ಆ್ಯಪ್ನಗರ

Bhagyavantharu: ಜುಲೈ 8 ರಂದು ನವೀನ ತಂತ್ರಜ್ಞಾನದೊಂದಿಗೆ ತೆರೆಗೆ ಬರಲಿದೆ 'ಭಾಗ್ಯವಂತರು' ಸಿನಿಮಾ

45 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ 'ಭಾಗ್ಯವಂತರು' ಸಿನಿಮಾಗೆ ಇದೀಗ ನವೀನ ತಂತ್ರಜ್ಞಾನ ಅಳವಡಿಸಲಾಗಿದೆ. ಹೊಸ ತಂತ್ರಜ್ಞಾನದೊಂದಿಗೆ 'ಭಾಗ್ಯವಂತರು' ಚಿತ್ರ ಮರು ಬಿಡುಗಡೆಯಾಗಲಿದೆ.‌ 'ಭಾಗ್ಯವಂತರು' ರೀ ರಿಲೀಸ್‌ಗೆ ಮುಹೂರ್ತ ನಿಗದಿ ಪಡಿಸಲಾಗಿದೆ. ಜುಲೈ 8 ರಂದು 'ಭಾಗ್ಯವಂತರು' ಸಿನಿಮಾ ರಿಲೀಸ್ ಆಗಲಿದೆ. ವಿತರಕ ಮುನಿರಾಜು. ಎಂ ಈ ಚಿತ್ರವನ್ನು ಇದೀಗ ಬಿಡುಗಡೆ ಮಾಡುತ್ತಿದ್ದಾರೆ.

Authored byಹರ್ಷಿತಾ ಎನ್ | Vijaya Karnataka Web 28 Jun 2022, 10:54 am

ಹೈಲೈಟ್ಸ್‌:

  • ಮರು ಬಿಡುಗಡೆಯಾಗಲಿದೆ ‘ಭಾಗ್ಯವಂತರು’ ಸಿನಿಮಾ
  • ದ್ವಾರಕೀಶ್ ಚಿತ್ರ ನಿರ್ಮಾಣದ ಸಿನಿಮಾ ‘ಭಾಗ್ಯವಂತರು’
  • ಹೊಸ ತಂತ್ರಜ್ಞಾನದಲ್ಲಿ ರಿಲೀಸ್ ಆಗಲಿದೆ ‘ಭಾಗ್ಯವಂತರು’

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web dr rajkumar and b saroja devi starrer bhagyavantharu movie to re release in july 8th
Bhagyavantharu: ಜುಲೈ 8 ರಂದು ನವೀನ ತಂತ್ರಜ್ಞಾನದೊಂದಿಗೆ ತೆರೆಗೆ ಬರಲಿದೆ 'ಭಾಗ್ಯವಂತರು' ಸಿನಿಮಾ
ವರನಟ ದಿವಂಗತ ಡಾ.ರಾಜ್ ಕುಮಾರ್ (Dr. Rajkumar) ಹಾಗೂ ಬಿ.ಸರೋಜಾ ದೇವಿ (B.Saroja Devi) ಅಭಿನಯಸಿದ್ದ ಸೂಪರ್ ಡ್ಯೂಪರ್ ಹಿಟ್ ಸಿನಿಮಾ 'ಭಾಗ್ಯವಂತರು' (Bhagyavantharu). 1977ರಲ್ಲಿ ತೆರೆಕಂಡ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದವರು ಭಾರ್ಗವ (Bhargava). ಇದು ಭಾರ್ಗವ ಅವರ ಚೊಚ್ಚಲ ನಿರ್ದೇಶನದ ಸಿನಿಮಾ. 'ಭಾಗ್ಯವಂತರು' ಚಿತ್ರವನ್ನು 'ದ್ವಾರಕೀಶ್ ಚಿತ್ರ' ಸಂಸ್ಥೆ ನಿರ್ಮಾಣ ಮಾಡಿತ್ತು. 45 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ 'ಭಾಗ್ಯವಂತರು' ಸಿನಿಮಾಗೆ ಇದೀಗ ನವೀನ ತಂತ್ರಜ್ಞಾನ ಅಳವಡಿಸಲಾಗಿದೆ. ಹೊಸ ತಂತ್ರಜ್ಞಾನದೊಂದಿಗೆ 'ಭಾಗ್ಯವಂತರು' ಚಿತ್ರ ಮರು ಬಿಡುಗಡೆಯಾಗಲಿದೆ.‌ 'ಭಾಗ್ಯವಂತರು' ರೀ ರಿಲೀಸ್‌ಗೆ ಮುಹೂರ್ತ ನಿಗದಿ ಪಡಿಸಲಾಗಿದೆ. ಜುಲೈ 8 ರಂದು 'ಭಾಗ್ಯವಂತರು' ಸಿನಿಮಾ ರಿಲೀಸ್ ಆಗಲಿದೆ. ವಿತರಕ ಮುನಿರಾಜು. ಎಂ ಈ ಚಿತ್ರವನ್ನು ಇದೀಗ ಬಿಡುಗಡೆ ಮಾಡುತ್ತಿದ್ದಾರೆ.
ಹೊಸ ತಂತ್ರಜ್ಞಾನ
7.1 ಡಿಜಿಟಲ್ ಸೌಂಡ್, ಕಲರಿಂಗ್, ಡಿಟಿಎಸ್ ಮುಂತಾದ ಆಧುನಿಕ ತಂತ್ರಜ್ಞಾನಗಳೊಂದಿಗೆ 'ಭಾಗ್ಯವಂತರು' ಸಿನಿಮಾ ರೀ ರಿಲೀಸ್‌ಗೆ ಸಿದ್ಧವಾಗಿದೆ. ಜುಲೈ 8 ರಂದು ರಾಜ್ಯಾದ್ಯಂತ 50 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ 'ಭಾಗ್ಯವಂತರು' ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಮುನಿರಾಜು. ಎಂ ತಿಳಿಸಿದ್ದಾರೆ.

Dr Rajkumar: ಮೊದಲ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಿದ್ದ ಡಾ ರಾಜ್‌ಕುಮಾರ್; 7 ಭಾಷೆಗಳಲ್ಲಿ ರಿಲೀಸ್ ಆಗಿತ್ತು ಆ ಚಿತ್ರ
ಡಾ.ರಾಜ್‌ ಕುಮಾರ್ ಅವರ ಅಪ್ಪಟ ಅಭಿಮಾನಿ
ಡಾ.ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಮುನಿರಾಜು. ಎಂ ಅವರು, ಈ ಹಿಂದೆ 'ಆಪರೇಷನ್ ಡೈಮಂಡ್ ರಾಕೆಟ್', 'ನಾನೊಬ್ಬ ಕಳ್ಳ', 'ದಾರಿ ತಪ್ಪಿದ ಮಗ' ಸೇರಿದಂತೆ ಕೆಲವು ಚಿತ್ರಗಳನ್ನು ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿದ್ದರು. ಇದೀಗ 'ಭಾಗ್ಯವಂತರು' ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಮುಂದೆ 'ಹುಲಿಯ ಹಾಲಿನ ಮೇವು' ಸೇರಿದಂತೆ ಅಣ್ಣಾವ್ರ ಇನ್ನಷ್ಟು ಚಿತ್ರಗಳನ್ನು ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡುವ ಯೋಜನೆಯನ್ನು ಮುನಿರಾಜು. ಎಂ ಹಾಕಿಕೊಂಡಿದ್ದಾರೆ.

ಹೊಸ ತಂತ್ರಜ್ಞಾನದೊಂದಿಗೆ ತೆರೆಗೆ ಬರಲಿದೆ ಅಣ್ಣಾವ್ರ 'ಭಾಗ್ಯವಂತರು' ಸಿನಿಮಾ!
ವಿತರಕ ಮುನಿರಾಜು.ಎಂ ಏನಂತಾರೆ?
''ನಾನು ಅಪ್ಪಟ ಅಣ್ಣಾವ್ರ ಅಭಿಮಾನಿ. ಡಾ.ರಾಜ್‌ ಕುಮಾರ್ ಎಂದರೆ ನನಗೆ ಪಂಚಪ್ರಾಣ. 1978 ರಿಂದ ಕನ್ನಡ ಚಿತ್ರರಂಗದೊಂದಿಗೆ ನಂಟು. 18 ವರ್ಷಗಳ ಕಾಲ ವಜ್ರೇಶ್ವರಿ ಸಂಸ್ಥೆಯಲ್ಲಿ ಕೆಲಸ ಮಾಡಿದ್ದೇನೆ. ಪಾರ್ವತಮ್ಮ ರಾಜ್‌ಕುಮಾರ್ ಅವರೇ ನನ್ನನ್ನು ಮೊದಲು‌ ಚಿತ್ರಮಂದಿರದ ಆರ್‌ಪಿ ಆಗಿ ನೇಮಕ‌ ಮಾಡಿ ಯಳಂದೂರಿಗೆ ಕಳುಹಿಸಿದ್ದರು. ನಾನು ಮೊದಲು ಮರು ಬಿಡುಗಡೆ ಮಾಡಿದ ಅಣ್ಣಾವ್ರ ಚಿತ್ರ 'ಆಪರೇಷನ್ ಡೈಮಂಡ್ ರಾಕೇಟ್'. ನಂತರ ನಾನೊಬ್ಬ ಕಳ್ಳ.. ಹೀಗೆ ರಾಜ್‌ಕುಮಾರ್ ಅವರ ನಾಲ್ಕೈದು ಚಿತ್ರಗಳನ್ನು ಮರು ಬಿಡುಗಡೆ ಮಾಡಿದ್ದೇನೆ. ಈಗ 'ಭಾಗ್ಯವಂತರು' ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇನೆ'' ಎಂದಿದ್ದಾರೆ ವಿತರಕ ಮುನಿರಾಜು. ಎಂ.

'ಭಾಗ್ಯವಂತರು' ಸಿನಿಮಾದಲ್ಲಿ ಅಶೋಕ್‌, ಬಾಲಕೃಷ್ಣ, ರಾಮಕೃಷ್ಣ, ಮೈನಾವತಿ, ತೂಗುದೀಪ ಶ್ರೀನಿವಾಸ್‌, ಎಂ.ಎಸ್. ಉಮೇಶ್‌, ಬಿ. ಜಯಾ ಮುಂತಾದವರು ನಟಿಸಿದ್ದರು. ರಾಜನ್-ನಾಗೇಂದ್ರ ಸಂಗೀತ ನೀಡಿದ್ದರು.

Fill this survey and get a chance to win an attractive gift
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌