ಆ್ಯಪ್ನಗರ

ರಾಮ & ಆಂಜನೇಯನ ಅವತಾರದಲ್ಲಿ ದರ್ಶನ್‌-ಸುದೀಪ್‌! ಈಡೇರಿತು ಅಭಿಮಾನಿಗಳ ಕೋರಿಕೆ

ಒಂದು ಕಾಲದಲ್ಲಿ ಆಪ್ತ ಸ್ನೇಹಿತರಾಗಿದ್ದ ದರ್ಶನ್‌ ಮತ್ತು ಸುದೀಪ್‌ ನಂತರ ಪರಸ್ಪರ ದೂರಾದರು. ಮತ್ತೆ ಅವರನ್ನು ಒಂದಾಗಿ ನೋಡಬೇಕು ಎಂಬುದು ಅನೇಕರ ಬಯಕೆ. ಅಂಥ ಬಯಕೆ ಇಟ್ಟುಕೊಂಡಿರುವ ಎಲ್ಲರಿಗೂ ಈಗ ವೈರಲ್‌ ಆಗಿರುವ ಈ ಚಿತ್ರ ಖುಷಿ ಕೊಡುತ್ತಿದೆ.

Vijaya Karnataka Web 10 Dec 2020, 10:10 pm
ಸ್ಯಾಂಡಲ್‌ವುಡ್‌ನ ಟಾಪ್‌ ನಟರಾದ ದರ್ಶನ್‌ ಮತ್ತು ಕಿಚ್ಚ ಸುದೀಪ್‌ ಅವರನ್ನು ಜೊತೆಯಾಗಿ ನೋಡಬೇಕು ಎಂಬುದು ಅಪಾರ ಸಂಖ್ಯೆಯ ಅಭಿಮಾನಿಗಳ ಆಸೆ. ಅದಕ್ಕೆ ನೀರೆರೆಯುವಂತಹ ಚಿತ್ರವೊಂದು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ. ರಾಮ ಮತ್ತು ಆಂಜನೇಯನ ಗೆಟಪ್‌ನಲ್ಲಿ ದರ್ಶನ್‌ ಮತ್ತು ಸುದೀಪ್‌ ಕಾಣಿಸಿಕೊಂಡಿದ್ದಾರೆ!
Vijaya Karnataka Web ಕರಣ್‌ ಆಚಾರ್ಯ ಸುದೀಪ್‌ ದರ್ಶನ್‌


ಕಲಾವಿದನ ಕಲ್ಪನೆಯಲ್ಲಿ ಕಿಚ್ಚ-ದಚ್ಚು
ಅಂದಹಾಗೆ, ದರ್ಶನ್‌ ಮತ್ತು ಸುದೀಪ್‌ ಹೀಗೆ ರಾಮ-ಆಂಜನೇಯ ರೀತಿ ಪೋಸ್‌ ನೀಡಿರುವುದು ಯಾವುದೇ ಸಿನಿಮಾ ಸಲುವಾಗಿ ಅಲ್ಲ. ಈ ರೀತಿ ಚಿತ್ರಪಟ ಸಿದ್ಧವಾಗಿರುವುದು ಕಲಾವಿದ ಕರಣ್‌ ಆಚಾರ್ಯ ಅವರ ಕಲ್ಪನೆಯಲ್ಲಿ. ಬಿಲ್ಲು, ಬತ್ತಳಿಕೆಯೊಂದಿಗೆ ರಾಮನಾಗಿ ದರ್ಶನ್‌ ಕಾಣಿಸಿಕೊಂಡರೆ, ಕೈಯಲ್ಲಿ ಗದೆ ಹಿಡಿದ ಸುದೀಪ್‌ ಆಂಜನೇಯನ ಅವತಾರ ತಾಳಿದ್ದಾರೆ. ಈ ರೀತಿಯಲ್ಲಿ ಚಿತ್ರ ರಚಿಸಿದ್ದಾರೆ ಕರಣ್‌ ಆಚಾರ್ಯ!

ಅಭಿಮಾನಿಯ ಕೋರಿಕೆಗಾಗಿ ಸಿದ್ಧವಾದ ಚಿತ್ರ
ಈ ರೀತಿ ಚಿತ್ರಗಳನ್ನು ರಚಿಸುವ ಮೂಲಕ ಕಲಾವಿದ ಕರಣ್‌ ಆಚಾರ್ಯ ಸಿಕ್ಕಾಪಟ್ಟೆ ಫೇಮಸ್‌ ಆಗಿದ್ದಾರೆ. ನೆಟ್ಟಿಗರ ಮನವಿ ಮೇರೆಗೆ ಅವರು ಅನೇಕ ಕಲಾಕೃತಿ ತಯಾರಿಸಿದ್ದಾರೆ. ರಿಯಲ್‌ ಫೋಟೋಗಳಿಗೆ ಕಲ್ಪನೆಯ ಸ್ಪರ್ಶ ನೀಡಿ, ಅವುಗಳನ್ನು ಬೇರೆಯದೇ ರೀತಿಯಲ್ಲಿ ಕಾಣುವಂತೆ ಮಾಡುತ್ತಾರೆ ಕರಣ್‌. ದರ್ಶನ್‌-ಸುದೀಪ್‌ ಫೋಟೋವನ್ನು ಕೂಡ ಹನುಮಾನ್‌ ಮತ್ತು ರಾಮನ ರೀತಿ ಮಾಡಿ ಎಂದು ಅಭಿಮಾನಿಯೊಬ್ಬರು ಮನವಿ ಮಾಡಿದ್ದರು. ಅದಕ್ಕಾಗಿ ಈ ಚಿತ್ರ ರಚಿಸಿದ್ದಾರೆ ಕರಣ್‌.

also read: ಕಲಾವಿದ ಕರಣ್‌ ಆಚಾರ್ಯ ಕಲ್ಪನೆಯಲ್ಲಿ ಅರಳಿದ ಮೇಘನಾ ರಾಜ್‌-ಚಿರಂಜೀವಿ ಸರ್ಜಾ ಚಿತ್ರ!

ದರ್ಶನ್‌-ಸುದೀಪ್‌ ಸ್ನೇಹ
ಒಂದು ಕಾಲದಲ್ಲಿ ದರ್ಶನ್‌ ಮತ್ತು ಸುದೀಪ್‌ ಆಪ್ತ ಸ್ನೇಹಿತರಾಗಿದ್ದರು. ಅನೇಕ ವೇದಿಕೆಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ಕನ್ನಡ ಚಿತ್ರರಂಗದಲ್ಲಿ ಅವರ ಸ್ನೇಹ ಎಲ್ಲರ ಗಮನ ಸೆಳೆಯುವಂತಿತ್ತು. ಆದರೆ ನಂತರದ ದಿನಗಳಲ್ಲಿ ವೈಮನಸ್ಸು ಮೂಡಿತು. 'ನಾನು ಮತ್ತು ಸುದೀಪ್‌ ಇನ್ಮುಂದೆ ಸ್ನೇಹಿತರಲ್ಲ. ಕನ್ನಡ ಚಿತ್ರರಂಗಕ್ಕಾಗಿ ಕೆಲಸ ಮಾಡುವ ನಟರು ಮಾತ್ರ. ಯಾವುದೇ ಊಹಾಪೋಹ ಬೇಡ. ಇದು ಅದರ ಅಂತ್ಯ' ಎಂದು 2017ರ ಮಾರ್ಚ್‌ 5ರಂದು ದರ್ಶನ್‌ ಟ್ವೀಟ್‌ ಮಾಡಿದ್ದರು. ಮತ್ತೆ ಈ ನಟರು ಒಂದಾಗಲಿ ಎಂದು ಸಿನಿಪ್ರಿಯರು ಬಯಸುತ್ತಿರುವುದಂತೂ ನಿಜ.

also read: 'ಡಿ ಬಾಸ್‌' ದರ್ಶನ್‌ಗೆ ಪ್ರಾಣ ಸ್ನೇಹಿತರು ಯಾರು? ಈ ಹಾಡು ನೋಡಿದರೆ ಸಿಗುತ್ತದೆ ಉತ್ತರ!



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌