ಆ್ಯಪ್ನಗರ

ಧನುಷ್ ತಮ್ಮ ಮಗ ಎಂದು ಹೇಳಿಕೊಂಡ ದಂಪತಿಯ ವಿರುದ್ಧ ಲೀಗಲ್ ನೋಟೀಸ್ ಕಳುಹಿಸಿದ ಕಸ್ತೂರಿ ರಾಜ!

ತಮಿಳು ನಟ ಧನುಷ್ (Dhanush) ತಮ್ಮ ಮಗ (Biological Son) ಎಂದು ಮಧುರೈ ಮೂಲದ ದಂಪತಿ ಆರೋಪಿಸಿದ್ದರು. ಈ ಪ್ರಕರಣ ಸದ್ಯ ಮದ್ರಾಸ್ ಹೈಕೋರ್ಟ್‌ನಲ್ಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಧನುಷ್ ಅವರಿಗೆ ಮದ್ರಾಸ್ ಹೈಕೋರ್ಟ್‌ನಿಂದ (Madras High Court) ಸಮನ್ಸ್ ನೀಡಲಾಗಿದೆ ಎಂದು ಇತ್ತೀಚೆಗಷ್ಟೇ ವರದಿಯಾಗಿತ್ತು. ಇದೀಗ ಮಧುರೈ ಮೂಲದ ದಂಪತಿಗೆ ನಟ ಧನುಷ್ ಹಾಗೂ ತಂದೆ ಕಸ್ತೂರಿ ರಾಜ ಲೀಗಲ್ ನೋಟೀಸ್ ಕಳುಹಿಸಿದ್ದಾರೆ.

Authored byಹರ್ಷಿತಾ ಎನ್ | Vijaya Karnataka Web 21 May 2022, 1:05 pm

ಹೈಲೈಟ್ಸ್‌:

  • ನಟ ಧನುಷ್ ತಂದೆ-ತಾಯಿ ಯಾರು?
  • ಧನುಷ್ ತಮ್ಮ ಮಗ ಎಂದ ಕೋರ್ಟ್‌ ಮೆಟ್ಟಿಲೇರಿದ್ದಾರೆ ಮಧುರೈ ಮೂಲದ ದಂಪತಿ
  • ಮಧುರೈ ಮೂಲದ ದಂಪತಿಗೆ ನೋಟೀಸ್ ನೀಡಿರುವ ಧನುಷ್

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web dhanush sends legal notice to couple claiming him to be their biological son
ಧನುಷ್ ತಮ್ಮ ಮಗ ಎಂದು ಹೇಳಿಕೊಂಡ ದಂಪತಿಯ ವಿರುದ್ಧ ಲೀಗಲ್ ನೋಟೀಸ್ ಕಳುಹಿಸಿದ ಕಸ್ತೂರಿ ರಾಜ!
ತಮಿಳು ನಟ ಧನುಷ್ (Dhanush) ತಮ್ಮ ಮಗ (Biological Son) ಎಂದು ಮಧುರೈ ಮೂಲದ ದಂಪತಿ ಆರೋಪಿಸಿದ್ದರು. ಈ ಪ್ರಕರಣ ಸದ್ಯ ಮದ್ರಾಸ್ ಹೈಕೋರ್ಟ್‌ನಲ್ಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಧನುಷ್ ಅವರಿಗೆ ಮದ್ರಾಸ್ ಹೈಕೋರ್ಟ್‌ನಿಂದ (Madras High Court) ಸಮನ್ಸ್ ನೀಡಲಾಗಿದೆ ಎಂದು ಇತ್ತೀಚೆಗಷ್ಟೇ ವರದಿಯಾಗಿತ್ತು. ಇದೀಗ ಮಧುರೈ ಮೂಲದ ದಂಪತಿಗೆ ನಟ ಧನುಷ್ ಹಾಗೂ ತಂದೆ ಕಸ್ತೂರಿ ರಾಜ ಲೀಗಲ್ ನೋಟೀಸ್ ಕಳುಹಿಸಿದ್ದಾರೆ.
ನೋಟೀಸ್‌ನಲ್ಲಿ ಏನಿದೆ..?
ವಕೀಲರ ಮೂಲಕ ಧನುಷ್ ಮತ್ತು ಕಸ್ತೂರಿ ರಾಜ ನೋಟೀಸ್ ಕಳುಹಿಸಿದ್ದು, ಧನುಷ್‌ಗೆ ಸಂಬಂಧಿಸಿದಂತೆ ಹಕ್ಕು ಚಲಾಯಿಸುವುದನ್ನು ನಿಲ್ಲಿಸುವಂತೆ ದಂಪತಿಗೆ ತಿಳಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಮಾಜಿ ಪತಿ ಧನುಷ್‌ ಹೆಸರಿಗೆ ಕತ್ತರಿ ಹಾಕಿದ ರಜನಿಕಾಂತ್ ಪುತ್ರಿ ಐಶ್ವರ್ಯಾ!

‘’ಇನ್ಮೇಲೆ ನನ್ನ ಕಕ್ಷಿದಾರರ ವಿರುದ್ಧ ಯಾವುದೇ ರೀತಿಯ ಸುಳ್ಳು, ಮಾನಹಾನಿಕರ ಆರೋಪಗಳನ್ನು ಮಾಡಬಾರದು. ಇದನ್ನ ಅನುಸರಿಸಲು ವಿಫಲವಾದರೆ ನನ್ನ ಕ್ಷಕಿದಾರರು ಈ ನಿಟ್ಟಿನಲ್ಲಿ ನ್ಯಾಯಾಲಯದ ಮೊರೆ ಹೋಗುತ್ತಾರೆ. ಒಂದ್ವೇಳೆ ಸುಳ್ಳು, ಮಾನಹಾನಿಕರ ಆರೋಪಗಳನ್ನು ಮಾಡಿದರೆ, ಮಾನನಷ್ಟ ಮೊಕದ್ದಮೆಯನ್ನು ಹೂಡಿ ಕಾನೂನು ಕ್ರಮ ಜರುಗಿಸಲಾಗುವುದು’’ ಎಂದು ನೋಟೀಸ್‌ನಲ್ಲಿ ವಕೀಲ ಎಸ್‌.ಹಾಜಾ ಮೊಹಿದ್ದೀನ್ ಗಿಸ್ತಿ ಉಲ್ಲೇಖಿಸಿದ್ದಾರೆ.

‘’ತಾವು ಮಾಡಿರುವ ಆರೋಪಗಳೆಲ್ಲಾ ಸುಳ್ಳು ಹಾಗೂ ಸುಳ್ಳು ಆರೋಪ ಮಾಡಿರುವ ಕಾರಣ ಕ್ಷಮೆ ಕೇಳುವಂತೆ ಪತ್ರಿಕಾ ಹೇಳಿಕೆ ನೀಡಬೇಕು ಎಂದು ಧನುಷ್ ಮತ್ತು ಕಸ್ತೂರಿ ರಾಜ ಹೇಳಿದ್ದಾರೆ. ಹಾಗೆ ಮಾಡಲಿಲ್ಲ ಎಂದರೆ 10 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಎದುರಿಸಬೇಕಾಗುತ್ತದೆ’’ ಎಂದು ನೋಟೀಸ್ ಮೂಲಕ ಮಧುರೈ ಮೂಲದ ದಂಪತಿಗೆ ಎಚ್ಚರಿಕೆ ನೀಡಲಾಗಿದೆ.

ಮಾಜಿ ಪತ್ನಿ ಐಶ್ವರ್ಯಾಗೆ 'ಕಂಗ್ರಾಟ್ಸ್ ಮೈ ಫ್ರೆಂಡ್..' ಎಂದು ಶುಭ ಕೋರಿದ ನಟ ಧನುಷ್‌; ಕಾರಣವೇನು?

ಏನಿದು ಪ್ರಕರಣ..?
ಧನುಷ್ ತಮ್ಮ ಪುತ್ರ ಎಂದು ಮಧುರೈಗೆ ಸೇರಿದ ದಂಪತಿ ಕತಿರೇಸನ್ ಮತ್ತು ಮೀನಾಕ್ಷಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಹಿಂದೆ ಮಧುರೈ ಜಿಲ್ಲೆಯ ಮೆಲೂರ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಈ ದಂಪತಿ ಕೇಸ್ ಹಾಕಿದ್ದರು. ‘’ಧನುಷ್ ತಮ್ಮ ಮೂರನೇ ಮಗ. ಸಿನಿಮಾ ರಂಗದಲ್ಲಿ ತಮ್ಮ ವೃತ್ತಿ ಜೀವನವನ್ನು ಮುಂದುವರೆಸಲು ಧನುಷ್ ಚೆನ್ನೈಗೆ ಹೋದರು. ನಾವೇ ನಿಜವಾದ ಪೋಷಕರು. ಹೀಗಾಗಿ, ತಮಗೆ ತಿಂಗಳಿಗೆ 65,000 ರೂಪಾಯಿ ಪರಿಹಾರ ನೀಡಬೇಕು’’ ಎಂದು ದಂಪತಿಗಳು ತಮ್ಮ ಅರ್ಜಿಯಲ್ಲಿ ಕೋರಿಕೊಂಡಿದ್ದರು.

ಬಳಿಕ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿತೃತ್ವ ಪರೀಕ್ಷೆ ಕೂಡ ಮಾಡಿಸಲಾಗಿತ್ತು. ಪರೀಕ್ಷೆ ನಡೆದ ಬಳಿಕ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ದೃಢಪಟ್ಟಿತ್ತು. ಹೀಗಾಗಿ, ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿತ್ತು.

ಅಂದು ಅಣ್ಣ, ಇಂದು ತಮ್ಮ; ನಟ ಧನುಷ್ ಫ್ಯಾಮಿಲಿಯಲ್ಲಿ ವಿಚ್ಛೇದನ ಇದೇ ಮೊದಲಲ್ಲ!

ಆನಂತರ, ಧನುಷ್ ಅವರು ಪಿತೃತ್ವ ಪರೀಕ್ಷೆಯಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಿ ಕತಿರೇಸನ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದರು. ಪರಿಣಾಮ, ಮದ್ರಾಸ್ ಹೈಕೋರ್ಟ್ ಧನುಷ್‌ಗೆ ಸಮನ್ಸ್ ನೀಡಿತ್ತು.

Fill this survey and get a chance to win an attractive gift
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌