ಆ್ಯಪ್ನಗರ

ಶಿವಣ್ಣ ಮನೆಯಲ್ಲಿ ನಡೆದ ಚಿತ್ರರಂಗದ ಸಭೆಗೆ ನಟ ಜಗ್ಗೇಶ್‌ ಗೈರಾಗಿದ್ದಕ್ಕೆ ಇಲ್ಲಿದೆ ಕಾರಣ!

ನಾಗವಾರದಲ್ಲಿರುವ ಶಿವರಾಜ್‌ಕುಮಾರ್ ಅವರ ಮನೆಯಲ್ಲಿ ಇಂದು (ಜುಲೈ 29) ಸ್ಯಾಂಡಲ್‌ವುಡ್‌ನ ಅನೇಕರು ಸಭೆ ಸೇರಿದ್ದರು. ಆದರೆ, ಅಲ್ಲಿಗೆ ನಟ ಜಗ್ಗೇಶ್‌ ಆಗಮಿಸಿರಲಿಲ್ಲ. ಅದಕ್ಕೆ ಕಾರಣ ಏನು ಅನ್ನೋದನ್ನು ಅವರೇ ಹೇಳಿದ್ದಾರೆ.

Vijaya Karnataka Web 29 Jul 2020, 8:53 pm
ಡಾ. ರಾಜ್‌ಕುಮಾರ್, ಡಾ. ಅಂಬರೀಷ್‌ ಅವರ ನಂತರ ಕನ್ನಡ ಚಿತ್ರರಂಗವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಡಾ. ಶಿವರಾಜ್‌ಕುಮಾರ್ ಅವರಿಗೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಚಂದನವನದ ಸಮಸ್ಯೆಗಳ ಕುರಿತು ಶಿವಣ್ಣ ಮನೆಯಲ್ಲಿ ಸಭೆ ಮಾಡಲಾಗಿದೆ. ಅದರಲ್ಲೂ ಬುಧವಾರ ನಡೆದ ಸಭೆಯಲ್ಲಿ ಸ್ಯಾಂಡಲ್‌ವುಡ್‌ನ ಬಹುತೇಕ ಕಲಾವಿದರು ಇದ್ದರು. ಆದರೆ, ನಟ ಜಗ್ಗೇಶ್‌ ಮಾತ್ರ ಕಾಣಿಸಲಿಲ್ಲ. ಯಾಕೆ ಜಗ್ಗೇಶ್ ಸಭೆಯಿಂದ ದೂರ ಉಳಿದರು? ಇದಕ್ಕೆ ಕಾರಣವೇನು? ಅದಕ್ಕುತ್ತರ ಇಲ್ಲಿದೆ.
Vijaya Karnataka Web here is the reason why actor jaggesh not attending sandalwood meeting in shivarajkumars house
ಶಿವಣ್ಣ ಮನೆಯಲ್ಲಿ ನಡೆದ ಚಿತ್ರರಂಗದ ಸಭೆಗೆ ನಟ ಜಗ್ಗೇಶ್‌ ಗೈರಾಗಿದ್ದಕ್ಕೆ ಇಲ್ಲಿದೆ ಕಾರಣ!


ಸ್ಯಾಂಡಲ್‌ವುಡ್‌ನ ರವಿಚಂದ್ರನ್‌, ರಮೇಶ್‌ ಅರವಿಂದ್, ಉಪೇಂದ್ರ, ಪುನೀತ್ ರಾಜ್‌ಕುಮಾರ್, ಗಣೇಶ್, ಯಶ್, 'ದುನಿಯಾ' ವಿಜಯ್, ರಕ್ಷಿತ್ ಶೆಟ್ಟಿ ಸೇರಿದಂತೆ ಅನೇಕ ಕಲಾವಿದರು, ನಿರ್ಮಾಪಕರು ಶಿವರಾಜ್‌ಕುಮಾರ್ ಅವರ ನಾಗವಾರದಲ್ಲಿರುವ ಮನೆಯಲ್ಲಿ ಸಭೆ ಸೇರಿದ್ದರು. ಸಚಿವ ಸಿ.ಟಿ. ರವಿ ಕೂಡ ಸಭೆಗೆ ಆಗಮಿಸಿ, ಚಿತ್ರರಂಗದ ಸಮಸ್ಯೆಗಳನ್ನು ಆಲಿಸಿದರು. ಆದರೆ, ಚಿತ್ರರಂಗದ ಈ ಸಭೆಗೆ ಜಗ್ಗೇಶ್‌ ಆಗಮಿಸಿರಲಿಲ್ಲ. ಅವರು ಕೂಡ ಚಂದನವನದಲ್ಲಿ 4 ದಶಕಗಳ ಅನುಭವ ಹೊಂದಿರುವ ನಟ. ಈ ಹಿನ್ನೆಲೆಯಲ್ಲಿ ಅಭಿಮಾನಿಯೊಬ್ಬರು ಜಗ್ಗೇಶ್‌ಗೆ ಪ್ರಶ್ನೆ ಮಾಡಿದ್ದಾರೆ.

'ಅಣ್ಣ ನೀವು ಯಾಕೆ ಹೋಗಿಲ್ಲ ಇವತ್ತು ಶಿವಣ್ಣ ಮನೆಗೆ? ನಿಮಗೆ ಆಹ್ವಾನ ಬಂದಿಲ್ವ' ಎಂದು ಅಭಿಮಾನಿಯೊಬ್ಬರು ಟ್ವಿಟ್ಟರ್‌ನಲ್ಲಿ ಜಗ್ಗೇಶ್‌ ಅವರಿಗೆ ಕೇಳಿದ್ದರು. ಅದಕ್ಕೆ ಅಲ್ಲಿಯೇ ಉತ್ತರ ನೀಡಿರುವ 'ನವರಸ ನಾಯಕ', 'ಯಾವುದೇ ಕಾರಣಕ್ಕೂ ಕೊರೊನಾ ಔಷಧ ಬರುವವರೆಗೂ ಎಲ್ಲಿಯೂ ಹೋಗುವುದಿಲ್ಲಾ! ಯಾರ ಭೇಟಿಯೂ ಮಾಡುವುದಿಲ್ಲ! ಶಿವಣ್ಣ, ಪಾಪ ಕರೆದರು, ನಾನೇ ಬರುವುದಿಲ್ಲ ಎಂದು ತಿಳಿಸಿದೆ! ನನ್ನ ಸಂಪೂರ್ಣ ಬೆಂಬಲ ನಮ್ಮ ಉದ್ಯಮಕ್ಕಿದೆ! ಎಲ್ಲಾ ಕಾರ್ಯಕ್ಕೆ ವೈಯಕ್ತಿಕವಾಗಿ ಹೋಗದಿದ್ದರೂ, ಆನ್‌ಲೈನ್ ಚರ್ಚೆ ನಡೆಯುತ್ತಿದೆ! ನೀವು ಕ್ಷೇಮವಾಗಿರಿ ಧನ್ಯವಾದ' ಎಂದು ಉತ್ತರ ನೀಡಿದ್ದಾರೆ.

ನಟ ಶಿವರಾಜ್‌ಕುಮಾರ್ ಮನೆಯಲ್ಲಿ ಸಭೆ ನಡೆಸಿದ್ದೇಕೆ ಕನ್ನಡದ ಸ್ಟಾರ್ ನಟರು?

ಇನ್ನು, ಈ ಕುರಿತು ಜಗ್ಗೇಶ್‌ ಅವರ ಅಭಿಮಾನಿಗಳು ಕೂಡ ಟ್ವೀಟ್ ಮಾಡಿದ್ದು, 'ಜಗ್ಗಣ್ಣನವರ ಆರೋಗ್ಯದ ಹಿತದೃಷ್ಟಿಯಿಂದ ಅವರು ಎಲ್ಲಿಯೂ ಹೊರಗಡೆ ಹೋಗದಂತೆ, ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಭಾಗವಹಿಸದಂತೆ, ಯಾರ ಮನೆಗೂ ಹೋಗದಂತೆ, ಹೊರಗೆ ಬರದಂತೆ ಇರಿ ಎಂದು ಅವರಲ್ಲಿ ಮನವಿ ಮಾಡಿಕೊಂಡಿದ್ದೇವೆ. ಹಿರಿಯ ಕಲಾವಿದರಾದ ನಿಮ್ಮಂತಹವರು, ಯುವಪೀಳಿಗೆಗಳಿಗೆ ಮಾರ್ಗದರ್ಶನ ನೀಡುವ ಅವಶ್ಯಕತೆ ಇರುವುದರಿಂದ ಎಲ್ಲಿಯೂ ಹೊರಗಡೆ ಹೋಗದೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ಅವರಲ್ಲಿ ವಿನಂತಿ ಮಾಡಿಕೊಂಡಿದ್ದೇವೆ. ಹಾಗಾಗಿ, ಜಗ್ಗಣ್ಣನವರು ಯಾವುದೇ ಕಾರ್ಯಕ್ರಮಗಳಿಗೆ ಬರುತ್ತಿಲ್ಲ. ಅಭಿಮಾನಿಗಳ ಮಾತಿಗೆ ಬೆಲೆ ನೀಡಿ ಅವರು ಮನೆಯಿಂದ ಹೊರಗೆ ಬರುತ್ತಿಲ್ಲ' ಎಂದು ಬರೆದುಕೊಂಡಿದ್ದಾರೆ.

'ಎಲ್ಲರನ್ನು ಸರಿಸಮನಾಗಿ ಕಾಣುವವನೇ ನಿಜವಾದ ಲೀಡರ್'- ನಟ ಶಿವರಾಜ್‌ಕುಮಾರ್‌


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌