ಆ್ಯಪ್ನಗರ

'ಡ್ರೋಣ್‌ ಪ್ರತಾಪ್‌' ಬಯೋಪಿಕ್ ಡ್ರಾಪ್ ಆಗೋಯ್ತು! ಇಷ್ಟೆಲ್ಲ ಆದಮೇಲೆ ನಿರ್ದೇಶಕರು ಏನಂತಾರೆ?

ತಾನೊಬ್ಬ ಯುವ ವಿಜ್ಞಾನಿ, ನಾನು ಅತ್ಯಾಧುನಿಕ ಡ್ರೋನ್‌ಗಳನ್ನು ತಯಾರಿಸಿದ್ದೇನೆ ಎಂದೆಲ್ಲ ಪ್ರಚಾರ ಪಡೆದುಕೊಂಡಿದ್ದ ಪ್ರತಾಪ್ ಈಗ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಅಚ್ಚರಿ ಏನೆಂದರೆ, ಅವರ ಕುರಿತು ಸಿನಿಮಾ ಮಾಡೋದಕ್ಕೆ ಪ್ಲ್ಯಾನ್ ರೆಡಿ ಆಗಿತ್ತು!

Vijaya Karnataka Web 23 Jul 2020, 9:57 am
ಕೆಲ ದಿನಗಳಿಂದ ತನ್ನ ಸುಳ್ಳಿನಿಂದ ಸಿಕ್ಕಾಪಟ್ಟೆ ಟ್ರೋಲ್‌ ಆಗುತ್ತಿರುವ ಡ್ರೋಣ್‌ ಪ್ರತಾಪ್‌ ಕುರಿತು ಬಯೋಪಿಕ್‌ ಮಾಡುವುದಾಗಿ ಈ ಹಿಂದೆ ಅನೌನ್ಸ್‌ ಮಾಡಿದ್ದರು ನಿರ್ದೇಶಕ ರಾಜಶೇಖರ್‌. ಇದೀಗ ಆ ಯೋಜನೆಯನ್ನು ಕೈಬಿಟ್ಟಿದ್ದಾರೆ. 'ಪ್ರತಾಪ್‌ ಅವರು ಹೇಳಿದ ಸುಳ್ಳುಗಳನ್ನೇ ಸತ್ಯ ಎಂದುಕೊಂಡು ಆ ಬಗ್ಗೆ ಸಿನಿಮಾ ಮಾಡಿ ಯುವ ಜನಾಂಗಕ್ಕೆ ಸ್ಫೂರ್ತಿ ತುಂಬಲು ತೀರ್ಮಾನಿಸಿದ್ದೆ. ಆದರೆ ಪ್ರತಾಪ್‌ ಯಾವುದೇ ಸಾಧನೆ ಮಾಡಿಲ್ಲಎಂದು ತಿಳಿದ ನಂತರ ಚಿತ್ರ ಮಾಡುವುದಿಲ್ಲ' ಎಂದಿದ್ದಾರೆ ರಾಜಶೇಖರ್‌. ಇದೇ ವೇಳೆ ಅಡ್ವಾನ್ಸ್‌ ಆಗಿ ನೀಡಿದ ಹಣವನ್ನು ವಾಪಾಸ್‌ ನೀಡುವಂತೆ ಪ್ರತಾಪ್‌ಗೆ ಕೇಳಿದ್ದಾರೆ.
Vijaya Karnataka Web director rajashekar speaks about drone prathap biopic
'ಡ್ರೋಣ್‌ ಪ್ರತಾಪ್‌' ಬಯೋಪಿಕ್ ಡ್ರಾಪ್ ಆಗೋಯ್ತು! ಇಷ್ಟೆಲ್ಲ ಆದಮೇಲೆ ನಿರ್ದೇಶಕರು ಏನಂತಾರೆ?


ಈ ಹಿಂದೆ 'ಅಮೃತವಾಣಿ', 'ಪೆರೋಲ್' ಮತ್ತು 'ಬರ್ಫಿ' ಚಿತ್ರಗಳನ್ನು ನಿರ್ದೇಶನ ಮಾಡಿದ್ದ ರಾಜಶೇಖರ್‌ ಕೆಲ ತಿಂಗಳುಗಳ ಹಿಂದೆ ಡ್ರೋಣ್‌ ಪ್ರತಾಪ್‌ ಸಾಧನೆ ನೋಡಿ ಅವರನ್ನು ಭೇಟಿ ಮಾಡಿ ಸಿನಿಮಾ ಮಾಡುವ ವಿಷಯ ಪ್ರಸ್ತಾಪಿಸಿ ಒಂದು ಲಕ್ಷ ಮುಂಗಡವನ್ನೂ ಕೊಟ್ಟಿದ್ದರು.

'ಅವರ ಕಥೆಯನ್ನು ಚಿತ್ರ ಮಾಡುತ್ತಿರುವುದರಿಂದ ಎರಡು ಲಕ್ಷ ರೂ. ಸಂಭಾವನೆ ಮತ್ತು ಲಾಭದಲ್ಲಿ ಶೇ.20ರಷ್ಟು ಕೊಡಬೇಕು ಎಂದು ಪ್ರತಾಪ್‌ ಜತೆಗೆ ಒಪ್ಪಂದವಾಗಿತ್ತು. ಆದರೆ ಪ್ರತಾಪ್‌ ಆರು ತಿಂಗಳ ಹಿಂದೆ ಭೇಟಿಯಾಗಿ, ಚಿತ್ರ ತಡವಾಗುತ್ತಿರುವುದರಿಂದ ಬೇರೊಬ್ಬರು ಚಿತ್ರ ಮಾಡುವುದಕ್ಕೆ ಮುಂದೆ ಬಂದಿದ್ದಾರೆ ಎಂದು ಹೇಳಿದ್ದರು. ಈಗ ಅವರೇ ಪ್ರಪಂಚದ ಎದುರು ಬೆತ್ತಲಾಗಿದ್ದಾರೆ ಹಾಗಾಗಿ ನಾನು ಯಾವುದೇ ಸಿನಿಮಾವನ್ನು ಮಾಡುತ್ತಿಲ್ಲ' ಎಂದು ರಾಜಶೇಖರ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಡ್ರೋನ್ ಪ್ರತಾಪ್ ಕುರಿತಾದ ಸಿನಿಮಾಕ್ಕೆ ಕಥೆ ಶೇ. 90ರಷ್ಟು ಕಥೆ ಸಿದ್ಧವಾಗಿತ್ತಂತೆ! ಇನ್ನೇನು ಕ್ಲೈಮ್ಯಾಕ್ಸ್ ಬರೆಯಬೇಕು ಎನ್ನುವಾಗಲೇ ನಿರ್ದೇಶಕರಿಗೆ ಪ್ರತಾಪ್ ಸರಿಯಾಗಿ ಸಹಕಾರ ನೀಡಿಲ್ಲ! ಈ ಚಿತ್ರದಲ್ಲಿ ಸ್ವತಃ ಪ್ರತಾಪ್ ನಟಿಸಲಿದ್ದರು. ಅಂದಹಾಗೆ, ಭಾಷಣಗಳಲ್ಲಿ, ಸಂದರ್ಶನಗಳಲ್ಲಿ ಪ್ರತಾಪ್ ಹೇಳಿದ್ದಕ್ಕಿಂತಲೂ, ಅದ್ಭುತವಾದ ಕಥೆಗಳನ್ನು ನಿರ್ದೇಶಕರಿಗೆ ಹೇಳಿದ್ದರಂತೆ!

ತಮ್ಮ ಬಗ್ಗೆ ಬಯೋಪಿಕ್ ಮಾಡಲಿದ್ದಾರೆ ಎಂದು ತಿಳಿದಾಗ, ಆರಂಭದಲ್ಲಿ ಪ್ರತಾಪ್ ಭಾರಿ ಉತ್ಸಾಹ ತೋರಿದರಂತೆ. ಒಂದಷ್ಟು ಜನ ರೈಟರ್‌ಗಳನ್ನಿಟ್ಟುಕೊಂಡು ಸ್ಕ್ರಿಪ್ಟ್ ಕೂಡ ಮಾಡಿಸಿದ್ದರಂತೆ ನಿರ್ದೇಶಕ ರಾಜಶೇಖರ್‌. ಪ್ರತಾಪ್ ಎಷ್ಟು ಚೆನ್ನಾಗಿ ಕಥೆ ಹೇಳಿದ್ದರು ಎಂದರೆ, ಅವರು ಹೇಳಿದ ಕಥೆಗೆ ಸಿನಿಮ್ಯಾಟಿಕ್‌ ಸ್ಪರ್ಶವೇ ಬೇಕಿರಲಿಲ್ಲವಂತೆ. ಅವರು ಹೇಳಿದ ಕಥೆಯಲ್ಲೇ ಅದೆಲ್ಲವೂ ಇತ್ತಂತೆ. ಅಚ್ಚರಿ ಎಂದರೆ, ತನ್ನ ಬದುಕಿನ ಸಿನಿಮಾಗೆ ಯಾರೆಲ್ಲ ಕಲಾವಿದರು ಬೇಕು ಎಂಬುದನ್ನು ನಿರ್ದೇಶಕರಿಗೆ ಪ್ರತಾಪ್ ಸೂಚಿಸಿದ್ದರಂತೆ.

ಕ್ವಾರಂಟೈನ್‌ ನಿಯಮ ಉಲ್ಲಂಘನೆ: ಡ್ರೋನ್‌ ಪ್ರತಾಪ್‌ ವಿರುದ್ಧ ಎಫ್‌ಐಆರ್ ದಾಖಲು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌