ಆ್ಯಪ್ನಗರ

ಪುನೀತ್ ರಾಜ್‌ಕುಮಾರ್ ಕುಟುಂಬವನ್ನು ವೈಯಕ್ತಿಕವಾಗಿ ಭೇಟಿ ಮಾಡ್ತೀನಿ ಎಂದ ನಟಿ ರಮ್ಯಾ; ತಾರೆಯರ ಸಂತಾಪ

'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ಇನ್ನಿಲ್ಲ. ಅವರ ಸಾವಿನ ಸುದ್ದಿ ಕೇಳೀ ಇಡೀ ಭಾರತೀಯ ಚಿತ್ರರಂಗ ಶಾಕಿಂಗ್‌ನಲ್ಲಿದೆ, ಇದು ಸತ್ಯ ಅಂತ ಯಾರಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ. ಅವರ ನಿಧನಕ್ಕೆ ಸಾವಿರಾರು ಮಂದಿ ಕಲಾವಿದರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Vijaya Karnataka 29 Oct 2021, 7:11 pm
ಹೃದಯಾಘಾತದಿಂದ ನಿಧನರಾದ ಪುನೀತ್ ರಾಜ್‌ಕುಮಾರ್ ಅವರಿಗೆ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯ ನಟ-ನಟಿಯರು ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.
Vijaya Karnataka Web puneeth rajkumar


ರಮ್ಯಾ

ಭಾವನೆಗಳು ಕೆಲವು ವೈಯಕ್ತಿಕ. ಅವುಗಳನ್ನು ಪದಗಳಲ್ಲಿ ಹೇಳಲಾಗದು. RIP ಎಂದು ಹೇಳಿ ಮುಗಿಸಲಾಗದು. ದೇಹ ಮನಸ್ಸಿಗೂ ಮೀರಿದ್ದು ಭಾವನೆ. ಕೆಲವು ಬಾಂಧವ್ಯ ವರ್ಣನೆಗೂ ಮೀರಿದ್ದು. ಬೇರೆನನ್ನೂ ಹೇಳಲಾಗದ ಸಂದರ್ಭ ಇದು. ಈ ವಿಚಾರದ ಬಗ್ಗೆ ಸದ್ಯದ ಸಂದರ್ಭದಲ್ಲಿ ಹೆಚ್ಚೇನೂ ಕೇಳದಿರಲು ಮಾಧ್ಯಮದ ಮಿತ್ರರಲ್ಲಿ ವಿನಂತಿ. ಸಿನಿಮಾ ರಂಗದಲ್ಲಿ ಆತ ನನಗೆ ಅತ್ಯಂತ ಆಪ್ತ ಸ್ನೇಹಿತ. ಅವರಿಗೂ ಹಾಗೂ ಅವರ ಪರಿವಾರದವರಿಗೂ ಎಂದೆಂದಿಗೂ ನನ್ನ ಅತ್ಯಂತ ಪ್ರೀತಿಪೂರ್ವಕ, ಹೃದಯಾಳದ ಗೌರವ ನಮನಗಳು. ಕೇವಲ ಇನ್‌ಸ್ಟಾಗ್ರಾಮ್, ಟ್ವೀಟ್ ಮೂಲಕ ನನ್ನ ಭಾವನೆ ಹೇಳಲಾಗದು. ಅವರ ಕುಟುಂಬವನ್ನು ವೈಯಕ್ತಿಕವಾಗಿ ಭೇಟಿ ಮಾಡ್ತೀನಿ. ಅಪ್ಪು ನೀವು ಎಂದೆಂದಿಗೂ ಮಾಸದ ನೆನಪು. ಸದಾ ನನ್ನ ನೆನಪಿನಲ್ಲಿ ಎಂದೆಂದಿಗೂ ನೀವು ಇರುವಿರಿ.

ಜಗ್ಗೇಶ್
ನಿನ್ನ 30ವರ್ಷದ ಒಡನಾಟ ಹೇಗೆ ಮರೆಯಲಿ ಬಂಧುವೆ. ಅಪ್ಪ ನನ್ನನ್ನು ನಿನಗೆ ಪರಿಚಯಿಸಿದಾಗ ನಿನ್ನ ಆಶ್ಚರ್ಯದ ಮುದ್ದು ಮುಖ ಹೇಗೆ ಮರೆಯಲಿ. ನನ್ನ ಚಿತ್ರಗಳ ನೋಡಿ ಸಂಭ್ರಮಿಸಿ ನನಗೆ ಕರೆಮಾಡಿ ಹರಸುತ್ತಿದ್ದ ನಿನ್ನ ಗುಣ ಹೇಗೆ ಮರೆಯಲಿ. ನನ್ನ ಗ್ರಾಮದ ಭೈರವನ ನೋಡಲು ಬಂದು ನನ್ನ ಗ್ರಾಮೀಣ ಹಿನ್ನೆಲೆ ಬದುಕಿನ ಅನುಭವ ಕೇಳಿ ಮರುಗಿದ್ದು ಹೇಗೆ ಮರೆಯಲಿ. ನನ್ನ ಜೊತೆ ಮಂತ್ರಾಲಯಕ್ಕೆ ಬಂದು ಸಾಮಾನ್ಯನಂತೆ ರಸ್ತೆ ಬದಿಯ ಚಹಾದ ಅಂಗಡಿ ಮುಂದಿನ ಆನಂದಮಯ ಕ್ಷಣದ ದಿನ ಹೇಗೆ ಮರೆಯಲಿ. ಆನಂದರಾಮ ನನಗಾಗಿ ನಿರ್ದೇಶನ ಮಾಡುವ ಚಿತ್ರದ ಕಥೆ ಕೇಳಿ ನೀನು ನಗುತ್ತಿದ್ದ ಆ ನಗು ಮುಖ ಹೇಗೆ ಮರೆಯಲಿ. ಮಗ ಗುರುರಾಜನ ಚಿತ್ರಕ್ಕೆ ಶುಭ ಹಾರೈಸಿ, ಮಗನಿಗೆ ಭುಜ ತಟ್ಟಿದ ದಿನ ಹೇಗೆ ಮರೆಯಲಿ. ನಿನ್ನ ತಂದೆಯ ದ್ವನಿ ಅನುಕರಣೆ ಮಾಡಿದಾಗ ನೀ ಮಗುವಂತೆ ನಗುತ್ತಿದ್ದ ಆ ಮುದ್ದು ಮುಖ ಹೇಗೆ ಮರೆಯಲಿ. ಕೇವಲ ವಾರದ ಹಿಂದೆ ಅಣ್ಣ ಮಲ್ಲೇಶ್ವರಕ್ಕೆ ಬಂದಿರುವೆ ಬನ್ನಿ ಎಂದು ಕರೆದು ನನ್ನ ನಿನ್ನ ಬದುಕಿನ ಕಡೆಯ ಭೇಟಿ ಹೇಗೆ ಮರೆಯಲಿ. ಪ್ರೀತಿಯ ಆತ್ಮವೆ ಹೋಗಿ ಬಾ ಎಂದು ಹೇಳಲು ನನಗೆ ಮನಸ್ಸು ಒಪ್ಪುತ್ತಿಲ್ಲ. ನನ್ನ ಕಡೆ ಉಸಿರಿನವರೆಗೂ ನಿನ್ನ ನೆನಪು ಒಡನಾಟ ನನ್ನಮನದಲ್ಲಿ ಉಳಿಸಿಕೊಳ್ಳುವೆ. ನಿನ್ನ ಆತ್ಮ ಎಲ್ಲೆ ಇರಲಿ, ಶಾಂತಿಯಿಂದ ಉಳಿಯಲಿ...
I love you ಚಿನ್ನ


ಕಮಲ್ ಹಾಸನ್
ಸಹೋದರ ಪುನೀತ್ ರಾಜ್‌ಕುಮಾರ್ ಸಾವು ಅನಿರೀಕ್ಷಿತ. ನಮ್ಮಿಬ್ಬರ ನಡುವೆ ಒಳ್ಳೆಯ ಬಾಂಧವ್ಯವಿತ್ತು. ಕರ್ನಾಟಕದ ಅವರ ಅಭಿಮಾನಿ ಬಳಗ, ಕುಟುಂಬಕ್ಕೆ ನನ್ನ ಸಂತಾಪಗಳು.

ಮಮ್ಮೂಟಿ

ಪುನೀತ್ ಇನ್ನಿಲ್ಲ ಎನ್ನುವ ಸುದ್ದಿ ಶಾಕಿಂಗ್ ಆಗಿದೆ. ಚಿತ್ರರಂಗಕ್ಕೆ ಇದು ಭಾರೀ ನಷ್ಟ. ಪುನೀತ್ ಕುಟುಂಬಕ್ಕೆ ನನ್ನ ಸಂತಾಪಗಳು

ಪಾರ್ವತಿ

ಪದಗಳಲ್ಲಿ ಹೇಳಲಾಗುತ್ತಿಲ್ಲ

ಶಿವಕಾರ್ತಿಕೇಯನ್

ಬೇಗ ಹೋದಿರಿ. ನಿಮ್ಮನ್ನು ನಾವು ಸದಾ ಸ್ಮರಿಸುತ್ತೇವೆ

ರವಿತೇಜ

ಶಾಕಿಂಗ್, ಆತ್ಮಕ್ಕೆ ಶಾಂತಿ ಸಿಗಲಿ

ನಾಗಶೌರ್ಯ

ನಂಬಲಾಗುತ್ತಿಲ್ಲ, ಬಹುಬೇಗ ಹೋದ್ರಿ. ಆತ್ಮಕ್ಕೆ ಶಾಂತಿ ಸಿಗಲಿ, ನಿಮ್ಮ ಕುಟುಂಬಕ್ಕೆ ನನ್ನ ಸಂತಾಪಗಳು

ಪೃಥ್ವಿರಾಜ್ ಸುಕುಮಾರನ್

ಇದು ತುಂಬ ನೋವು ನೀಡಿದ ವಿಷಯ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸೂಪರ್ ಸ್ಟಾರ್. ಈ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ನಿಮ್ಮ ಕುಟುಂಬ, ಕೋಟಿಗಟ್ಟಲೇ ಅಭಿಮಾನಿಗಳಿಗೆ ಸಿಗಲಿ

Puneeth Rajkumar: 'ಪರಮಾತ್ಮ'ನ ಪಾದ ಸೇರಿದ 'ಬೆಟ್ಟದ ಹೂವು' ಪುನೀತ್ ರಾಜ್‌ಕುಮಾರ್

ತಮನ್ನಾ ಭಾಟಿಯಾ
ಶಾಕ್ ಆಗಿದೆ, ದುಃಖವಾಗಿದೆ

ಸಂಜಯ್ ದತ್

ನಾನು ಭೇಟಿ ಮಾಡಿದ ಅತ್ಯಂತ ವಿಧೇಯ ವ್ಯಕ್ತಿಯಲ್ಲಿ ನೀವು ಒಬ್ಬರು. ಜಗತ್ತು ಇನ್ನೊಬ್ಬ ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡಿದೆ. ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ಸಿಗಲಿ.

ಆರ್ಯ
ಈ ಸುದ್ದಿ ಹೃದಯ ಒಡೆದು ಹೋಗುವಂತಹದ್ದು

ರಾಶಿ ಖನ್ನಾ

ಬೇಗ ಹೋದ್ರಿ. ಆತ್ಮಕ್ಕೆ ಶಾಂತಿ ಸಿಗಲಿ

ಅಂಜಲಿ

ತುಂಬ ಬೇಜಾರಾಗಿದೆ. ನಿಮ್ಮಷ್ಟು ವಿಧೇಯ ವ್ಯಕ್ತಿ ಬೇರೆಯವರನ್ನು ನಾನು ಭೇಟಿ ಮಾಡಿಲ್ಲ. ನನ್ನ ದುಃಖವನ್ನು ಹೇಳಲಾಗುತ್ತಿಲ್ಲ. ನಿಮ್ಮ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ಸಿಗಲಿ

ಇಂದು ಬೆಳಗ್ಗೆ ಏನಾಯ್ತು? ಪುನೀತ್ ರಾಜ್‌ಕುಮಾರ್ ಹಠಾತ್ ಸಾವಿಗೆ ಕಾರಣವೇನು?

ಅದಾ ಶರ್ಮಾ

ಅಭಿಮಾನಿಗಳ ಜೊತೆ ನಗುತ್ತ ಅವರು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು, ಫೋಟೋಕ್ಕೆ ಪೋಸ್ ಕೊಡುತ್ತಿದ್ರು. ಸೆಟ್‌ನಲ್ಲಿ ಎಲ್ಲರೂ ಖುಷಿಯಿಂದ ಇರಬೇಕು, ಎಲ್ಲರ ಮುಖದಲ್ಲಿಯೂ ನಗು ಇರಲಿ ಅಂತ ಬಯಸುತ್ತಿದ್ದರು. ಹಾಗಾಗಿಯೇ ಅವರು ನೆನಪಿರುತ್ತಾರೆ.

ದೇವಿಶ್ರೀ ಪ್ರಸಾದ್

ದೊಡ್ಡ ಕುಟುಂಬದ ಸಹಜ ವ್ಯಕ್ತಿ ಅವರು. ನನ್ನ ಸಂಗೀತ ಎಷ್ಟು ಇಷ್ಟ ಅಂತ ಅವರು ಸದಾ ನನಗೆ ಹೇಳುತ್ತಿದ್ರು. ಅವರ ತಾಯಿ, ಕುಟುಂಬ ಕೂಡ ತುಂಬ ಒಳ್ಳೆಯದಾಗಿತ್ತು. ಒಳ್ಳೆಯ ಜನರಿಗೆ ಯಾಕೆ ಹೀಗೆ ಆಗತ್ತೆ?

ದುಲ್ಕರ್ ಸಲ್ಮಾನ್
ಜೆಂಟಲ್‌ಮ್ಯಾನ್. ತುಂಬಲಾರದ ನಷ್ಟ. ಇಡೀ ಕುಟುಂಬ, ಅಭಿಮಾನಿಗಳಿಗೆ ನನ್ನ ಸಂತಾಪಗಳು

ರಾಧಿಕಾ ಶರತ್‌ಕುಮಾರ್
ನಾವು ಕ್ಷಣಕ್ಕೆ ಬೆಲೆ ಕೊಡೋದಿಲ್ಲ. ಅದೀಗ ಮುಗೀತು

ಅರ್ಮಾನ್ ಮಲ್ಲಿಕ್
ಈ ಸುದ್ದಿ ನಿಜ ಅಂತ ನಂಬಲು ತುಂಬ ಕಷ್ಟಪಟ್ಟೆ. ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಷ್ಟ.

ಪ್ರಣೀತಾ ಸುಭಾಷ್

ಶಾಕಿಂಗ್

ಜರ್ಮನಿಯಿಂದ ಪುನೀತ್ ರಾಜ್‌ಕುಮಾರ್ ಮಗಳೊಬ್ಬಳು ಬರಬೇಕು: ರಾಘವೇಂದ್ರ ರಾಜ್‌ಕುಮಾರ್

ಪ್ರಕಾಶ್ ರಾಜ್
ಇದು ಸರಿಯಲ್ಲ, ಬೇಗ ಹೋದ್ರಿ

ನಿವಿನ್ ಪೌಲಿ

ಆತ್ಮಕ್ಕೆ ಶಾಂತಿ ಸಿಗಲಿ

ಚಿರಂಜೀವಿ
ಶಾಕಿಂಗ್, ಹೃದಯ ಒಡೆದಿದೆ. ಕನ್ನಡ ಚಿತ್ರರಂಗಕ್ಕೆ, ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಇಡೀ ಕುಟುಂಬ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಸಿಗಲಿ

ಸುನೀಲ್ ಶೆಟ್ಟಿ

ಪುನೀತ್ ರಾಜ್‌ಕುಮಾರ್ ಇನ್ನಿಲ್ಲ ಅಂತ ಸುದ್ದಿ ಕೇಳಿ ನಡುಗಿದ್ದೇನೆ. 46 ವಯಸ್ಸಾಗಿತ್ತು. ಬೇಗ ಹೋದ್ರಿ ನನ್ನ ಸೂಪರ್ ಸ್ಟಾರ್ ಗೆಳೆಯ. ದೇವರು ಕುಟುಂಬ, ಅಭಿಮಾನಿಗಳಿಗೆ ಶಕ್ತಿ ನೀಡಲಿ

ಅನಿಲ್ ಕಪೂರ್
ನಿಜಕ್ಕೂ ಶಾಕಿಂಗ್ ಆಗಿದೆ, ಕುಟುಂಬಕ್ಕೆ ಶಕ್ತಿ ಸಿಗಲಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌