ಆ್ಯಪ್ನಗರ

Jagapathi Babu: ಕನ್ನಡದ ಸ್ಟಾರ್ ನಟನ ಸಿನಿಮಾದಲ್ಲಿ ಖಡಕ್‌ ವಿಲನ್ ಆದ ಜಗಪತಿ ಬಾಬು!

ತೆಲುಗು-ತಮಿಳು ಭಾಷೆಯ ಸಿನಿಮಾರಂಗದಲ್ಲಿ ಬೇಡಿಕೆಯ ವಿಲನ್ ಆಗಿ ಗುರುತಿಸಿಕೊಂಡಿದ್ದಾರೆ ನಟ ಜಗಪತಿ ಬಾಬು. ಇದೀಗ ಅವರು ಕನ್ನಡದಲ್ಲೊಂದು ಸಿನಿಮಾ ಮಾಡುತ್ತಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ.

Vijaya Karnataka Web 8 Oct 2020, 7:30 pm
ಬಹುಭಾಷಾ ನಟ ಜಗಪತಿ ಬಾಬು, ಒಂದು ಕಾಲದಲ್ಲಿ ಹೀರೋ ಆಗಿ ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬೇಡಿಕೆಯಲ್ಲಿದ್ದರು. ವಯಸ್ಸಾದಂತೆಲ್ಲ ಅವರು ಪೋಷಕ ಪಾತ್ರಗಳಿಗೆ ಶಿಫ್ಟ್ ಆದರು. ಅದರಲ್ಲೂ ವಿಲನ್ ಪಾತ್ರಗಳಿಗೆ ಅವರೇ ಬೇಕು ಎಂದು ಸ್ಟಾರ್ ಹೀರೋಗಳು ಡಿಮ್ಯಾಂಡ್ ಮಾಡುವಷ್ಟರ ಮಟ್ಟಿಗೆ ಜಗಪತಿ ಬಾಬು ಫೇಮಸ್‌. ಸದ್ಯ ಅವರು ಕನ್ನಡದ ಒಂದು ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಅದರಲ್ಲಿ ಅವರು ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ, ಆ ಸಿನಿಮಾ ಯಾವುದು? 'ಮದಗಜ'.
Vijaya Karnataka Web Jagapathi Babu


ಶ್ರೀಮುರಳಿ ಸಿನಿಮಾದಲ್ಲಿ ಜಗಪತಿ
ಸ್ಯಾಂಡಲ್‌ವುಡ್‌ನ ಸ್ಟಾರ್ ನಟರಲ್ಲೊಬ್ಬರಾದ ಶ್ರೀಮುರಳಿ ನಟಿಸುತ್ತಿರುವ 'ಮದಗಜ' ಚಿತ್ರದಲ್ಲಿ ಜಗಪತಿ ಬಾಬು ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೈಸೂರು ಸುತ್ತಮುತ್ತ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಜಗಪತಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಅಂದಹಾಗೆ, 'ಮದಗಜ' ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ಉಮಾಪತಿ ಶ್ರೀನಿವಾಸ್. ಅವರದೇ ನಿರ್ಮಾಣದ 'ರಾಬರ್ಟ್‌'ನಲ್ಲೂ ಜಗಪತಿ ನಟಿಸಿದ್ದರು. ಈಗ 'ಮದಗಜ'ದಲ್ಲೂ ವಿಲನ್ ಆಗಿ ನಟಿಸುತ್ತಿದ್ದಾರೆ. 'ಕನ್ನಡ ಸಿನಿಮಾಗಳಲ್ಲಿ ನಟಿಸುವುದಕ್ಕೆ ಖುಷಿಯಾಗುತ್ತಿದೆ. ನಾನೀಗ ಕನ್ನಡವನ್ನು ಕಲಿತಿದ್ದೇನೆ ಕೂಡ. ಶೀಘ್ರದಲ್ಲೇ 'ರಾಬರ್ಟ್‌' ಸಿನಿಮಾಕ್ಕೆ ನಾನು ಡಬ್ಬಿಂಗ್ ಮಾಡಲಿದ್ದೇನೆ' ಎನ್ನುತ್ತಾರೆ ಜಗಪತಿ ಬಾಬು.

ಶ್ರೀಮುರಳಿ ಸ್ವೀಟ್ ಪರ್ಸನ್‌!
ನಟ ಶ್ರೀಮುರಳಿ ಬಗ್ಗೆ ಮೆಚ್ಚುಗೆ ಸೂಚಿಸುವ ಜಗಪತಿ ಬಾಬು, 'ನಾನು ಶ್ರೀಮುರಳಿಯೊಂದಿಗೆ ಮಾತು ಆರಂಭಿಸಿದ್ದೇನೆ. ಅವರು ತುಂಬ ಸಿಹಿಯಾದ ವ್ಯಕ್ತಿತ್ವವುಳ್ಳವರು' ಎನ್ನುತ್ತಾರೆ. ವಾರಣಾಸಿಯಲ್ಲಿ ಮೊದಲ ಹಂತದ ಶೂಟಿಂಗ್ ಮುಗಿಸಿರುವ ಚಿತ್ರತಂಡ, ಲಾಕ್‌ಡೌನ್‌ ನಂತರ ಮೈಸೂರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶೂಟಿಂಗ್ ಮಾಡುತ್ತಿದೆ. ಶ್ರೀಮುರಳಿ, ಜಗಪತಿ ಬಾಬು, ನಾಯಕಿ ಆಶಿಕಾ ರಂಗನಾಥ್ ಸೇರಿದಂತೆ ಅನೇಕರು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

'ಮದಗಜ' ಶ್ರೀಮುರಳಿ ಎದುರು ಖಳನಾಗಿ ನಟಿಸಲಿದ್ದಾರಾ ವಿಜಯ್ ಸೇತುಪತಿ?

ವಿಜಯ್ ಸೇತುಪತಿ ವಿಲನ್ ಎನ್ನಲಾಗಿತ್ತು!
ಕೆಲ ತಿಂಗಳ ಹಿಂದೆ ಇಂಥದ್ದೊಂದು ಸುದ್ದಿ ಹಬ್ಬಿತ್ತು. 'ಮದಗಜ' ಚಿತ್ರಕ್ಕೆ ವಿಲನ್ ಆಗಿ ತಮಿಳಿನ ವಿಜಯ್ ಸೇತುಪತಿ ಬರಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿತ್ತು. ಜೊತೆಗೆ ಜಗಪತಿ ಬಾಬು ಹೆಸರೂ ಕೂಡ ಚಾಲ್ತಿಯಲ್ಲಿತ್ತು. ಇವರಿಬ್ಬರಲ್ಲಿ ಒಬ್ಬರು ವಿಲನ್ ಆಗುವುದು ಖಚಿತ ಎಂದು ಚಿತ್ರತಂಡ ಮಾಹಿತಿ ನೀಡಿತ್ತು. ಅಂತಿಮವಾಗಿ ಶ್ರೀಮುರಳಿ ಎದುರು ಜಗಪತಿ ಬಾಬು ಖಳ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. 'ಅಯೋಗ್ಯ' ಖ್ಯಾತಿಯ ಮಹೇಶ್ ಇದರ ನಿರ್ದೇಶನ ಮಾಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌