ದರ್ಶನ್ ಕಷ್ಟದಿಂದ ಬೆಳೆದುಬಂದವರೇ, ಒಮ್ಮೆಲೆ ಸ್ಟಾರ್ ಆದವರಲ್ಲ! ಅಭಿಮಾನಿಗಳಿಗೆ ಪ್ರತಿ ವರ್ಷವೂ ದರ್ಶನ್ ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುತ್ತಾರೆ. ಯುವ ಕಲಾವಿದರಿಗೆ ದರ್ಶನ್ ಆಸರೆಯಾಗಿ ನಿಲ್ಲುತ್ತಾರೆ. ಅವರು ಮಾಡಿದ ಸಹಾಯದ ಬಗ್ಗೆ ಮಾತ್ರ ಅವರು ಎಂದೂ ಹೇಳಿಕೊಂಡಿಲ್ಲ, ಹೇಳಿಕೊಳ್ಳೋದಿಲ್ಲ.
ಇತ್ತೀಚಿಗಷ್ಟೇ ಮಗ ವಿನೀಶ್ ಹುಟ್ಟುಹಬ್ಬದ ಪ್ರಯುಕ್ತ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿದ್ದರು. ಆದರೆ
ಹಿಂದಿನ ವರ್ಷ ದರ್ಶನ್ ಮಗನ ಹುಟ್ಟುಹಬ್ಬದ ದಿನ ಚಾಲೆಂಜಿಂಗ್ ಸ್ಟಾರ್ ಮನೆಗೆ ಆಗಮಿಸುತ್ತಿದ್ದ ವೇಳೆ ಅಪಘಾತದಲ್ಲಿ ರಾಕೇಶ್ ಎನ್ನುವವರು ಸಾವನ್ನಪ್ಪಿದ್ದರು, ಇದರಿಂದ ದಾಸನಿಗೆ ತುಂಬ ಬೇಸರವಾಗಿತ್ತು. ರಾಕೇಶ್ ಕುಟುಂಬಕ್ಕೆ ದರ್ಶನ್ 2 ಲಕ್ಷ ರೂಪಾಯಿ ಹಣಸಹಾಯ ಮಾಡಿದ್ದರಂತೆ.
ಸುದೀಪ್ ಹೆಗಲೇರಿರುವ ಜ್ಯೂನಿಯರ್ ದರ್ಶನ್ ವಿನೀಶ್ ಫೋಟೋ ವೈರಲ್
ಇತ್ತೀಚೆಗೆ ನಡೆದ ವಿನೀಶ್ ಹುಟ್ಟುಹಬ್ಬದಲ್ಲಿ ಖುದ್ದಾಗಿ ರಾಕೇಶ್ ಕುಟುಂಬದವರನ್ನು ಕರೆಸಿಕೊಂಡ ದರ್ಶನ್ ಅವರ ಮನೆಯ ಹೆಣ್ಣುಮಕ್ಕಳ ಮದುವೆಗೆ ಹಣ ಸಹಾಯ ಮಾಡುವುದಾಗಿ ಹೇಳಿದ್ದಾರೆ. ರಾಕೇಶ್ ಖಾಸಗಿ ಕಾರ್ಖಾನೆಯಲ್ಲಿ ದುಡಿಯುತ್ತಿದ್ದರು. ರಾಕೇಶ್ ಅಪ್ಪ ನರಸಿಂಹಯ್ಯ, ತಾಯಿ ಗಂಗಮ್ಮ. ಅವರಿಗೆ ಕೀರ್ತನಾ, ನಾಗವೇಣಿ ಎಂಬ ಹೆಣ್ಣುಮಕ್ಕಳಿದ್ದಾರೆ. ರಾಕೇಶ್ ಸಹೋದರಿಯರ ಮದುವೆ ಖರ್ಚಿಗೆ ಏನೇ ಖರ್ಚಿದ್ದರೂ ನನ್ನನ್ನು ಬಂದು ಕೇಳಿ, ನಾನು ಸಹಾಯ ಮಾಡ್ತೀನಿ ಅಂತ ದರ್ಶನ್ ಭರವಸೆ ನೀಡಿದ್ದಾರೆ.
ಅಭಿಮಾನಿಗಳಲ್ಲಿ ಕಳಕಳಿಯ ಮನವಿ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಈ ಬಾರಿ ವಿನೀಶ್ ಹುಟ್ಟುಹಬ್ಬಕ್ಕೆ ದರ್ಶನ್ ಟ್ವೀಟ್ ಮಾಡಿದ್ದೇನು?
"ಅಭಿಮಾನಿಗಳಲ್ಲಿ ಕಳಕಳಿಯ ಮನವಿ. ಗಾಡಿಯಲ್ಲಿ ಚಲಿಸುವಾಗ ದಯಮಾಡಿ ಅತೀ ಜಾಗರೂಕತೆಯಿಂದ ಓಡಿಸಿ. ನಿಮ್ಮ ಕುಟುಂಬ ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ಮರೆಯದಿರಿ. ಕೆಲವೊಮ್ಮೆ ನಮ್ಮ ಪ್ರಜ್ಞೆಯಲ್ಲಿದ್ದರೂ ಸಹ ದುರದೃಷ್ಟವಶಾತ್ ಅಪಘಾತ ಸಂಭವಿಸುತ್ತದೆ. ಕಳೆದ ವರ್ಷ ವಿನೀಶ್ ಹುಟ್ಟುಹಬ್ಬದ ವೇಳೆ ನಡೆದ ರಸ್ತೆ ಅಪಘಾತದಲ್ಲಿ ಅಭಿಮಾನಿಯೊಬ್ಬ ಸಾವನಪ್ಪಿದ್ದನ್ನು ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ದೂರದ ಸ್ಥಳಗಳಿಗೆ ಹೋಗುವಾಗ ದ್ವಿಚಕ್ರ ವಾಹನಗಳನ್ನು ಆದಷ್ಟು ಉಪಯೋಗಿಸಬೇಡಿ. ಈ ವರ್ಷವೂ ಹುಟ್ಟುಹಬ್ಬಕ್ಕೆ ಬರುವವರು ದಯಮಾಡಿ ಎಚ್ಚರಿಕೆ ವಹಿಸಿ" ಎಂದು ದರ್ಶನ್ ಮನವಿ ಮಾಡಿಕೊಂಡಿದ್ದರು.
ನನ್ನದೊಂದು ಬ್ರಾಂಡ್ ಇರಬೇಕಲ್ಲಾ, ಪುತ್ರನ ಬಗ್ಗೆ ದರ್ಶನ್
ಇತ್ತೀಚಿಗಷ್ಟೇ ಮಗ ವಿನೀಶ್ ಹುಟ್ಟುಹಬ್ಬದ ಪ್ರಯುಕ್ತ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿದ್ದರು. ಆದರೆ
ಹಿಂದಿನ ವರ್ಷ ದರ್ಶನ್ ಮಗನ ಹುಟ್ಟುಹಬ್ಬದ ದಿನ ಚಾಲೆಂಜಿಂಗ್ ಸ್ಟಾರ್ ಮನೆಗೆ ಆಗಮಿಸುತ್ತಿದ್ದ ವೇಳೆ ಅಪಘಾತದಲ್ಲಿ ರಾಕೇಶ್ ಎನ್ನುವವರು ಸಾವನ್ನಪ್ಪಿದ್ದರು, ಇದರಿಂದ ದಾಸನಿಗೆ ತುಂಬ ಬೇಸರವಾಗಿತ್ತು. ರಾಕೇಶ್ ಕುಟುಂಬಕ್ಕೆ ದರ್ಶನ್ 2 ಲಕ್ಷ ರೂಪಾಯಿ ಹಣಸಹಾಯ ಮಾಡಿದ್ದರಂತೆ.
ಸುದೀಪ್ ಹೆಗಲೇರಿರುವ ಜ್ಯೂನಿಯರ್ ದರ್ಶನ್ ವಿನೀಶ್ ಫೋಟೋ ವೈರಲ್
ಇತ್ತೀಚೆಗೆ ನಡೆದ ವಿನೀಶ್ ಹುಟ್ಟುಹಬ್ಬದಲ್ಲಿ ಖುದ್ದಾಗಿ ರಾಕೇಶ್ ಕುಟುಂಬದವರನ್ನು ಕರೆಸಿಕೊಂಡ ದರ್ಶನ್ ಅವರ ಮನೆಯ ಹೆಣ್ಣುಮಕ್ಕಳ ಮದುವೆಗೆ ಹಣ ಸಹಾಯ ಮಾಡುವುದಾಗಿ ಹೇಳಿದ್ದಾರೆ. ರಾಕೇಶ್ ಖಾಸಗಿ ಕಾರ್ಖಾನೆಯಲ್ಲಿ ದುಡಿಯುತ್ತಿದ್ದರು. ರಾಕೇಶ್ ಅಪ್ಪ ನರಸಿಂಹಯ್ಯ, ತಾಯಿ ಗಂಗಮ್ಮ. ಅವರಿಗೆ ಕೀರ್ತನಾ, ನಾಗವೇಣಿ ಎಂಬ ಹೆಣ್ಣುಮಕ್ಕಳಿದ್ದಾರೆ. ರಾಕೇಶ್ ಸಹೋದರಿಯರ ಮದುವೆ ಖರ್ಚಿಗೆ ಏನೇ ಖರ್ಚಿದ್ದರೂ ನನ್ನನ್ನು ಬಂದು ಕೇಳಿ, ನಾನು ಸಹಾಯ ಮಾಡ್ತೀನಿ ಅಂತ ದರ್ಶನ್ ಭರವಸೆ ನೀಡಿದ್ದಾರೆ.
ಅಭಿಮಾನಿಗಳಲ್ಲಿ ಕಳಕಳಿಯ ಮನವಿ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಈ ಬಾರಿ ವಿನೀಶ್ ಹುಟ್ಟುಹಬ್ಬಕ್ಕೆ ದರ್ಶನ್ ಟ್ವೀಟ್ ಮಾಡಿದ್ದೇನು?
"ಅಭಿಮಾನಿಗಳಲ್ಲಿ ಕಳಕಳಿಯ ಮನವಿ. ಗಾಡಿಯಲ್ಲಿ ಚಲಿಸುವಾಗ ದಯಮಾಡಿ ಅತೀ ಜಾಗರೂಕತೆಯಿಂದ ಓಡಿಸಿ. ನಿಮ್ಮ ಕುಟುಂಬ ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ಮರೆಯದಿರಿ. ಕೆಲವೊಮ್ಮೆ ನಮ್ಮ ಪ್ರಜ್ಞೆಯಲ್ಲಿದ್ದರೂ ಸಹ ದುರದೃಷ್ಟವಶಾತ್ ಅಪಘಾತ ಸಂಭವಿಸುತ್ತದೆ. ಕಳೆದ ವರ್ಷ ವಿನೀಶ್ ಹುಟ್ಟುಹಬ್ಬದ ವೇಳೆ ನಡೆದ ರಸ್ತೆ ಅಪಘಾತದಲ್ಲಿ ಅಭಿಮಾನಿಯೊಬ್ಬ ಸಾವನಪ್ಪಿದ್ದನ್ನು ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ದೂರದ ಸ್ಥಳಗಳಿಗೆ ಹೋಗುವಾಗ ದ್ವಿಚಕ್ರ ವಾಹನಗಳನ್ನು ಆದಷ್ಟು ಉಪಯೋಗಿಸಬೇಡಿ. ಈ ವರ್ಷವೂ ಹುಟ್ಟುಹಬ್ಬಕ್ಕೆ ಬರುವವರು ದಯಮಾಡಿ ಎಚ್ಚರಿಕೆ ವಹಿಸಿ" ಎಂದು ದರ್ಶನ್ ಮನವಿ ಮಾಡಿಕೊಂಡಿದ್ದರು.
ನನ್ನದೊಂದು ಬ್ರಾಂಡ್ ಇರಬೇಕಲ್ಲಾ, ಪುತ್ರನ ಬಗ್ಗೆ ದರ್ಶನ್