ಆ್ಯಪ್ನಗರ

ಮೊದಲು ಗುರುವೇ ನಮಃ ಅಂತಾರೆ; ಆಮೇಲೆ ಗುರುವೇನ್ ಮಹಾ ಅಂತಾರೆ; ಗುರುಪ್ರಸಾದ್ ಟಾಂಗ್ ಕೊಟ್ಟಿದ್ದು ಯಾರಿಗೆ?

'ಮಠ' ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಶನ್‌ನಲ್ಲಿ 'ರಂಗನಾಯಕ' ಸಿನಿಮಾ ಬರ್ತಿದೆ. ಇದರ ಟೀಸರ್ ರಿಲೀಸ್ ಆಗಿದ್ದು, ಈ ವೇಳೆ ಗುರುಪ್ರಸಾದ್ ಮಾತು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

Vijaya Karnataka Web 9 Oct 2019, 3:41 pm
'ರಂಗನಾಯಕ' ಸಿನಿಮಾ ಟೀಸರ್ ರಿಲೀಸ್ ಆಗಿದೆ. ಯಕ್ಷಗಾನ ಭಾಗವತಿಕೆಯ ರೂಪದಲ್ಲಿ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್ ಹಲವರ ಮನ ಗೆದ್ದಿದೆ. ಈ ವೇಳೆ ಜಗ್ಗೇಶ್ ಮತ್ತು ಗುರುಪ್ರಸಾದ್ ಅವರ ಮಾತುಗಳು ಕೆಲವು ಚರ್ಚೆಗೆ ಒಳಪಟ್ಟಿವೆ.
Vijaya Karnataka Web guruprasad mata


"ನನಗೆ ಸುನೀಲ್ ಕುಮಾರ್ ದೇಸಾಯಿ ಸಿನಿಮಾಗಳನ್ನು ನೋಡಿಕೊಂಡು ಬಂದವನು. ಅವರೇ ನನ್ನ ಗುರು. ಕೆಲವರು ತಮ್ಮ ಕೆಲಸ ಆಗುವ ಮುಂಚೆ ಗುರುವೇ ನಮಃ ಅಂತಾರೆ ನಮ್ಮಿಬ್ಬರಲ್ಲಿ ಭಿನ್ನಾಭಿಪ್ರಾಯಗಳಿವೆ, ಅದು ಕೇವಲ ತತ್ವಗಳಲ್ಲಿ ಮಾತ್ರವೇ ಹೊರತು ವ್ಯಕ್ತಿತ್ವದಲ್ಲಿ ನನ್ನ ಅಣ್ಣನೇ ಆತ. ಜಗ್ಗೇಶ್ ಸಿನಿಮಾ ನೋಡಿ ಹುಚ್ಚು ಹಿಡಿದು, ಸಿನಿಮಾ ಮಾಡೋಕೆ ಬಂದವನು ನಾನು. ಕೇವಲ ಕಮರ್ಷಿಯಲ್ ಇದ್ರೆ ಸಾಕಾಗಲ್ಲ, ಬೇರೇನೋ ತತ್ವ ಬೇಕು ಅಲ್ಲಿ. ಒಳ್ಳೆ ಕಥೆ ಮಾಡು, ನನ್ನ ಮಾನ ಮಾತ್ರ ಕಳೆಯಬೇಡ, ಸುಮ್ಮನಿದ್ದರೂ ಪರವಾಗಿಲ್ಲ ಅಂದ್ರು ಜಗ್ಗೇಶ್" ಎಂದು ಹೇಳಿದ್ದಾರೆ ನಿರ್ದೇಶಕ ಗುರುಪ್ರಸಾದ್.

"ಕೆಲವರು ರಾಜಕೀಯ ಕ್ಷೇತ್ರದಲ್ಲಿ ನನ್ನನ್ನು ಲಾಕ್ ಮಾಡಿದರು. ಆ ಸಮಯದಲ್ಲಿ ಆರಂಭವಾಗಿದ್ದು 'ಮಠ' ಸಿನಿಮಾ. ಅದು ನನ್ನ ನೂರನೇ ಚಿತ್ರ. ನನ್ನ ಸಿನಿ ಜೀವನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಅದು. ಆ ಸಿನಿಮಾದಲ್ಲಿ ಕಾವಿ ಬಟ್ಟೆ ಹಾಕಿದ್ದು. ಅಂದೇ ಕಾವಿ ಬಟ್ಟೆಯ ಪವರ್ ಏನು ಅಂತ ಗೊತ್ತಾಗಿದ್ದು. 'ಎದ್ದೇಳು ಮಂಜುನಾಥ' ಸಿನಿಮಾ ಮಾಡಿ ನನ್ನ ಜೀವನ ಹಾಳು ಮಾಡಿಬಿಟ್ರು. ಎಲ್ಲೇ ಹೋದ್ರೂ 'ಎದ್ದೇಳು ಮಂಜುನಾಥ' ರೀತಿ ಸಿನಿಮಾ ಮಾಡಿ ಅಂತಾರೆ, ನಾನು ಒಂದೇ ರೀತಿ ಎಷ್ಟು ಅಂತ ಸಿನಿಮಾ ಮಾಡಲಿ. ಸಮಯವೇ ದೇವರು. ನಾನು ಟೈಮ್‌ನ್ನು ನಂಬುವ ಮನುಷ್ಯ. ನಾನು ಮತ್ತು ಗುರು ಸಿನಿಮಾ ಮಾಡ್ತೀವಿ ಅಂತ ಸಾಮಾಜಿಕ ಜಾಲತಾಣದಲ್ಲಿ ಹೇಳಿದಾಗ 50 ಸಾವಿರ ಜನರು ಲೈಕ್ಸ್‌ ಮಾಡಿದ್ದಾರೆ. ಇದರಲ್ಲೇ ಗೊತ್ತಾಗತ್ತೆ ನಮ್ಮಿಬ್ಬರ ಕಾಂಬಿನೇಶನ್ ಹೇಗಿದೆ ಅಂತ. ನಿರ್ದೇಶಕರಿಗೆ ಗೌರವ ಕೊಡಿ, ಮರ್ಯಾದೆ ಕೊಡಿ. ನಿರ್ದೇಶಕರಿಗೆ ಅವರ ಕೆಲಸವನ್ನು ಮಾಡೋದಕ್ಕೆ ಬಿಡಿ" ಎಂದು ಹೇಳಿದ್ದಾರೆ ಜಗ್ಗೇಶ್.
ರಂಗನಾಯಕಿ ಒಬ್ಬಳೇ ಅಲ್ಲ, ರಂಗನಾಯಕನೂ ಬಂದ!!! ಮುಂದೇನು?

ನಿರ್ದೇಶಕ ವಿಜಯ್‌ಪ್ರಸಾದ್ ಜೊತೆ ಸೇರಿ 'ನೀರ್‌ದೋಸೆ' ಸಿನಿಮಾ ಆದಮೇಲೆ 'ತೋತಾಪುರಿ' ಎಂಬ ಶೀರ್ಷಿಕೆಯುಳ್ಳ ಸಿನಿಮಾದಲ್ಲಿ ಜಗ್ಗೇಶ್ ನಟಿಸುತ್ತಿದ್ದಾರೆ. ಶೂಟಿಂಗ್ ಕೂಡ ನಡೆಯುತ್ತಿದೆ. ಈ ಸಿನಿಮಾ ನಂತರದಲ್ಲಿ ಜಗ್ಗೇಶ್, ಗುರುಪ್ರಸಾದ್ ಜೊತೆಗಿನ ಸಿನಿಮಾದಲ್ಲಿ ಅಭಿನಯಿಸಬಹುದು. ಈ ಹಿಂದಿನ ಎರಡು ಸಿನಿಮಾಗಳಲ್ಲಿ ಈ ಜೋಡಿ ವಿಡಂಬನೆ ಕಥೆ ಆಯ್ಕೆ ಮಾಡಿಕೊಂಡಿತ್ತು.

ದೂರ ದೂರ ಆಗಿದ್ದ ಜಗ್ಗೇಶ್ ಮತ್ತು 'ಮಠ' ಖ್ಯಾತಿಯ ಗುರುಪ್ರಸಾದ್ ಈಗ ಒಂದಾಗಿದ್ದೇಕೆ? ಜಗ್ಗೇಶ್ ಹೇಳಿದ್ದೇನು?

ಮನೋಹರ್ ಜೋಶಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ಅನೂಪ್ ಸೀಳಿನ್ ಸಂಗೀತ ನೀಡಲಿದ್ದಾರೆ. ವಿಖ್ಯಾತ್ ಈ ಚಿತ್ರಕ್ಕೆ ನಿರ್ಮಾಣ ಮಾಡಿದ್ದಾರೆ. ಗುರುಪ್ರಸಾದ್ ನಿರ್ದೇಶನ ಈ ಚಿತ್ರಕ್ಕಿದೆ.
ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕೆಂಪರಾಜು ಸಂಕಲನ ಈ ಚಿತ್ರಕ್ಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌