ್ದೇವೆ. ಮೊದಲು 'ಈಗ'ದಲ್ಲಿ ವಿಲನ್ ಆಗಿದ್ದ ಸುದೀಪ್‌, ಆನಂತರ 'ದಬಾಂಗ್‌ 3'ಯಲ್ಲಿ ಸಲ್ಮಾನ್‌ ಎದುರು ವಿಲನ್ ಆಗಿ ನಟಿಸದ್ದನ್ನು ನೋಡಿದ್ದೇವೆ. ಈಗ ಮತ್ತೊಬ್ಬ ನಟ 'ಡಾಲಿ' ಧನಂಜಯ ತೆಲುಗಿನಲ್ಲಿ ವಿಲನ್ ಪಾತ್ರ ಮಾಡುವ ಸಾಧ್ಯತೆಗಳಿವೆ. ಇದೀಗ ಆ ಬಗ್ಗೆ ಮಾತನಾಡಿರುವ 'ಡೆಡ್ಲಿ' ನಿರ್ದೇಶಕ ರವಿ ಶ್ರೀವತ್ಸ, 'ಅಲ್ಲಿನ ಹೀರೋಗಳ ಕೈಯಲ್ಲಿ ಒದೆ ತಿಂದು‌ ಬರಬೇಡಿ' ಎಂದು ಮನವಿ ಮಾಡಿಕೊಂಡಿದ್ದಾರೆ.
Vijaya Karnataka Web ಪರಭಾಷೆಯ ಹೀರೋಗಳಿಂದ ಒದೆ ತಿನ್ನಬೇಡಿ!


ಸುಕುಮಾರ್ ನಿರ್ದೇಶನದ 'ಪುಷ್ಪ' ಚಿತ್ರದಲ್ಲಿ ನಟ ಅಲ್ಲು ಅರ್ಜುನ್ ಹೀರೋ ಆಗಿ ನಟಿಸುತ್ತಿದ್ದಾರೆ. ಆ ಚಿತ್ರದಲ್ಲಿ ವಿಲನ್ ಆಗಿ ವಿಜಯ್ ಸೇತುಪತಿ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ, ಕಾರಣಾಂತರಗಳಿಂದ ವಿಜಯ್ ಸಿನಿಮಾದಿಂದ ಹೊರನಡೆದ ಬಳಿಕ, ಅವರ ಜಾಗಕ್ಕೆ ಕನ್ನಡದ ನಟ 'ಡಾಲಿ' ಧನಂಜಯ ಆಯ್ಕೆ ಆಗಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಈ ವಿಚಾರವನ್ನು ಮೆನ್ಷನ್‌ ಮಾಡಿರುವ ರವಿ, 'ಎಲ್ಲಾ ನನ್ನ ಹೀರೋಗಳಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಅಭಿನಯ, ಹೆಸರು, ಹಣ, ಕೀರ್ತಿ ಈ ಹಣೆಪಟ್ಟಿ ಹುಡ್ಕೊಂಡು ದಯಮಾಡಿ ಹೊರ ಭಾಷೆಯಲ್ಲಿ ಅಭಿನಯಿಸಿ, ಅಲ್ಲಿನ ಹೀರೋಗಳ ಕೈಯಲ್ಲಿ ಒದೆ ತಿಂದು‌ ಬರಬೇಡಿ... ಪ್ಲೀಸ್' ಎಂದು ಟ್ವೀಟ್ ಮಾಡಿದ್ದಾರೆ.

ಅವರ ಟ್ವೀಟ್‌ಗೆ ಸಾಕಷ್ಟು ಪರ-ವಿರೋಧ ಪ್ರತಿಕ್ರಿಯೆಗಳು ಬಂದಿವೆ. ಅದಕ್ಕೂ ಉತ್ತರ ನೀಡಿದ್ದಾರೆ ರವಿ ಶ್ರೀವತ್ಸ. 'ನನ್ನ ಮಣ್ಣಿನ‌‌ ನಾಯಕ ನಟ ಅಭಿನಯದ ಹೆಸರಲ್ಲಿ ಬೇಲಿ ದಾಟಿ ಹೋಗಿ, ಅಲ್ಲಿಯವನ ಬಲೆಗೆ ಸಿಕ್ಕಾಕ್ಕೊಂಡು ಹೊಡುಸ್ಕೊಂಡು‌, ಉಗುಸ್ಕೊಂಡೂ ಇಲ್ಲಿ ನಾವು ಕೊಟ್ಟ ಬೆಲೆಯನ್ನ ಅಲ್ಲಿ ಬೀದಿಲಿ ಹರಾಜಾಕಿ ಬರೋ ಬದುಕು ಬೇಡ ಸ್ವಾಮಿ' ಎಂದಿದ್ದಾರೆ.

ಅಭಿಮಾನಿಗಳಿಗೋಸ್ಕರ ಬಹುಭಾಷಾ ಚಿತ್ರದಿಂದ ಹೊರಬಂದ ನಟ ವಿಜಯ್ ಸೇತುಪತಿ



'ನಾನು‌ ಇತಿಹಾಸದ ಪುಟಗಳನ್ನ ನೋಡ್ತಾ ಇಲ್ಲ... ಸುಂದರವಾದ ಭವಿಷ್ಯವನ್ನು ಹಾಳು ಮಾಡ್ಕೋಬೇಡಿ ಅಂತ ನನ್ನ ಮಣ್ಣಿನ ಹೀರೋಗಳಿಗೆ ಕೈ ಮುಗಿದು‌ ಕೇಳ್ಕೋತಾ ಇದ್ದೀನಿ' ಎಂದಿರುವ ಅವರು, 'ಅಲ್ಲು ಅರ್ಜುನ್ ಪಾತ್ರವನ್ನು ನಮ್ಮ ಡಾಲಿಗೆ ಕೊಟ್ಟು, ಅವರನ್ನ ವಿಲನ್ ಮಾಡಲಿಕ್ಕೆ ಹೇಳಿ ನೋಡುವ‌...? ಒಪ್ಪುಸ್ತೀರಾ' ಎಂದು ನೆಟ್ಟಿಗರೊಬ್ಬರ ಪ್ರಶ್ನೆಗೆ ಉತ್ತರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌