'ಕಿಚ್ಚ' ಸುದೀಪ್ ಹುಟ್ಟುಹಬ್ಬದ ದಿನ 'ವಿಕ್ರಾಂತ್ ರೋಣ' ಚಿತ್ರದ 'ಡೆಡ್ ಮ್ಯಾನ್ ಆಂಥೆಮ್' ರಿಲೀಸ್ ಆಗಿದೆ. ಸಿನಿಮಾ ಹೇಗೆಲ್ಲ ಇರಬಹುದು ಎಂಬುದಕ್ಕೆ ಈ ಮೊದಲ ನೋಟ ಒಂದು ಸಣ್ಣ ಉದಾಹರಣೆ ಅಷ್ಟೇ. ಇದನ್ನು ನೋಡಿದವರು ಈಗಾಗಲೇ ಥ್ರಿಲ್ ಆಗಿದ್ದಾರೆ. ಕ್ಯಾಮೆರಾ, ಬೃಹತ್ ಸೆಟ್ಗಳನ್ನು ಕಂಡು ಅಚ್ಚರಿಗೊಂಡಿದ್ದಾರೆ. 3ಡಿ ರೂಪದಲ್ಲಿ ನೋಡುವುದಕ್ಕೆ ಇದು ಹೇಳಿಮಾಡಿಸಿದ ಸಿನಿಮಾ ಅಂತ ಮೆಚ್ಚಿಕೊಂಡಿದ್ದಾರೆ. 'ವಿಕ್ರಾಂತ್ ರೋಣ' ಚಿತ್ರದ 'ಡೆಡ್ ಮ್ಯಾನ್ ಆಂಥೆಮ್' ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿ ಮಾತನಾಡಿದ್ದಾರೆ. ನಿರ್ಮಾಪಕ ಜಾಕ್ ಮಂಜು ಕೂಡ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಪಾರ ಪ್ರಮಾಣದ ನಿರೀಕ್ಷೆ ಇತ್ತು
'ಸುದೀಪ್ ಅವರ ಹುಟ್ಟುಹಬ್ಬದ ದಿನ 'ದಿ ಡೆಡ್ ಮಾನ್ಸ್ ಆಂಥಮ್' ರಿಲೀಸ್ ಆಗುತ್ತಿರುವುದು ನನಗೆ ಬಹಳ ಖುಷಿ ನೀಡಿದೆ. ವಿಕ್ರಾಂತ್ ರೋಣ ಪಾತ್ರದ ನಿಗೂಢತೆಯನ್ನು ಈ ಮೊದಲ ನೋಟ ಅದ್ಭುತವಾಗಿ ಸೆರೆಹಿಡಿದಿದೆ. ಚಿತ್ರೀಕರಣದ ಸಮಯದಲ್ಲೇ ನನಗೆ ಇದರ ಮೇಲಿರುವ ಅಪಾರ ಪ್ರಮಾಣದ ನಿರೀಕ್ಷೆಯ ಬಗ್ಗೆ ಅರಿವಿತ್ತು. ಆದರೆ ಸುದೀಪ್ ಅವರು ಈ ಪಾತ್ರವನ್ನು ಸಾಕಾರಗೊಳಿಸುತ್ತಿರುವುದು, ನನ್ನ ನಿರೀಕ್ಷಣೆಯನ್ನು ಇನ್ನೂ ಹೆಚ್ಚಾಗಿಸಿದೆ. ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಹಾರೈಸಿದ್ದಾರೆ ಅನೂಪ್ ಭಂಡಾರಿ.
Kiccha Sudeep: ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ 'ಕಿಚ್ಚ' ಸುದೀಪ್; ಕಾರಣವೇನು?
'ಸುದೀಪ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ವಿಕ್ರಾಂತ್ ರೋಣದ ಮೊದಲ ನೋಟದೊಂದಿಗೆ ಹೇಳುತ್ತಿದ್ದೇವೆ. ಎಲ್ಲರ ಕೈಕಟ್ಟಿ ಕೂರುವಂತಹ ಸಂದರ್ಭದಲ್ಲಿ ನಾವು ಇಷ್ಟು ಸಕಾರಾತ್ಮಕವಾಗಿ ಮುನ್ನಡೆಯುತ್ತಿರುವುದೇ ಸಂತೋಷದ ವಿಷಯ. ಸುದೀಪ್ ಅವರ ಹುರುಪು, ಉತ್ಸಾಹ ಮತ್ತು ಸಿನಿಮಾ ಮಾಡುವ ಛಲಕ್ಕೆ ಯಾವುದೇ ಎಂಥದ್ದೇ ಪರೀಕ್ಷೆ ಎದುರಾದರೂ, ಅದನ್ನು ತಡೆಯುವ ಶಕ್ತಿಯಿದೆ. ಇದೇ ವಿಕ್ರಾಂತ್ ರೋಣ ಚಿತ್ರವನ್ನು ವಿಶೇಷವಾಗಿದೆ' ಎಂದು ಹೇಳುತ್ತಾರೆ ನಿರ್ಮಾಪಕ ಜಾಕ್ ಮಂಜುನಾಥ್.
Kiccha Sudeep: ಜನ್ಮದಿನದ ಸಂಭ್ರಮದಲ್ಲಿ 'ಅಭಿನಯ ಚಕ್ರವರ್ತಿ' ಸುದೀಪ್
ಚಿತ್ರದಲ್ಲಿ ಸುದೀಪ್ ಜೊತೆಗೆ ನಿರೂಪ್ ಭಂಡಾರಿ, ನೀತಾ ಅಶೋಕ್ ಹಾಗೂ ಜಾಕ್ವೇಲಿನ್ ಫರ್ನಾಂಡಿಸ್ ನಟಿಸಿದ್ದಾರೆ. 'ವಿಕ್ರಾಂತ್ ರೋಣ'ವು ಆಕ್ಷನ್ ಅಡ್ವೆಂಚರ್ ಚಿತ್ರವಾಗಿದ್ದು, 55 ದೇಶಗಳಲ್ಲಿ, 14 ಭಾಷೆಗಳಲ್ಲಿ 3D ರೂಪದಲ್ಲಿ ಬಿಡುಗಡೆ ಆಗಲಿದೆ. ಜಾಕ್ ಮಂಜುನಾಥ್, ಶಾಲಿನಿ ಮಂಜುನಾಥ್ ಇದರ ನಿರ್ಮಾಪಕರು. ಅಲಂಕಾರ್ ಪಾಂಡಿಯನ್ 'ವಿಕ್ರಾಂತ್ ರೋಣ'ಗೆ ಸಹ ನಿರ್ಮಾಪಕರಾಗಿದ್ದಾರೆ. ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಶಿವಕುಮಾರ್ ಅವರ ಕಲಾ ನಿರ್ದೇಶನವಿದೆ. ವಿಲಿಯಮ್ ಡೇವಿಡ್ ಛಾಯಾಗ್ರಹಣ ಮಾಡಿದ್ದಾರೆ.
ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಶುಭ ಕೋರಿದ 'ಚಿನ್ನದ ಹುಡುಗ' ನೀರಜ್ ಚೋಪ್ರಾ
'ಸುದೀಪ್ ಅವರ ಹುಟ್ಟುಹಬ್ಬದ ದಿನ 'ದಿ ಡೆಡ್ ಮಾನ್ಸ್ ಆಂಥಮ್' ರಿಲೀಸ್ ಆಗುತ್ತಿರುವುದು ನನಗೆ ಬಹಳ ಖುಷಿ ನೀಡಿದೆ. ವಿಕ್ರಾಂತ್ ರೋಣ ಪಾತ್ರದ ನಿಗೂಢತೆಯನ್ನು ಈ ಮೊದಲ ನೋಟ ಅದ್ಭುತವಾಗಿ ಸೆರೆಹಿಡಿದಿದೆ. ಚಿತ್ರೀಕರಣದ ಸಮಯದಲ್ಲೇ ನನಗೆ ಇದರ ಮೇಲಿರುವ ಅಪಾರ ಪ್ರಮಾಣದ ನಿರೀಕ್ಷೆಯ ಬಗ್ಗೆ ಅರಿವಿತ್ತು. ಆದರೆ ಸುದೀಪ್ ಅವರು ಈ ಪಾತ್ರವನ್ನು ಸಾಕಾರಗೊಳಿಸುತ್ತಿರುವುದು, ನನ್ನ ನಿರೀಕ್ಷಣೆಯನ್ನು ಇನ್ನೂ ಹೆಚ್ಚಾಗಿಸಿದೆ. ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಹಾರೈಸಿದ್ದಾರೆ ಅನೂಪ್ ಭಂಡಾರಿ.
Kiccha Sudeep: ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ 'ಕಿಚ್ಚ' ಸುದೀಪ್; ಕಾರಣವೇನು?
'ಸುದೀಪ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ವಿಕ್ರಾಂತ್ ರೋಣದ ಮೊದಲ ನೋಟದೊಂದಿಗೆ ಹೇಳುತ್ತಿದ್ದೇವೆ. ಎಲ್ಲರ ಕೈಕಟ್ಟಿ ಕೂರುವಂತಹ ಸಂದರ್ಭದಲ್ಲಿ ನಾವು ಇಷ್ಟು ಸಕಾರಾತ್ಮಕವಾಗಿ ಮುನ್ನಡೆಯುತ್ತಿರುವುದೇ ಸಂತೋಷದ ವಿಷಯ. ಸುದೀಪ್ ಅವರ ಹುರುಪು, ಉತ್ಸಾಹ ಮತ್ತು ಸಿನಿಮಾ ಮಾಡುವ ಛಲಕ್ಕೆ ಯಾವುದೇ ಎಂಥದ್ದೇ ಪರೀಕ್ಷೆ ಎದುರಾದರೂ, ಅದನ್ನು ತಡೆಯುವ ಶಕ್ತಿಯಿದೆ. ಇದೇ ವಿಕ್ರಾಂತ್ ರೋಣ ಚಿತ್ರವನ್ನು ವಿಶೇಷವಾಗಿದೆ' ಎಂದು ಹೇಳುತ್ತಾರೆ ನಿರ್ಮಾಪಕ ಜಾಕ್ ಮಂಜುನಾಥ್.
Kiccha Sudeep: ಜನ್ಮದಿನದ ಸಂಭ್ರಮದಲ್ಲಿ 'ಅಭಿನಯ ಚಕ್ರವರ್ತಿ' ಸುದೀಪ್
ಚಿತ್ರದಲ್ಲಿ ಸುದೀಪ್ ಜೊತೆಗೆ ನಿರೂಪ್ ಭಂಡಾರಿ, ನೀತಾ ಅಶೋಕ್ ಹಾಗೂ ಜಾಕ್ವೇಲಿನ್ ಫರ್ನಾಂಡಿಸ್ ನಟಿಸಿದ್ದಾರೆ. 'ವಿಕ್ರಾಂತ್ ರೋಣ'ವು ಆಕ್ಷನ್ ಅಡ್ವೆಂಚರ್ ಚಿತ್ರವಾಗಿದ್ದು, 55 ದೇಶಗಳಲ್ಲಿ, 14 ಭಾಷೆಗಳಲ್ಲಿ 3D ರೂಪದಲ್ಲಿ ಬಿಡುಗಡೆ ಆಗಲಿದೆ. ಜಾಕ್ ಮಂಜುನಾಥ್, ಶಾಲಿನಿ ಮಂಜುನಾಥ್ ಇದರ ನಿರ್ಮಾಪಕರು. ಅಲಂಕಾರ್ ಪಾಂಡಿಯನ್ 'ವಿಕ್ರಾಂತ್ ರೋಣ'ಗೆ ಸಹ ನಿರ್ಮಾಪಕರಾಗಿದ್ದಾರೆ. ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಶಿವಕುಮಾರ್ ಅವರ ಕಲಾ ನಿರ್ದೇಶನವಿದೆ. ವಿಲಿಯಮ್ ಡೇವಿಡ್ ಛಾಯಾಗ್ರಹಣ ಮಾಡಿದ್ದಾರೆ.
ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಶುಭ ಕೋರಿದ 'ಚಿನ್ನದ ಹುಡುಗ' ನೀರಜ್ ಚೋಪ್ರಾ