ಆ್ಯಪ್ನಗರ

SPB: ಗಾಯಕರಾಗಿ ಮಾತ್ರವಲ್ಲ, ನಟರಾಗಿಯೂ ಪ್ರತಿಭೆ ತೋರಿದ್ದರು ಎಸ್‌ಪಿ ಬಾಲಸುಬ್ರಹ್ಮಣ್ಯಂ!

ಲೆಜೆಂಡರಿ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಬರೀ ಗಾಯಕರಾಗಿ ಮಾತ್ರವಲ್ಲ, ನಟರಾಗಿಯೂ ಗಮನಸೆಳೆದಿದ್ದರು. ತಮ್ಮ ಬ್ಯುಸಿ ಶೆಡ್ಯೂಲ್‌ನಲ್ಲೂ ಅವರು 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

Vijaya Karnataka Web 25 Sep 2020, 7:14 pm
ಎಸ್‌ ಪಿ ಬಾಲಸುಬ್ರಹ್ಮಣ್ಯಂ ಎಂದಕೂಡಲೇ ಅವರು ಹಾಡಿರುವ ಸಾವಿರಾರು ಹಾಡುಗಳು ನೆನಪಿಗೆ ಬರುತ್ತಿವೆ. ಸಂಗೀತ ಲೋಕಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಅವರು. ಆದರೆ, ಗಾಯನದ ಜೊತೆಗೆ ಅವರೊಳಗೊಬ್ಬ ಅದ್ಭುತ ನಟ ಕೂಡ ಇದ್ದರು. ತಮ್ಮ ಬ್ಯುಸಿ ಶೆಡ್ಯೂಲ್‌ನಲ್ಲೂ ಅವರು ಒಂದಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. 1966ರಲ್ಲಿ ಗಾಯಕರಾಗಿ ಚಿತ್ರರಂಗ ಪ್ರವೇಶ ಮಾಡಿದ ಎಸ್‌ಪಿಬಿ, 1969ರಲ್ಲೇ ತೆಲುಗು ಚಿತ್ರವೊಂದಕ್ಕೆ ಬಣ್ಣ ಹಚ್ಚಿದ್ದರು. ತೆಲುಗು, ತಮಿಳು, ಕನ್ನಡ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
Vijaya Karnataka Web SPB: ಗಾಯಕರಾಗಿ ಮಾತ್ರವಲ್ಲ, ನಟರಾಗಿಯೂ ಪ್ರತಿಭೆ ತೋರಿದ್ದರು ಎಸ್‌ಪಿ ಬಾಲಸುಬ್ರಹ್ಮಣ್ಯಂ!


ತೆಲುಗು ಚಿತ್ರದ ಮೂಲಕ ನಟನಾಗಿ ಎಂಟ್ರಿ
1969ರಲ್ಲಿ ಮೊದಲು 'ಪೆಳ್ಳಂಟೆ ನೂರೆಳ್ಳ ಪಂಟಾ' ಚಿತ್ರದಲ್ಲಿ ನಟಿಸಿದ್ದರು. ಆನಂತರ ತಮಿಳಿನಲ್ಲಿ ಬಂದ 'ಮಹಮ್ಮದ್ ಬಿನ್ ತುಘಲಕ್‌' ಸಿನಿಮಾದಲ್ಲಿ ನಟಿಸಿದ್ದರು. ಅದರಲ್ಲೂ ಅವರು ಅತೀ ಹೆಚ್ಚು ಸಿನಿಮಾಗಳನ್ನು ಮಾಡಿದ್ದು ತೆಲುಗಿನಲ್ಲೇ. 1982ರಲ್ಲಿ ತೆರೆಕಂಡ 'ಬಾಳೊಂದು ಚದುರಂಗ' ಸಿನಿಮಾದಲ್ಲಿ ನಟಿಸುವ ಮೂಲಕ ಅವರು ಕನ್ನಡ ಚಿತ್ರರಂಗಕ್ಕೂ ಪ್ರವೇಶ ನೀಡಿದರು. ಆನಂತರ ಅಂಬರೀಷ್‌ ನಟಿಸಿದ್ದ 'ತಿರುಗುಬಾಣ' ಸಿನಿಮಾದ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದರು. 'ಇದೇ ನಾಡು ಇದೇ ಭಾಷೆ..' ಎಂದು ಹಾಡು ಹೇಳಿದ್ದರು.

ಮಿಥುನಂ ಬಗ್ಗೆ ಮೆಚ್ಚುಗೆ
'ಕಾದಲನ್‌', 'ಮುದ್ದಿನ ಮಾವ', 'ಮಾಗಂಲ್ಯಂ ತಂತುನಾನೇನಾ' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿನ ಅವರ ನಟನೆ ಸಾಕಷ್ಟು ಮೆಚ್ಚುಗೆ ತಂದುಕೊಟ್ಟಿತ್ತು. ನಟ ತನಿಕೆಳ್ಳ ಭರಣಿ ನಿರ್ದೇಶನ ಮಾಡಿದ್ದ 'ಮಿಥುನಂ' ಸಿನಿಮಾದಲ್ಲಿ ಎಸ್‌ಪಿಬಿ ಅಪ್ಪಾದಾಸ್‌ ಅನ್ನೋ ಪಾತ್ರ ಮಾಡಿದ್ದರು. ಆ ಸಿನಿಮಾದಲ್ಲಿ ಅವರೊಂದಿಗೆ ಹಿರಿಯ ನಟಿ ಲಕ್ಷ್ಮೀ ಕೂಡ ನಟಿಸಿದ್ದರು. ಆ ಸಿನಿಮಾದ ಬಗ್ಗೆ ಎಸ್‌ಪಿಬಿ ಅವರಿಗೆ ಅಪಾರವಾದ ಒಲವು ಇತ್ತು. ಅನೇಕ ಕಡೆಗಳಲ್ಲಿ ಅವರು 'ಮಿಥುನಂ' ಬಗ್ಗೆ ಮಾತನಾಡಿದ್ದರು. ಅವರು ಕಡೆಯದಾಗಿ ನಟಿಸಿದ ಸಿನಿಮಾ 2018ರಲ್ಲಿ ತೆರೆಕಂಡ 'ದೇವದಾಸ್‌'. ತೆಲುಗಿನಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ಅವರೊಂದಿಗೆ ನಾಗಾರ್ಜುನ, ನಾನಿ, ರಶ್ಮಿಕಾ ಮಂದಣ್ಣ ನಟಿಸಿದ್ದರು.

ಎಸ್‌ಪಿಬಿಗೆ ಧ್ವನಿಯಾಗಿದ್ದರು ಡಾ. ರಾಜ್‌! 'ಮುದ್ದಿನ ಮಾವ' ಚಿತ್ರಕ್ಕೆ ಹಾಡುವಾಗ ಅಣ್ಣಾವ್ರು ಏನು ಹೇಳಿದ್ರು?

ಕಿರುತೆರೆಯಲ್ಲೂ ಗಮನಸೆಳೆದಿದ್ದ ಗಾಯಕ
ತಮಿಳು, ತೆಲುಗಿನ ಒಂದಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದರು ಎಸ್‌ಪಿಬಿ. ಧಾರಾವಾಹಿಗಳಿಗಿಂತ ಹೆಚ್ಚಾಗಿ ಅವರು, ಸಂಗೀತ ರಿಯಾಲಿಟಿ ಶೋಗಳನ್ನು ನಡೆಸಿಕೊಟ್ಟಿದ್ದಾರೆ. ಅದರಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ಅವರು ನಡೆಸಿಕೊಡುತ್ತಿದ್ದ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಆ ಕಾರ್ಯಕ್ರಮ ದೊಡ್ಡ ಯಶಸ್ಸನ್ನು ಕಂಡಿತ್ತು.

SP Balasubrahmanyam: ಆರು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದ ಹೆಮ್ಮೆಯ ಗಾಯಕ ಎಸ್‌ಪಿಬಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌