ಆ್ಯಪ್ನಗರ

'ದಬಾಂಗ್ 3' ಚಿತ್ರಕ್ಕಾಗಿ ಕನ್ನಡ ಹಾಡು ಬರೆದ ಅನೂಪ್‌ ಭಂಡಾರಿ

ನಾನು ಚಿಕ್ಕ ವಯಸ್ಸಿನಿಂದಲೂ ಸಲ್ಮಾನ್‌ ಖಾನ್‌ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು. ಈಗ ಅವರ ಸಿನಿಮಾಗೆ ಹಾಡು ಬರೆದಿದ್ದು ನನ್ನ ಲೈಫ್‌ ಟೈಮ್‌ನಲ್ಲಿ ಒಳ್ಳೆಯ ಅನುಭವ ಎಂದಿದ್ದಾರೆ ಅನೂಪ್ ಭಂಡಾರಿ.

Vijaya Karnataka 27 Nov 2019, 4:53 pm
ಸಲ್ಮಾನ್‌ ಖಾನ್‌ ಮತ್ತು ಸುದೀಪ್‌ ನಟನೆಯ 'ದಬಾಂಗ್‌-3' ಚಿತ್ರದ ಕನ್ನಡ ವರ್ಷನ್‌ಗೆ 'ರಂಗಿತರಂಗ' ಖ್ಯಾತಿಯ ನಿರ್ದೇಶಕ ಅನೂಪ್‌ ಭಂಡಾರಿ ಹಾಡುಗಳನ್ನು ಬರೆದಿದ್ದಾರೆ. 'ಸಲ್ಮಾನ್‌ ಖಾನ್‌ ಅವರ ಸಿನಿಮಾಗೆ ನಾನು ಹಾಡು ಬರೆಯುತ್ತೇನೆ ಎಂದು ಕನಸು ಮನಸಿನಲ್ಲ್ಲೂಅಂದುಕೊಂಡಿರಲಿಲ್ಲ.
Vijaya Karnataka Web ದಬಾಂಗ್ 3


ಬರೆಯುವುದರ ಜತೆಗೆ ಸಿನಿಮಾದಲ್ಲಿ ಒಂದು ಹಾಡನ್ನೂ ಹಾಡಿದ್ದೇನೆ. ಅದೇ ನನ್ನ ಸಾಧನೆ. ಜತೆಗೆ ನಾನು ಮೊದಲ ಬಾರಿಗೆ ಬೇರೆಯವರ ಸಂಗೀತ ನಿರ್ದೇಶನಕ್ಕೆ ಹಾಡು ಬರೆದಿದ್ದೇನೆ. ಅದರಲ್ಲೂ ಇಷ್ಟು ದೊಡ್ಡ ಸ್ಟಾರ್‌ಗಳಿರುವ ಮತ್ತು ಪಕ್ಕಾ ಮಾಸ್‌ ಸಿನಿಮಾಗೆ ಹಾಡು ಬರೆದಿದ್ದು ನನಗೆ ಎಕ್ಸೈಟ್‌ ಆಗುವ ಸಂಗತಿ. ಮೊದಲೆಲ್ಲ ನಾನು ಲವ್‌ ಸ್ಟೋರಿಗೆ ಕಾವ್ಯಾತ್ಮಕವಾಗಿ ಹಾಡು ಬರೆದಿದ್ದೆ' ಎಂದು ಅವರು ತಿಳಿಸಿದ್ದಾರೆ.

'ಮೊದಲು ಜಾಕ್‌ ಮಂಜು ಅವರು ನನಗೆ ಒಂದು ಹಾಡನ್ನು ಮಾತ್ರ ಬರೆಯಲು ಹೇಳಿದ್ದರು. ಅದನ್ನು ಕೇಳಿದ ಸುದೀಪ್‌ ಮತ್ತು ಮಂಜು ಅವರು ಎಲ್ಲ ಆರು ಹಾಡುಗಳನ್ನು ನನ್ನ ಬಳಿಯೇ ಬರೆಸಿದರು. ಇದರಲ್ಲಿ 'ಅಣ್ಣ ಕೈಜಾರಿ ಹೋದ' ಎಂಬ ಹಾಡಿನ ರ‍್ಯಾಪ್ ವರ್ಷನ್‌ನ್ನು ನಾನೇ ಹಾಡಿದ್ದೇನೆ. ಸಂಚಿತ್‌ ಹೆಗ್ಡೆ, ವಿಜಯ್‌ ಪ್ರಕಾಶ್‌, ಐಶ್ವರ್ಯಾ ರಂಗರಾಜನ್‌, ಮನೋಜ್‌ ವಸಿಷ್ಠ, ಶಶಾಂಕ್‌ ಶೇಷಗಿರಿ ಹಾಡಿದ್ದಾರೆ. ಇನ್ನು ಕೆಲವನ್ನು ಮೂಲ ಗಾಯಕರೇ ಹಾಡಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ ಅನೂಪ್‌.

ಸಂಗೀತ ನಿರ್ದೇಶಕರಾದ ಸಾಜಿದ್‌- ವಾಜಿದ್‌ ಅವರಿಗೆ ನಮ್ಮ ಕನ್ನಡ ಹಾಡುಗಳು ಇಷ್ಟವಾಗಿದೆ. ಬೇರೆ ಬೇರೆ ಭಾಷೆಗಳಿಗೆ ಹೋಲಿಸಿಕೊಂಡರೆ ಕನ್ನಡ ಸೌಂಡಿಂಗ್‌ ತುಂಬಾ ಚೆನ್ನಾಗಿದೆ ಎಂದು ಹೇಳಿದ್ದಾರೆ. ಇದು ಕನ್ನಡ ಭಾಷೆಗೆ ಕಾಂಪ್ಲಿಮೆಂಟ್‌ ಕೊಟ್ಟಂತೆ. ಇನ್ನು ಸುದೀಪ್‌ ಅವರಿಗಂತೂ ಈ ಹಾಡುಗಳು ಬಹಳ ಇಷ್ಟವಾಗಿವೆ.

ಸಲ್ಮಾನ್ ಖಾನ್ ಎದೆಗೆ ಒದೆಯಲು ಹೇಳಿದರು, ನನ್ನಿಂದಾಗಲಿಲ್ಲ: ಕಿಚ್ಚ

ನಾನು ಚಿಕ್ಕ ವಯಸ್ಸಿನಿಂದಲೂ ಸಲ್ಮಾನ್‌ ಖಾನ್‌ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು. ಈಗ ಅವರ ಸಿನಿಮಾಗೆ ಹಾಡು ಬರೆದಿದ್ದು ನನ್ನ ಲೈಫ್‌ ಟೈಮ್‌ನಲ್ಲಿ ಒಳ್ಳೆಯ ಅನುಭವ' ಅಂತಾರವರು. ಡಿಸೆಂಬರ್‌-20ಕ್ಕೆ ಚಿತ್ರ ಬಿಡುಗಡೆ ಯಾಗಲಿದ್ದು, ಕನ್ನಡ ಭಾಷೆಯ ಸಿನಿಮಾ 200ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಲಿದೆ. ಸುದೀಪ್‌ ಈ ಸಿನಿಮಾದಲ್ಲಿ ನೆಗೆಟಿವ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ದಬಾಂಗ್‌ 3 ಸೆಟ್‌ನಲ್ಲಿಮೊಬೈಲ್‌ ಬಳಕೆಗೆ ನಿರ್ಬಂಧ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌