ಆ್ಯಪ್ನಗರ

ಸೊಂಟ ದಪ್ಪ ಇದೆ ಅಂತ ಪಾಲಕರ ಅನುಮತಿಯಿಲ್ಲದೆ ಫ್ಯಾಟ್ ಸರ್ಜರಿಗೆ ಒಳಗಾಗಿ, ಕನ್ನಡ ನಟಿ ಚೇತನಾ ರಾಜ್ ವಿಧಿವಶ

'ಗೀತಾ', 'ದೊರೆಸಾನಿ' ಧಾರಾವಾಹಿಯಲ್ಲಿಯೂ ನಟಿಸಿದ್ದ, ಸಿನಿಮಾಗಳಲ್ಲಿಯೂ ನಟಿಸಿದ್ದ ಚೇತನಾ ರಾಜ್ ಅವರು ಫ್ಯಾಟ್ ಸರ್ಜರಿಗೆ ಒಳಗಾಗಿ ನಿಧನರಾಗಿದ್ದಾರೆ. ಮನೆಯಲ್ಲಿ ತಿಳಿಸದೆ ಚೇತನಾ ರಾಜ್ ಅವರು ಈ ಸರ್ಜರಿಗೆ ಒಳಗಾಗಿದ್ದರಂತೆ, ಚಿಕಿತ್ಸೆ ವೇಳೆ ಶ್ವಾಸಕೋಶದಲ್ಲಿ ನೀರು ಸಿಕ್ಕಿ ಚೇತನಾ ಕೊನೆಯುಸಿರೆಳೆದಿದ್ದಾರೆ.

Authored byಪದ್ಮಶ್ರೀ ಭಟ್ | Vijaya Karnataka Web 17 May 2022, 12:35 pm

ಹೈಲೈಟ್ಸ್‌:

  • ಫ್ಯಾಟ್ ಸರ್ಜರಿಗೆ ಒಳಗಾಗಿದ್ದ ನಟಿ ಚೇತನಾ ರಾಜ್ ನಿಧನ
  • ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶದ ಒಳಗೆ ನೀರು ತುಂಬಿತ್ತು
  • ಪಾಲಕರ ಅನುಮತಿ ಇಲ್ಲದೆ ಫ್ಯಾಟ್ ಸರ್ಜರಿಗೆ ಒಳಗಾಗಿದ್ದ ನಟಿ ಚೇತನಾ ರಾಜ್
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web chetana raj
ಬೆಂಗಳೂರು: ಪೋಷಕರ ಒಪ್ಪಿಗೆ ಇಲ್ಲದೆ ಫ್ಯಾಟ್ ಸರ್ಜರಿಗೆ ಒಳಗಾಗಿದ್ದ ನಟಿ ಚೇತನಾ ರಾಜ್ ( 22 ವರ್ಷ) ಅವರು ನಿಧನರಾಗಿದ್ದಾರೆ.
ಏನಾಗಿತ್ತು?
ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶದಲ್ಲಿ ನೀರು ತುಂಬಿತ್ತು ಎನ್ನಲಾಗಿದೆ. ವೈದ್ಯರು ಹೆಚ್ಚಿನ ಚಿಕಿತ್ಸೆ ನೀಡಲು ಪ್ರಯತ್ನಪಟ್ಟರೂ ಕೂಡ ಚೇತನಾರನ್ನು ಬದುಕಿಸಲು ಸಾಧ್ಯವಾಗಿಲ್ಲ. ಮೇ 16 ( ನಿನ್ನೆ ) ಫ್ಯಾಟ್ ಸರ್ಜರಿ ( Liposuction ) ನಡೆದಿತ್ತು. ಈ ವಿಚಾರ ಗೊತ್ತಾಗಿ ಪೋಷಕರು ಆಸ್ಪತ್ರೆಗೆ ಬಂದಿದ್ದರು. ಶಸ್ತ್ರಚಿಕಿತ್ಸೆ ವೇಳೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು ಚೇತನಾ ಸ್ಥಿತಿ ಗಂಭೀರವಾಗಿತ್ತು.

ಪಾಲಕರ ಆರೋಪ
ಮನೆಯಲ್ಲಿ ತಿಳಿಸದೆ ಚೇತನಾ ಫ್ಯಾಟ್ ಸರ್ಜರಿ ಮಾಡಿಕೊಂಡಿದ್ದಾರೆ. "ಯಾರೋ ಸೊಂಟ ದಪ್ಪ ಅಂತ ಹೇಳಿದರು ಅಂತ ಚೇತನಾ ಈ ಸರ್ಜರಿಗೆ ಒಳಗಾಗಿದ್ದಾರೆ. ನನ್ನ ಮಗಳು ಆರೋಗ್ಯವಾಗಿದ್ದಳು, ಫ್ಯಾಟ್ ತೆಗೆತೀನಿ ಅಂತ ಹೇಳಿ ಈ ರೀತಿ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ನನ್ನ ಮಗಳ ಜೊತೆ ಸ್ನೇಹಿತರಿದ್ದರು. ದೊಡ್ಡ ನಟಿಯಾಗಬೇಕು ಎಂದು ಮಗಳು ತುಂಬ ಕನಸು ಇಟ್ಟುಕೊಂಡಿದ್ದಳು. ಮುಂಜಾಗ್ರತೆ ಕ್ರಮ ಕೈಗೊಳ್ಳದೆ ಈ ರೀತಿ ಆಗಿದೆ. ನನ್ನ ಮಗಳಿಗೆ ಯಾವುದೇ ಕಾಯಿಲೆ ಇರಲಿಲ್ಲ. ದಪ್ಪ ಇದ್ದೀಯಾ ಅಂತ ಯಾರೋ ಹೇಳಿದರು ಅಂತ ಮಗಳು ಸರ್ಜರಿಗೆ ಒಳಗಾಗಿದ್ದಾಳೆ. ವೈದ್ಯರು ಮನೆಯ ಅನುಮತಿ ಇಲ್ಲದೆ ಸರ್ಜರಿ ಮಾಡಿದರು" ಎಂದು ಚೇತನಾ ತಂದೆ ವರದರಾಜ್ ರಾಜಾಜಿನಗರದ ಬಳಿ ಇರುವ ಶೆಟ್ಟಿ ಕಾಸ್ಮೆಟಿಕ್ ಕ್ಲಿನಿಕ್ ವಿರುದ್ಧ ಆರೋಪ ಮಾಡಿದ್ದಾರೆ. ತಾಯಿ ಮುನಿಲಕ್ಷ್ಮೀ ಆಕ್ರಂದನ ಮುಗಿಲುಮುಟ್ಟಿದೆ.

ತೂಕ ಇಳಿಸಿಕೊಳ್ಳುತ್ತಿರುವ ಗೀತಾ ಭಾರತಿ ಭಟ್

ಆಸ್ಪತ್ರೆಯಲ್ಲಿ ಅಗತ್ಯ ಸಲಕರಣೆಗಳಿಲ್ಲ, ಪೋಷಕರ ಒಪ್ಪಿಗೆ ಇಲ್ಲದೆ ಫ್ಯಾಟ್ ಸರ್ಜರಿ ಮಾಡಿದರು ಎಂದು ಅಪ್ಪ ವರದರಾಜ್ ಆರೋಪ ಮಾಡಿದ್ದಾರೆ. ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ವೈದ್ಯರ ವಿರುದ್ಧ ಪೊಲೀಸರಿಗೆ ದೂರು ನೀಡಲು ಪೋಷಕರು ನಿರ್ಧರಿಸಿದ್ದಾರೆ.

ಧಾರಾವಾಹಿ, ಸಿನಿಮಾಗಳಲ್ಲಿ ನಟನೆ
'ಗೀತಾ', 'ದೊರೆಸಾನಿ' ಧಾರಾವಾಹಿಯಲ್ಲಿ ಚೇತನಾ ರಾಜ್ ನಟಿಸಿದ್ದರು. ಇನ್ನೂ ಬಿಡುಗಡೆಯಾಗದ 'ಆವಾಮಯಾಮಿ' ಸಿನಿಮಾದಲ್ಲಿಯೂ ಚೇತನಾ ಬಣ್ಣ ಹಚ್ಚಿದ್ದರು.

Nannamma Super Star: ನನ್ನ ಸಮನ್ವಿ ಮತ್ತೆ ಬಂದರೆ ಎಲ್ಲವೂ ಫ್ರೆಶ್‌ ಆಗಿರುತ್ತದೆ: 'ನನ್ನಮ್ಮ ಸೂಪರ್ ಸ್ಟಾರ್' ಸ್ಪರ್ಧಿ ಅಮೃತಾ ನಾಯ್ಡು
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌