ಆ್ಯಪ್ನಗರ

Kaneyadavara Bagge Prakatane: ನಗುತ್ತಾ, ನಗಿಸುತ್ತಾ, ಅಳಿಸುವ ರಂಗಾಯಣ ರಘು, ರವಿಶಂಕರ್‌ & ತಬಲಾ ನಾಣಿ

ಅನಿಲ್‌ ಕುಮಾರ್‌ ನಿರ್ದೇಶನ ಮಾಡಿರುವ 'ಕಾಣೆಯಾದವರ ಬಗ್ಗೆ ಪ್ರಕಟಣೆ' ಸಿನಿಮಾದಲ್ಲಿ ಸಸ್ಪೆನ್ಸ್‌ ಮತ್ತು ಭಾವನಾತ್ಮಕ ಕಥೆಯ ಜತೆಗೆ ನಗುವಿಗೂ ಕೊರತೆಯಿಲ್ಲ. ಈ ಬಗ್ಗೆ ನಿರ್ದೇಶಕ ಅನಿಲ್ ಕುಮಾರ್ ಹೇಳಿದ್ದೇನು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Authored byಅವಿನಾಶ್ ಜಿ. ರಾಮ್ | Vijaya Karnataka 25 May 2022, 9:51 am

ಹೈಲೈಟ್ಸ್‌:

  • ಗಮನಸೆಳೆದ 'ಕಾಣೆಯಾದವರ ಬಗ್ಗೆ ಪ್ರಕಟಣೆ' ಟ್ರೇಲರ್
  • ಈ ಸಿನಿಮಾದಲ್ಲಿ ರಂಗಾಯಣ ರಘು, ರವಿಶಂಕರ್‌, ನಾಣಿಗೆ ಪ್ರಮುಖ ಪಾತ್ರ
  • 'ಕಾಣೆಯಾದವರ ಬಗ್ಗೆ ಪ್ರಕಟಣೆ' ಸಿನಿಮಾ ಕುರಿತು ನಿರ್ದೇಶಕರು ಹೇಳಿದ್ದೇನು?

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web kaneyadavara bagge prakatane
ನಗುತ್ತಾ, ನಗಿಸುತ್ತಾ, ಅಳಿಸುವ ರಂಗಾಯಣ ರಘು, ರವಿಶಂಕರ್‌ & ತಬಲಾ ನಾಣಿ
ಹರೀಶ್‌ ಬಸವರಾಜ್‌
ಸ್ಯಾಂಡಲ್‌ವುಡ್‌ನ ಬ್ಯುಸಿ ಪೋಷಕ ನಟರು ಯಾರು ಎಂದು ಕೇಳಿದರೆ ತಕ್ಷಣ ರಂಗಾಯಣ ರಘು, ರವಿಶಂಕರ್‌, ಚಿಕ್ಕಣ್ಣ, ತಬಲಾ ನಾಣಿ ಕಡೆ ಕೈ ತೋರಿಸಬಹುದು. ಈಗ ಇವರೇ ಪ್ರಮುಖ ಪಾತ್ರಗಳಲ್ಲಿರುವ ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಎಂಬ ವಿಭಿನ್ನ ಶೈಲಿಯ ಸಿನಿಮಾ ಇದೇ ಶುಕ್ರವಾರ ಅಂದರೆ ಮೇ 27ರಂದು ಬಿಡುಗಡೆಯಾಗಲಿದೆ. ಇದರ ಟ್ರೇಲರ್‌ ನೋಡಿದಾಗ ಇದೊಂದು ಮೂವರು ವೃದ್ಧರ ಮಿಸ್ಸಿಂಗ್‌ ಕಥೆ ಎಂದು ಭಾಸವಾಗುತ್ತದೆ. ‘ರಾರ‍ಯಂಬೋ-2’, ‘ದಿಲ್ವಾಲಾ’ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಅನಿಲ್‌ ಕುಮಾರ್‌ ಇದನ್ನು ನಿರ್ದೇಶನ ಮಾಡಿದ್ದಾರೆ.
ಕಿಲಾಡಿ ವೃದ್ಧರ ಕಥೆ
ಇದು ರೆಗ್ಯುಲರ್‌ ಫಾರ್ಮ್ಯಾಟ್‌ನ ಸಿನಿಮಾವಲ್ಲ ಎಂದಿರುವ ನಿರ್ದೇಶಕ ಅನಿಲ್‌ ಕುಮಾರ್‌, ಕಥೆಯೇ ಇದರಲ್ಲಿ ನಾಯಕ. ನಟಿಸಿರುವ ಯಾರೂ ನಾಯಕರಲ್ಲ. ಮೂವರು ಕಿಲಾಡಿ ವೃದ್ಧರ ಜರ್ನಿ ಕಥೆ ಇದು ಎಂದಿದ್ದಾರೆ. ‘ಕಾಣೆಯಾದವರ ಬಗ್ಗೆ ಪ್ರಕಟಣೆ ಸಸ್ಪೆನ್ಸ್‌, ಎಮೋಷನಲ್‌ ಡ್ರಾಮಾ ಜತೆಗೆ ಫನ್‌ ಇರುವಂಥ ಸಿನಿಮಾ. ಅಪ್ಪ, ಅಣ್ಣ, ವಿಲನ್‌ ಹೀಗೆ ಹಲವು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ರಂಗಾಯಣ ರಘು, ರವಿಶಂಕರ್‌, ತಬಲಾ ನಾಣಿ ನನ್ನ ಸಿನಿಮಾದ ಪ್ರಮುಖ ಪಾತ್ರಧಾರಿಗಳು. ಸಿನಿಮಾದ ಕಥೆ ಒಂದು ಕಡೆ ಹೀರೋ ಎನಿಸಿಕೊಂಡರೆ, ಈ ಪಾತ್ರಧಾರಿಗಳೂ ನನ್ನ ಸಿನಿಮಾದ ಹೀರೊಗಳು. ಇವರ ಜತೆಗೆ ಹಾಸ್ಯ ನಟ ಚಿಕ್ಕಣ್ಣ ಸಹ ಇದ್ದಾರೆ. ರಘು, ರವಿ, ನಾಣಿ 65 ವರ್ಷದವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ’ ಎಂದಿದ್ದಾರೆ ಅನಿಲ್‌ ಕುಮಾರ್‌.

‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರಕ್ಕಾಗಿ ಮೊದಲ ಬಾರಿ ಜೊತೆಯಾಗಿ ಹಾಡಿದ ಚಂದನ್ ಶೆಟ್ಟಿ & ಆಲ್‌ ಓಕೆ!
ಸಿನಿಮಾದಲ್ಲಿ ರೆಟ್ರೋ ಸ್ಟೈಲ್‌ ಕೂಡ ಇದೆ

65 ವರ್ಷದ ಪಾತ್ರಗಳು ಎಂದಾಕ್ಷಣ ಇದು ವಯೋವೃದ್ಧರ ಸಿನಿಮಾವಲ್ಲ. ಈ ಮೂವರ ಬಾಲ್ಯ, ಯೌವ್ವನವೆಲ್ಲವೂ ಈ ಸಿನಿಮಾದಲ್ಲಿದೆ. ಬಾಲ್ಯ ಮತ್ತು ಯೌವ್ವನ ಸಮಯದ ಚಿತ್ರೀಕರಣ ರೆಟ್ರೋ ಸ್ಟೈಲ್‌ನಲ್ಲಿ ನಡೆದಿದೆ. ಈಗ ಇದರ ಟ್ರೇಲರ್‌ ಹಲವರನ್ನು ಸೆಳೆದಿದ್ದು, ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. 'ನಾನು ಇಲ್ಲಿಯವರೆಗೂ ಕಮರ್ಷಿಯಲ್‌ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದೇನೆ. ಮೊದಲ ಬಾರಿಗೆ ಬೇರೆ ರೀತಿಯ ಕಂಟೆಂಟ್‌ನ ಸಿನಿಮಾ ಕೈಗೆತ್ತಿಕೊಂಡು ಬಿಡುಗಡೆಯ ಹಂತಕ್ಕೆ ತಂದಿದ್ದೇನೆ’ ಎಂದಿದ್ದಾರೆ ನಿರ್ದೇಶಕ ಅನಿಲ್‌.

‘ಕಾಣೆಯಾದವರ ಬಗ್ಗೆ ಪ್ರಕಟಣೆ’: ರಘು, ರವಿ, ನಾಣಿ ನಾಪತ್ತೆ!
‘ಈ ಮೂವರ ಕಥೆ ಯಾರಿಗೂ ಬೋರ್‌ ಹೊಡೆಸುವುದಿಲ್ಲ. ಸಿನಿಮಾ ನೋಡಲು ಬಂದ ಪ್ರೇಕ್ಷಕನಿಗೆ ಇದು ನನ್ನದೇ ಕಥೆ ಎಂದು ಅನಿಸುತ್ತದೆ. ಕೆಲವರು ತಮ್ಮ ಬದುಕನ್ನು ರಿವೈಂಡ್‌ ಮಾಡಿಕೊಂಡಂಥ ಅನುಭವಕ್ಕೆ ಒಳಗಾಗಲಿದ್ದಾರೆ. ನಾನು ಈ ಕಥೆ ಬರೆದಾಗಲೇ ಇದಕ್ಕೆ ಈ ರೀತಿಯ ಪಾತ್ರಗಳಿದ್ದರೆ ಚಂದ ಎಂದು ಡಿಸೈಡ್‌ ಮಾಡಿಕೊಂಡಿದ್ದೆ. ಈ ಮೂವರು ನಗುತ್ತಾರೆ, ನಗಿಸುತ್ತಾರೆ ಮತ್ತು ಅಳಿಸುತ್ತಾರೆ. ನೋಡುಗರನ್ನು ತಮ್ಮ ಜತೆ ಕನೆಕ್ಟ್ ಮಾಡಿಕೊಳ್ಳುತ್ತಾರೆ. ಅಂತಹ ಒಂದು ವಿಭಿನ್ನ ಕಥೆಯನ್ನು ಇದರಲ್ಲಿ ಹೇಳುತ್ತಿದ್ದೇನೆ’ ಎಂದು ನಿರ್ದೇಶಕರು ತಿಳಿಸಿದ್ದಾರೆ. ತಿಲಕ್‌, ಶೋಭರಾಜ್‌, ಆಶಿಕಾ ರಂಗನಾಥ್‌ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಈ ಸಿನಿಮಾದ ಟ್ರೇಲರ್‌ ಅನ್ನು ಕೂಡ ಅನಿಲ್‌ ವಿಭಿನ್ನವಾಗಿ ಬಿಡುಗಡೆ ಮಾಡಿಸಿದ್ದರು. ಅವರು ತಮ್ಮ ಗೆಳೆಯ ಜಿತೇಂದ್ರ ಜತೆಗೆ ಸೇರಿಕೊಂಡು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

'ಕಾಣೆಯಾದವರ ಬಗ್ಗೆ ಪ್ರಕಟಣೆ' ಎನ್ನುತ್ತ ಬಿಯರ್‌ ಬಾಟಲ್‌ ಹಿಡಿದ ಆಶಿಕಾ ರಂಗನಾಥ್‌! ಕಾರಣವೇನು?
ಕೋಟ್‌:
ಕಾಣೆಯಾದವರ ಬಗ್ಗೆ ಪ್ರಕಟಣೆ ಸಿನಿಮಾದ ಕಥೆ ಪ್ರತಿ ಮನೆಯಲ್ಲಿಯೂ ನಡೆದಿರುತ್ತದೆ. ವಯಸ್ಸಾದ ತಂದೆ ತಾಯಿಗಳನ್ನು ಮಕ್ಕಳು ನೋಡಿಕೊಳ್ಳುವುದರ ಬಗೆಗಿನ ಕಥೆಯಿದು. ಅದಕ್ಕೆ ಕೊಂಚ ಹಾಸ್ಯ ಮತ್ತು ಥ್ರಿಲ್ಲಿಂಗ್‌ ಟಚ್‌ ಕೊಟ್ಟಿದ್ದೇನೆ.
ಅನಿಲ್‌ ಕುಮಾರ್‌, ನಿರ್ದೇಶಕ
ಲೇಖಕರ ಬಗ್ಗೆ
ಅವಿನಾಶ್ ಜಿ. ರಾಮ್
'ವಿಜಯ ಕರ್ನಾಟಕ' ಡಿಜಿಟಲ್ ವಿಭಾಗದಲ್ಲಿ 2019ರ ಸೆಪ್ಟೆಂಬರ್‌ನಿಂದ ಪತ್ರಕರ್ತನಾಗಿ ಅವಿನಾಶ್ ಜಿ. ರಾಮ್ ಕೆಲಸ ಮಾಡುತ್ತಿದ್ದಾರೆ. ಚಿನ್ನದ ಪದಕದೊಂದಿಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ ಕಳೆದ 10 ವರ್ಷಗಳಿಂದ ಸಿನಿಮಾ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದೆ. ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ನಾಲ್ಕು ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಅವಿನಾಶ್‌ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ಪ್ರವಾಸ, ಓದು, ಸಂಗೀತ ಕೇಳುವುದು ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌