ಆ್ಯಪ್ನಗರ

'ಚಿತ್ರ ಬ್ರಹ್ಮ' ಪುಟ್ಟಣ್ಣ ಕಣಗಾಲ್ ಬಳಸುತ್ತಿದ್ದ 'ನೆಕ್‌ಟೈ' ಇದೇ ನೋಡಿ

ಕನ್ನಡ ಚಿತ್ರರಂಗದ ಸೃಜನಶೀಲ ನಿರ್ದೇಶಕ ಚಿತ್ರ ಬ್ರಹ್ಮ ಎಸ್ ಆರ್ ಪುಟ್ಟಣ್ಣ ಕಣಗಾಲ್ ಬಳಸುತ್ತಿದ್ದ ನೆಕ್‍ಟೈ ಈಗ ಕಥಾಸಂಗಮ ಚಿತ್ರತಂಡಕ್ಕೆ ಸಿಕ್ಕಿದೆ. ಈ ಟೈಯನ್ನು ಲಕ್ಷ್ಮಿ ಪುಟ್ಟಣ್ಣ ಅವರು ನಿರ್ದೇಶಕ ರಿಷಬ್ ಶೆಟ್ಟಿಗೆ ಉಡುಗೊರೆಯಾಗಿ ನೀಡಿದ್ದಾರೆ.

Vijaya Karnataka Web 2 Dec 2019, 3:30 pm

ಇದೇ ನೋಡಿ ಕನ್ನಡ ಚಿತ್ರರಂಗ ಕಂಡ ಪ್ರಸಿದ್ಧ ಹಾಗೂ ಸೃಜನಶೀಲ ನಿರ್ದೇಶಕರಲ್ಲಿ ಒಬ್ಬರು ಎನ್ನಿಸಿಕೊಂಡಿದ್ದ ಎಸ್ ಆರ್ ಪುಟ್ಟಣ್ಣ ಕಣಗಾಲ್ ಬಳಸುತ್ತಿದ್ದ ನೆಕ್‌ಟೈ. ಈಗ ಈ ಕಂಠಬಂಧ ಎಲ್ಲಿಂದ ಬಂತು ಎಂದು ಯೋಚಿಸುತ್ತಿದ್ದೀರಾ? ಈ ವಿಶೇಷ ಟೈ ಕಥಾಸಂಗಮ ಚಿತ್ರದ ನಿರ್ಮಾಪಕ ರಿಷಬ್ ಶೆಟ್ಟಿಗೆ ಉಡುಗೊರೆಯಾಗಿ ಸಿಕ್ಕಿದೆ.
Vijaya Karnataka Web ಪುಟ್ಟಣ್ಣ ಕಣಗಾಲ್


ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಸಿನಿಮಾಗಳು ಉತ್ಕೃಷ್ಟ ಮಟ್ಟದವು ಎಂಬುದರಲ್ಲಿ ಎರಡು ಮಾತಿಲ್ಲ. ಕನ್ನಡ ಚಿತ್ರರಂಗಕ್ಕೆ ಹೊಸ ರೂಪ ನೀಡಿದ ನಿರ್ದೇಶಕರು. ಡಿಸೆಂಬರ್ 1ರಂದು ಪುಟ್ಟಣ್ಣ ಕಣಗಾಲ್ ಅವರ ಜನುಮ ದಿನ. ಈ ಹಿನ್ನೆಲೆಯಲ್ಲಿ ಕಥಾ ಸಂಗಮ ಚಿತ್ರತಂಡಕ್ಕೆ ಅಪರೂಪದ ಉಡುಗೊರೆಯೊಂದು ಸಿಕ್ಕಿದೆ.

ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕಥಾ ಸಂಗಮ ಚಿತ್ರತಂಡ ಪುಟ್ಟಣ್ಣ ಅವರ ಪತ್ನಿ ಲಕ್ಷ್ಮಿ ಪುಟ್ಟಣ್ಣರಿಗೆ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ನಾಗಲಕ್ಷ್ಮಿ ಅವರು ರಿಷಬ್ ಶೆಟ್ಟಿಗೆ ಪುಟ್ಟಣ್ಣ ಕಣಗಾಲ್ ಬಳಸುತ್ತಿದ್ದ ನೆಕ್‌ಟೈಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಈ ನೆಕ್‍ಟೈ ನೋಡುತ್ತಿದ್ದರೆ ಪುಟ್ಟಣ್ಣ ಕಣಗಾಲ್ ಅವರ ವೃತ್ತಿಪರದೆ, ಶಿಸ್ತು, ಚಿತ್ರಗಳು ನಮ್ಮ ಕಣ್ಣ ಮುಂದೆ ಸುಳಿಯುತ್ತವೆ. ಪುಟ್ಟಣ್ಣ ಕಣಗಾಲ್ ಈ ನೆಕ್‌ಟೈಯನ್ನು ವಿಶೇಷ ಸಂದರ್ಭಗಳಲ್ಲಿ ಬಳಸುತ್ತಿದ್ದರು ಅನ್ನಿಸುತ್ತದೆ. ಯಾಕೆಂದರೆ ಅವರು ಟೈ ಧರಿಸಿರುವ ಫೋಟೋಗಳು ಸಿಗುವುದೇ ಅಪರೂಪ.
ಪುಟ್ಟಣ್ಣ ನಂತರ ಇನ್ನೊಂದು ಕಥಾ ಸಂಗಮಕ್ಕೆ ಮುನ್ನುಡಿ ಬರೆದ ರಿಶಬ್‌

'40 ವರ್ಷಗಳ ನಂತರ ಪುಟ್ಟಣ್ಣ ಅವರ ಪ್ರಯೋಗವನ್ನು ಮತ್ತೆ ತೆರೆ ಮೇಲೆ ತಂದಂತಹ ಚಿತ್ರ ಇದಾಗಿದ್ದು, ಕನ್ನಡ ಚಿತ್ರರಂಗಕ್ಕೆ ಇದು ಬಹಳ ವಿಶೇಷವಾದ ಚಿತ್ರವಾಗುತ್ತದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾಗೆ ಕೆಲಸ ಮಾಡಿದ ಇಡೀ ತಂಡ ಕಥಾ ಸಂಗಮಕ್ಕೆ ಕೆಲಸ ಮಾಡಿದೆ. 7 ಜನ ನಿರ್ದೇಶಕರು, 7 ಜನ ಸಂಗೀತ ನಿರ್ದೇಶಕರು, 7 ಬೇರೆ ಬೇರೆ ನಟರು ಚಿತ್ರದಲ್ಲಿದ್ದಾರೆ. ಏಳು ಕಥೆಗಳು ಒಂದೊಕ್ಕೊಂದು ಲಿಂಕ್‌ ಇಲ್ಲ. ಹಾಗಾಗಿ ಜತೆಗೆ ಉಳಿದವರು ಕಂಡಂತೆ, ಸಿನಿಮಾ ನೋಡಿ ಮೆಚ್ಚಿಕೊಂಡಿದ್ದ ಜನರಿಗೆ ಇದು ಖಂಡಿತಾ ಇಷ್ಟವಾಗುತ್ತದೆ' ಎನ್ನುತ್ತಾರೆ ರಿಷಬ್ ಶೆಟ್ಟಿ.


ಕಥಾ ಸಂಗಮದಲ್ಲಿ ಒಂದೇ ಒಂದು ಡೈಲಾಗ್‌ ಇಲ್ಲ

ಡಿಸೆಂಬರ್‌ 6 ರಂದು ಈ ಚಿತ್ರ ಬಿಡುಗಡೆಯಾಗಲಿದ್ದು, ಈಗಾಗಲೇ ಹಾಡುಗಳು ಹಿಟ್‌ ಆಗಿವೆ. ಹರಿಪ್ರಿಯಾ ಮತ್ತು ರಿಷಬ್ ಅವರ ಕಥೆಯ ಟೀಸರ್‌ ಈಗಾಗಲೆ ಸದ್ದು ಮಾಡುತ್ತಿದೆ. ರಿಷಬ್ ಶೆಟ್ಟಿ ಈ ಸಿನಿಮಾದಲ್ಲಿ ಭಿಕ್ಷುಕನ ಪಾತ್ರದಲ್ಲಿ ನಟಿಸಿರುವುದು ಬಹಳ ವಿಶೇಷ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌