ಆ್ಯಪ್ನಗರ

ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಸೆ.15ರಂದು ಚಾಲನೆ; ಭೂಮಿಪೂಜೆ ಮಾಡಲಿರುವ ಸಿಎಂ

ಡಾ. ವಿಷ್ಣುವರ್ಧನ್ ಅವರ ಅಭಿಮಾನಿಗಳಿಗೆ ಒಂದು ಶುಭ ಸುದ್ದಿ ಇದೆ. ಸೆ.15ರಂದು ವಿಷ್ಣು ಅವರ ಸ್ಮಾರಕದ ಭೂಮಿ ಪೂಜೆ ಮಾಡುವುದಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಈ ಕುರಿತು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ.

Vijaya Karnataka Web 9 Sep 2020, 1:54 pm
'ಸಾಹಸ ಸಿಂಹ' ಡಾ. ವಿಷ್ಣುವರ್ಧನ್‌ ಅವರ ಸ್ಮಾರಕ ನಿರ್ಮಾಣದ ಚಾಲನೆಗೆ ಕ್ಷಣಗಣನೆ ಆರಂಭವಾಗಿದೆ. ಸೆ.15ರಂದು ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡುವುದಕ್ಕೆ ವಿಷ್ಣುವರ್ಧನ್ ಕುಟುಂಬ ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಗುದ್ದಲಿ ಪೂಜೆಯನ್ನು ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರಿಂದ ಮಾಡಿಸುವುದಕ್ಕಾಗಿ, ಅವರನ್ನು ಆಹ್ವಾನಿಸಲು ಭಾರತಿ ವಿಷ್ಣುವರ್ಧನ್ ಮತ್ತು ಅನಿರುದ್ಧ ಗೃಹ ಕಚೇರಿ ಕೃಷ್ಣಗೆ ಇಂದು (ಸೆ.9) ಆಗಮಿಸಿದ್ದರು.
Vijaya Karnataka Web ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಸೆ.15ರಂದು ಚಾಲನೆ; ಭೂಮಿಪೂಜೆ ಮಾಡಲಿರುವ ಸಿಎಂ


ಸಿಎಂ ಭೇಟಿ ನಂತರ ಮಾತನಾಡಿದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು, 'ವೈದ್ಯರ ಸೂಚನೆ ಮೇರೆಗೆ ಯಡಿಯೂರಪ್ಪನವರು ಹೊರಗೆಲ್ಲೂ ಹೋಗುವುದಕ್ಕೆ ಸಾಧ್ಯವಿಲ್ಲದೇ ಇರುವುದರಿಂದ, ಆನ್‌ಲೈನ್‌ನಲ್ಲೇ ಭೂಮಿ ಪೂಜೆ ಮಾಡುವುದಾಗಿ ತಿಳಿಸಿದ್ದಾರೆ. ಸೆಪ್ಟೆಂಬರ್ 15ರ ಬೆಳಗ್ಗೆ 10.30ಕ್ಕೆ ಮೈಸೂರಿನಲ್ಲಿ ವಿಷ್ಣು ಸ್ಮಾರಕದ ಭೂಮಿ ಪೂಜೆ ಇರಲಿದೆ. ಸ್ಮಾರಕದ ಕಟ್ಟಡದ ಕೆಲಸ ಕೂಡ ಅಂದಿನಿಂದ ಶುರುವಾಗಲಿದೆ. ಆ ದಿನ ದಯವಿಟ್ಟು ಯಾರೂ ಕೂಡ ಅಲ್ಲಿಗೆ ಬಂದು ಗುಂಪು ಸೇರಬೇಡಿ. ಯಾರಿಗೂ ಯಾವ ತೊಂದರೆಗಳು ಆಗುವುದು ಬೇಡ ಎಂಬುದು ನಮ್ಮ ಕಳಕಳಿ' ಎಂದಿದ್ದಾರೆ.

ಸೆ.18ರಂದು ವಿಷ್ಣುವರ್ಧನ್‌ ಅವರ 70ನೇ ವರ್ಷದ ಜನ್ಮದಿನವಿದೆ. ಅದಕ್ಕೂ ಮೂರು ದಿನ ಮೊದಲೇ ಸ್ಮಾರಕದ ಭೂಮಿ ಪೂಜೆ ಆಯೋಜನೆ ಮಾಡಲಾಗಿದೆ. 'ಈಗ ಒಂದೊಳ್ಳೆಯ ಕೆಲಸ ಶುರುವಾಗುತ್ತಿದೆ. ಎಲ್ಲವೂ ಒಳ್ಳೆಯದಾಗಲಿ ಎಂಬುದೇ ಆಶಯ. ಇದೆಲ್ಲವೂ ನಿಮಗೋಸ್ಕರ ಮಾಡುತ್ತಿದ್ದೇವೆ. ಆದಷ್ಟು ಬೇಗ ಕಟ್ಟಡ ರೆಡಿಯಾಗಿ ಎಲ್ಲರಿಗೂ ತಲುಪಿಸಬೇಕು ಎಂಬುದು ನಮ್ಮ ಆಶಯ' ಎಂದು ಅವರು ಹೇಳಿದ್ದಾರೆ.

Photos: ಪತ್ನಿ, ಮಕ್ಕಳ ಜೊತೆ ಚಿಕ್ಕಮಗಳೂರು ಸೌಂದರ್ಯ ಸವಿದ 'ಜೊತೆ ಜೊತೆಯಲಿ' ನಟ ಅನಿರುದ್ಧ!

'ವಿಷ್ಣುವರ್ಧನ್‌ ಅವರ ಜನ್ಮದಿನ ಸೆ.18ರಂದು ಇದೆ. ಆ ದಿನ ಇಟ್ಟುಕೊಂಡರೆ ಜನ ಇನ್ನೂ ಹೆಚ್ಚು ಸೇರುವ ಸಾಧ್ಯತೆ ಇದೆ. ಅಂದು ಅವರೆಲ್ಲ ಬಂದಾಗ ಈ ಕೆಲಸಕ್ಕೆ ಅಡಚಣೆ ಆಗಲಿದೆ ಎಂಬ ಕಾರಣಕ್ಕೆ ಸೆ.15ರಂದೇ ಭೂಮಿ ಪೂಜೆ ಇಟ್ಟುಕೊಂಡಿದ್ದೇವೆ. ನೀವೆಲ್ಲರೂ ಸಂತೋಷಪಡುವಂತೆ ಸ್ಮಾರಕ ಸಿದ್ಧಗೊಳ್ಳಲಿದೆ. ಕೊರೊನಾ ಇರುವುದರಿಂದ ಯಾರನ್ನು ಭೇಟಿ ಮಾಡೋಕೆ ಸಾಧ್ಯವಾಗುತ್ತಿಲ್ಲ. ನಮ್ಮ ನಮ್ಮ ಭದ್ರತೆಯಲ್ಲಿ ನಾವೆಲ್ಲ ಇರಬೇಕಾಗಿದೆ. ಹಾಗಾಗಿ, ಯಾರೂ ಕೂಡ ತೊಂದರೆ ತೆಗೆದುಕೊಳ್ಳಬೇಡಿ. ತುಂಬ ಜನ ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಆದಷ್ಟು ಹುಷಾರಾಗಿರಿ' ಎಂದು ಅವರು ಮನವಿ ಮಾಡಿದ್ದಾರೆ. ಇನ್ನು, ಸ್ಮಾರಕ ನಿರ್ಮಾಣ ಮಾಡಲಿರುವ ಜಾಗದ ಕುರಿತು ಇದ್ದಂತಹ ಕಾನೂನಿನ ತೊಡಕುಗಳು ಎಲ್ಲವು ಬಗೆಹರಿದಿವೆ ಎಂದು ಭಾರತಿ ಅವರು ತಿಳಿಸಿದ್ದಾರೆ.

'ಜೊತೆ ಜೊತೆಯಲಿ' ಧಾರಾವಾಹಿ: ವಿಷ್ಣುವರ್ಧನ್ ಕಾಣಿಸಿಕೊಂಡ ಪಾತ್ರದಲ್ಲಿ ಮಿಂಚಿದ ಅಳಿಯ ಅನಿರುದ್ಧ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌