ಆ್ಯಪ್ನಗರ

ಚಿರಂಜೀವಿ ಸರ್ಜಾ ಕುರಿತ ಹೇಳಿಕೆಯನ್ನು ವಾಪಸ್ ಪಡೆದ ಇಂದ್ರಜಿತ್ ಲಂಕೇಶ್‌!

ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು (ಆ.31) ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗಿ ಸ್ಯಾಂಡಲ್‌ವುಡ್‌ನಲ್ಲಿ ಯಾರೆಲ್ಲ ಮಾದಕ ವಸ್ತುಗಳ ಜಾಲದಲ್ಲಿ ಇದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಅವರು, ಚಿರು ಸರ್ಜಾ ಕುರಿತು ಹೇಳಿಕೆಯನ್ನು ವಾಪಸ್‌ ಪಡೆದಿದ್ದಾರೆ.

Vijaya Karnataka Web 31 Aug 2020, 6:52 pm
ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ ಮಾಫಿಯಾದ ಕುರಿತ ಚರ್ಚೆ ಜೋರಾಗಿದೆ. ಈಗಾಗಲೇ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಸಿಸಿಬಿ ಕಚೇರಿಗೆ ತೆರಳಿ, ಸ್ಯಾಂಡಲ್‌ವುಡ್‌ನಲ್ಲಿ ಯಾರೆಲ್ಲ ಈ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಅವರು ನಟ ಚಿರಂಜೀವಿ ಸರ್ಜಾ ಬಗ್ಗೆ ನೀಡಿದ್ದ ಹೇಳಿಕೆಯೊಂದನ್ನು ವಾಪಸ್ ಪಡೆದುಕೊಂಡಿದ್ದಾರೆ. 'ಈಗಾಗಲೇ ನಾನು ಚಿರಂಜೀವಿ ಸರ್ಜಾ ಕುರಿತಾಗಿ ನೀಡಿದ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಸತ್ತವರ ಬಗ್ಗೆ ಮಾತನಾಡೋದು ಬೇಡ. ಮರಣೋತ್ತರ ಪರೀಕ್ಷೆ ಮಾಡಬೇಕಿತ್ತು ಎಂದು ನಾನು ಹೇಳಿಕೆ ನೀಡಿದ್ದೆ. ಆ ಹೇಳಿಕೆಯನ್ನು ನಾನು ವಾಪಸ್ ಪಡೆಯುತ್ತೇನೆ' ಎಂದು ಇಂದ್ರಜಿತ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.
Vijaya Karnataka Web ಚಿರಂಜೀವಿ ಸರ್ಜಾ ಕುರಿತ ಹೇಳಿಕೆಯನ್ನು ವಾಪಸ್ ಪಡೆದ ಇಂದ್ರಜಿತ್ ಲಂಕೇಶ್‌!


'ಚಿರಂಜೀವಿ ಸರ್ಜಾ ಯುವಪೀಳಿಗೆಯ ನಟ. ಆ ಕಾರಣದಿಂದಲೇ ನಾನು ಹೇಳಿದ್ದೆ. ಅವರಿಗೆ ಒಳ್ಳೆಯ ಭವಿಷ್ಯ ಇತ್ತು. ಚಿರು ಇದ್ದಿದ್ದರೆ ಮೇಘನಾ ರಾಜ್‌ ಅವರು ಸಂತೋಷದಿಂದ ಇರುತ್ತಿದ್ದರು. ಚಿರು ಸರ್ಜಾ ಸಾವಿನ ಬಗ್ಗೆ ನನಗೂ ತುಂಬ ನೋವಿದೆ. ಹಾಗಾಗಿ, ಅವರ ವಿಷಯ ಇಲ್ಲಿ ಬೇಡ. ಆದರೆ ಯಾರು ತಪ್ಪು ಮಾಡಿದ್ದಾರೋ, ಅವರಿಗೆ ಶಿಕ್ಷೆ ಆಗಬೇಕು. ಯುವ ಜನತೆಗೆ ಈ ಬಗ್ಗೆ ಒಂದು ಸಂದೇಶ ರವಾನೆ ಆಗಬೇಕು, ಯುವ ಜನತೆ ಅರಿವು ಮೂಡಿಸಬೇಕು' ಎಂದು ಇಂದ್ರಜಿತ್‌ ಹೇಳಿದ್ದಾರೆ.

ಈ ಹಿಂದೆ ಇಂದ್ರಜಿತ್ ಏನು ಹೇಳಿದ್ದರು?
'ಇತ್ತೀಚೆಗೆ ಒಬ್ಬ ಯುವನಟ ತೀರಿಹೋದಾಗ ನಮಗೆಲ್ಲ ದುಃಖ ಆಯಿತು. ಆದರೆ ಅವನ ಮರಣೋತ್ತರ ಪರೀಕ್ಷೆ ಯಾಕೆ ಮಾಡಿಲ್ಲ? ಮರಣೋತ್ತರ ಪರೀಕ್ಷೆ ಮಾಡದೇ ಇರುವುದಕ್ಕೆ ಯಾರೆಲ್ಲ ಕಾರಣರು? ರಾಜಕಾರಣಿಗಳೆಲ್ಲ ಕಾರಣ ಆಗಿದ್ರು' ಎಂದು ಪ್ರಶ್ನೆಗಳನ್ನು ಕೇಳಿದ್ದರು ಇಂದ್ರಜಿತ್‌ ಲಂಕೇಶ್‌. ಆದರೆ ಎಲ್ಲಿಯೂ ಅವರು ಯಾವುದೇ ನಟನ ಅಥವಾ ರಾಜಕಾರಣಿಯ ಹೆಸರನ್ನು ಪ್ರಸ್ತಾಪಿಸಿರಲಿಲ್ಲ. ಆದರೆ ಅವರು ಹೇಳಿರುವುದು ಚಿರು ಬಗ್ಗೆಯೇ ಎಂದು ಚರ್ಚೆ ಆಗಿತ್ತು.

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಮಾಫಿಯಾ: ಚಿರು ತಪ್ಪು ಮಾಡಿದ್ದರೆ ಶಿಕ್ಷೆ ಕೊಡುತ್ತೀರಾ? ದರ್ಶನ್‌ ಖಡಕ್‌ ಪ್ರಶ್ನೆ!

ಇನ್ನು, ಈ ಬಗ್ಗೆ ಸೋಮವಾರ (ಆ.31) ನಟ ದರ್ಶನ್‌ ಕೂಡ ಪ್ರತಿಕ್ರಿಯಿಸಿದ್ದು, 'ಚಿರು ಹೆಸರು ತುಂಬ ಎತ್ತುತ್ತಿದ್ದಾರೆ. ಅದು ನನಗೆ ಬೇಜಾರಾಗಿದೆ. ಸತ್ತು ಮೂರು ತಿಂಗಳು ಆಗಿದೆ. ಅವನು ಎಲ್ಲಿದ್ದಾನೋ, ಹೆಂಗಿದ್ದಾನೋ ಏನೋ? ಅಪ್ಪಿ-ತಪ್ಪಿ ಸಾಬೀತಾದರೆ ನೀವು ಅವರನ್ನು ಕರೆದುಕೊಂಡು ಬಂದು ಶಿಕ್ಷೆ ಕೊಡೋಕೆ ಆಗತ್ತಾ? ನಮ್ಮ ತಂದೆ-ತಾಯಿ ಹೇಳಿಕೊಟ್ಟಿರುವ ಒಂದು ಮಾತು ಹೇಳುತ್ತೇನೆ. ಸತ್ತೋನು ಕೊಲೆಗಾರನೇ ಆಗಿರಲಿ. ಅವನ ವರ್ಷದ ತಿಥಿ ಮಾಡುತ್ತೇವೆ. ಸತ್ತಮೇಲೆ ಒಳ್ಳೆಯ ಮಾತಾಡೋಣ' ಎಂದಿದ್ದಾರೆ ದರ್ಶನ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌