ಆ್ಯಪ್ನಗರ

ಮತ್ತೊಂದು 'ಚಮಕ್' ಕೊಡೋಕೆ ರೆಡಿಯಾದ ಗೋಲ್ಡನ್ ಸ್ಟಾರ್ ಗಣೇಶ್

ರಶ್ಮಿಕಾ ಮತ್ತು ನಾಯಕ ಗಣೇಶ್ ನಟನೆಯ 2017 ರಲ್ಲಿ ರಿಲೀಸ್ ಆಗಿದ್ದ ಕನ್ನಡ ಚಿತ್ರ 'ಚಮಕ್' ಟಾಲಿವುಡ್ ನಲ್ಲಿ 'ಗೀತಾ ಚಲೋ' ಎಂಬ ಟೈಟಲ್‌ ಮೂಲಕ ಬಿಡುಗಡೆಯಾಗಿತ್ತು. ಈಗ ಮತ್ತೆ ಗಣೇಶ್ ಚಮಕ್ ಕೊಡುವ ಬಗ್ಗೆ ಚರ್ಚೆ ನಡೆಯುತ್ತಿದೆ.

Vijaya Karnataka Web 10 Oct 2019, 12:35 pm
ಕಳೆದ ವರ್ಷ ತೆರೆ ಕಂಡ ಗೋಲ್ಡನ್ ಸ್ಟಾರ್ ಅಭಿನಯದ 'ಚಮಕ್' ಸಿನಿಮಾ ಹಿಟ್ ಆಗಿತ್ತು. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಫ್ಯಾಮಿಲಿ ಎಂಟರ್‌ಟೇನರ್ ಚಿತ್ರ ಇದಾಗಿತ್ತು. ಹೊಸ ಪ್ರೊಡಕ್ಷನ್‌ ಹೌಸ್‌ನಿಂದ ಈ ಸಿನಿಮಾ ತಯಾರಿಸಲು ನಿರ್ದೇಶಕ ಸಿಂಪಲ್‌ ಸುನಿ ಮತ್ತು ಗಣೇಶ್ ಯೋಚನೆ ಮಾಡಿದ್ದಾರಂತೆ.
Vijaya Karnataka Web chamak


'ಚಮಕ್' ಸಿನಿಮಾ ಒಂದು ವಿಭಿನ್ನ ಕಥಾಹಂದರವುಳ್ಳ ಸಿನಿಮಾ. ಪ್ರೀತಿ ಆಧಾರದ ಮೇಲೆ ಮದುವೆಯ ಮೊದಲು ಮತ್ತು ನಂತರದ ಜೀವನದಲ್ಲಿ ನಡೆಯುವ ಸಂಬಂಧಗಳ ತೊಳಲಾಟದ ಬಗ್ಗೆ ಇಲ್ಲಿ ಹೇಳಲಾಗಿತ್ತು. ಗಣೇಶ್ ಇಲ್ಲಿ ಡಾಕ್ಟರ್ ಪೋಷಾಕು ಧರಿಸಿದ್ದರು. ಬಾಕ್ಸ್‌ ಆಫೀಸ್‌ನಲ್ಲಿ ಒಂದು ಹಂತಕ್ಕೆ ಗಳಿಕೆ ಕಂಡಿತ್ತು. ಗಣೇಶ್ ಅವರ ಕೌಶಲ ಅರಿತು ಹಾಸ್ಯ ಮಿಶ್ರಿತ ಸಂಭಾಷಣೆಯ ಹೂರಣವನ್ನು ನಿರ್ದೇಶಕರು ಪ್ರೇಕ್ಷಕರಿಗೆ ಉಣಬಡಿಸಿದ್ದರು. ಈಗ ಸಿಂಪಲ್ ಸುನಿ ಹೊಸ ಕಥೆಯೊಂದನ್ನು ರೆಡಿ ಮಾಡಿದ್ದಾರಂತೆ.

ಆ್ಯಂಗ್ರಿ ಯಂಗ್‌ಮ್ಯಾನ್ ಆಗಿರುವ ಗೋಲ್ಡನ್ ಸ್ಟಾರ್ ಗಣೇಶ್ 'ಗೀತಾ' ಸಿನಿಮಾ ಬಗ್ಗೆ ಬಿಚ್ಚಿಟ್ಟ ಗುಟ್ಟೇನು?

ಈಗಾಗಲೇ ಗಣಿ ಜೊತೆಗೆ ಕೆಲ ಚರ್ಚೆಗಳು ನಡೆದಿವೆಂಯಂತೆ. ಈಗಾಗಲೇ ಮಾತುಕತೆ ಫೈನಲ್ ಹಂತಕ್ಕೆ ತಲುಪಿದೆ. ಇನ್ನು ಎಲ್ಲವೂ ಫೈನಲ್ ಆದಮೇಲೆ ನಿರ್ದೇಶಕರು ಮತ್ತು ಗಣೇಶ್ ಅಧಿಕೃತವಾಗಿ ಸಿನಿಮಾ ಬಗ್ಗೆ ಹೇಳಲಿದ್ದಾರೆ ಎನ್ನುತ್ತವೆ ಸಿನಿ ಮೂಲಗಳು. ಈಗ ಇವರಿಬ್ಬರಿಗಿರುವ ಕಮಿಟ್ಸ್‌ಮೆಂಟ್ ಮುಗಿದಮೇಲೆ ಈ ಸಿನಿಮಾ ಕಾರ್ಯ ಶುರುವಾಗಲಿದೆ.

ಎನ್‍ಎಂಕೆಆರ್‌ವಿ ಮಹಿಳಾ ಕಾಲೇಜು ಸುತ್ತ ಬೈಕಲ್ಲಿ ಸುತ್ತುತ್ತಿದ್ದ ಗೋಲ್ಡನ್ ಸ್ಟಾರ್ ಗಣೇಶ್!

ಸಿಂಪಲ್ ಸುನಿ 'ಅವತಾರ ಪುರುಷ' ಸಿನಿಮಾ ಕೆಲಸದಲ್ಲಿ ಬಿಜಿಯಿದ್ದಾರೆ. ಈ ಚಿತ್ರ ನಿರ್ಮಾಣವಾಗುತ್ತಿರುವುದು ಪುಷ್ಕರ್ ಮಲ್ಲಿಕಾರ್ಜುನಯ್ಯ ಬ್ಯಾನರ್ ಅಡಿಯಲ್ಲಿ. ಈ ಚಿತ್ರದಲ್ಲಿ ಶರಣ್ ಮತ್ತು ಆಶಿಕಾ ರಂಗನಾಥ್ ಇದ್ದಾರೆ. 80% ಚಿತ್ರೀಕರಣ ಈಗಾಗಲೇ ಮುಗಿದಿದೆ. ಗೋಲ್ಡನ್ ಸ್ಟಾರ್ ಸದ್ಯ 'ಗೀತಾ' ಸಿನಿಮಾ ಮೂಡ್‌ನಲ್ಲಿದ್ದಾರೆ. ತದನಂತರದಲ್ಲಿ ಯೋಗರಾಜ್ ಭಟ್ ಅವರ ಮುಂದಿನ ಸಿನಿಮಾ 'ಗಾಳಿಪಟ 2' ದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ನವೆಂಬರ್‌ನಲ್ಲಿ ಈ ಸಿನಿಮಾ ಶೂಟಿಂಗ್ ಆರಂಭವಾಗಲಿದೆ. ಈ ಹಿಂದೆ 'ಮುಂಗಾರುಮಳೆ' ಸಿನಿಮಾದಲ್ಲಿ ಇವರಿಬ್ಬರು ಒಂದಾಗಿದ್ದರು, ಇದು ಈ ಜೋಡಿಯ 4ನೇ ಸಿನಿಮಾ. 'ಮುಂಗಾರುಮಳೆ' ಸಿನಿಮಾದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದ ಈ ಕಾಂಬಿನೇಶನ್‌ನ್ನು ಮತ್ತೆ ನೋಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.

ನನ್ನ ಸಿನಿಮಾ ತಂಟೆಗೆ ಬರಬೇಡಿ, ಚೆನ್ನಾಗಿರಲ್ಲ; ಪರಭಾಷಾ ಸಿನಿಮಾಗಳಿಗೆ ಗೋಲ್ಡನ್ ಹುಡುಗ ಗಣೇಶ್ ವಾರ್ನಿಂಗ್ ಕೊಟ್ಟಿದ್ದೇಕೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌