ಆ್ಯಪ್ನಗರ

ದರ್ಶನ್-ಉಮಾಪತಿ ಶ್ರೀನಿವಾಸ್ ಮಧ್ಯೆ ಗಲಾಟೆ ಆಗಿತ್ತಾ? 'ದಾಸ'ನ ಕಿವಿಗೆ ಬಿದ್ದ ಗಾಸಿಪ್ ಏನು?

ಫೇಕ್ ಲೋನ್ ಪ್ರಕರಣದಲ್ಲಿ ದರ್ಶನ್ ಅಭಿನಯದ 'ರಾಬರ್ಟ್' ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹೆಸರೂ ಕೇಳಿಬಂದಿದೆ. ಹೀಗಾಗಿ, ''ಉಮಾಪತಿ ಶ್ರೀನಿವಾಸ್ ಬಗ್ಗೆ ನನಗೆ ಯಾವ ಡೌಟ್ ಇಲ್ಲ'' ಎಂದು ಪ್ರೆಸ್‌ಮೀಟ್‌ನಲ್ಲಿ ನಟ ದರ್ಶನ್ ಸ್ಪಷ್ಟ ಪಡಿಸಿದ್ದಾರೆ.

Vijaya Karnataka Web 12 Jul 2021, 5:11 pm
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಿನಲ್ಲಿ 25 ಕೋಟಿ ರೂಪಾಯಿ ಸಾಲಕ್ಕೆ ಅರ್ಜಿ ಬಂದಿದೆ ಎಂಬ ಕಾರಣ ಕೊಟ್ಟು, ಬ್ಯಾಂಕ್ ಮ್ಯಾನೇಜರ್ ಎಂದು ಸುಳ್ಳು ಹೇಳಿಕೊಂಡು ಬಂದಿದ್ದ ಅರುಣಾ ಕುಮಾರಿ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಬಗ್ಗೆ ಇಂದು 'ದಾಸ' ದರ್ಶನ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ನಡೆದಿದ್ದೇನು ಎಂಬ ಅಸಲಿ ಕಥೆಯನ್ನು ದರ್ಶನ್ ಬಿಚ್ಚಿಟ್ಟಿದ್ದಾರೆ.
Vijaya Karnataka Web fraud and fake loan case kannada actor darshan speaks about umapathy srinivas
ದರ್ಶನ್-ಉಮಾಪತಿ ಶ್ರೀನಿವಾಸ್ ಮಧ್ಯೆ ಗಲಾಟೆ ಆಗಿತ್ತಾ? 'ದಾಸ'ನ ಕಿವಿಗೆ ಬಿದ್ದ ಗಾಸಿಪ್ ಏನು?


ಈ ಫೇಕ್ ಲೋನ್ ಪ್ರಕರಣದಲ್ಲಿ ದರ್ಶನ್ ಅಭಿನಯದ 'ರಾಬರ್ಟ್' ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹೆಸರೂ ಕೇಳಿಬಂದಿದೆ. ಹೀಗಾಗಿ, ''ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಬಗ್ಗೆ ನನಗೆ ಯಾವ ಡೌಟ್ ಇಲ್ಲ'' ಎಂದು ಪ್ರೆಸ್‌ಮೀಟ್‌ನಲ್ಲಿ ನಟ ದರ್ಶನ್ ಸ್ಪಷ್ಟ ಪಡಿಸಿದ್ದಾರೆ.

ಉಮಾಪತಿ ಶ್ರೀನಿವಾಸ್ ಹಾಗೂ ದರ್ಶನ್ ನಡುವೆ ಗಲಾಟೆ ಆಗಿದೆ ಎಂಬ ಗಾಸಿಪ್ ಇದೀಗ ಕೇಳಿಬರುತ್ತಿದೆ. ಜೊತೆಗೆ ಕೆಲ ಗುಸು ಗುಸು ಮಾತುಗಳೂ ದರ್ಶನ್ ಕಿವಿಗೆ ಬಿದ್ದಿದೆ. ಹಾಗಾದ್ರೆ, ಉಮಾಪತಿ ಶ್ರೀನಿವಾಸ್ ಹಾಗೂ ದರ್ಶನ್ ಮಧ್ಯೆ ಯಾವ ವಿಚಾರಕ್ಕೆ ಗಲಾಟೆ ಆಗಿತ್ತು? ದರ್ಶನ್ ಕಿವಿಗೆ ಬಿದ್ದ ಗಾಸಿಪ್ ಏನು? ಈ ಬಗ್ಗೆಯೂ ನಟ ದರ್ಶನ್ ಕ್ಲಾರಿಟಿ ನೀಡಿದ್ದಾರೆ.

ದರ್ಶನ್ ಕಿವಿಗೆ ಬಿದ್ದ ಗಾಸಿಪ್ ಏನು?

''ಪ್ರೆಸ್‌ಮೀಟ್‌ ವೇಳೆ ಉಮಾಪತಿ ಶ್ರೀನಿವಾಸ್ ಮೇಲೆ ಡೌಟ್ ಇದ್ಯಾ?'' ಎಂಬ ಪ್ರಶ್ನೆ ದರ್ಶನ್ ಬಳಿ ತೂರಿ ಬಂತು. ಆಗ, ''ಹಾಗೆ ಬ್ಲೇಮ್ ಮಾಡುವ ಹಾಗಿದ್ದರೆ ಯಾವಾಗ್ಲೋ ಮಾಡುತ್ತಿದ್ದೆ. ''ಉಮಾಪತಿ ಅವರೇ ಪ್ರೂವ್ ಮಾಡಿಕೊಳ್ಳಿ'' ಅಂತ ನಾನು ಹೇಳಿದ್ದೇನೆ. ''ನಿಮ್ಮ ಸ್ನೇಹ ಸಂಪಾದನೆ ಮಾಡೋಕೆ ಇಷ್ಟು ಕಷ್ಟ ಪಟ್ಟಿದ್ದೇನೆ'' ಅಂತ ಅವರು ನನಗೆ ಹೇಳಿದ್ದಾರೆ. ಸಿನಿಮಾ ಫ್ಲಾಪ್ ಆಗಿದ್ದರೆ ಏನೋ ದ್ವೇಷ ಇರಬಹುದು ಎಂದುಕೊಳ್ಳಬಹುದು. ಆದರೆ 'ರಾಬರ್ಟ್' ಹಿಟ್ ಆಗಿದೆ''

''ರಾಬರ್ಟ್ ಹಿಟ್ ಆಯ್ತು.. ಎಕ್ಸ್ಟ್ರಾ ದುಡ್ಡು ಕೊಡು'' ಅಂತ ಉಮಾಪತಿ ಶ್ರೀನಿವಾಸ್ ಬಳಿ ನಾನು ಕೇಳಿದೆ ಎಂಬ ಸುದ್ದಿಯೂ ಕೇಳಿಬರುತ್ತಿದೆ. ಬರೋ ದುಡ್ಡು ಬಂದರೆ.. ಅದೇ ದೊಡ್ಡದು ನಮಗೆ. ನಿರ್ಮಾಪಕ ದುಡ್ಡು ಮಾಡಿದ್ದಾರೆ ಅಂದ್ರೆ ಕೇಳೋಕೆ ಅದೇ ಖುಷಿ ನನಗೆ. ಅದೂ ಚಿತ್ರರಂಗದಲ್ಲಿ ಇಲ್ಲದಿರೋರ ಕಡೆಯಿಂದ ಈ ಗಾಳಿಸುದ್ದಿ ಬರುತ್ತಿದೆ'' ಅಂತ ಪ್ರೆಸ್‌ಮೀಟ್‌ನಲ್ಲಿ ದರ್ಶನ್ ಹೇಳಿದರು.

Fake Loan Case: ಪ್ರಕರಣದ ಅಸಲಿ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ದರ್ಶನ್!

ಉಮಾಪತಿಗೆ ಅರುಣಾ ಕುಮಾರಿ ಪರಿಚಯ ಆಗಿದ್ದು ಹೇಗೆ?

''ಉಮಾಪತಿ ಅಣ್ಣ ದೀಪಕ್. ಅವರ ಕಡೆಯಿಂದ ಉಮಾಪತಿಗೆ ಅರುಣಾ ಕುಮಾರಿ ಪರಿಚಯ ಆಗಿದೆ. ''ದರ್ಶನ್ ಅಂತ ಹೆಸರು ಬಂತಲ್ವಾ.. ಸ್ವಲ್ಪ ನೋಡು'' ಅಂತ ಹೇಳಿದರಂತೆ. ಅದಕ್ಕೆ ಕಳುಹಿಸಿದೆ ಅಂತಾರೆ ಉಮಾಪತಿ ಶ್ರೀನಿವಾಸ್'' ಎಂದರು ದರ್ಶನ್.

'ಡಿ ಬಾಸ್' ದರ್ಶನ್ ಹೆಸರಲ್ಲಿ ವಂಚನೆಗೆ ಯತ್ನ! ನಕಲಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಬಂಧನ!

ದರ್ಶನ್-ಉಮಾಪತಿ ಶ್ರೀನಿವಾಸ್ ಮಧ್ಯೆ ಗಲಾಟೆ ಆಗಿತ್ತಾ?

''ಸಿನಿಮಾದಲ್ಲಿ ನೂರೆಂಟು ಗಲಾಟೆ ಬರುತ್ತೆ. 'ಒಡೆಯ' ಚಿತ್ರದ ಆಡಿಯೋ ರೈಟ್ಸ್ ಸೇಲ್ ಆಗಿರಲಿಲ್ಲ. ಅಷ್ಟರಲ್ಲಿ 'ರಾಬರ್ಟ್' ಆಡಿಯೋ ರೈಟ್ಸ್ ಮಾರಿಬಿಟ್ಟಿದ್ದರು. 'ಒಡೆಯ' ಸೇಲ್ ಆಗುವ ಮೊದಲು ಅದ್ಹೇಗೆ 'ರಾಬರ್ಟ್' ಮಾರಿದ್ರಿ ಅಂತ ಗಲಾಟೆ ಆಯ್ತು. ಅಷ್ಟು ಬಿಟ್ಟರೆ ಇನ್ನೇನೂ ಇಲ್ಲ''

''ಹರ್ಷ, ರಾಕಿ ಮೇಲೆ ನನಗೆ ಏನೂ ಡೌಟ್ ಇಲ್ಲ. ಅದನ್ನೆಲ್ಲ ಅರುಣಾ ಕುಮಾರಿ ಕ್ಲಿಯರ್ ಮಾಡಿದ್ದಾರೆ. ಈಗ ಎಲ್ಲ ಉಮಾಪತಿ ಮೇಲೆ ಬಂದಿದೆ. ಉಮಾಪತಿ ಮೇಲೂ ನನಗೆ ಡೌಟ್ ಇಲ್ಲ. ಹಿಂದೆ ಬೇರೆ ಯಾರೋ ಇದ್ದಾರೆ. ನಿಜ ಗೊತ್ತಾದರೆ ಖಂಡಿತ ಕಾನೂನು ಮೊರೆ ಹೋಗುತ್ತೇನೆ'' ಅಂತ ದರ್ಶನ್ ತಿಳಿಸಿದರು.

ದರ್ಶನ್‌ಗೆ ಅರುಣಾ ಕುಮಾರಿ ಕಳುಹಿಸಿರುವ ವಾಯ್ಸ್‌ ನೋಟ್‌ನಲ್ಲಿ ಏನಿದೆ?

''ಯಾವ ರೀತಿಯೂ ನಿರೀಕ್ಷೆ, ಉದ್ದೇಶ ಇರಲಿಲ್ಲ. ಈ ತರಹ ಆಗಿದ್ದು ನಿಜ. ಅದನ್ನ ನಾನು ನಿಮ್ಮ ಗಮನಕ್ಕೆ ತರಬೇಕಿತ್ತು, ತೆಗೆದುಕೊಂಡು ಬಂದೆ ಅಷ್ಟೇ. ಆದರೆ, ಒಬ್ಬ ವ್ಯಕ್ತಿ ಅದನ್ನ ಹೇಳಿ ಈಗ ಅವರೇ ನನ್ನ ತಪ್ಪೇನೂ ಇಲ್ಲ ಅಂತ ಪ್ರೂವ್ ಮಾಡಿಕೊಂಡು ಬಿಟ್ಟರು. ನನಗೆ ಎರಡು ದಿನ ಟೈಮ್ ಕೊಡಿ. ಏನಾಗಿದೆ ಅಂತ ಬಂದು ನಾನು ನಿಮ್ಮ ಬಂದೆಯೇ ಒಪ್ಪಿಕೊಳ್ತೀನಿ'' ಅಂತ ಹೇಳಿ ದರ್ಶನ್‌ಗೆ ಅರುಣ್ ಕುಮಾರಿ ವಾಯ್ಸ್ ನೋಟ್ ಕಳುಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌