ಹದಿನಾಲ್ಕು ವರ್ಷಗಳ ಹಿಂದೆ 'ಗಾಳಿಪಟ' ಸಿನಿಮಾವನ್ನು ನಿರ್ದೇಶಕ ಯೋಗರಾಜ್ ಭಟ್ ಮತ್ತು 'ಗೋಲ್ಡನ್ ಸ್ಟಾರ್' ಗಣೇಶ್ ಮಾಡಿದ್ದರು. ಇದೀಗ ಅದೇ ಕಾಂಬಿನೇಷನ್ನಲ್ಲಿ 'ಗಾಳಿಪಟ 2' ಮಾಡಲಾಗಿದೆ. ಅಲ್ಲಿದ್ದ ದಿಗಂತ್, ಅನಂತ್ ನಾಗ್, ಪದ್ಮಜಾ ರಾವ್, ಸುಧಾ ಬೆಳವಾಡಿ, ರಂಗಾಯಣ ರಘು ಕೂಡ ಮುಂದುವರಿದಿದ್ದಾರೆ. ಈಚೆಗೆ ಚಿತ್ರದ ಮೊದಲ ಎಕ್ಸಾಂ ಹಾಡನ್ನು ಚಿತ್ರತಂಡ ರಿಲೀಸ್ ಮಾಡಿದೆ. ಈ ವೇಳೆ ಚಿತ್ರತಂಡ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿತು. 'ಅನಂತ್ ಸರ್ ಜೊತೆಗೆ ನಟಿಸುವುದೇ ಖುಷಿ'- ಗಣೇಶ್
'ಗಾಳಿಪಟ ಎಂದರೆ ನನಗೆ ಎಮೋಷನ್. ಯೋಗರಾಜ್ ಭಟ್ ಸರ್ ಕಥೆ ಹೇಳಿದಾಗ, ಸಾಕಷ್ಟು ಕುತೂಹಲ ಹುಟ್ಟಿತ್ತು. ಅನಂತ್ ನಾಗ್ ಸರ್ ಜೊತೆ ನಟಿಸುವುದೇ ಒಂದು ಖುಷಿ. ಕುದುರೆಮುಖದಲ್ಲಿ ಕಾಲೇಜು ಸೆಟ್ ಹಾಕಿ, ಸುಮಾರು 500ಕ್ಕೂ ಹೆಚ್ಚು ಜನರೊಂದಿಗೆ ನಟಿಸಿದ್ದು, ಈಗಲೂ ಮರೆಯುವ ಹಾಗಿಲ್ಲ. ರಂಗಾಯಣ ರಘು ಸರ್ ಅದರಲ್ಲೂ, ಇದರಲ್ಲೂ ನನಗೆ ಅಪ್ಪ. ಯೋಗರಾಜ್ ಭಟ್ ಅವರು ಈ ಬಾರಿ ವಿಭಿನ್ನವಾಗಿ ಸ್ಕ್ರಿಪ್ಟ್ ಮಾಡಿಕೊಂಡಿದ್ದು, ನನಗೆ ಒಂದೇ ಹೇಳಿದ್ರು. 'ಅದೇನು ಕಿತ್ತು ಗುಡ್ಡೆ ಹಾಕ್ತಿಯೋ ನೋಡ್ತಿನಿ..' ಅಂತ. ಒಂದು ಸಲ ಅಂತು ಶಾಟ್ನಲ್ಲಿ ಭಟ್ರು ಕಟ್ ಹೇಳ್ತಾನೇ ಇರಲಿಲ್ಲ. ಅವರ ಕಡೆ ನೋಡಿದ್ರೆ, ಮಾನಿಟರ್ ನೋಡ್ತಾ ಅವರು ಅಳ್ತಾ ಇದ್ರು' ಎಂದು ಗಣೇಶ್ ಹೇಳಿದರು.
ನಾನು & ಗಣೇಶ್ ಒಟ್ಟೊಟ್ಟಿಗೆ ಉದ್ಧಾರ ಆಗಿ, ಹಾಳಾಗಿದ್ದೀವಿ!
'ಇಡೀ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ 'ಗಾಳಿಪಟ 2' ಚೆನ್ನಾಗಿ ಮೂಡಿಬಂದಿದೆ. ನಾನು ಮತ್ತು ಗಣೇಶ್ ಒಟ್ಟೊಟ್ಟಿಗೆ ಉದ್ಧಾರ ಆಗಿ, ಒಟ್ಟೊಟ್ಟಿಗೆ ಹಾಳಾಗಿದ್ದೀವಿ. ಬಹಳ ಖುಷಿಯಾಗಿ ಕೆಲಸ ಮಾಡಿದ್ದೇವೆ. ಈ ಹಾಡಿನಲ್ಲಿ ಬುಲೆಟ್ ಪ್ರಕಾಶ್ ಕೂಡ ಇದ್ದಾರೆ. ಇದು ಅವರ ಕೊನೇ ಸಿನಿಮಾ. ನಾನೇ ಅವರಿಗೆ ಧ್ವನಿ ನೀಡಿದ್ದೇನೆ. ಅವರಿಗೆ ಈ ಹಾಡು ತುಂಬ ಇಷ್ಟವಾಗಿತ್ತು. ಇನ್ನೂ, ಈ ಸಿನಿಮಾ ಆಗೋದಕ್ಕೆ ಸುಧಾಮೂರ್ತಿ ಅವರು ಕಾರಣ. ಅವರು ನಮಗೆ ಗಾಡ್ ಮದರ್ ಇದ್ದಂಗೆ. ಈ ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮಾಡಿದ್ದಾರೆ. ಅವರು ಕೂಡ ತುಂಬ ಸಜ್ಜನಿಕೆಯ ವ್ಯಕ್ತಿ' ಎಂದು ಹೇಳಿದರು.
ಈ ಸಿನಿಮಾ ಆಗಲು ಸುಧಾಮೂರ್ತಿ ಅಮ್ಮ ಕಾರಣ
'ಗಾಳಿಪಟ 2 ಸಿನಿಮಾ ಆರಂಭವಾಗಿದ್ದೆ ಒಂದು ಸೋಜಿಗ. ನನಗೆ ಯೋಗರಾಜ್ ಭಟ್ ಅವರು ಪರಿಚಯವಿರಲಿಲ್ಲ. ನಾನು ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅಮ್ಮನ ಜೊತೆಗೆ ತಿರುಪತಿ ದರ್ಶನ ಮುಗಿಸಿ ಬರುತ್ತಿದ್ದೆ. ಆಗ ಸುಧಾ ಅಮ್ಮ ಅವರಿಗೆ ಯೋಗರಾಜ್ ಸರ್ ಫೋನ್ ಮಾಡಿದ್ದರು. ನಂತರ ಸುಧಾ ಅಮ್ಮ, 'ಯೋಗರಾಜ್ ಭಟ್ 'ಗಾಳಿಪಟ 2' ಚಿತ್ರದ ಕಥೆ ಸಿದ್ದಮಾಡಿಕೊಂಡಿದ್ದಾರೆ. ನೀವು ಸಾಧ್ಯವಾದರೆ ನಿರ್ಮಾಣ ಮಾಡಿ' ಎಂದು ನನಗೆ ಹೇಳಿದರು. ಅಮ್ಮನ ಮಾತಿಗೆ ಇಲ್ಲ ಅಂತ ನಾನು ಯಾವತ್ತೂ ಹೇಳಿಲ್ಲ. ಆನಂತರ 'ಗಾಳಿಪಟ 2' ಆರಂಭ ಆಯಿತು. ಚಿತ್ರರಂಗದಲ್ಲಿ ನಾನು ಈಗಾಗಲೇ ನಾಲ್ಕು ಪರೀಕ್ಷೆಯಲ್ಲಿ ಫೇಲ್ ಆಗಿದ್ದೀನಿ. ಐದನೇ ಪರೀಕ್ಷೆ ಬರೆದಿದ್ದೇನೆ. ನೀವೆಲ್ಲಾ ಸೇರಿ ಪಾಸ್ ಮಾಡಿಸಿ' ಎಂದರು ನಿರ್ಮಾಪಕ ರಮೇಶ್ ರೆಡ್ಡಿ.
'ಯೋಗರಾಜ್ ಭಟ್ ಅವರ ಈ ಕನಸು ನನಸಾಗಲು ಸುಧಾಮೂರ್ತಿ ಅವರು ಕಾರಣ. 'ಯೋಗರಾಜ್ ಭಟ್ ಅವರಿಗೆ ಸುಧಾಮೂರ್ತಿ ಗಾಡ್ ಮದರ್ ಅಂದರೆ ತಪ್ಪಾಗಲಾರದು. 'ಗಾಳಿಪಟ'ದಲ್ಲೂ ನಟಿಸಿದ್ದೆ. ಈಗ ಇದರಲ್ಲೂ ನಟಿಸಿದ್ದೇನೆ. ಇದು ಉತ್ತಮವಾದ ಚಿತ್ರ. ಇಡೀ ತಂಡಕ್ಕೆ ಒಳ್ಳೆಯದಾಗಲಿ' ಎಂದರು ಹಿರಿಯ ನಟ ಅನಂತನಾಗ್.
ಇನ್ನು, ಈ ಬಾರಿ ಈ ಚಿತ್ರತಂಡಕ್ಕೆ ನಿರ್ದೇಶಕ ಪವನ್ಕುಮಾರ್ ನಟರಾಗಿ ಸೇರ್ಪಡೆಗೊಂಡಿದ್ದಾರೆ. ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯಾ, ನಿಶ್ವಿಕಾ ನಾಯ್ಡು, ಸಂಯುಕ್ತಾ ಮೆನನ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
'ಗಾಳಿಪಟ ಎಂದರೆ ನನಗೆ ಎಮೋಷನ್. ಯೋಗರಾಜ್ ಭಟ್ ಸರ್ ಕಥೆ ಹೇಳಿದಾಗ, ಸಾಕಷ್ಟು ಕುತೂಹಲ ಹುಟ್ಟಿತ್ತು. ಅನಂತ್ ನಾಗ್ ಸರ್ ಜೊತೆ ನಟಿಸುವುದೇ ಒಂದು ಖುಷಿ. ಕುದುರೆಮುಖದಲ್ಲಿ ಕಾಲೇಜು ಸೆಟ್ ಹಾಕಿ, ಸುಮಾರು 500ಕ್ಕೂ ಹೆಚ್ಚು ಜನರೊಂದಿಗೆ ನಟಿಸಿದ್ದು, ಈಗಲೂ ಮರೆಯುವ ಹಾಗಿಲ್ಲ. ರಂಗಾಯಣ ರಘು ಸರ್ ಅದರಲ್ಲೂ, ಇದರಲ್ಲೂ ನನಗೆ ಅಪ್ಪ. ಯೋಗರಾಜ್ ಭಟ್ ಅವರು ಈ ಬಾರಿ ವಿಭಿನ್ನವಾಗಿ ಸ್ಕ್ರಿಪ್ಟ್ ಮಾಡಿಕೊಂಡಿದ್ದು, ನನಗೆ ಒಂದೇ ಹೇಳಿದ್ರು. 'ಅದೇನು ಕಿತ್ತು ಗುಡ್ಡೆ ಹಾಕ್ತಿಯೋ ನೋಡ್ತಿನಿ..' ಅಂತ. ಒಂದು ಸಲ ಅಂತು ಶಾಟ್ನಲ್ಲಿ ಭಟ್ರು ಕಟ್ ಹೇಳ್ತಾನೇ ಇರಲಿಲ್ಲ. ಅವರ ಕಡೆ ನೋಡಿದ್ರೆ, ಮಾನಿಟರ್ ನೋಡ್ತಾ ಅವರು ಅಳ್ತಾ ಇದ್ರು' ಎಂದು ಗಣೇಶ್ ಹೇಳಿದರು.
ನಾನು & ಗಣೇಶ್ ಒಟ್ಟೊಟ್ಟಿಗೆ ಉದ್ಧಾರ ಆಗಿ, ಹಾಳಾಗಿದ್ದೀವಿ!
'ಇಡೀ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ 'ಗಾಳಿಪಟ 2' ಚೆನ್ನಾಗಿ ಮೂಡಿಬಂದಿದೆ. ನಾನು ಮತ್ತು ಗಣೇಶ್ ಒಟ್ಟೊಟ್ಟಿಗೆ ಉದ್ಧಾರ ಆಗಿ, ಒಟ್ಟೊಟ್ಟಿಗೆ ಹಾಳಾಗಿದ್ದೀವಿ. ಬಹಳ ಖುಷಿಯಾಗಿ ಕೆಲಸ ಮಾಡಿದ್ದೇವೆ. ಈ ಹಾಡಿನಲ್ಲಿ ಬುಲೆಟ್ ಪ್ರಕಾಶ್ ಕೂಡ ಇದ್ದಾರೆ. ಇದು ಅವರ ಕೊನೇ ಸಿನಿಮಾ. ನಾನೇ ಅವರಿಗೆ ಧ್ವನಿ ನೀಡಿದ್ದೇನೆ. ಅವರಿಗೆ ಈ ಹಾಡು ತುಂಬ ಇಷ್ಟವಾಗಿತ್ತು. ಇನ್ನೂ, ಈ ಸಿನಿಮಾ ಆಗೋದಕ್ಕೆ ಸುಧಾಮೂರ್ತಿ ಅವರು ಕಾರಣ. ಅವರು ನಮಗೆ ಗಾಡ್ ಮದರ್ ಇದ್ದಂಗೆ. ಈ ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮಾಡಿದ್ದಾರೆ. ಅವರು ಕೂಡ ತುಂಬ ಸಜ್ಜನಿಕೆಯ ವ್ಯಕ್ತಿ' ಎಂದು ಹೇಳಿದರು.
ಈ ಸಿನಿಮಾ ಆಗಲು ಸುಧಾಮೂರ್ತಿ ಅಮ್ಮ ಕಾರಣ
'ಗಾಳಿಪಟ 2 ಸಿನಿಮಾ ಆರಂಭವಾಗಿದ್ದೆ ಒಂದು ಸೋಜಿಗ. ನನಗೆ ಯೋಗರಾಜ್ ಭಟ್ ಅವರು ಪರಿಚಯವಿರಲಿಲ್ಲ. ನಾನು ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅಮ್ಮನ ಜೊತೆಗೆ ತಿರುಪತಿ ದರ್ಶನ ಮುಗಿಸಿ ಬರುತ್ತಿದ್ದೆ. ಆಗ ಸುಧಾ ಅಮ್ಮ ಅವರಿಗೆ ಯೋಗರಾಜ್ ಸರ್ ಫೋನ್ ಮಾಡಿದ್ದರು. ನಂತರ ಸುಧಾ ಅಮ್ಮ, 'ಯೋಗರಾಜ್ ಭಟ್ 'ಗಾಳಿಪಟ 2' ಚಿತ್ರದ ಕಥೆ ಸಿದ್ದಮಾಡಿಕೊಂಡಿದ್ದಾರೆ. ನೀವು ಸಾಧ್ಯವಾದರೆ ನಿರ್ಮಾಣ ಮಾಡಿ' ಎಂದು ನನಗೆ ಹೇಳಿದರು. ಅಮ್ಮನ ಮಾತಿಗೆ ಇಲ್ಲ ಅಂತ ನಾನು ಯಾವತ್ತೂ ಹೇಳಿಲ್ಲ. ಆನಂತರ 'ಗಾಳಿಪಟ 2' ಆರಂಭ ಆಯಿತು. ಚಿತ್ರರಂಗದಲ್ಲಿ ನಾನು ಈಗಾಗಲೇ ನಾಲ್ಕು ಪರೀಕ್ಷೆಯಲ್ಲಿ ಫೇಲ್ ಆಗಿದ್ದೀನಿ. ಐದನೇ ಪರೀಕ್ಷೆ ಬರೆದಿದ್ದೇನೆ. ನೀವೆಲ್ಲಾ ಸೇರಿ ಪಾಸ್ ಮಾಡಿಸಿ' ಎಂದರು ನಿರ್ಮಾಪಕ ರಮೇಶ್ ರೆಡ್ಡಿ.
'ಯೋಗರಾಜ್ ಭಟ್ ಅವರ ಈ ಕನಸು ನನಸಾಗಲು ಸುಧಾಮೂರ್ತಿ ಅವರು ಕಾರಣ. 'ಯೋಗರಾಜ್ ಭಟ್ ಅವರಿಗೆ ಸುಧಾಮೂರ್ತಿ ಗಾಡ್ ಮದರ್ ಅಂದರೆ ತಪ್ಪಾಗಲಾರದು. 'ಗಾಳಿಪಟ'ದಲ್ಲೂ ನಟಿಸಿದ್ದೆ. ಈಗ ಇದರಲ್ಲೂ ನಟಿಸಿದ್ದೇನೆ. ಇದು ಉತ್ತಮವಾದ ಚಿತ್ರ. ಇಡೀ ತಂಡಕ್ಕೆ ಒಳ್ಳೆಯದಾಗಲಿ' ಎಂದರು ಹಿರಿಯ ನಟ ಅನಂತನಾಗ್.
ಇನ್ನು, ಈ ಬಾರಿ ಈ ಚಿತ್ರತಂಡಕ್ಕೆ ನಿರ್ದೇಶಕ ಪವನ್ಕುಮಾರ್ ನಟರಾಗಿ ಸೇರ್ಪಡೆಗೊಂಡಿದ್ದಾರೆ. ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯಾ, ನಿಶ್ವಿಕಾ ನಾಯ್ಡು, ಸಂಯುಕ್ತಾ ಮೆನನ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.