ಆ್ಯಪ್ನಗರ

Hariprriya: 'ನೀರ್‌ದೋಸೆ' ನಿರ್ದೇಶಕರ ಹೊಸ ಸಿನಿಮಾಕ್ಕೆ ಹರಿಪ್ರಿಯಾ ನಾಯಕಿ!

ಹರಿಪ್ರಿಯಾ ನಟನೆಯ 'ಅಮೃತಾಮತಿ' ರಿಲೀಸ್‌ಗೆ ಸಿದ್ಧವಿದೆ. ಅದರ ಜೊತೆಗೆ ಅವರು ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದೀಗ ಅವರು ಮತ್ತೊಮ್ಮೆ 'ನೀರ್‌ದೋಸೆ' ನಿರ್ದೇಶಕರ ಸಿನಿಮಾದಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

Vijaya Karnataka Web 19 Oct 2020, 2:47 pm
ನಟಿ ಹರಿಪ್ರಿಯಾ ಈಗ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಸತತ ಏಳು ತಿಂಗಳ ನಂತರ ಸಿನಿಮಾ ಕಲಸಗಳಿಗೆ ಪೂರ್ಣಪ್ರಮಾಣವಾಗಿ ಚಾಲನೆ ಸಿಕ್ಕಿದೆ. ಈ ಬ್ರೇಕ್‌ ನಂತರ ಹರಿಪ್ರಿಯಾ ಕೂಡ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಈಚೆಗೆ ಅವರು 'ಎವರು' ರಿಮೇಕ್‌ಗೆ ಚಾಲನೆ ನೀಡಿದ್ದರು. ಈಗ 'ನೀರ್‌ದೋಸೆ' ನಿರ್ದೇಶಕ ವಿಜಯ ಪ್ರಸಾದ್‌ ಅವರ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಮೈಸೂರಿನಲ್ಲಿ ಶೂಟಿಂಗ್ ಕೂಡ ಶುರುವಾಗಿದೆ.
Vijaya Karnataka Web ಸತೀಶ್ ನೀನಾಸಂ


ಪೆಟ್ರೋಮ್ಯಾಕ್ಸ್‌ಗೆ ಹರಿಪ್ರಿಯಾ ನಾಯಕಿ
ಕೆಲ ದಿನಗಳ ಹಿಂದೆ ನಟ ಸತೀಶ್ ನೀನಾಸಂ ಮತ್ತು ನಿರ್ದೇಶಕ ವಿಜಯ್ ಪ್ರಸಾದ್‌ ಕಾಂಬಿನೇಷನ್‌ನಲ್ಲಿ 'ಪೆಟ್ರೋಮ್ಯಾಕ್ಸ್' ಸಿನಿಮಾ ಸೆಟ್ಟೇರಿತ್ತು. ಆರಂಭದಲ್ಲಿ ಈ ಸಿನಿಮಾಕ್ಕೆ ಅದಿತಿ ಪ್ರಭುದೇವ ನಾಯಕಿ ಎಂಬ ವದಂತಿ ಕೇಳಿಬಂತು. ಆದರೆ, ಚಿತ್ರತಂಡ ಅದನ್ನು ನಿರಾಕರಿಸಿತ್ತು. ಇದೀಗ ಅಧಿಕೃತವಾಗಿ ಹರಿಪ್ರಿಯಾ ನಾಯಕಿ ಎಂದು ಚಿತ್ರತಂಡ ಘೋಷಣೆ ಮಾಡಿದೆ. ಮೈಸೂರಿನಲ್ಲಿ ಇಂದು (ಅ.19) ಮುಹೂರ್ತ ನೆರವೇರಿದ್ದು, ಶೂಟಿಂಗ್ ಕೂಡ ಶುರುವಾಗಿದೆ.

'ನೀರ್‌ದೋಸೆ'ಯಲ್ಲಿ ಮಿಂಚಿದ್ದ ಹರಿಪ್ರಿಯಾ
2016ರಲ್ಲಿ ತೆರೆಕಂಡಿದ್ದ 'ನೀರ್‌ದೋಸೆ'ಯಲ್ಲಿ ಹರಿಪ್ರಿಯಾ ಕುಮುದಾ ಅನ್ನೋ ಪಾತ್ರ ಮಾಡಿದ್ದರು. ಕೊಂಚ ಬೋಲ್ಡ್ ಆಗಿಯೇ ಇದ್ದ ಈ ಪಾತ್ರವನ್ನು ಪ್ರೇಕ್ಷಕರು ಸಖತ್ ಮೆಚ್ಚಿಕೊಂಡಿದ್ದರು. ಜಗ್ಗೇಶ್, ದತ್ತಣ್ಣ, ಹರಿಪ್ರಿಯಾ, ಸುಮನ್‌ ರಂಗನಾಥ್ ಪಾತ್ರಗಳು ನೋಡುಗರನ್ನು ನಗೆಗಡಲಲ್ಲಿ ತೇಲಿಸಿದ್ದವು. ಸಿನಿಮಾ ಕೂಡ ದೊಡ್ಡ ಹಿಟ್ ಆಗಿತ್ತು. ಇದೀಗ ಮತ್ತೊಮ್ಮೆ 'ನೀರ್‌ದೋಸೆ' ನಿರ್ದೇಶಕರ ಸಿನಿಮಾದಲ್ಲಿ ಹರಿಪ್ರಿಯಾ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಅವರ ಪಾತ್ರ ಹೇಗಿರಲಿದೆಯೋ ಎಂಬ ಕುತೂಹಲ ಸಿನಿಪ್ರಿಯರದ್ದು.

'ನೀರ್‌ದೋಸೆ' ನಿರ್ದೇಶಕ ವಿಜಯ್ ಪ್ರಸಾದ್‌ ಜೊತೆ ಸತೀಶ್ ನೀನಾಸಂ ಹೊಸ ಸಿನಿಮಾ!

ಒಂದೇ ದಿನ ಎರಡು ಸಿನಿಮಾ ಮುಹೂರ್ತ
ಇನ್ನು, 'ಪೆಟ್ರೋಮ್ಯಾಕ್ಸ್' ಹೀರೋ ಸತೀಶ್‌ಗೆ ಇವತ್ತು ಡಬಲ್ ಸಂಭ್ರಮ. ಯಾಕೆಂದರೆ, ಮೈಸೂರಿನಲ್ಲಿ ಅವರ 'ಪೆಟ್ರೋಮ್ಯಾಕ್ಸ್' ಸಿನಿಮಾದ ಮುಹೂರ್ತ ನೆರವೇರಿದೆ. ಜೊತೆಗೆ ಶೂಟಿಂಗ್ ಕೂಡ ಶುರುವಾಗಿದೆ. ಇತ್ತ ಬೆಂಗಳೂರಿನಲ್ಲಿ ಸತೀಶ್‌ ಅವರ ಮತ್ತೊಂದು ಸಿನಿಮಾ 'ಮ್ಯಾಟ್ನಿ'ಗೂ ಮುಹೂರ್ತ ನೆರವೇರಿದೆ. ಆ ಸಿನಿಮಾದಲ್ಲಿ ಸತೀಶ್‌ಗೆ ನಾಯಕಿಯಾಗಿ ರಚಿತಾ ರಾಮ್ ಕಾಣಿಸಿಕೊಳ್ಳಲಿದ್ದಾರೆ. 'ಅಯೋಗ್ಯ' ನಂತರ ಮತ್ತೊಮ್ಮೆ ಇವರಿಬ್ಬರು ಒಟ್ಟಿಗೆ ನಟಿಸುತ್ತಿದ್ದಾರೆ. (ಫೋಟೋ: ಹರಿಪ್ರಿಯಾ ಟ್ವಿಟರ್)

Satish Ninasam: 'ಮ್ಯಾಟ್ನಿ' ಶೋನಲ್ಲಿ ನಟ ಸತೀಶ್ ನೀನಾಸಂ ಜೊತೆ ಕಾಣಿಸಿಕೊಂಡ್ರು ರಚಿತಾ ರಾಮ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌