ಆ್ಯಪ್ನಗರ

ಮನೆಗೆ ಹೋದ ಕೂಡಲೆ ನೆಲದ ಮೇಲೆ ಮಲಗುತ್ತೇನೆ ಎಂದ ಮೆಗಾ ಸ್ಟಾರ್ ಚಿರಂಜೀವಿ

ಮೆಗಾ ಸ್ಟಾರ್ ಚಿರಂಜೀವಿ ಅವರ ಸರಳತೆಗೆ ಇದು ನಿದರ್ಶನ ಎನ್ನಬಹುದು. ಯಾರಾದರೂ ನನಗೆ ಹೊಗಳಿದರೆ ಹಿಗ್ಗಿ ಬೀಗುವುದಿಲ್ಲ ಎಂದಿದ್ದಾರೆ. ಇತ್ತೀಚೆಗೆ ಚಿರಂಜೀವಿ ಅವರನ್ನು ಹಲವಾರು ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುತ್ತಿದೆ. ಎಲ್ಲರೂ ಹಾಡಿ ಹೊಗಳುತ್ತಿರುವ ಹಿನ್ನೆಲೆಯಲ್ಲಿ ಚಿರಂಜೀವಿ ಮುಖ್ಯವಾದ ಮಾತೊಂದನ್ನು ಹೇಳಿದ್ದಾರೆ.

Vijaya Karnataka Web 13 Mar 2020, 5:27 pm

ಸಿನಿಮಾ ತಾರೆಗಳು ಎಂದರೆ ಅವರ ಐಶಾರಾಮಿ ಮನೆಗಳು, ಕಾರುಗಳು ನೆನಪಾಗುತ್ತವೆ. ಇನ್ನು ಚಿತ್ರೀಕರಣದಲ್ಲಿ ಕೈಗೊಬ್ಬ ಕಾಲಿಗೊಬ್ಬ ಆಳು ಕಾಳು ಇದ್ದೇ ಇರುತ್ತಾರೆ. ಹಲವಾರು ತಾರೆಗಳು ತಮ್ಮದೇ ಸಕಲ ಸವಲತ್ತುಗಳ ಕೋಟ್ಯಂತರ ಬೆಲೆಬಾಳುವ ಕ್ಯಾರವಾನ್‌ಗಳನ್ನು ಇಟ್ಟುಕೊಂಡಿದ್ದಾರೆ. ಇನ್ನು ಇಂತಹ ತಾರೆಗಳ ಮಲಗುವ ಕೋಣೆ ಹೇಗೆಲ್ಲಾ ಇರಬಹುದು ಎಂದು ಅಭಿಮಾನಿಗಳು ಊಹಿಸಿಕೊಳ್ಳುತ್ತಿರುತ್ತಾರೆ.
Vijaya Karnataka Web ಚಿರಂಜೀವಿ


ಅದರಲ್ಲೂ ಮೆಗಾ ಸ್ಟಾರ್ ಚಿರಂಜೀವಿ ಎಂದರೆ ಕೇಳಬೇಕೆ? ಇದೀಗ ಕೊರಟಾಲ ಶಿವ ನಿರ್ದೇಶನದ ಚಿತ್ರದಲ್ಲಿ ಚಿರಂಜೀವಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ 'ಆಚಾರ್ಯ' ಎಂದು ಹೆಸರಿಡಲಾಗಿದೆ. ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಚಿರಂಜೀವಿ ಅವರನ್ನು ಮುಖ್ಯ ಅತಿಥಿಯಾಗಿ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಿದ್ದಾರೆ. ಅಲ್ಲಿ ಪ್ರತಿಯೊಬ್ಬರೂ ಚಿರಂಜೀವಿಯನ್ನು ಹಾಡಿ ಹೊಗಳುತ್ತಿದ್ದಾರೆ. ಇದನ್ನೆಲ್ಲಾ ಹೇಗೆ ಸ್ವೀಕರಿಸುತ್ತೀರಾ? ಎಂದು ಸಂದರ್ಶನ ಒಂದರಲ್ಲಿ ಚಿರಂಜೀವಿಯನ್ನು ಕೇಳಿದ್ದರು.

ರಶ್ಮಿಕಾ ಮಂದಣ್ಣ ಪಾಲಿಗೆ ಲಕ್ಕಿಚಾರ್ಮ್ ಎನಿಸಿಕೊಂಡ 'ಮೆಗಾ ಸ್ಟಾರ್' ಚಿರಂಜೀವಿ!!

ಇದಕ್ಕೆ ಉತ್ತರಿಸಿರುವ ಚಿರಂಜೀವಿ, "ಯಾರಾದರೂ ಹೊಗಳಿದರೆ ನಾನು ಹಿಗ್ಗಲ್ಲ. ಅಹಂ ನನ್ನ ಬಳಿ ಸುಳಿಯದಂತಿರಲು ಮನೆಗೆ ಹೋಗಿ ನೆಲದ ಮೇಲೆ ಮಲಗುತ್ತೇನೆ. ಯಾರಾದರೂ ನನ್ನನ್ನು ಹೊಗಳಿದರೆ ಅದು ನನ್ನ ದೊಡ್ಡತನ ಅಲ್ಲ. ಸಿನಿಮಾ ಒಂದರ ಹಿಟ್, ಫ್ಲಾಪ್ ಹಿಂದೆ ಚಿತ್ರತಂಡದ ಕಷ್ಟ, ಬೆವರು ಇರುತ್ತದೆ. ಅದೇ ರೀತಿ ಟೀಕಿಸಿದರೆ ಆ ಇಡೀ ತಂಡ ಫೇಲ್ ಆಯೆತೆಂದು ಭಾವಿಸುತ್ತೇವೆ. ಈ ಎರಡು ವಿಚಾರದಲ್ಲೂ ಪ್ರಾಮಾಣಿಕವಾಗಿ ಇರುತ್ತೇವೆ. ಸೋಲು, ಗೆಲುವನ್ನು ಒಂದೇ ರೀತಿ ಸ್ವೀಕರಿಸುತ್ತೇವೆ" ಎಂದಿದ್ದಾರೆ ಚಿರಂಜೀವಿ.

ತಮನ್ನಾ ಮನೆಯಲ್ಲಿ ಇವತ್ತು ರಾತ್ರಿ ಪಾರ್ಟಿ! ಯಾರಿಗೆಲ್ಲ ಸಿಕ್ಕಿದೆ ಆಹ್ವಾನ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌