ಆ್ಯಪ್ನಗರ

ಧ್ರುವ ಸರ್ಜಾ ಜನ್ಮದಿನದಂದು ಫ್ಯಾನ್ಸ್‌ಗೆ 'ಗುಡ್‌ ನ್ಯೂಸ್‌'! 8 ವರ್ಷಗಳ ಬಳಿಕ ಒಂದಾಯ್ತು ಹಿಟ್ ಜೋಡಿ

'ಆ್ಯಕ್ಷನ್‌ ಪ್ರಿನ್ಸ್' ಧ್ರುವ ಸರ್ಜಾಗೆ ಇಂದು (ಅ.6) ಹುಟ್ಟುಹಬ್ಬದ ಸಂಭ್ರಮ. ಈ ಬಾರಿ ಅವರ ಮನೆಯ ಬಳಿ ಅಭಿಮಾನಿಗಳು ಹೋಗಿಲ್ಲವಾದರೂ, ಸಂಭ್ರಮಕ್ಕೇನೂ ಕೊರತೆ ಇಲ್ಲ. ಆ ಸಂಭ್ರಮ ಹೆಚ್ಚಿಸಲು ಇಲ್ಲೊಂದು ಗುಡ್‌ ನ್ಯೂಸ್ ಇದೆ.

Vijaya Karnataka Web 6 Oct 2020, 12:22 pm
ಸರಿಯಾಗಿ ಎಂಟು ವರ್ಷಗಳ ಹಿಂದೆ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್ ಎಂಟ್ರಿ ನೀಡಿದವರು ನಟ ಧ್ರುವ ಸರ್ಜಾ. ಅಭಿಮಾನಿಗಳಿಂದ 'ಆ್ಯಕ್ಷನ್‌ ಪ್ರಿನ್ಸ್' ಎಂದು ಕರೆಸಿಕೊಂಡ ಧ್ರುವಗೆ ಮೊದಲ ಚಿತ್ರ 'ಅದ್ದೂರಿ' ದೊಡ್ಡ ಯಶಸ್ಸು ತಂದುಕೊಟ್ಟಿತು. ಆನಂತರ ಸಿನಿಮಾಗಳ ಆಯ್ಕಯಲ್ಲಿ ಸಿಕ್ಕಾಪಟ್ಟೆ ಚ್ಯೂಸಿಯಾದ ಧ್ರುವ, ಎಂಟು ವರ್ಷಗಳಲ್ಲಿ ಮಾಡಿರುವುದು ನಾಲ್ಕು ಸಿನಿಮಾ ಮಾತ್ರ! ಅಂದಹಾಗೆ, ಇಂದು (ಅ.6) ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಒಂದು ಗುಡ್ ನ್ಯೂಸ್ ಹೊರಬಿದ್ದಿದೆ.
Vijaya Karnataka Web Dhruva Sarja


ಮತ್ತೆ ಒಂದಾಯ್ತು ಅದ್ದೂರಿ ಬಳಗ
ಎ.ಪಿ. ಅರ್ಜುನ್‌ ನಿರ್ದೇಶನದಲ್ಲಿ ಮೂಡಿಬಂದ ಎರಡನೇ ಸಿನಿಮಾವೇ 'ಅದ್ದೂರಿ'. ಇದು ಧ್ರುವಗೆ ಮೊದಲ ಚಿತ್ರ. ನಾಯಕಿಯಾಗಿ ರಾಧಿಕಾ ಪಂಡಿತ್ ಕಾಣಿಸಿಕೊಂಡಿದ್ದರು. ಚಿತ್ರ ದೊಡ್ಡ ಹಿಟ್ ಆಗಿತ್ತು. ನವಿರಾದ ಪ್ರೇಮಕಥೆ ಕಥೆಯುಳ್ಳ ಈ ಸಿನಿಮಾ ಹಲವು ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಕಂಡಿತ್ತು. ಆನಂತರ ಧ್ರುವ 'ಬಹದ್ದೂರ್', 'ಭರ್ಜರಿ', 'ಪೊಗರು' ಮಾಡಿದರು. ಅದರೆ, ಅರ್ಜುನ್ ಜೊತೆ ಮತ್ತೆ ಕೆಲಸ ಮಾಡುವ ಅವಕಾಶಗಳು ಒದಗಿಬರಲಿಲ್ಲ. ಇದೀಗ ಧ್ರುವ ಜನ್ಮದಿನದಂದು ಅರ್ಜುನ್ ಹೊಸ ಸಿನಿಮಾ ಘೋಷಣೆ ಮಾಡಿದ್ದು, ಅದರಲ್ಲಿ ಹೀರೋ ಆಗಿ ಧ್ರುವ ಕಾಣಿಸಿಕೊಳ್ಳಲಿದ್ದಾರೆ.

ಎ.ಪಿ. ಅರ್ಜುನ್ ನಿರ್ಮಾಣ/ನಿರ್ದೇಶನ
ಕಳೆದ ವರ್ಷ ತೆರೆಕಂಡ 'ಕಿಸ್‌' ಸಿನಿಮಾವನ್ನು ಅರ್ಜುನ್ ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣವನ್ನೂ ಮಾಡಿದ್ದರು. ಆ ಮೂಲಕ ನಿರ್ಮಾಣ ಕ್ಷೇತ್ರಕ್ಕೂ ಅವರು ಕಾಲಿಟ್ಟಿದ್ದರು. ಇದೀಗ 'ಅದ್ದೂರಿ ಲವರ್' ಅನ್ನೋ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ತಮ್ಮ ಬ್ಯಾನರ್‌ನ ಮೂರನೇ ಸಿನಿಮಾವಾಗಿ ಧ್ರುವ ಸಿನಿಮಾವನ್ನು ನಿರ್ಮಿಸಿ, ನಿರ್ದೇಶನ ಮಾಡಲಿದ್ದಾರೆ. ಈ ಮಧ್ಯೆ ನಟ/ರಾಜಕಾರಣಿ ನಿಖಿಲ್‌ ಕುಮಾರ್‌ಗೆ ಒಂದು ಸಿನಿಮಾವನ್ನು ಅರ್ಜುನ್ ಮಾಡಬೇಕಿದೆ. ಅದು ಜನವರಿಯಲ್ಲಿ ಶುರುವಾಗುವ ಸಾಧ್ಯತೆ ಇದೆ. ಆ ಸಿನಿಮಾ ಮುಗಿದ ಮೇಲೆ ಧ್ರುವ ಸಿನಿಮಾ ಮಾಡಲಿದ್ದಾರೆ.

'ಪೊಗರು' ರಿಲೀಸ್‌ ರೆಡಿ
ಧ್ರುವ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್‌ನ 'ಪೊಗರು' ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ನಂದಕಿಶೋರ್ ಇದರ ನಿರ್ದೇಶಕರು. ಇದೀಗ ಧ್ರುವ ನಟನೆಯ ಐದನೇ ಸಿನಿಮಾವೂ ಘೋಷಣೆ ಆಗಿದ್ದು, ಅದನ್ನೂ ಕೂಡ ನಂದಕಿಶೋರ್ ಅವರೇ ನಿರ್ದೇಶನ ಮಾಡಲಿದ್ದಾರೆ. ಉದಯ್‌ ಕೆ. ಮೆಹ್ತಾ ನಿರ್ಮಾಣ ಮಾಡಲಿದ್ದಾರೆ. ಇನ್ನು, ಬರ್ತ್‌ಡೇ ಇರುವುದರಿಂದ ಧ್ರುವ ಒಂದು ಮನವಿ ಮಾಡಿದ್ದರು. 'ಅಭಿಮಾನಿಗಳೇ ನಮ್ ಅನ್ನದಾತರು. ನೀವೇ ನಮ್ಮ ಶಕ್ತಿ. ಪ್ರತಿವರ್ಷ ಹುಟ್ಟುಹಬ್ಬಕ್ಕೆ ನೀವು ನಮ್ಮ ಮನೆಗೆ ಬಂದು ತೋರಿಸೋ ಪ್ರೀತಿ, ಅಭಿಮಾನ ವರ್ಣಾತೀತ. ಈ ವರ್ಷದ ಎಲ್ಲಾ ಬೆಳವಣಿಗೆಗಳು ನಿಮಗೆ ಗೊತ್ತಿರೋದೇ. ಎಲ್ಲೂ ಸಂಭ್ರಮವಿಲ್ಲ. ಅಭಿಮಾನಿಗಳನ್ನು ಮನೆಯ ಬಳಿ ಬರಬೇಡಿ ಎನ್ನಲು ಮನಸ್ಸಿಲ್ಲ. ನೀವು ಇರುವ ಕಡೆಯಿಂದಲೇ ಹಾರೈಸಿ. ಅದೇ ನನಗೆ ಶ್ರೀರಕ್ಷೆ. ಜೈಆಂಜನೇಯ' ಎಂದು ಟ್ವೀಟ್ ಮಾಡಿದ್ದರು.

ಅಭಿಮಾನಿಗಳನ್ನು ಮನೆಯ ಬಳಿ ಬರಬೇಡಿ ಎನ್ನಲು ಮನಸ್ಸಿಲ್ಲ: 'ಪೊಗರು' ನಟ ಧ್ರುವ ಸರ್ಜಾ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌