ಕ್ರೀಡಾ ಪ್ರೇಮಿಗಳು ಈಗ ಐಪಿಎಲ್ ಜಪ ಮಾಡುತ್ತಿದ್ದಾರೆ. ಅನೇಕರಿಗೆ ಕ್ರಿಕೆಟ್ ಅಂದರೆ ತುಂಬ ಇಷ್ಟ. ಸೆಲೆಬ್ರಿಟಿಗಳು ಸೇರಿದಂತೆ ಅನೇಕರು ಈಗ ಆರ್ಸಿಬಿ ಗೆಲ್ಲಬೇಕು ಎಂದು ಹೇಳುತ್ತಿದ್ದಾರೆ. ಈ ನಡುವೆ ಐಪಿಎಲ್ 13ರ ಆವೃತ್ತಿಯಲ್ಲಿ ಪಂಜಾಬ್-ಡೆಲ್ಲಿ ತಂಡದ ನಡುವೆ ರೋಚಕ ಪಂದ್ಯ ನಡೆದಿದೆ. ಇದರಲ್ಲಿ ಕನ್ನಡದ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ಗೆ ಹೀರೋ ಆಗಿ ಮಿಂಚಿದ್ದಾರೆ. ಹೀಗಾಗಿ ಮಯಾಂಕ್ ಅವರ ಆಟಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ನಟ ಕಿಚ್ಚ ಸುದೀಪ್ ಎಲ್ಲರಿಗೂ ಒಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೀಗ ಉತ್ತರ ಹುಡುಕಬೇಕಿದೆ. ಇದರ ಜೊತೆಗೆ ನಟ / ರಾಜಕಾರಣಿ ಆರ್ಸಿಬಿಗೆ ಜೈ ಎಂದಿದ್ದಾರೆ.
ಮಯಾಂಕ್ ಅಗರ್ವಾಲ್ಗೆ ಸುದೀಪ್ ಕೇಳಿದ ಪ್ರಶ್ನೆ ಏನು?
ಮ್ಯಾಚ್ ಸೂಪರ್ ಓವರ್ಗೆ ನಡೆದಿತ್ತು. ಪಂದ್ಯದ ಕೊನೆವರೆಗೂ ಮಯಾಂಕ್ ಸಖತ್ ಆಗಿ ಆಡಿದ್ದರು. ಆದರೆ ಸೂಪರ್ ಓವರ್ವರೆಗೆ ಮಯಾಂಕ್ ಯಾಕೆ ಆಡಲಿಲ್ಲ ಎಂಬುದು ಕಿಚ್ಚನ ಪ್ರಶ್ನೆ. ಅನೇಕರಿಗೆ ಈ ಪ್ರಶ್ನೆ ಮೂಡದೇ ಇರಬಹುದು.
'ತುಂಬ ಚೆನ್ನಾಗಿ ಆಡಿದ್ದೀರ ಮಯಾಂಕ್ ಅಗರ್ವಾಲ್. ನಿಮ್ಮ ಬಗ್ಗೆ ನನಗೆ ತುಂಬ ಹೆಮ್ಮೆಯಾಗುತ್ತಿದೆ. ನೀವು ಯಾಕೆ ಸೂಪರ್ ಓವರ್ವರೆಗೆ ಆಡಿದ ಮೂವರಲ್ಲಿ ನೀವು ಯಾಕೆ ಇರಲಿಲ್ಲ ಎಂದು ಆಶ್ಚರ್ಯವಾಯ್ತು. ಕೊರೊನಾ ವೈರಸ್ ಮತ್ತು ಇನ್ನಿತರ ಸಮಸ್ಯೆಗಳ ಮಧ್ಯೆ ಒಳ್ಳೆಯ ಆಟ ನೋಡಿ ತುಂಬ ಖುಷಿಯಾಯ್ತು. ಚಿಯರ್ಸ್ ಮೈ ಫ್ರೆಂಡ್' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ವಿರಾಟ್ ಕೊಹ್ಲಿಗೆ ವಿಶ್ ಮಾಡಿದ ಸುದೀಪ್
'ಅಂತೂ ಆ ದಿನ ಬಂದಿದೆ. ಇದು ಹೊಸ ಸೀಸನ್, ಹೊಸ ಆರಂಭ. ಒಳ್ಳೆಯ ಮ್ಯಾಚ್ಗಾಗಿ ಎದುರು ನೋಡುತ್ತಿದ್ದೇನೆ. ಆರ್ಸಿಬಿ ತಂಡ ಹಾಗೂ ವಿರಾಟ್ ಕೊಹ್ಲಿಗೆ ಒಳ್ಳೆಯದಾಗಲಿ' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಸುದೀಪ್ ಅವರಿಗೆ ಕ್ರಿಕೆಟ್ ಅಂದರೆ ಪಂಚಪ್ರಾಣ. ಸಿನಿಮಾ ಜೊತೆಗೆ ಕ್ರಿಕೆಟ್ ಬಗ್ಗೆ ಕಿಚ್ಚ ಉತ್ತಮವಾದ ಒಲವು ಇಟ್ಟುಕೊಂಡಿದ್ದಾರೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಲ್ಲಿ ಪಾಲ್ಗೊಳ್ಳುವ ಸುದೀಪಗ ತಂಡವನ್ನು ಮುನ್ನಡೆಸಿದ್ದರು. ಅನೇಕ ಕ್ರಿಕೆಟಿಗರ ಜೊತೆ ಸುದೀಪ್ ಉತ್ತಮವಾದ ಬಾಂಧವ್ಯ ಹೊಂದಿದ್ದಾರೆ.
Also Read-RCB ತಂಡದ ಹೆಸರು ಬದಲಾಗಬೇಕು! 'ಜಾಲಿ ಡೇಸ್' ಸಿನಿಮಾ ನಟ ಪ್ರದೀಪ್ ಹೀಗೆ ಹೇಳಿದ್ದು ಯಾಕೆ?
ಸೋತರು ಗೆದ್ದರು ಎಂದೆಂದಿಗೂ ಆರ್ಸಿಬಿ ಎಂದ ನಿಖಿಲ್
'13ನೇ ಆವೃತಿಯ ಐಪಿಎಲ್ನಲ್ಲಿನ ನಮ್ಮ ತಂಡದ ಮೊದಲ ಪಂದ್ಯ ಇಂದು. ಶುಭವಾಗಲಿ, ಗೆಲುವಿನೊಂದಿಗೆ ಮುನ್ನುಗ್ಗಿ. ಸೋತರು ಗೆದ್ದರು ಎಂದೆಂದಿಗೂ ಆರ್ಸಿಬಿ' ಎಂದು ನಿಖಿಲ್ ಕುಮಾರಸ್ವಾಮಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಅನೇಕ ಕನ್ನಡದ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಆರ್ಸಿಬಿಗೆ ಜೈ ಎಂದಿದ್ದಾರೆ.
Also Read-IPL 2020: 'ಈ ಸಲ ಕಪ್ ನಮ್ದೇ' ಎಂದ ಸ್ಯಾಂಡಲ್ವುಡ್ ಸ್ಟಾರ್ಗಳು; ತಾರೆಯರ ಐಪಿಎಲ್ ಕ್ರೇಜ್!
ಮಯಾಂಕ್ ಅಗರ್ವಾಲ್ಗೆ ಸುದೀಪ್ ಕೇಳಿದ ಪ್ರಶ್ನೆ ಏನು?
ಮ್ಯಾಚ್ ಸೂಪರ್ ಓವರ್ಗೆ ನಡೆದಿತ್ತು. ಪಂದ್ಯದ ಕೊನೆವರೆಗೂ ಮಯಾಂಕ್ ಸಖತ್ ಆಗಿ ಆಡಿದ್ದರು. ಆದರೆ ಸೂಪರ್ ಓವರ್ವರೆಗೆ ಮಯಾಂಕ್ ಯಾಕೆ ಆಡಲಿಲ್ಲ ಎಂಬುದು ಕಿಚ್ಚನ ಪ್ರಶ್ನೆ. ಅನೇಕರಿಗೆ ಈ ಪ್ರಶ್ನೆ ಮೂಡದೇ ಇರಬಹುದು.
'ತುಂಬ ಚೆನ್ನಾಗಿ ಆಡಿದ್ದೀರ ಮಯಾಂಕ್ ಅಗರ್ವಾಲ್. ನಿಮ್ಮ ಬಗ್ಗೆ ನನಗೆ ತುಂಬ ಹೆಮ್ಮೆಯಾಗುತ್ತಿದೆ. ನೀವು ಯಾಕೆ ಸೂಪರ್ ಓವರ್ವರೆಗೆ ಆಡಿದ ಮೂವರಲ್ಲಿ ನೀವು ಯಾಕೆ ಇರಲಿಲ್ಲ ಎಂದು ಆಶ್ಚರ್ಯವಾಯ್ತು. ಕೊರೊನಾ ವೈರಸ್ ಮತ್ತು ಇನ್ನಿತರ ಸಮಸ್ಯೆಗಳ ಮಧ್ಯೆ ಒಳ್ಳೆಯ ಆಟ ನೋಡಿ ತುಂಬ ಖುಷಿಯಾಯ್ತು. ಚಿಯರ್ಸ್ ಮೈ ಫ್ರೆಂಡ್' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ವಿರಾಟ್ ಕೊಹ್ಲಿಗೆ ವಿಶ್ ಮಾಡಿದ ಸುದೀಪ್
'ಅಂತೂ ಆ ದಿನ ಬಂದಿದೆ. ಇದು ಹೊಸ ಸೀಸನ್, ಹೊಸ ಆರಂಭ. ಒಳ್ಳೆಯ ಮ್ಯಾಚ್ಗಾಗಿ ಎದುರು ನೋಡುತ್ತಿದ್ದೇನೆ. ಆರ್ಸಿಬಿ ತಂಡ ಹಾಗೂ ವಿರಾಟ್ ಕೊಹ್ಲಿಗೆ ಒಳ್ಳೆಯದಾಗಲಿ' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಸುದೀಪ್ ಅವರಿಗೆ ಕ್ರಿಕೆಟ್ ಅಂದರೆ ಪಂಚಪ್ರಾಣ. ಸಿನಿಮಾ ಜೊತೆಗೆ ಕ್ರಿಕೆಟ್ ಬಗ್ಗೆ ಕಿಚ್ಚ ಉತ್ತಮವಾದ ಒಲವು ಇಟ್ಟುಕೊಂಡಿದ್ದಾರೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಲ್ಲಿ ಪಾಲ್ಗೊಳ್ಳುವ ಸುದೀಪಗ ತಂಡವನ್ನು ಮುನ್ನಡೆಸಿದ್ದರು. ಅನೇಕ ಕ್ರಿಕೆಟಿಗರ ಜೊತೆ ಸುದೀಪ್ ಉತ್ತಮವಾದ ಬಾಂಧವ್ಯ ಹೊಂದಿದ್ದಾರೆ.
Also Read-RCB ತಂಡದ ಹೆಸರು ಬದಲಾಗಬೇಕು! 'ಜಾಲಿ ಡೇಸ್' ಸಿನಿಮಾ ನಟ ಪ್ರದೀಪ್ ಹೀಗೆ ಹೇಳಿದ್ದು ಯಾಕೆ?
ಸೋತರು ಗೆದ್ದರು ಎಂದೆಂದಿಗೂ ಆರ್ಸಿಬಿ ಎಂದ ನಿಖಿಲ್
'13ನೇ ಆವೃತಿಯ ಐಪಿಎಲ್ನಲ್ಲಿನ ನಮ್ಮ ತಂಡದ ಮೊದಲ ಪಂದ್ಯ ಇಂದು. ಶುಭವಾಗಲಿ, ಗೆಲುವಿನೊಂದಿಗೆ ಮುನ್ನುಗ್ಗಿ. ಸೋತರು ಗೆದ್ದರು ಎಂದೆಂದಿಗೂ ಆರ್ಸಿಬಿ' ಎಂದು ನಿಖಿಲ್ ಕುಮಾರಸ್ವಾಮಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಅನೇಕ ಕನ್ನಡದ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಆರ್ಸಿಬಿಗೆ ಜೈ ಎಂದಿದ್ದಾರೆ.
Also Read-IPL 2020: 'ಈ ಸಲ ಕಪ್ ನಮ್ದೇ' ಎಂದ ಸ್ಯಾಂಡಲ್ವುಡ್ ಸ್ಟಾರ್ಗಳು; ತಾರೆಯರ ಐಪಿಎಲ್ ಕ್ರೇಜ್!