ಆ್ಯಪ್ನಗರ

'ಕಿಚ್ಚ' ಸುದೀಪ್ ನಿರ್ದೇಶನ ಮಾಡ್ತಿರೋ ಸಿನಿಮಾ ರಿಮೇಕಾ? ಸ್ವಮೇಕಾ? ಇಲ್ಲಿದೆ ಸ್ಪಷ್ಟನೆ!

ಸುದೀಪ್ ಹೆಚ್ಚಾಗಿ ರಿಮೇಕ್ ಸಿನಿಮಾಗಳಿಗೆ ನಿರ್ದೇಶನ ಮಾಡಲಿದ್ದಾರೆ ಮಾತು ಹಿಂದಿನಿಂದಲೂ ಕೇಳಿಬರುತ್ತಲೇ ಇದೆ. ಇದೀಗ ಅವರೊಂದು ಸಿನಮಾಕ್ಕೆ ನಿರ್ದೇಶನ ಮಾಡುವುದಕ್ಕೆ ಅಣಿಯಾಗಿದ್ದಾರೆ. ಆದರೆ, ಅದೂ ರಿಮೇಕ್ ಎಂಬ ಮಾತು ಕೇಳಿಬಂದಿತ್ತು.

Vijaya Karnataka Web 18 Nov 2019, 2:20 pm
'ಮೈ ಆಟೋಗ್ರಾಫ್‌' ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ಹೇಳುವ ಮೂಲಕ ನಿರ್ದೇಶನಕ್ಕೂ ಕಾಲಿಟ್ಟಿದ್ದರು ನಟ 'ಕಿಚ್ಚ' ಸುದೀಪ್‌. ಆನಂತರ ಅವರು 'ಜಸ್ಟ್ ಮಾತ್‌ ಮಾತಲ್ಲಿ', 'ವೀರ ಮದಕರಿ', 'ನಂ 73, ಶಾಂತಿನಿವಾಸ', 'ಕೆಂಪೇಗೌಡ', 'ಮಾಣಿಕ್ಯ' ಸಿನಿಮಾಗಳನ್ನು ನಿರ್ದೇಶಿಸಿದರು. ಆದರೆ, ಅದರಲ್ಲಿ 'ಜಸ್ಟ್ ಮಾತ್‌ ಮಾತಲ್ಲಿ' ಹೊರತುಪಡಿಸಿ ಮಿಕ್ಕಿದವು ರಿಮೇಕ್ ಸಿನಿಮಾಗಳೇ. ಇದೀಗ ಕೆಲ ದಿನಗಳಿಂದ ಸುದೀಪ್‌ ಸಿನಿಮಾವೊಂದನ್ನು ನಿರ್ದೇಶನ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಅಲ್ಲದೆ, ಅದು ತೆಲುಗಿನ 'ಭರತ್ ಅನೇ ನೇನು' ಚಿತ್ರದ ರಿಮೇಕ್ ಎನ್ನಲಾಗಿತ್ತು.
Vijaya Karnataka Web ಸುದೀಪ್_


Jai Jagadish Elimination: ಬಿಗ್ ಬಾಸ್ ಮನೆಯ ಜರ್ನಿ ಮುಗಿಸಿದ ಜೈ ಜಗದೀಶ್

ಈ ಸುದ್ದಿ ಎಲ್ಲೆಡೆ ವ್ಯಾಪಕವಾಗಿ ಹಬ್ಬಿತ್ತು. ಈ ಬಾರಿಯೂ ಸುದೀಪ್‌ಗೆ ಕೈ ಹಾಕಿದರೆ? ಎಂಬಂತಹ ಮಾತಗಳು ಸಿನಿ ವಲಯದಲ್ಲಿ ಕೇಳಿಬಂದಿದ್ದವು. ಆದರೆ, ಅದು ಸುಳ್ಳು ಎಂದು ಸ್ವತಃ ಸುದೀಪ್ ಸ್ಟಷ್ಟನೆ ನೀಡಿದ್ದಾರೆ. 'ನಾನು ಮಾಡುತ್ತಿರುವುದು ಒರಿಜಿನಲ್‌ ಸ್ಕ್ರಿಪ್ಟ್‌. ಅದಕ್ಕಾಗಿ ನಮ್ಮ ತಂಡದ ಸದಸ್ಯರು ಕೆಲಸ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ' ಎಂದಿದ್ದಾರೆ. ಅಲ್ಲಿಗೆ, 'ಭರತ್‌ ಅನೇ ನೇನು' ನಿರ್ದೇಶನ ಮಾಡುವ ಯಾವ ಯೋಜನೆಯೂ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಸುದೀಪ್‌.

ಕ್ರಿಕೆಟರ್ ಅನಿಲ್ ಕುಂಬ್ಳೆ ಹಾಕಿದ್ದ ಸವಾಲಿಗೆ ಉತ್ತರ ಕೊಟ್ಟ ಗಾಯಕ ವಿಜಯ್ ಪ್ರಕಾಶ್ ; ಆ ಉತ್ತರ ಹೆಂಗಿತ್ತು ಗೊತ್ತಾ?

ಸದ್ಯ ಅವರು 'ಕೋಟಿಗೊಬ್ಬ 3' ಚಿತ್ರದ ಶೂಟಿಂಗ್‌ನಲ್ಲಿ ಮಗ್ನರಾಗಿದ್ದಾರೆ. ಅಲ್ಲದೆ, ಹಿಂದಿಯಲ್ಲಿ ಸಲ್ಮಾನ್‌ ಖಾನ್ ಜತೆ ಅವರು ನಟಿಸಿರುವ 'ದಬಾಂಗ್ 3' ಚಿತ್ರವು ಡಿ.20ರಂದು ತೆರೆಗೆ ಬರುತ್ತಿದೆ. ಆ ಸಿನಿಮಾದಲ್ಲಿ ಬಲ್ಲಿ ಸಿಂಗ್ ಎಂಬ ಖಡಕ್‌ ವಿಲನ್‌ ಪಾತ್ರ ಮಾಡಿದ್ದಾರೆ ಸುದೀಪ್‌. ಕನ್ನಡಕ್ಕೂ ಈ ಸಿನಿಮಾ ಡಬ್ ಆಗಿ ತೆರೆಗೆ ಬರುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌