ಆ್ಯಪ್ನಗರ

ಬೌಲಿಂಗ್‌ನಿಂದ ಮೋಡಿ ಮಾಡಿದ್ದ ಕ್ರಿಕೆಟಿಗ ಇರ್ಫಾನ್ ಪಠಾಣ್‌ ಈಗ ಆ್ಯಕ್ಟರ್! ಇಲ್ಲಿದೆ ಸಿನಿಮಾದ ಫಸ್ಟ್‌ ಲುಕ್!

ಕ್ರಿಕೆಟ್‌ ಅಂಗಳಕ್ಕೂ ಬಣ್ಣದ ಲೋಕಕ್ಕೂ ಒಂಥರ ನಿಕಟ ಸಂಬಂಧವಿದೆ. ಅನೇಕ ಕ್ರಿಕೆಟರ್‌ಗಳು ಕ್ಯಾಮರಾ ಎದುರು ನಿಂತು ಬಣ್ಣ ಹಚ್ಚಿ ನಟಿಸಿದ್ದಾರೆ. ಈಗ ಟೀಮ್ ಇಂಡಿಯಾದ ಎಡಗೈ ವೇಗಿ ಇರ್ಫಾನ್ ಪಠಾಣ್ ನೇರ ದಕ್ಷಿಣ ಭಾರತ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ!

Vijaya Karnataka Web 27 Oct 2020, 10:25 pm
2004ರಲ್ಲಿ ಭಾರತ ಕ್ರಿಕೆಟ್‌ ತಂಡಕ್ಕೆ ಎಡಗೈ ಬೌಲರ್ ಆಗಿ ಪದಾರ್ಪಣೆ ಮಾಡಿದ್ದ ಇರ್ಫಾನ್ ಪಠಾಣ್, ಉತ್ತಮ ಆಟಗಾರರಾಗಿ ಗಮನಸೆಳೆದಿದ್ದರು. ಬೌಲಿಂಗ್‌ ಜತೆಯಾಗಿ ಬ್ಯಾಟಿಂಗ್‌ನಲ್ಲಿಯೂ ಸ್ಕೋರ್ ಮಾಡಿದ್ದ ಅವರು ಈಚೆಗೆ ಕ್ರಿಕೆಟ್‌ನಿಂದ ದೂರ ಉಳಿದ್ದಾರೆ. ಆದರೆ, ಬಣ್ಣದ ಲೋಕಕ್ಕೆ ಹತ್ತಿರವಾಗಿದ್ದಾರೆ. ಕಳೆದ ವರ್ಷವೇ ಇರ್ಫಾನ್ ತಮಿಳು ಸಿನಿಮಾವೊಂದರಲ್ಲಿ ಬಣ್ಣ ಹಚ್ಚಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿತ್ತು. ಇದೀಗ ಅವರ ಪಾತ್ರ ಹಾಗೂ ಚಿತ್ರದಲ್ಲಿನ ಅವರ ಲುಕ್ ಅನ್ನು ಬಹಿರಂಗಪಡಿಸಲಾಗಿದೆ!
Vijaya Karnataka Web Irfan Pathan


'ಕೋಬ್ರಾ'ದಲ್ಲಿ ಇಂಟರ್‌ಪೋಲ್ ಆಫೀಸರ್!
'ಚಿಯಾನ್' ವಿಕ್ರಮ್‌ ಅಭಿನಯದ ಬಹುನಿರೀಕ್ಷಿತ 'ಕೋಬ್ರಾ' ಸಿನಿಮಾದಲ್ಲಿ ಇರ್ಫಾನ್ ಮೊದಲ ಬಾರಿಗೆ ಬಣ್ಣ ಹಚ್ಚಲಿದ್ದಾರೆ ಎಂದು ಈ ಹಿಂದೆಯೇ ಸುದ್ದಿ ಆಗಿತ್ತು. ಇದೀಗ ಚಿತ್ರದಲ್ಲಿ ಅವರ ಪಾತ್ರವೇನು ಎಂಬುದು ಬಹಿರಂಗೊಂಡಿದೆ. ಇರ್ಫಾನ್ 'ಕೋಬ್ರಾ'ದಲ್ಲಿ ಫ್ರಾನ್ಸ್ ಇಂಟರ್‌ಪೋಲ್ ಆಫೀಸರ್ ಅಸ್ಲನ್ ಯಿಮ್ಲಜ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ! ಇಂದು (ಅ.27) ಅವರ ಜನ್ಮದಿನ. ಆ ಸಲುವಾಗಿ ಚಿತ್ರತಂಡ ಅವರ ಫಸ್ಟ್‌ ಲುಕ್ ರಿಲೀಸ್ ಮಾಡಿ, ಶುಭಾಶಯಗಳನ್ನು ತಿಳಿಸಿದೆ.

ತಮಿಳಿನಲ್ಲಿ 'ಡಿಮೊಂಟೆ ಕಾಲೋನಿ', 'ಇಮೈಕಾ ನೋಡಿಗಳ್' ಚಿತ್ರಗಳ ಮೂಲಕ ಗಮನಸೆಳೆದಿರುವ ನಿರ್ದೇಶಕ ಆರ್‌. ಅಜಯ್ ಜ್ಞಾನಮುತ್ತು 'ಕೋಬ್ರಾ'ಗೆ ನಿರ್ದೇಶನ ಮಾಡುತ್ತಿದ್ದಾರೆ. ತೆರೆಮೇಲೆ ವಿಕ್ರಮ್‌ ಮತ್ತು ಇರ್ಫಾನ್ ಪಠಾಣ್ ಕಾಂಬಿನೇಷನ್‌ ಯಾವ ರೀತಿ ಮೂಡಿಬರಲಿದೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ ಸಿನಿಪ್ರಿಯರು. ಇನ್ನು, ಈ ಸಿನಿಮಾದ ಪಾತ್ರಕ್ಕಾಗಿ ವಿಕ್ರಮ್ 25 ವಿವಿಧ ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಕೆಜಿಎಫ್‌' ಖ್ಯಾತಿಯ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ.

'ಕೆಜಿಎಫ್‌: ಚಾಪ್ಟರ್‌ 2' ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ಪಾತ್ರದ ಬಗ್ಗೆ ಹೊಸ ಸುಳಿವು ಕೊಟ್ಟ ಪ್ರಶಾಂತ್‌ ನೀಲ್‌!

ಸಿನಿಮಾ ಹಾಗೂ ಪಾತ್ರಕ್ಕಾಗಿ ಎಂಥ ರಿಸ್ಕ್ ಬೇಕಾದರೂ ತೆಗೆದುಕೊಳ್ಳಲು ರೆಡಿ ಇರುವ ನಟ ವಿಕ್ರಮ್. ಈ ಸಿನಿಮಾದಲ್ಲಿಯೂ ಅಂಥದ್ದೊಂದು ರಿಸ್ಕ್‌ ಅನ್ನು ಅವರು ತೆಗೆದುಕೊಂಡಿದ್ದರಂತೆ. ಆ ಬಗ್ಗೆ ಹಿಂದೊಮ್ಮೆ ನಿರ್ದೇಶಕ ಅಜಯ್ ಹೇಳಿಕೊಂಡಿದ್ದರು. 'ಸಿನಿಮಾದಲ್ಲಿ ವಿಕ್ರಮ್‌ ಅವರ ಕೈ, ಕಾಲು ಮತ್ತು ಬಾಯಿಯನ್ನು ಕಟ್ಟಿಹಾಕಿ ನೀರಿನಲ್ಲಿ ಉಲ್ಟಾ ಮುಳುಗಿಸುವ ದೃಶ್ಯ ಇದೆ. ಈ ಅಂಡರ್‌ ವಾಟರ್‌ ದೃಶ್ಯದ ಚಿತ್ರೀಕರಣ ಅಪಾಯಕಾರಿ ಆದ್ದರಿಂದ ವಿಕ್ರಮ್‌ ಬದಲಿಗೆ ಸಾಹಸ ಕಲಾವಿದರನ್ನು ಬಳಸಿಕೊಳ್ಳಲು ಪ್ಲ್ಯಾನ್‌ ಮಾಡಿಕೊಳ್ಳಲಾಗಿತ್ತು. ಆದರೆ ಅದಕ್ಕೆ ವಿಕ್ರಮ್‌ ಅವರು ಅವಕಾಶ ನೀಡದೆ, ಸ್ವತಃ ತಾವೇ ಅಭಿನಯಿಸಲು ಮುಂದಾದರು. ಜೀವದ ಹಂಗು ತೊರೆದು ಆ ದೃಶ್ಯದಲ್ಲಿ ಅಭಿನಯಿಸಿಯೇ ಬಿಟ್ಟರು' ಎಂಬ ವಿಚಾರವನ್ನು ನಿರ್ದೇಶಕರು ಬಹಿರಂಗಪಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌