ಆ್ಯಪ್ನಗರ

ವಿನೋದ್‌ ರಾಜ್‌ ಒಳ್ಳೆಯ ಡಾನ್ಸರ್‌ ಎಂದ ನಟ ಡಾ ಶಿವರಾಜ್‌ಕುಮಾರ್

ಶಿವರಾಜ್‌ಕುಮಾರ್‌ ನಟನೆಯ ‘ಭಜರಂಗಿ-2’ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮ ಅವರ ಮುಕ್ತಮಾತಿನ ರೀತಿಯಿಂದ ಕಳೆಗಟ್ಟಿತು. ಮೂವರು ಸ್ಟಾರ್‌ ನಟರ ಡಾನ್ಸ್‌ ಇದಕ್ಕೆ ಸಾಥ್‌ ನೀಡಿತು.

Curated byಪದ್ಮಶ್ರೀ ಭಟ್ | Vijaya Karnataka Web 27 Oct 2021, 10:33 pm
(ಹರೀಶ್‌ ಬಸವರಾಜ್‌)
Vijaya Karnataka Web dr shivarajkumar starrer bhajarangi 2 movie release on 2021 october 29
ವಿನೋದ್‌ ರಾಜ್‌ ಒಳ್ಳೆಯ ಡಾನ್ಸರ್‌ ಎಂದ ನಟ ಡಾ ಶಿವರಾಜ್‌ಕುಮಾರ್


ಅಲ್ಲಿ ಸ್ಯಾಂಡಲ್‌ವುಡ್‌ ದಿಗ್ಗಜರ ನೃತ್ಯವಿತ್ತು, ಭಾವುಕಗೊಳಿಸುವ ಮಾತುಗಳಿದ್ದವು, ಚಿತ್ರದ ಮೇಕಿಂಗ್‌ ಹಾದಿಯತ್ತ ಒಂದು ಹಿನ್ನೋಟವಿತ್ತು, ಎಲ್ಲ ಸೇರಿ ಬಿಡುಗಡೆಯ ಹಂತಕ್ಕೆ ಬಂದಿರುವ ಚಿತ್ರವನ್ನೇ ಅಲ್ಲಿಅಕ್ಷರಶಃ ಸಂಭ್ರಮಿಸಲಾಯಿತು... ಇದು ಶಿವರಾಜ್‌ಕುಮಾರ್‌ ನಟನೆಯ ‘ಭಜರಂಗಿ-2’ ಚಿತ್ರದ ಬಿಡುಗಡೆಪೂರ್ವ ಸಮಾರಂಭದ ಝಲಕ್‌.

ಚಿತ್ರದ ನಾಯಕ ಶಿವಣ್ಣರಿಂದ ತೊಡಗಿ ಚಿತ್ರತಂಡದ ಸದಸ್ಯರು, ಅಭಿಮಾನಿಗಳು, ಸ್ಯಾಂಡಲ್‌ವುಡ್‌ನ ಹಲವು ಗಣ್ಯರಿದ್ದ ಈ ಕಾರ್ಯಕ್ರಮ ಶಿವರಾಜ್‌ಕುಮಾರ್‌ ಅವರ ಮುಕ್ತಮಾತಿಗೆ ವೇದಿಕೆಯಾಯಿತು. 60ರ ಸನಿಹದಲ್ಲಿರುವ ಅವರು ಸದಾ ಚಟುವಟಿಕೆಯ ಖನಿ. ವೇದಿಕೆಯಲ್ಲಿಯೂ ಅವರ ಉತ್ಸಾಹ ಇತರರಿಗೂ ಪ್ರೇರಣೆ ನೀಡಿತು.

ವಿನೋದ್‌ ರಾಜ್‌ ಒಳ್ಳೆ ಡಾನ್ಸರ್‌

ಶಿವಣ್ಣನ ನೇರ ಮಾತು ಆರಂಭದಿಂದಲೂ ಎಲ್ಲರಿಗೂ ಮುದ ನೀಡಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯಶ್‌ ಕುರಿತು ಮಾತನಾಡುವಾಗ, ‘ನನಗೆ ಡಾನ್ಸ್‌ ಮಾಡುವವರನ್ನು ಕಂಡರೆ ಬಹಳ ಇಷ್ಟ. ವಿನೋದ್‌ ರಾಜ್‌ ಬಹಳ ಚೆನ್ನಾಗಿ ನೃತ್ಯ ಮಾಡುತ್ತಿದ್ದರು. ಅದಾದ ಮೇಲೆ ಶಶಿಕುಮಾರ್‌, ನನ್ನ ತಮ್ಮ ಅಪ್ಪು ಕೂಡ ಒಳ್ಳೆ ನೃತ್ಯ ಮಾಡುತ್ತಾನೆ. ಯಶ್‌ ಕೂಡ ಒಳ್ಳೆ ಡಾನ್ಸರ್‌’ ಎಂದರು.

ಭಾವುಕರಾದ ಹರ್ಷ

ಇವರ ಮಾತು ಮುಗಿದ ಮೇಲೆ ನಿರೂಪಕಿ, ‘ಮೂರು ಜನ ಒಳ್ಳೆಯ ನೃತ್ಯಪಟುಗಳಿದ್ದೀರಾ, ಒಂದು ಸ್ಟೆಪ್‌ ಹಾಕಲೇಬೇಕು’ ಎಂದಾಗ, ‘ಭಜರಂಗಿ-2’ ಸಿನಿಮಾದ ಶೀರ್ಷಿಕೆ ಹಾಡಿಗೆ ಶಿವರಾಜ್‌ಕುಮಾರ್‌ ಡಾನ್ಸ್‌ ಮಾಡಿದರು. ಅವರ ಸ್ಟೆಪ್‌ ನೋಡಿಕೊಂಡು ಯಶ್‌ ಮತ್ತು ಪುನೀತ್‌ ಜತೆಯಾದರು.

‘ಭಜರಂಗಿ-2’ ಸಿನಿಮಾದ ನಿರ್ದೇಶಕ ಹರ್ಷ ಸಿನಿಮಾ ಎದುರಿಸಿದ ಕಷ್ಟಗಳನ್ನು ಮತ್ತು ನಿರ್ಮಾಪಕ ಜಯಣ್ಣ ಅವರ ನೀಡಿದ ಸಹಕಾರವನ್ನು ಸ್ಮರಿಸಿ ಕಣ್ಣೀರಾದರು. ‘ನಮ್ಮ ಸಿನಿಮಾದ ಶೇ. 90ರಷ್ಟು ಸೆಟ್‌ ಬೆಂಕಿಗೆ ಅಹುತಿಯಾಯಿತು. ಅದಾಗಿ ಕೆಲವೇ ಗಂಟೆಗಳಲ್ಲಿಜಯಣ್ಣ ಅವರು, ‘ಅಪ್ಪಾಜಿ ಅದಕ್ಕಿಂತ ದೊಡ್ಡ ಸೆಟ್‌ ಹಾಕಿ ಚಿತ್ರೀಕರಣ ಮಾಡೋಣ’ ಎಂದರು.

ನಿರ್ದೇಶಕ ಎ.ಹರ್ಷ ಸಂದರ್ಶನ: ಫ್ಯಾಂಟಸಿ ಲೋಕದ ‘ಭಜರಂಗಿ-2’

ಅಡ್ವಾನ್ಸ್‌ ಬದಲು ಚುಟ್ಟಾ

ಕಳೆದೊಂದು ವಾರದಿಂದ ಸಿನಿಮಾ ಕೆಲಸದಲ್ಲಿ ಬಿಝಿಯಾಗಿದ್ದೇನೆ. ಈ ಸಮಯದಲ್ಲಿ ಜಯಣ್ಣ ಕರೆ ಮಾಡಿ ಆರೋಗ್ಯ ವಿಚಾರಿಸಿಕೊಳ್ಳುತ್ತಾರೆ. ಇಂತಹ ನಿರ್ಮಾಪಕರ ಜತೆ ಕೆಲಸ ಮಾಡಿದ್ದು ನನ್ನ ಪುಣ್ಯ’ ಎಂದು ನಿರ್ದೇಶಕ ಹರ್ಷ ಅವರು ಜಯಣ್ಣ ಅವರನ್ನು ತಬ್ಬಿಕೊಂಡು ಭಾವುಕರಾದರು.

ಅಳುಮುಂಜಿ ಪಾತ್ರದ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಹಿರಿಯ ನಟಿ ಶ್ರುತಿ ಈ ಸಿನಿಮಾದಲ್ಲಿ ಮೊದಲ ಬಾರಿಗೆ ಖಡಕ್‌ ವಿಲನ್‌ ಆಗಿದ್ದಾರೆ. ‘ಭಜರಂಗಿ-2 ಸಿನಿಮಾದ ಪಾತ್ರವನ್ನು ಹರ್ಷ ಹೇಳಿದಾಗ, ನಾನು ಈ ಪಾತ್ರ ಮಾಡಬಲ್ಲೆನಾ ಎನಿಸಿತು. ಆದರೆ ಹರ್ಷ ಅವರಿಗೆ ನನ್ನ ಮೇಲೆ ಭರವಸೆ ಇತ್ತು" ಎಂದಿದ್ದಾರೆ ಶ್ರುತಿ

ಭಜರಂಗಿ-2 ಚಿತ್ರದಲ್ಲಿ ಅಜಾನುಬಾಹು ಖಡಕ್ ವಿಲನ್‌ಗಳ ಪಡೆ

ವಾರ್ನಿಂಗ್‌ ಬ್ರದರ್ಸ್‌

ಸರಿ, ನಿರ್ದೇಶಕ ಹರ್ಷ ಹೇಳಿದರು ಪಾತ್ರವನ್ನು ಒಪ್ಪಿಕೊಂಡೆ. ಆದರೆ ಮನೆಗೆ ಅಡ್ವಾನ್ಸ್‌ ಬರುತ್ತದೆ ಅಂದುಕೊಂಡಿದ್ದ ನನಗೆ ಪಾರ್ಸಲ್‌ ಕವರ್‌ನಲ್ಲಿ ಹರ್ಷ ಅವರು ‘ಚುಟ್ಟಾ’ ಕಳಿಸಿದ್ದರು. ಜತೆಗೆ ಚಿತ್ರೀಕರಣ ಆರಂಭಿಸುವಷ್ಟರಲ್ಲಿ ಇದನ್ನು ಅಭ್ಯಾಸ ಮಾಡಿ ಎಂದು ಹೇಳಿದ್ದರು’ ಎಂದರು ನಟಿ ಶ್ರುತಿ.

'ಭಜರಂಗಿ 2' ಚಿತ್ರ ಬಿಡುಗಡೆಯ ಪೂರ್ವಭಾವಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಕೂಡ ಭಾಗವಹಿಸಿದ್ದರು. ‘ಹಾಲಿವುಡ್‌ನಲ್ಲಿ ವಾರ್ನರ್‌ ಬ್ರದರ್ಸ್‌ ಎಂಬ ಖ್ಯಾತ ನಿರ್ಮಾಪಕರಿದ್ದಾರೆ. ನಮ್ಮ ಇಂಡಸ್ಟ್ರಿಯಲ್ಲಿ ಜಯಣ್ಣ ಮತ್ತು ಭೋಗೇಂದ್ರ ವಾರ್ನಿಂಗ್‌ ಬ್ರದರ್ಸ್‌’ ಎಂದು ನಗೆ ಚಟಾಕಿ ಹಾರಿಸಿದರು.

ಭರ್ಜರಿ ಹವಾ ಮಾಡಿದ 'ಭಜರಂಗಿ 2' ಟ್ರೈಲರ್; ಶಿವಣ್ಣನ ದರ್ಶನಕ್ಕೆ ಫ್ಯಾನ್ಸ್ ಕಾತರ

ಗರಂ ಆದ ಶಿವಣ್ಣ

ನಟರಾದ 'ರಾಕಿಂಗ್ ಸ್ಟಾರ್' ಯಶ್‌ ಮತ್ತು 'ಪವರ್ ಸ್ಟಾರ್' ಪುನೀತ್‌ ರಾಜ್‌ಕುಮಾರ್ ವೇದಿಕೆ ಮೇಲಿದ್ದಾಗ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಸಹ ವೇದಿಕೆ ಏರಿದರು. ಆಗ ಕಾರ್ಯಕ್ರಮದಲ್ಲಿದ್ದ ಅವರ ಅಭಿಮಾನಿಗಳು ‘ಹೀರೊ ಹೀರೊ ಹ್ಯಾಟ್ರಿಕ್‌ ಹೀರೊ’ ಎಂದು ಕೂಗಿದರು. ತಕ್ಷಣ ಗರಂ ಆದ ಶಿವರಾಜ್‌ಕುಮಾರ್‌ ಅಭಿಮಾನಿಗಳಿಗೆ ಹಾಗೆ ಕೂಗದಂತೆ ವೇದಿಕೆ ಮೇಲಿಂದಲೇ ಎಚ್ಚರಿಕೆ ನೀಡಿದರು. ಮೂರು ಜನ ನಾಯಕರಿರುವಾಗ ಈ ರೀತಿ ಮಾಡಬಾರದು, ನಾವೆಲ್ಲರೂ ಒಂದೇ ಕುಟುಂಬದವರು ಎಂದು ಅಭಿಮಾನಿಗಳಿಗೆ ಎಚ್ಚರ ಹೇಳಿದಂತಿತ್ತು ಅವರ ಮಾತು.

'ಪೌರಕಾರ್ಮಿಕನ ಪಾತ್ರ ಮಾಡಬೇಕೆಂಬ ಆಸೆ ಇದೆ'- ನಟ ಶಿವರಾಜ್‌ಕುಮಾರ್

'ಭಜರಂಗಿ 2' ಬಗ್ಗೆ ನಿರ್ಮಾಪಕರಾದ ಜಯಣ್ಣ & ಭೋಗೇಂದ್ರ ಹೇಳಿದ್ದೇನು?

'ದೊಡ್ಮನೆಯವರ ಸಿನಿಮಾ ಮಾಡಬೇಕು ಅನ್ನೋ ಆಸೆ ಎಲ್ಲ ನಿರ್ದೇಶಕರಿಗೆ ಇರತ್ತೆ'- ನಿರ್ದೇಶಕ ದಿನಕರ್ ತೂಗುದೀಪ

ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌