ಆ್ಯಪ್ನಗರ

ಡ್ರಗ್ ಮಾಫಿಯಾ ಕುರಿತು ಮತ್ತೊಮ್ಮೆ ಸ್ಫೋಟಕ ಹೇಳಿಕೆ ನೀಡಿದ ಇಂದ್ರಜಿತ್ ಲಂಕೇಶ್‌!

ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರಂಭದಿಂದಲೂ ಡ್ರಗ್ ಮಾಫಿಯಾವನ್ನು ವಿರೋಧಿಸಿಕೊಂಡೇ ಬಂದಿದ್ದಾರೆ. ಜಾಲದಲ್ಲಿ ಇರುವವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿಕೊಂಡು ಬಂದಿದ್ದಾರೆ. ಇದೀಗ ಮತ್ತೊಂದಿಷ್ಟು ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ.

Vijaya Karnataka Web 21 Sep 2020, 6:34 pm
ಡ್ರಗ್ ಮಾಫಿಯಾ ಜೊತೆಗೆ ಸ್ಯಾಂಡಲ್‌ವುಡ್‌ನ ಕೆಲವರಿಗೆ ನಂಟು ಇದೆ ಎಂಬ ಆಘಾತಕಾರಿ ಮಾಹಿತಿ ಹೋರಬೀಳುತ್ತಿದ್ದಂತೆಯೇ, ಆರಂಭದಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್‌ ಹೇಳಿಕೆ ನೀಡಿದ್ದರು. ಚಿತ್ರರಂಗದಲ್ಲಿ ಒಂದಷ್ಟು ಮಂದಿ ಈ ಜಾಲದಲ್ಲಿ ಇದ್ದಾರೆ ಎಂದು ನೇರವಾಗಿ ಹೇಳಿದ್ದರು. ಆದರೆ, ಡ್ರಗ್ ಮಾಫಿಯಾ ಕುರಿತ ತನಿಖೆ ಸಾಗುತ್ತಿರುವ ಬಗ್ಗೆ ಅವರಿಗೆ ಅಸಮಾಧಾನ ಉಂಟಾಗಿದೆ. 'ಪೊಲೀಸರು ತನಿಖೆ ಮಾಡುತ್ತಿದ್ದರೂ ಅವರ ಕೈಯನ್ನು ಯಾರೋ ಕಟ್ಟಿ ಹಾಕಿರುವಂತೆ ಕಾಣುತ್ತಿದೆ, ಒತ್ತಡ ಇರುವಂತೆ ಕಾಣುತ್ತಿದೆ. ಇದು ಯಾವುದೇ ಧರ್ಮಕ್ಕೆ ಸಂಬಂಧಪಟ್ಟ ವಿಚಾರವಲ್ಲ. ಇಡೀ ಪ್ರಕರಣವನ್ನು ಬೇರೆ ಕಡೆಗೆ ತಿರುಗಿಸಲಾಗುತ್ತಿದೆ. ಇದು ಸರ್ಕಸ್ ಥರ ಕಾಣಿಸುತ್ತಿದೆ. ಇದು ರಾಜಕೀಯದ ಕೋನ ಇದೆ. ಕೋಮು ಬಣ್ಣ ನೀಡಬೇಡಿ' ಎಂದಿದ್ದಾರೆ.
Vijaya Karnataka Web ಡ್ರಗ್ ಮಾಫಿಯಾ ಕುರಿತು ಮತ್ತೊಮ್ಮೆ ಸ್ಫೋಟಕ ಹೇಳಿಕೆ ನೀಡಿದ ಇಂದ್ರಜಿತ್ ಲಂಕೇಶ್‌!


ಇಂದು (ಸೆ.21) ಪತ್ರಿಕಾಗೋಷ್ಠಿಯನ್ನು ಕರೆದು ಮಾತನಾಡಿದ ಇಂದ್ರಜಿತ್‌, 'ನಟ-ನಿರ್ದೇಶಕರ ಮಕ್ಕಳು, ರಾಜಕಾರಣಿಗಳ ಮಕ್ಕಳು ಈ ದಂಧೆಯಲ್ಲಿದ್ದಾರೆ. ಡ್ರಗ್ ಮಾಫಿಯಾದಲ್ಲಿ ಇರುವವರನ್ನು ಹೊರಗೆಳೆಯಬೇಕು. ನಾಮಕಾವಸ್ಥೆಗೆ ಸುಮ್ಮನೆ ತನಿಖೆ ಮಾಡ್ತಿದ್ದಾರೆ ಅನಿಸುತ್ತಿದೆ. ಸಿಬಿಐ ತನಿಖೆ ಮಾಡಬೇಕು. ಆಗಲೇ ಇದ್ದಕ್ಕೆ ಉತ್ತರ ಸಿಗಲಿದೆ. ರಾಜಕಾರಣಿಗಳ ಹೆಸರು ಹೊರಬರಲಿದೆ. ರಾಜಕಾರಣಿ ಪುತ್ರ ಆದಿತ್ಯ ಆಳ್ವನನ್ನು ಇನ್ನೂ ಬಂಧಿಸಲು ಆಗಿಲ್ಲ. ಪ್ರಕರಣದ ಮೊದಲ ಆರೋಪಿಯನ್ನು ಕೂಡ ಬಂಧಿಸಿಲ್ಲ' ಎಂದಿದ್ದಾರೆ.

ಸಿಬಿಐ ತನಿಖೆ ಆಗಬೇಕು!
'ಅಮಿತ್ ಶಾ ಅವರಿಗೆ ಹುಷಾರಿಲ್ಲ. ಕರ್ನಾಟಕದಿಂದ ಮಾಹಿತಿಗಳು ಕೇಂದ್ರಕ್ಕೆ ಸರಿಯಾಗಿ ತಲುಪುತ್ತಿಲ್ಲ ಎನಿಸುತ್ತಿದೆ. ಅಮಿತ್‌ ಶಾ ಆಗಿದ್ದರೆ, ಇಷ್ಟೊತ್ತಿಗೆ ಡ್ರಗ್ ಮಾಫಿಯಾವನ್ನು ಸಿಬಿಐ ತನಿಖೆಗೆ ಕೊಡುತ್ತಿದ್ದರು. ಇದು ಮಾತ್ರವಲ್ಲ, ಕೆಜಿ ಹಳ್ಳಿ-ಡಿಜಿ ಹಳ್ಳಿ ಪ್ರಕರಣವನ್ನು ಕೊಡುತ್ತಿದ್ದರು. ಎಂಎಲ್ಎ ಮನೆ ಸುಡೋದು ಸಣ್ಣ ವಿಷಯವೇ? ಅಮಿತ್ ಶಾ ಅವರು ಕ್ರಮ ತೆಗೆದುಕೊಳ್ಳಬೇಕು. ಅವರ ಅನಾರೋಗ್ಯವೇ ಇವರಿಗೆ ಅನುಕೂಲವಾಗಿದೆ ಎನಿಸುತ್ತದೆ' ಎಂದು ಹೇಳಿದ್ದಾರೆ ಇಂದ್ರಜಿತ್‌.

ಡ್ರಗ್ಸ್‌ ಮಾಫಿಯಾ: ನಿರೂಪಕ ಅಕುಲ್‌ ಬಾಲಾಜಿ, ನಟ ಸಂತೋಷ್‌ ಕುಮಾರ್‌ಗೆ ಸಿಸಿಬಿ ನೋಟಿಸ್‌!

ತನಿಖೆ ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ!
'ಪ್ರಕರಣದಲ್ಲಿರುವ ಪ್ರಮುಖ ವ್ಯಕ್ತಿಗಳನ್ನು ಇಲ್ಲಿ ವಿಚಾರಣೆಗೂ ಕರೆಸುತ್ತಿಲ್ಲ. ಇದು ನನಗೆ ಯಾಕೋ ಒಂದು ರೀತಿಯ ಸಂಶಯ ಮೂಡಿಸುತ್ತಿದೆ. ಡ್ರಗ್ ಮಾಫಿಯಾದಲ್ಲಿ ಇಬ್ಬರು ಹುಡುಗಿಯರು ಮಾತ್ರ ಇರೋದಾ? ಯಾವ ರಾಜಕಾರಣಿ ಮಕ್ಕಳು ಇಲ್ಲವೇ? ನಾಯಕನಟರಿಲ್ಲವೇ? ಪ್ರಭಾವಿ ವ್ಯಕ್ತಿಗಳ ಮಕ್ಕಳು ಇಲ್ಲವೇ? ಆ ಕುರಿತು ಮಾಹಿತಿ ಅವರಿಗೆ ಗೊತ್ತಿದೆ. ಆದರೂ, ಅವರನ್ನೆಲ್ಲ ಯಾಕೆ ಕರೆಸುತ್ತಿಲ್ಲ? ತನಿಖೆ ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ. ಸಾಕ್ಷಿಗಳೇ ಇಲ್ಲದೇ ಏನೇನೋ ಆರೋಪ ಮಾಡಲಾಗುತ್ತಿದೆ. ಡ್ರಗ್ ಮಾಫಿಯಾ ಬ್ರಾಂಡ್ ಅಂಬಾಸಿಡರ್‌ಗಳನ್ನು ಹಿಡಿದುಕೊಂಡು ಬಂದು ತನಿಖೆ ಮಾಡಿದಾಗಲೇ, ಒಂದು ಒಳ್ಳೆಯ ಸಂದೇಶ ನೀಡಲು ಸಾಧ್ಯ. ನಾನು ಕೊಟ್ಟ ಲಿಸ್ಟ್‌ನಲ್ಲಿ ಕೆಲವರನ್ನು ವಿಚಾರಣೆಗೆ ಕರೆದಿದ್ದಾರೆ. ಇನ್ನೂ ಹಲವಾರು ಜನರನ್ನು ಕರೆಯಬೇಕಿದೆ' ಎಂದು ಇಂದ್ರಜಿತ್ ಹೇಳಿದ್ದಾರೆ.

ಸಂಜನಾ ಗಲ್ರಾನಿ ಮುಸ್ಲಿಂ ಧರ್ಮಕ್ಕೆ ಮತಾಂತರ? ಹೊಸ ಬಾಂಬ್‌ ಸಿಡಿಸಿದ ಪ್ರಶಾಂತ್‌ ಸಂಬರಗಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌