ಆ್ಯಪ್ನಗರ

ಉಪ್ಪಿಯ 'ಪ್ರಜಾಕೀಯ' ಪರಿಕಲ್ಪನೆಗೆ ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಫಿದಾ!

'ರಿಯಲ್ ಸ್ಟಾರ್' ಉಪೇಂದ್ರ ಅವರ 'ಪ್ರಜಾಕೀಯ' ಪಕ್ಷದ ಬಗ್ಗೆ ಈಗಾಗಲೇ ಜನರಲ್ಲಿ ಒಂದು ನಿರೀಕ್ಷೆ ಸೃಷ್ಟಿಯಾಗಿದೆ. ಈಚೆಗೆ ಪಕ್ಷದ ಒಂದಷ್ಟು ಸಿದ್ಧಾಂತಗಳನ್ನು ಪಕ್ಷದ ವೆಬ್‌ ಸೈಟ್‌ನಲ್ಲಿ ಹಂಚಿಕೊಳ್ಳಲಾಗಿತ್ತು. ಅದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Vijaya Karnataka Web 21 Nov 2020, 2:20 pm
'ರಿಯಲ್‌ ಸ್ಟಾರ್' ಉಪೇಂದ್ರ ಮೊದಲಿನಿಂದಲೂ ಸಮಾಜದ ಬಗ್ಗೆ ಕಾಳಜಿಯುಳ್ಳ ನಟ. ತಮ್ಮ ನಿರ್ದೇಶನದ ಸಿನಿಮಾಗಳಲ್ಲೂ ಅದನ್ನವರು ವ್ಯಕ್ತಪಡಿಸುತ್ತಿದ್ದಾರೆ. ಪ್ರಸ್ತುತ ಅವರು ಪ್ರಜಾಕೀಯದಲ್ಲಿ ಸಕ್ರಿಯವಾಗಿದ್ದಾರೆ. ರಾಜಕೀಯಕ್ಕೆ ಬದಲಾಗಿ ರೂಪಿತಗೊಂಡಿರುವ ಉಪ್ಪಿಯ ಪ್ರಜಾಕೀಯದಲ್ಲಿ ಅನೇಕ ವಿಭಿನ್ನ ಆಲೋಚನೆಗಳಿವೆ. ಇತ್ತೀಚೆಗೆ 'ರಿಯಲ್ ಸ್ಟಾರ್', ತಮ್ಮ ಪ್ರಜಾಕೀಯ ಪಕ್ಷದ ವೆಬ್ ಸೈಟ್ ಲಾಂಚ್ ಮಾಡಿದ್ದಾರೆ. ವಿಶೇಷವೆಂದರೆ, ಇದನ್ನು ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ ಮೆಚ್ಚಿಕೊಂಡಿದ್ದಾರೆ.
Vijaya Karnataka Web upendra


ಉಪ್ಪಿ ಪ್ರಜಾಕೀಯಕ್ಕೆ ವಾವ್ ಎಂದ ಆರ್‌ಜಿವಿ
ಪ್ರಜಾಕೀಯದ ಆಶಯಗಳನ್ನು ನೋಡಿ ಇಷ್ಟಪಟ್ಟಿರುವ ಆರ್‌ಜಿವಿ, 'ವಾವ್... ಒಂದು ರಾಜಕೀಯ ಪಕ್ಷವನ್ನು ಬೇರೆ ರೀತಿ ನೋಡುವ ಒಂದು ಕ್ರಾಂತಿಕಾರಿ ಹೊಸ ಮಾರ್ಗದ ದೊಡ್ಡ ಹೆಜ್ಜೆ ಇದಾಗಿದೆ. ಉಪೇಂದ್ರ ಅವರು ಮೆಚ್ಚುಗೆಗೆ ಅರ್ಹರಾಗಿದ್ದಾರೆ' ಎಂದು ವರ್ಮಾ ಹೇಳಿಕೊಂಡಿದ್ದಾರೆ. ಅಂದಹಾಗೆ, ಆರ್‌ಜಿವಿ ರಾಜಕೀಯಕ್ಕೆ ಸಂಬಂಧಿಸಿದಂತೆ ಯಾವತ್ತು ಗಂಭೀರವಾಗಿ ಪ್ರತಿಕ್ರಿಯಿಸುವುದಿಲ್ಲ. ಆದರೆ, ಉಪ್ಪಿಯ ಪ್ರಜಾಕೀಯ ಕಾನ್ಸೆಪ್ಟ್ ಅವರಿಗೆ ಬಹುವಾಗಿ ಮೆಚ್ಚುಗೆ ಆಗಿದೆ ಅನ್ನೋದಕ್ಕೆ ಅವರು ಟ್ವೀಟ್ ಮಾಡಿರುವುದೇ ಸಾಕ್ಷಿ.

ಕಬ್ಜ ಲುಕ್ ರಿಲೀಸ್ ಮಾಡಿದ್ದ ವರ್ಮಾ
ಈ ಹಿಂದೆ ಉಪೇಂದ್ರ ಹುಟ್ಟುಹಬ್ಬದ ಪ್ರಯುಕ್ತ, ಅವರ 'ಕಬ್ಜ' ಚಿತ್ರದ ಒಂದು ಮೋಷನ್ ಪೋಸ್ಟರ್ ಅನ್ನು ರಾಮ್‌ ಗೋಪಾಲ್ ವರ್ಮಾ ರಿಲೀಸ್ ಮಾಡಿದ್ದರು. ಆಗಲೂ ಉಪೇಂದ್ರ ಅವರ ಸಿನಿಮಾ ಮೇಕಿಂಗ್‌ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಆರ್. ಚಂದ್ರು ನಿರ್ದೇಶನದ 'ಕಬ್ಜ' ಚಿತ್ರವು ದೊಡ್ಡ ಯಶಸ್ಸು ಸಾಧಿಸಲಿದೆ ಎಂದು ಹಾರೈಸಿದ್ದರು. ಇದೀಗ ಪ್ರಜಾಕೀಯಕ್ಕೂ ಸಪೋರ್ಟ್ ಮಾಡಿದ್ದಾರೆ.

ಹಿಟ್ ಆಗಿದ್ದ 'A' ಸಿನಿಮಾ ತಂಡದ ಹೊಸ ಸಿನಿಮಾದಲ್ಲಿ 'ರಿಯಲ್ ಸ್ಟಾರ್' ಉಪೇಂದ್ರ ಹೀರೋ!

ಕಬ್ಜದ ಮತ್ತೊಂದು ಪೋಸ್ಟರ್ ರಿಲೀಸ್‌
ದೀಪಾವಳಿ ಪ್ರಯುಕ್ತ 'ಕಬ್ಜ' ಚಿತ್ರದ ಮತ್ತೊಂದು ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ ಚಂದ್ರು. ಈ ಪೋಸ್ಟರ್ ಬಿಡುಗಡೆಯಾದ ನಾಲ್ಕು ದಿನಗಳಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ನೋಡಿದ್ದಾರೆ. 'ನಮ್ಮ ಸಿನಿಮಾದ ಯಾವುದೇ ಕಂಟೆಂಟ್‌ ಬಿಡುಗಡೆ ಮಾಡಿದರೂ ಅಭಿಮಾನಿಗಳು ಇಷ್ಟಪಟ್ಟು ನೋಡುತ್ತಿದ್ದಾರೆ. ಇದು ಸಿನಿಮಾಗಾಗಿ ಕಾಯುತ್ತಿರುವವರ ನಿರೀಕ್ಷೆ ಎಷ್ಟಿದೆ ಎಂಬುದನ್ನು ತೋರಿಸುತ್ತದೆ. ಹಬ್ಬದ ಪ್ರಯುಕ್ತ ಬಿಡುಗಡೆಯಾದ ಮೋಷನ್‌ ಪೋಸ್ಟರ್‌ ಇದು' ಎಂದು ಸಂತಸ ವ್ಯಕ್ತಪಡಿಸಿದ್ದಾರೆ ನಿರ್ದೇಶಕ ಆರ್‌ ಚಂದ್ರು.

ನಟಿ ಪ್ರಿಯಾಂಕಾ ಉಪೇಂದ್ರ ಕೈಹಿಡಿಯಿತು ಒಂದಾದ ಮೇಲೆ ಒಂದು ಅದೃಷ್ಟ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌