ಆ್ಯಪ್ನಗರ

ಕನ್ನಡ ವರ್ಣಮಾಲೆಗಾಗಿ ಸಿನಿಮಾದವರಿಗೆ ಸಾಥ್‌ ನೀಡಿದ ಇನ್ಫೋಸಿಸ್‌ ಸುಧಾಮೂರ್ತಿ

ವಿಶ್ವ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಇನ್ಪೋಸಿಸ್‌ ಸಂಸ್ಥೆಯ ಮುಖ್ಯಸ್ಥೆ ಸುಧಾಮೂರ್ತಿ ಕನ್ನಡ ನಾಡು-ನುಡಿ, ಮಹಿಳೆಯರ ಸಬಲೀಕರಣ ಮುಂತಾದ ಸಮಾಜಮುಖಿ ಕಾರ್ಯಗಳಿಗೆ ಸದಾ ಕೈ ಜೋಡಿಸುತ್ತಾರೆ. ಈಗ ಕನ್ನಡ ವರ್ಣಮಾಲೆಗೆ ಸಂಬಂಧಿಸಿದ ಒಂದು ಹಾಡನ್ನು ಬಿಡುಗಡೆ ಮಾಡಿದ್ದಾರೆ.

Vijaya Karnataka Web 2 Jan 2020, 2:23 pm
ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅವರ 'ಇಂಡಿಯಾ ವರ್ಸಸ್‌ ಇಂಗ್ಲೆಂಡ್‌' ಚಿತ್ರ ಬಿಡುಗಡೆಗೆ ಹತ್ತಿರವಾಗುತ್ತಿದೆ. ಈಗಾಗಲೇ ಹಾಡುಗಳು ಸೌಂಡು ಮಾಡುತ್ತಿದ್ದು, ಮತ್ತೊಂದು ಹೊಸ ಗೀತೆಯನ್ನು ಸುಧಾಮೂರ್ತಿ ಅವರಿಂದ ರಿಲೀಸ್‌ ಮಾಡಿಸಲಾಗಿದೆ. ಕನ್ನಡ ವರ್ಣಮಾಲೆಯ ಕುರಿತು ಇಡೀ ಹಾಡಿನ ಸಾಹಿತ್ಯ ರಚನೆ ಆಗಿರುವುದು ವಿಶೇಷ.
Vijaya Karnataka Web infosys sudha murthy releases new song from india vs england film
ಕನ್ನಡ ವರ್ಣಮಾಲೆಗಾಗಿ ಸಿನಿಮಾದವರಿಗೆ ಸಾಥ್‌ ನೀಡಿದ ಇನ್ಫೋಸಿಸ್‌ ಸುಧಾಮೂರ್ತಿ


ಸುಮಲತಾ ಅಂಬರೀಷ್‌ ನಟಿಸಿರುವ ಹಾಡು
ಈ ಸಿನಿಮಾದಲ್ಲಿ ವಸಿಷ್ಠ ಸಿಂಹ ಮತ್ತು ಮಾನ್ವಿತಾ ಕಾಮತ್‌ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಹೀರೋ ತಾಯಿ ಪಾತ್ರದಲ್ಲಿ ಸುಮಲತಾ ಅಂಬರೀಷ್‌ ಅಭಿನಯಿಸಿದ್ದಾರೆ. ಕನ್ನಡ ವರ್ಣಮಾಲೆ ಕುರಿತ ಈ ಹಾಡಿನಲ್ಲಿ ಸುಮಲತಾ ಕಾಣಿಸಿಕೊಂಡಿದ್ದಾರೆ. ವಿಶ್ವದ ಎಲ್ಲ ಮಕ್ಕಳಿಗೆ ಈ ಗೀತೆಯನ್ನು ಚಿತ್ರತಂಡ ಅರ್ಪಣೆ ಮಾಡುತ್ತಿದೆ. ಇಡೀ ಹಾಡನ್ನು ಇಂಗ್ಲೆಂಡ್‌ನಲ್ಲಿ ಚಿತ್ರೀಕರಿಸಲಾಗಿದೆ. ಮುತ್ತೂರು ನಂದಕುಮಾರ್‌ ಸಾಹಿತ್ಯ ಬರೆದಿದ್ದು, ಇಂದೂ ನಾಗರಾಜ್‌ ಧ್ವನಿ ನೀಡಿದ್ದಾರೆ. 'ಇಂಡಿಯಾ ವರ್ಸಸ್‌ ಇಂಗ್ಲೆಂಡ್‌'ಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.

ಹೊಸ ಗೆಟಪ್‌ನಲ್ಲಿ ವಸಿಷ್ಠ ಸಿಂಹ
ಈ ಚಿತ್ರದಲ್ಲಿ ನಟ ವಸಿಷ್ಠ ಸಿಂಹ ಅವರಿಗೆ ಹೊಸ ಗೆಟಪ್‌ ನೀಡಲಾಗಿದೆ. ಈವರೆಗೂ ಹಲವು ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡಿದ್ದ ಅವರು ಈ ಬಾರಿ ಲವರ್‌ ಬಾಯ್‌ ಆಗಿ ಕಾಣಿಸಿಕೊಳ್ಳುವುದು ವಿಶೇಷ. ಹಾಗಾಗಿ ಅವರ ಅಭಿಮಾನಿಗಳು ಈ ಚಿತ್ರದ ಬಗ್ಗೆ ಸಖತ್‌ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ವಸಿಷ್ಠ ಅವರಿಗೆ ಮಾನ್ವಿತಾ ಜೋಡಿಯಾಗಿ ನಟಿಸಿದ್ದು, ಇಬ್ಬರ ಕೆಮಿಸ್ಟ್ರಿ ಹೇಗೆ ಮೂಡಿಬಂದಿದೆ ಎಂಬುದರ ಝಲಕ್‌ ಈಗಾಗಲೇ ಹಾಡುಗಳಲ್ಲಿ ಕಾಣಿಸಿದೆ.

ಅನಂತ್ ನಾಗ್‌ಗೆ ಮೊಮ್ಮಗಳಾದ ಮಾನ್ವಿತಾ

ಜ.24ರಂದು ವಿಶ್ವಾದ್ಯಂತ ರಿಲೀಸ್‌
'ಇಂಡಿಯಾ ವರ್ಸಸ್‌ ಇಂಗ್ಲೆಂಡ್‌' ಯಾವಾಗ ಬಿಡುಗಡೆ ಆಗಲಿದೆ ಎಂಬ ಪ್ರಶ್ನೆಗೂ ಈಗ ಉತ್ತರ ಸಿಕ್ಕಿದೆ. ಜ.24ರಂದು ರಿಲೀಸ್‌ ಮಾಡುವುದಾಗಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕರ್ನಾಟಕ ಮಾತ್ರವಲ್ಲದೆ, ವಿಶ್ವಾದ್ಯಂತ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಬಹುಪಾಲು ಚಿತ್ರೀಕರಣ ಇಂಗ್ಲೆಂಡ್‌ನಲ್ಲಿ ನಡೆದಿದೆ. ಹಾಗಾಗಿ ಕೆಲವು ದಿನಗಳ ಹಿಂದೆ ಲಂಡನ್‌ನಲ್ಲಿ ಪ್ರೀಮಿಯರ್‌ ಪ್ರದರ್ಶನ ಏರ್ಪಡಿಸಲಾಗಿತ್ತು. ಅಲ್ಲಿನ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌