ಆ್ಯಪ್ನಗರ

ರಾಮ್‌ ಚರಣ್‌ ಅಭಿಮಾನಿಗಳಿಗೆ ಬ್ಯಾಡ್‌ ನ್ಯೂಸ್‌! ಅಪ್ಪನ ಸಿನಿಮಾದಲ್ಲಿ ಮಗನಿಗೆ ಇಂಥ ಗತಿ!

'ಮೆಗಾ ಸ್ಟಾರ್‌' ಚಿರಂಜೀವಿ ನಟನೆಯ 'ಆಚಾರ್ಯ' ಸಿನಿಮಾದಲ್ಲಿ ಅವರ ಪುತ್ರ ರಾಮ್‌ ಚರಣ್‌ ತೇಜ ಒಂದು ಪಾತ್ರ ಮಾಡುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಟಾಲಿವುಡ್‌ ಅಂಗಳದಿಂದ ಒಂದು ಬ್ಯಾಡ್‌ ನ್ಯೂಸ್ ಕೇಳಿಬಂದಿದೆ.

Vijaya Karnataka Web 24 Jul 2020, 11:43 am
'ಮೆಗಾ ಸ್ಟಾರ್‌' ಚಿರಂಜೀವಿ ನಟನೆಯ 152ನೇ ಚಿತ್ರವಾಗಿ 'ಆಚಾರ್ಯ' ಮೂಡಿಬರಲಿದೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ಅನೇಕ ಅಂತೆ-ಕಂತೆಗಳು ಮೊದಲಿನಿಂದಲೂ ಕೇಳಿಬರುತ್ತಲೇ ಇವೆ. ಹೀರೋಯಿನ್‌ ಆಯ್ಕೆಯಲ್ಲಿ ಚಿತ್ರತಂಡಕ್ಕೆ ಸ್ವಲ್ಪ ಗೊಂದಲ ಕೂಡ ಆಗಿತ್ತು. ಮೊದಲು ತ್ರಿಷಾ ಆಯ್ಕೆ ಆಗಿದ್ದರು. ನಂತರ ಕಾಜಲ್‌ ಅಗರ್ವಾಲ್‌ಗೆ ಮಣೆ ಹಾಕಲಾಯಿತು. ಈಗ 'ಆಚಾರ್ಯ' ಬಗ್ಗೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ.
Vijaya Karnataka Web director koratala siva likely to reduce ram charan role in chiranjeevi starrer acharya movie
ರಾಮ್‌ ಚರಣ್‌ ಅಭಿಮಾನಿಗಳಿಗೆ ಬ್ಯಾಡ್‌ ನ್ಯೂಸ್‌! ಅಪ್ಪನ ಸಿನಿಮಾದಲ್ಲಿ ಮಗನಿಗೆ ಇಂಥ ಗತಿ!


ಈ ಚಿತ್ರವನ್ನು ನಿರ್ಮಿಸುತ್ತಿರುವುದು ಚಿರಂಜೀವಿ ಪುತ್ರ ರಾಮ್‌ ಚರಣ್‌ ತೇಜ. ದೊಡ್ಡ ಕ್ಯಾನ್ವಾಸ್‌ನಲ್ಲಿಯೇ ಈ ಸಿನಿಮಾ ತಯಾರಾಗಲಿದೆ. ಅದರಲ್ಲಿ ಸ್ವತಃ ರಾಮ್‌ ಚರಣ್‌ ಕೂಡ ಒಂದು ಪಾತ್ರ ಮಾಡುತ್ತಾರೆ ಎಂಬುದು ಈಗಾಗಲೇ ಗೊತ್ತಿರುವ ವಿಚಾರ. ಆದರೆ ಅವರ ಪಾತ್ರ ಎಷ್ಟು ನಿಮಿಷ ಬಂದು ಹೋಗಲಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ಹರಿದಾಡುತ್ತಿರುವ ಗಾಸಿಪ್‌ ಪ್ರಕಾರ, ನಿರ್ದೇಶಕ ಕೊರಟಾಲ ಶಿವ ಅವರು ಒಂದು ನಿರ್ಧಾರಕ್ಕೆ ಬಂದಿದ್ದಾರಂತೆ. ಅದು ರಾಮ್‌ ಚರಣ್‌ ಅಭಿಮಾನಿಗಳಿಗೆ ಬೇಸರ ತರಿಸುವಂತಿದೆ.

ಹೌದು, 'ಆಚಾರ್ಯ' ಚಿತ್ರದಲ್ಲಿ ರಾಮ್‌ ಚರಣ್‌ ನಿಭಾಯಿಸಲಿರುವ ಪಾತ್ರದ ಅವಧಿಯನ್ನು ತಗ್ಗಿಸಲು ನಿರ್ದೇಶಕರು ತೀರ್ಮಾನಿಸಿದ್ದಾರಂತೆ. ಇದಕ್ಕೆ ಕಾರಣ ಏನು ಎಂಬುದು ಇನ್ನೂ ಗೊತ್ತಾಗಿಲ್ಲ. ಕೊರೊನಾ ವೈರಸ್‌ ಮತ್ತು ಲಾಕ್‌ಡೌನ್‌ ಪರಿಣಾಮವಾಗಿ ಚಿತ್ರದ ಕಥೆ, ಪ್ಲ್ಯಾನಿಂಗ್‌ನಲ್ಲಿ ಒಂದಷ್ಟು ಬದಲಾವಣೆ ಆಗುವುದು ಸಹಜ. ಅದೇ ಕಾರಣಕ್ಕಾಗಿ ರಾಮ್‌ ಚರಣ್‌ ಪಾತ್ರದ ಅವಧಿಗೆ ನಿರ್ದೇಶಕರು ಕತ್ತರಿ ಹಾಕಿರಬಹುದು ಎಂಬ ಗುಸುಗುಸು ಕೇಳಿಬರುತ್ತಿದೆ.

also read: ಇಂಥ ಕಷ್ಟದ ಸಮಯದಲ್ಲೂ ಜನಮೆಚ್ಚುವ ಕೆಲಸ ಮಾಡಿದ ಮೆಗಾಸ್ಟಾರ್ ಚಿರಂಜೀವಿ ಸೊಸೆ!

ಮೊದಲೇ ಇದು ಅತಿಥಿ ಪಾತ್ರ. ಅದಕ್ಕೂ ಕತ್ತರಿ ಹಾಕಿದರೆ ಇನ್ನೇನು ಉಳಿಯುತ್ತದೆ ಎಂಬುದು ಅಭಿಮಾನಿಗಳ ಪ್ರಶ್ನೆ. ಈ ಸುದ್ದಿ ಟಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದ್ದರೂ ಚಿತ್ರತಂಡದಿಂದ ಯಾರೂ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ರಾಮ್ ಚರಣ್‌ ಗಮನ 'ಆರ್‌ಆರ್‌ಆರ್‌' ಸಿನಿಮಾದ ಕಡೆಗೂ ಇದೆ. ರಾಜಮೌಳಿ ನಿರ್ದೇಶಿಸುತ್ತಿರುವ 'ಆರ್‌ಆರ್‌ಆರ್‌'ನಲ್ಲಿ ಅವರ ಜೊತೆಗೆ ಜೂ. ಎನ್‌ಟಿಆರ್‌, ಅಜಯ್‌ ದೇವ್‌ಗನ್‌ ಕೂಡ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಆ ಸಿನಿಮಾ ಮೇಲೂ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಲಾಕ್‌ಡೌನ್ ಪರಿಣಾಮ, 'ಆರ್‌ಆರ್‌ಆರ್' ಕೆಲಸಗಳು ತಡವಾಗುತ್ತಿವೆ.

also read: ನಟ ಚಿರಂಜೀವಿ, ರಾಮ್‌ ಚರಣ್‌ ಮೇಲೆ ಜೇನುನೋಣಗಳ ದಾಳಿ! ಈ ಘಟನೆ ನಡೆದಿದ್ದು ಎಲ್ಲಿ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌