ಆ್ಯಪ್ನಗರ

ಡ್ರಗ್‌ ಕೇಸ್: ಸಂಜನಾ-ರಾಗಿಣಿ ಜಾಮೀನು ಅರ್ಜಿ ಮತ್ತೆ ವಜಾ! ಸಾಮಾನ್ಯ ಸೆಲ್‌ಗೆ ನಟಿಯರು ಶಿಫ್ಟ್?

ನಟಿ ರಾಗಿಣಿ ಮತ್ತು ಸಂಜನಾ ಗಲ್ರಾನಿ ಅವರ ಜೈಲು ವಾಸ ಮುಂದುವರಿದಿದೆ. ಜಾಮೀನು ಕೋರಿ ಈ ನಟಿಯರು ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಅವರಿಗೆ ಹಿನ್ನಡೆ ಆಗಿದ್ದು, ನ್ಯಾಯಾಲಯವು ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

Vijaya Karnataka Web 28 Sep 2020, 5:38 pm
ಡ್ರಗ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಇಂದು (ಸೆ.28) ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಎನ್‌ಡಿಪಿಎಸ್‌ ನ್ಯಾಯಾಲಯವು ಇಬ್ಬರ ಜಾಮೀನು ಅರ್ಜಿಯನ್ನು ನಿರಾಕರಣೆ ಮಾಡಿದೆ. ಇದರಿಂದಾಗಿ ಜೈಲಿನಿಂದ ಹೊರಬರಲು ಕಾತರರಾಗಿದ್ದ ರಾಗಿಣಿ-ಸಂಜನಾಗೆ ನಿರಾಸೆ ಉಂಟಾಗಿದೆ.
Vijaya Karnataka Web sanjjanaa galrani and ragini dwivedi


ಸಾಮಾನ್ಯ ಖೈದಿಗಳ ಸೆಲ್‌ಗೆ ಶಿಫ್ಟ್
ಸೆ.14ರಿಂದ ಪರಪ್ಪನ ಅಗ್ರಹಾರಕ್ಕೆ ಬಂದ ನಟಿ ರಾಗಿಣಿಯನ್ನು ವಿಶೇಷ ಕೊಠಡಿಯಲ್ಲಿ ಇರಿಸಿದ್ದರು. ನಟಿ ಸಂಜನಾ ಸೆ.16ರಂದು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದರು. ಅವರೂ ಕೂಡ ವಿಶೇಷ ಕೊಠಡಿಯಲ್ಲೇ ಇದ್ದರು. ಕೊರೊನಾ ಇರುವ ಹಿನ್ನೆಲೆಯಲ್ಲಿ ಹೊರಗಿನಿಂದ ಬಂದ ಕಾರಣಕ್ಕೆ ಅವರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಆದರೆ, ಇದೀಗ ಜಾಮೀನು ಅರ್ಜಿ ವಜಾಗೊಂಡಿದೆ. ಜೊತೆಗೆ ಅವರ ಕ್ವಾರಂಟೈನ್ ಅವಧಿ ಮುಕ್ತಾಯಗೊಂಡಿದ್ದರಿಂದ, ಇಬ್ಬರನ್ನು ಪರಪ್ಪನ ಅಗ್ರಹಾರದ ಸಾಮಾನ್ಯ ಖೈದಿಗಳ ಸೆಲ್‌ಗೆ ಶಿಫ್ಟ್ ಮಾಡಲಾಗುವುದು ಎಂದು ಹೇಳಲಾಗಿದೆ.

ಹೈಕೋರ್ಟ್‌ನಲ್ಲಿ ಅರ್ಜಿ ಹಾಕಬಹುದು
ಸಿಸಿಬಿ ತನಿಖೆ ಇನ್ನು ಪ್ರಾಥಮಿಕ ಹಂತದಲ್ಲಿದಿರುವುರಿಂದ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಜಾಮೀನು ಅರ್ಜಿಯನ್ನು ವಜಾ ಮಾಡಲಾಗಿದೆ ಎಂಬ ಮಾಹಿತಿ ಇದೆ. ಸದ್ಯ ಹೈಕೋರ್ಟ್‌ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡುವುದಕ್ಕೆ ಈ ನಟಿಯರಿಗೆ ಅವಕಾಶ ಇದೆ. ಅವರ ಜೊತೆಗೆ ಉಳಿದ ಆರೋಪಿಗಳು ಜಾಮೀನಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ, ಅಲ್ಲಿವರೆಗೂ ಡ್ರಗ್ ಪ್ರಕರಣದ ಆರೋಪಿಗಳಿಗೆ ಪರಪ್ಪನ ಅಗ್ರಹಾರ ಜೈಲೇ ಗತಿಯಾಗಲಿದೆ.

ರಾಗಿಣಿ-ಸಂಜನಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ! ಇನ್ನೂ 3 ದಿನ ಪರಪ್ಪನ ಅಗ್ರಹಾರದಲ್ಲೇ ವಾಸ!

ಡ್ರಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊದಲು ನಟಿ ರಾಗಿಣಿ ಮನೆ ಮೇಲೆ ದಾಳಿ ಮಾಡಿ, ಅವರನ್ನು ವಿಚಾರಣೆ ಮಾಡಲಾಯಿತು. ನಂತರ ವಶಕ್ಕೆ ಪಡೆದು, ಮಹಿಳಾ ಸಾಂತ್ವನ ಕೇಂದ್ರದಲ್ಲಿರಿಸಲಾಗಿತ್ತು. ಆನಂತರ ಸೆ.14ರಂದು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿತ್ತು. ಅದೇ ರೀತಿ ನಟಿ ಸಂಜನಾ ಮನೆ ಮೇಲೆಯೂ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿ, ಸಂಜನಾರನ್ನು ವಶಕ್ಕೆ ಪಡೆದಿದ್ದರು. ಅವರನ್ನೂ ಸಹ ವಿಚಾರಣೆ ಮುಗಿಯುವರೆಗೂ ಮಹಿಳಾ ಸಾಂತ್ವನ ಕೇಂದ್ರದಲ್ಲಿರಿಸಿ, ಆನಂತರ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು.

ಸಂಜನಾ ಗಲ್ರಾನಿ ಮುಸ್ಲಿಂ ಧರ್ಮಕ್ಕೆ ಮತಾಂತರ? ಹೊಸ ಬಾಂಬ್‌ ಸಿಡಿಸಿದ ಪ್ರಶಾಂತ್‌ ಸಂಬರಗಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌