ಆ್ಯಪ್ನಗರ

ಸುಮನಾ ಕಿತ್ತೂರು ಸೂಚಿಸಿರುವ ನೋಡಲೇಬೇಕಾದ ಸಿನಿಮಾಗಳಲ್ಲಿ ‘ಮೇಯರ್ ಮುತ್ತಣ್ಣ’

ಪತ್ರಕರ್ತೆಯಾಗಿ ಹೆಸರು ಮಾಡಿದ್ದ ಸುಮನಾ ಕಿತ್ತೂರು ನಿರ್ದೇಶಕಿ ಎನ್ನಿಸಿಕೊಂಡಿದ್ದು 'ಸ್ಲಂ ಬಾಲ' ಚಿತ್ರದ ಮೂಲಕ. ಇದಕ್ಕೂ ಮೊದಲು ಅಗ್ನಿ ಶ್ರೀಧರ್‌ ನಿರ್ದೇಶನದ 'ಆ ದಿನಗಳು' ಚಿತ್ರಕ್ಕೆ ಸಹ ನಿರ್ದೇಶನ ಮಾಡಿದ್ದರು. ನಂತರ 'ಕಳ್ಳರ ಸಂತೆ' ಚಿತ್ರಕ್ಕೆ ನಿರ್ದೇಶನ. ಯಶ್‌ ಹೀರೊ ಆಗಿ ನಟಿಸಿದ ಮೂರನೇ ಚಿತ್ರ ಇದು. ಸುಮನಾ ನಿರ್ದೇಶನದ 'ಎದೆಗಾರಿಕೆ' ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿತು. ಅಲ್ಲದೆ, ಹಲವು ಪ್ರಶಸ್ತಿಗಳನ್ನೂ ತನ್ನದಾಗಿಸಿಕೊಂಡಿತು. 'ಕಿರಗೂರಿನ ಗಯ್ಯಾಳಿಗಳು' ಚಿತ್ರ ನಿರ್ದೇಶನ ಮಾಡಿದ ಸುಮನಾ ಸ್ಯಾಂಡಲ್‌ವುಡ್‌ನಲ್ಲಿ ಪ್ರತಿಭಾವಂತ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಆಯ್ಕೆಯ ಚಿತ್ರಗಳು ಇಲ್ಲಿವೆ.

ಟೇಸ್ಟ್‌ ಆಫ್‌ ಚೆರ್ರಿ (ಇರಾನ್‌-1997)
ಅಬ್ಬಾಸ್‌ ಕಿಯಾರೊಸ್ಟಮಿ ನಿರ್ದೇಶನದ ಚಿತ್ರ ಇದು. ಮಧ್ಯವಯಸ್ಸಿನ ವ್ಯಕ್ತಿಯೊಬ್ಬ ಸಾಯಲು ನಿರ್ಧರಿಸುತ್ತಾರೆ. ಸತ್ತ ನಂತರ ತನ್ನನ್ನು ಸಮಾಧಿ ಮಾಡುವಂತೆ ಹಲವರನ್ನು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದವರೆಲ್ಲಾ ಒಂದೊಂದು ಕಾರಣ ನೀಡಿ ಸಾಧ್ಯವಿಲ್ಲ ಎನ್ನುತ್ತಾರೆ. ಅವನ ಜರ್ನಿ ಚಿತ್ರದಲ್ಲಿದೆ. ನಿರ್ದೇಶಕರು ಇದನ್ನು ಬಹಳ ಫಿಲಾಸಫಿಕಲ್‌ ಆಗಿ ಕಟ್ಟಿಕೊಟ್ಟಿದ್ದಾರೆ.

Vijaya Karnataka Web 22 Apr 2020, 12:03 am
ಪತ್ರಕರ್ತೆಯಾಗಿ ಹೆಸರು ಮಾಡಿದ್ದ ಸುಮನಾ ಕಿತ್ತೂರು ನಿರ್ದೇಶಕಿ ಎನ್ನಿಸಿಕೊಂಡಿದ್ದು 'ಸ್ಲಂ ಬಾಲ' ಚಿತ್ರದ ಮೂಲಕ. ಇದಕ್ಕೂ ಮೊದಲು ಅಗ್ನಿ ಶ್ರೀಧರ್‌ ನಿರ್ದೇಶನದ 'ಆ ದಿನಗಳು' ಚಿತ್ರಕ್ಕೆ ಸಹ ನಿರ್ದೇಶನ ಮಾಡಿದ್ದರು. ನಂತರ 'ಕಳ್ಳರ ಸಂತೆ' ಚಿತ್ರಕ್ಕೆ ನಿರ್ದೇಶನ. ಯಶ್‌ ಹೀರೊ ಆಗಿ ನಟಿಸಿದ ಮೂರನೇ ಚಿತ್ರ ಇದು. ಸುಮನಾ ನಿರ್ದೇಶನದ 'ಎದೆಗಾರಿಕೆ' ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿತು. ಅಲ್ಲದೆ, ಹಲವು ಪ್ರಶಸ್ತಿಗಳನ್ನೂ ತನ್ನದಾಗಿಸಿಕೊಂಡಿತು. 'ಕಿರಗೂರಿನ ಗಯ್ಯಾಳಿಗಳು' ಚಿತ್ರ ನಿರ್ದೇಶನ ಮಾಡಿದ ಸುಮನಾ ಸ್ಯಾಂಡಲ್‌ವುಡ್‌ನಲ್ಲಿ ಪ್ರತಿಭಾವಂತ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಆಯ್ಕೆಯ ಚಿತ್ರಗಳು ಇಲ್ಲಿವೆ.
Vijaya Karnataka Web director sumana kittur recommended must watch movies
ಸುಮನಾ ಕಿತ್ತೂರು ಸೂಚಿಸಿರುವ ನೋಡಲೇಬೇಕಾದ ಸಿನಿಮಾಗಳಲ್ಲಿ ‘ಮೇಯರ್ ಮುತ್ತಣ್ಣ’


ಟೇಸ್ಟ್‌ ಆಫ್‌ ಚೆರ್ರಿ (ಇರಾನ್‌-1997)
ಅಬ್ಬಾಸ್‌ ಕಿಯಾರೊಸ್ಟಮಿ ನಿರ್ದೇಶನದ ಚಿತ್ರ ಇದು. ಮಧ್ಯವಯಸ್ಸಿನ ವ್ಯಕ್ತಿಯೊಬ್ಬ ಸಾಯಲು ನಿರ್ಧರಿಸುತ್ತಾರೆ. ಸತ್ತ ನಂತರ ತನ್ನನ್ನು ಸಮಾಧಿ ಮಾಡುವಂತೆ ಹಲವರನ್ನು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದವರೆಲ್ಲಾ ಒಂದೊಂದು ಕಾರಣ ನೀಡಿ ಸಾಧ್ಯವಿಲ್ಲ ಎನ್ನುತ್ತಾರೆ. ಅವನ ಜರ್ನಿ ಚಿತ್ರದಲ್ಲಿದೆ. ನಿರ್ದೇಶಕರು ಇದನ್ನು ಬಹಳ ಫಿಲಾಸಫಿಕಲ್‌ ಆಗಿ ಕಟ್ಟಿಕೊಟ್ಟಿದ್ದಾರೆ.

ಮೋಟಾರ್‌ ಸೈಕಲ್‌ ಡೈರೀಸ್‌ (ಸ್ಪಾತ್ರ್ಯನಿಶ್‌-2004)

ಚೆಗೆವಾರನ ಜೀವನವನ್ನಾಧರಿಸಿದ ಚಿತ್ರ ಇದು. ವಾಲ್ಟರ್‌ ಸೇಲ್ಸ್‌ ನಿರ್ದೇಶನ ಮಾಡಿದ್ದಾರೆ. ಚೆಗೆವಾರನ ಇತಿಹಾಸವನ್ನು ಸೃಷ್ಟಿಸುವ ಮೊದಲಿನ ಪಯಣ ನನಗೆ ಕುತೂಹಲ ಕೆರಳಿಸಿತ್ತು. ಈ ಕಾರಣಕ್ಕೆ 'ಮೋಟಾರ್‌ ಸೈಕಲ್‌ ಡೈರೀಸ್‌' ಚಿತ್ರ ಇಷ್ಟವಾಗಿತ್ತು. ಈ ಚಿತ್ರದಲ್ಲಿ ನನಗೆ ಬೇರೆ ಹೊಳಹು ಕಂಡಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಈ ಚಿತ್ರ ಅನೇಕ ಪ್ರಶಸ್ತಿಗಳನ್ನು ಗಳಿಸಿದೆ.

ಸೇವಿಂಗ್‌ ಪ್ರೈವೇಟ್‌ ರೆಯಾನ್‌ (ಅಮೆರಿಕ-1998)

ಸ್ಟೀವನ್‌ ಸ್ಪೀಲ್‌ಬರ್ಗ್‌ ನಿರ್ದೇಶದನದ ಚಿತ್ರ ಇದು. ವರ್ಲ್ಡ್ ವಾರ್‌ 2 ಸಮಯದಲ್ಲಿ ಅಮೆರಿಕದ ಎಪಿಕ್‌ ವಾರ್‌ ಬಗ್ಗೆ ಹೇಳಲಾಗಿದೆ. ಯುದ್ಧಭೂಮಿಯಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ. ಕ್ಯಾಪ್ಟನ್‌ ಮಿಲ್ಲರ್‌ ಯುದ್ಧಭೂಮಿಯಲ್ಲಿರುವ ರೆಯಾನ್‌ನನ್ನು ವಾಪಸ್‌ ಕರೆದುಕೊಂಡು ಬರಬೇಕಿರುತ್ತದೆ. ರೆಯಾನ್‌ನ ಮೂವರು ಸಹೋದರರು ಅದಾಗಲೇ ಯುದ್ಧಭೂಮಿಯಲ್ಲಿ ಸತ್ತು ಹೋಗಿರುತ್ತಾರೆ. ರೆಯಾನ್‌ನ ಹೇಗಾದರೂ ಮಾಡಿ ಹಿಂದಕ್ಕೆ ಕರೆದುಕೊಂಡು ಹೋಗಬೇಕು ಎಂದು ಹೋದವರಿಗೆ ಕಾಣುವ ಯುದ್ಧದ ದೃಶ್ಯಗಳನ್ನು ಚಿತ್ರದಲ್ಲಿ ನೋಡಬಹುದು. ವಾರ್‌ ಸಿನಿಮಾಗಳನ್ನು ಇಷ್ಟಪಡುವವರಿಗೆ ಈ ಚಿತ್ರ ಇಷ್ಟ ಆಗುತ್ತದೆ.

ತ್ರಿವೇಣಿ ಕಾದಂಬರಿ ಆಧಾರಿತ 'ಶರಪಂಜರ' ನನ್ನನ್ನು ತುಂಬಾ ಕಾಡಿತ್ತು: ವಿಜಯಲಕ್ಷ್ಮಿ ಸಿಂಗ್

ತಮಸ್ಸು (ಕನ್ನಡ-2010)

ಅಗ್ನಿ ಶ್ರೀಧರ್‌ ನಿರ್ದೇಶನದ 'ಆ ದಿನಗಳು' ಚಿತ್ರದ ಜತೆಗೆ ನನಗೆ 'ತಮಸ್ಸು' ಚಿತ್ರ ಕೂಡ ಬಹಳ ಇಷ್ಟವಾಗಿತ್ತು. ಕನ್ನಡದಲ್ಲಿ ಪ್ರಮುಖವಾದ ಚಿತ್ರಗಳಲ್ಲಿ ಇದೂ ಒಂದು ಎನ್ನಬಹುದು. ಶಿವರಾಜ್‌ ಕುಮಾರ್‌ ನಟಿಸಿರುವ ಚಿತ್ರ. ಎರಡು ಧರ್ಮಗಳ ನಡುವಿನ ಕಥೆ ಇರುವ ಚಿತ್ರಗಳು ಕನ್ನಡದಲ್ಲಿ ಕಡಿಮೆ ಅಂತಾನೇ ಹೇಳಬಹುದು. ಕೋಮು ಗಲಭೆಗಳನ್ನು ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಶಿವರಾಜ್‌ ಕುಮಾರ್‌ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಇದಕ್ಕೆ ಎರಡನೇ ಅತ್ಯುತ್ತಮ ಚಿತ್ರ ರಾಜ್ಯಪ್ರಶಸ್ತಿ ಕೂಡಾ ಬಂದಿದೆ.

ತಮಸ್ಸು (ಕನ್ನಡ-2010)

ಅಗ್ನಿ ಶ್ರೀಧರ್‌ ನಿರ್ದೇಶನದ 'ಆ ದಿನಗಳು' ಚಿತ್ರದ ಜತೆಗೆ ನನಗೆ 'ತಮಸ್ಸು' ಚಿತ್ರ ಕೂಡ ಬಹಳ ಇಷ್ಟವಾಗಿತ್ತು. ಕನ್ನಡದಲ್ಲಿ ಪ್ರಮುಖವಾದ ಚಿತ್ರಗಳಲ್ಲಿ ಇದೂ ಒಂದು ಎನ್ನಬಹುದು. ಶಿವರಾಜ್‌ ಕುಮಾರ್‌ ನಟಿಸಿರುವ ಚಿತ್ರ. ಎರಡು ಧರ್ಮಗಳ ನಡುವಿನ ಕಥೆ ಇರುವ ಚಿತ್ರಗಳು ಕನ್ನಡದಲ್ಲಿ ಕಡಿಮೆ ಅಂತಾನೇ ಹೇಳಬಹುದು. ಕೋಮು ಗಲಭೆಗಳನ್ನು ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಶಿವರಾಜ್‌ ಕುಮಾರ್‌ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಇದಕ್ಕೆ ಎರಡನೇ ಅತ್ಯುತ್ತಮ ಚಿತ್ರ ರಾಜ್ಯ ಪ್ರಶಸ್ತಿ ಕೂಡಾ ಬಂದಿದೆ.

ಯೂಟ್ಯೂಬ್‍ನಲ್ಲಿ ಲಭ್ಯವಿರುವ ನೀವು ನೋಡಲೇಬೇಕಾದ ಕ್ಲಾಸಿಕ್ ಸಿನಿಮಾಗಳು

ಮೇಯರ್‌ ಮುತ್ತಣ್ಣ (ಕನ್ನಡ-1969)

ಸಿದ್ಧಲಿಂಗಯ್ಯನವರ ಸಿನಿಮಾಗಳು ವಿಶೇಷವಾಗಿರುತ್ತವೆ. ಅವರ 'ಮೇಯರ್‌ ಮುತ್ತಣ್ಣ' ನನಗೆ ಇಷ್ಟ. ರಾಜ್‌ ಕುಮಾರ್‌ ನಟನೆಯ ಈ ಚಿತ್ರ ಬಹಳ ಜನಪ್ರಿಯ. ಅಂದಿನ ಕಾಲಕ್ಕೇ ಅಂಥದ್ದೊಂದು ಆದರ್ಶಪ್ರಾಯವಾದ ಕಥೆಯನ್ನು ತೆರೆಗೆ ತರಲಾಗಿತ್ತು. ಹಳ್ಳಿಯಿಂದ ಬಂದ ಯುವಕನೊಬ್ಬ ಮೇಯರ್‌ ಆಗಿ ಹೇಗೆ ಆಡಳಿತ ನಡೆಸುತ್ತಾನೆ ಎನ್ನುವುದು ಇಂದಿಗೂ ಹಲವರಿಗೆ ಸ್ಫೂರ್ತಿ ನೀಡುವಂತಿದೆ. ಮೇಯರ್ ಮುತ್ತಣ್ಣ ಸಿನಿಮಾದ ವಿಶೇಷಳು ಹಲವಾರು. ಸಿದ್ದಲಿಂಗಯ್ಯ ನಿರ್ದೇಶನದ ಮೊದಲ ಸಿನಿಮಾ ಇದು, ಹಾಗೆಯೇ ದ್ವಾರಕೀಶ್ ನಿರ್ಮಾಣದ ಮೊದಲ ಸಿನಿಮಾ ಕೂಡ. ಪಾತ್ರವರ್ಗದಲ್ಲಿ ಎಂಪಿ ಶಂಕರ್, ಕಾಂಚನಾ, ಬಾಲಕೃಷ್ಣ, ತೂಗುದೀಪ ಶ್ರೀನಿವಾಸ್, ದ್ವಾರಕೀಶ್, ರಾಜಾನಂದ್ ಮುಂತಾದ ಬಹುದೊಡ್ಡ ತಾರಾಬಳಗವೇ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌