ಇತ್ತೀಚೆಗಷ್ಟೇ ಹರಿಹರದಲ್ಲಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಹರ ಜಾತ್ರಾ ಮಹೋತ್ಸವ ನಡೆದಿದೆ. ಈ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ಕುಮಾರ್, ಬಿ ಎಸ್ ಯಡಿಯೂರಪ್ಪ, ಮುನಿರತ್ನ, ಬಿಗ್ ಬಾಸ್ ಶಶಿ ಮುಂತಾದವರು ಭಾಗವಹಿಸಿದ್ದರು. ಪುನೀತ್ ರಾಜ್ಕುಮಾರ್ ಅವರು ಜನರನ್ನು ಉದ್ದೇಶಿಸಿ ಮಾತನಾಡಿದ್ದಲ್ಲದೆ, ಹಾಡು ಕೂಡ ಹಾಡಿದ್ದರು. ಹರಿಹರದ ಪಂಚಮಸಾಲಿ ಜಗದ್ಗುರು ಶ್ವಾಸ ಗುರು ಅವರು ಪುನೀತ್ ರಾಜ್ಕುಮಾರ್ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.
"ಕೆಲವರು ಎಷ್ಟೇ ಎತ್ತರಕ್ಕೆ ಏರಿದರೂ ಕಾಲು ನೆಲದ ಮೇಲೇ ಇರುತ್ತದೆ. ಹಾಗೇ ಇರಬೇಕು ಕೂಡ. ಅದು ದೊಡ್ಡವರ ಅತಿ ದೊಡ್ಡ ಗುಣ. ಹಾಗಿರುವವರು ಶ್ರೀ ಪುನೀತ್ ರಾಜಕುಮಾರ್ ಅವರು. ಸರಳತೆ ಸಜ್ಜನತೆ ಅಪಾರ ಪ್ರೀತಿ ಅವರನ್ನು ಬಹಳ ಎತ್ತರಕ್ಕೆ ತೆಗೆದುಕೊಂಡು ಹೋಗಿ ನಿಲ್ಲಿಸಿದೆ. ಇದೇ ಆಶಯ ವಿಶ್ವಗುರು ಬಸವಣ್ಣನವರದ್ದೂ ಆಗಿತ್ತು" ಎಂದು ಹರಿಹರದ ಪಂಚಮಸಾಲಿ ಜಗದ್ಗುರು ಶ್ವಾಸ ಗುರು ಹೇಳಿದ್ದಾರೆ.
"ಮೇಲಾಗಲೊಲ್ಲೆನು ಕೀಳಾಗಲಲ್ಲದೆ, ಕೀಳಿಂಗಲ್ಲದೆ ಹಯನು ಕರೆವುದೆ ಮೇಲಾಗಿ ನರಕದಲೋಲಾಡಲಾರೆನು. ನಿಮ್ಮ ಶರಣರ ಪಾದಕ್ಕೆ ಕೀಳಾಗಿರಿಸು, ಮಹಾದಾನಿ ಕೂಡಲಸಂಗಮದೇವಾ. ಹರಜಾತ್ರಾ ಮಹೋತ್ಸವಕ್ಕೆ ಬಂದಾಗ ಅವರ ಸರಳತೆ ಕಂಡು ನಾವು ವಿಸ್ಮಿತರಾದೆವು. ಅವರಿಗಿರುವ ಅಭಿಮಾನಿ ಸಮೂಹ ಬಹಳ ದೊಡ್ಡದಿದೆ. ಹೇಳಬೇಕೆಂದರೆ ಡಾ. ರಾಜ್ ಕುಮಾರ್ ಅವರನ್ನೇ ಹೋಲುತ್ತಿದೆ ಪುನೀತ್ ಅವರ ವ್ಯಕ್ತಿತ್ವ" ಎಂದು ಶ್ವಾಸ ಗುರು ಹೇಳಿದ್ದಾರೆ.
Also Read-ರಿಯಲ್ ಖುಷಿ ಕಂಡುಕೊಂಡ ದರ್ಶನ್, ಸುದೀಪ್, ಪುನೀತ್ ರಾಜ್ಕುಮಾರ್!
"ನೀವು ನಮ್ಮ ಹರಜಾತ್ರಾ ಮಹೋತ್ಸವಕ್ಕೆ ಬಂದಿದ್ದು ನಮಗೆ ಅತೀವ ಖುಷಿ ನೀಡಿತು. ಘನತೆ ಹೆಚ್ಚಿಸಿತು. ಈ ಬಾಂಧವ್ಯ ಎಂದೆಂದಿಗೂ ಮುಂದುವರಿಯುತ್ತದೆ. ಶ್ರೀ ಪುನೀತ್ ರಾಜಕುಮಾರ್ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಒಳಿತಾಗಲಿ ಎಂದು ನಾವು ಹರಿಹರಾದಿ ಶರಣರಲ್ಲಿ ಪ್ರಾರ್ಥಿಸುತ್ತೇವೆ" ಎಂದು ಶ್ವಾಸ ಗುರು ಹೇಳಿದ್ದಾರೆ.
ಯುವರತ್ನ ಸಮಾವೇಶದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ ಹಾಗೂ ಕ್ರಿಯಾಶೀಲ ಶಾಸಕರಾದ ಮುನಿರತ್ನರವರಿಗೆ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರಿಂದ ಗೌರವ ಸಮ್ಮಾನ ಕೂಡ ಮಾಡಲಾಗಿದೆ.
Also Read-ಕನ್ನಡದ ಕೋಟ್ಯಧಿಪತಿಯಿಂದ ಹೊನ್ನಾವರದ ಸ್ಪರ್ಧಿಗೆ ಮೋಸವೆಂಬ ಆರೋಪ; ಸ್ಪಷ್ಟನೆ ನೀಡಿದ ವಾಹಿನಿ!
"ಕೆಲವರು ಎಷ್ಟೇ ಎತ್ತರಕ್ಕೆ ಏರಿದರೂ ಕಾಲು ನೆಲದ ಮೇಲೇ ಇರುತ್ತದೆ. ಹಾಗೇ ಇರಬೇಕು ಕೂಡ. ಅದು ದೊಡ್ಡವರ ಅತಿ ದೊಡ್ಡ ಗುಣ. ಹಾಗಿರುವವರು ಶ್ರೀ ಪುನೀತ್ ರಾಜಕುಮಾರ್ ಅವರು. ಸರಳತೆ ಸಜ್ಜನತೆ ಅಪಾರ ಪ್ರೀತಿ ಅವರನ್ನು ಬಹಳ ಎತ್ತರಕ್ಕೆ ತೆಗೆದುಕೊಂಡು ಹೋಗಿ ನಿಲ್ಲಿಸಿದೆ. ಇದೇ ಆಶಯ ವಿಶ್ವಗುರು ಬಸವಣ್ಣನವರದ್ದೂ ಆಗಿತ್ತು" ಎಂದು ಹರಿಹರದ ಪಂಚಮಸಾಲಿ ಜಗದ್ಗುರು ಶ್ವಾಸ ಗುರು ಹೇಳಿದ್ದಾರೆ.
"ಮೇಲಾಗಲೊಲ್ಲೆನು ಕೀಳಾಗಲಲ್ಲದೆ, ಕೀಳಿಂಗಲ್ಲದೆ ಹಯನು ಕರೆವುದೆ ಮೇಲಾಗಿ ನರಕದಲೋಲಾಡಲಾರೆನು. ನಿಮ್ಮ ಶರಣರ ಪಾದಕ್ಕೆ ಕೀಳಾಗಿರಿಸು, ಮಹಾದಾನಿ ಕೂಡಲಸಂಗಮದೇವಾ. ಹರಜಾತ್ರಾ ಮಹೋತ್ಸವಕ್ಕೆ ಬಂದಾಗ ಅವರ ಸರಳತೆ ಕಂಡು ನಾವು ವಿಸ್ಮಿತರಾದೆವು. ಅವರಿಗಿರುವ ಅಭಿಮಾನಿ ಸಮೂಹ ಬಹಳ ದೊಡ್ಡದಿದೆ. ಹೇಳಬೇಕೆಂದರೆ ಡಾ. ರಾಜ್ ಕುಮಾರ್ ಅವರನ್ನೇ ಹೋಲುತ್ತಿದೆ ಪುನೀತ್ ಅವರ ವ್ಯಕ್ತಿತ್ವ" ಎಂದು ಶ್ವಾಸ ಗುರು ಹೇಳಿದ್ದಾರೆ.
Also Read-ರಿಯಲ್ ಖುಷಿ ಕಂಡುಕೊಂಡ ದರ್ಶನ್, ಸುದೀಪ್, ಪುನೀತ್ ರಾಜ್ಕುಮಾರ್!
"ನೀವು ನಮ್ಮ ಹರಜಾತ್ರಾ ಮಹೋತ್ಸವಕ್ಕೆ ಬಂದಿದ್ದು ನಮಗೆ ಅತೀವ ಖುಷಿ ನೀಡಿತು. ಘನತೆ ಹೆಚ್ಚಿಸಿತು. ಈ ಬಾಂಧವ್ಯ ಎಂದೆಂದಿಗೂ ಮುಂದುವರಿಯುತ್ತದೆ. ಶ್ರೀ ಪುನೀತ್ ರಾಜಕುಮಾರ್ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಒಳಿತಾಗಲಿ ಎಂದು ನಾವು ಹರಿಹರಾದಿ ಶರಣರಲ್ಲಿ ಪ್ರಾರ್ಥಿಸುತ್ತೇವೆ" ಎಂದು ಶ್ವಾಸ ಗುರು ಹೇಳಿದ್ದಾರೆ.
ಯುವರತ್ನ ಸಮಾವೇಶದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ ಹಾಗೂ ಕ್ರಿಯಾಶೀಲ ಶಾಸಕರಾದ ಮುನಿರತ್ನರವರಿಗೆ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರಿಂದ ಗೌರವ ಸಮ್ಮಾನ ಕೂಡ ಮಾಡಲಾಗಿದೆ.
Also Read-ಕನ್ನಡದ ಕೋಟ್ಯಧಿಪತಿಯಿಂದ ಹೊನ್ನಾವರದ ಸ್ಪರ್ಧಿಗೆ ಮೋಸವೆಂಬ ಆರೋಪ; ಸ್ಪಷ್ಟನೆ ನೀಡಿದ ವಾಹಿನಿ!
https://developers.facebook.com/docs/plugins/embedded-posts/?prefill_href=https%3A%2F%2Fwww.facebook.com%2Fshwaasayoga%2Fposts%2F235301538046185&__cft__[0]=AZWNkbTlwGFw-bevSMgGHveIwyblAsqN3sBrXg__SmvC_COjmJ2dXLOA-14qHPc7UbCAZvRVwvmGh-Fz6bXdKTtYh15bRMfNB8U2GCJ-KR4c6XCkgXYZD4HLH83jf5hlqNM4hxvCqjfBG9ATeZwSz7aI&__tn__=p%2CP-R#code-generator