ಆ್ಯಪ್ನಗರ

ಹಲವು ಬಾರಿ ಪರಿಮಳಾ ಜಗ್ಗೇಶ್‌ ಅನುಭವಕ್ಕೆ ಬಂದಿತ್ತು ರಾಘವೇಂದ್ರ ಸ್ವಾಮಿಗಳ ಪವಾಡ! ಏನದು?

ಜಗ್ಗೇಶ್‌ ಕುಟುಂಬಕ್ಕೆ ರಾಘವೇಂದ್ರ ಸ್ವಾಮಿಗಳ ಮೇಲೆ ಅಪಾರ ಭಕ್ತಿ. ಪ್ರತಿ ಬಾರಿ ಅವರು ಮಂತ್ರಾಲಯಕ್ಕೆ ಹೋಗಿ ಬರುವಾಗಲೂ ಪವಾಡ ನಡೆಯುತ್ತಿತ್ತಂತೆ! ಆ ಪವಾಡ ಏನು ಎಂಬುದನ್ನು ಬಹಿರಂಗಪಡಿಸಿದ್ದಾರೆ ಪರಿಮಳಾ ಜಗ್ಗೇಶ್‌.

Vijaya Karnataka Web 25 Nov 2020, 6:27 pm
ತಮ್ಮ ವಿಭಿನ್ನ ಮ್ಯಾನರಿಸಂ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ನಟ ಜಗ್ಗೇಶ್‌ ಕನ್ನಡ ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ್ದಾರೆ. ಇಷ್ಟು ವರ್ಷಗಳಲ್ಲಿ ಅವರಿಗೆ ಬೆಂಬಲವಾಗಿ ನಿಂತವರು ಪತ್ನಿ ಪರಿಮಳಾ. ಜಗ್ಗೇಶ್‌ ಅವರ ಪ್ರತಿ ಹೆಜ್ಜೆಯಲ್ಲೂ ಅವರು ಸಾಥ್‌ ನೀಡಿದ್ದಾರೆ. ಆ ಎಲ್ಲ ಅನುಭವಗಳನ್ನು ಅವರು ಈಗ ಹಂಚಿಕೊಂಡಿದ್ದಾರೆ.
Vijaya Karnataka Web ಜಗ್ಗೇಶ್‌, ಪರಿಮಳಾ ಜಗ್ಗೇಶ್‌


ಜಗ್ಗೇಶ್‌ ಮತ್ತು ಪರಿಮಳಾ ಭೇಟಿಯಾದಾಗ ಜಗ್ಗೇಶ್‌ಗೆ 19 ವರ್ಷ ವಯಸ್ಸು. ಆಗಲೇ ಅವರು ಒಂದು ಮಾತು ಹೇಳಿದ್ದರಂತೆ. 'ನಾನು ರಾಯರ ಹತ್ತಿರ ಎರಡು ವಿಚಾರ ಕೇಳುತ್ತೇನೆ. ನೀನು ಬೇಜಾರು ಮಾಡಿಕೊಳ್ಳಬೇಡ. ಮೊದಲು ನಾನು ಬಣ್ಣ ಹಚ್ಚಬೇಕು. ಕಲಾವಿದ ಆಗಬೇಕು ಎಂದು ಕೇಳಿಕೊಳ್ಳುತ್ತೇನೆ. ನಂತರ ನಿನ್ನ ಮದುವೆ ಮಾಡಿಕೊಳ್ಳಬೇಕು ಅಂತ ಕೇಳಿಕೊಳ್ಳುತ್ತೇನೆ' ಎಂದು ಜಗ್ಗೇಶ್‌ ಹೇಳಿದ್ದನ್ನು ಪರಿಮಳಾ ಈಗ ನೆನಪು ಮಾಡಿಕೊಂಡಿದ್ದಾರೆ. ಆ ಎರಡೂ ಕೋರಿಕೆಗಳನ್ನು ರಾಘವೇಂದ್ರ ಸ್ವಾಮಿ ಈಡೇರಿಸಿದರು.

'ಜಗ್ಗೇಶ್‌ ಅವರ ಈ ಬೆಳವಣಿಗೆಗೆ ಖಂಡಿತಾ ದೇವರ ಆಶೀರ್ವಾದ ಇದೆ. ಈ ಪಯಣ ಸುಲಭವಾಗಿತ್ತಾ ಎಂದರೆ ಖಂಡಿತಾ ಇಲ್ಲ. ನನ್ನ ಅಪ್ಪ-ಅಮ್ಮ ದೇವರನ್ನು ನಂಬುತ್ತಿರಲಿಲ್ಲ. ಆದರೆ ಜಗ್ಗೇಶ್‌ ಮನೆಯಲ್ಲಿ ವಾತಾವರಣ ಸಂಪೂರ್ಣ ಬೇರೆ ಆಗಿತ್ತು. ನಾವು ಎಷ್ಟೋ ಬಾರಿ ಮಂತ್ರಾಲಯಕ್ಕೆ ಹೋಗುವಾಗ ದುಡ್ಡು ಇರುತ್ತಿರಲಿಲ್ಲ. ಅಲ್ಲಿಗೆ ಹೋದಾಗ ಟೀ ಕುಡಿಯಲು ಕೂಡ ಕಾಸು ಇರುತ್ತಿರಲಿಲ್ಲ. ಆದರೆ ಅಲ್ಲಿಂದ ವಾಪಸ್‌ ಬಂದಮೇಲೆ ಸಿನಿಮಾ ಅವಕಾಶ ಸಿಗುತ್ತದೆ ಅಂತ ಜಗ್ಗೇಶ್‌ ಬಲವಾಗಿ ನಂಬಿದ್ದರು. ಅದೇ ರೀತಿ ಆಯಿತು' ಎನ್ನುತ್ತಾರೆ ಪರಿಮಳಾ ಜಗ್ಗೇಶ್‌.

also read: ಡಾ. ರಾಜ್‌ಕುಮಾರ್‌ ಬಗ್ಗೆ ಹಲವರಿಗೆ ತಿಳಿದಿರದ ವಿಷಯ ಬಹಿರಂಗ ಮಾಡಿದ 'ನವರಸ ನಾಯಕ' ಜಗ್ಗೇಶ್‌!

'ನಾವು ಮಂತ್ರಾಲಯದಿಂದ ವಾಪಸ್‌ ಆಗಿ ಮನೆಯಲ್ಲಿ ಹಬ್ಬ ಮಾಡುತ್ತಿರುವಾಗ ರವಿ ಅವರು ಬಂದು ಜಗ್ಗೇಶ್‌ಗೆ ದೊಡ್ಡ ಅವಕಾಶ ಸಿಕ್ಕಿದೆ ಎಂದು ಮೊದಲ ಬಾರಿ ಹೇಳಿದಾಗ ನಮಗೆ ನಿಜಕ್ಕೂ ಅಚ್ಚರಿ ಆಯಿತು. ಈ ರೀತಿ ಒಂದಲ್ಲ ಎರಡಲ್ಲ ಹಲವು ಬಾರಿ ರಾಯರ ಪವಾಡ ನಡೆದಿದೆ' ಎಂದು ರಾಘವೇಂದ್ರ ಸ್ವಾಮಿಗಳ ಮಹಿಮೆಯನ್ನು ಪರಿಮಳಾ ಸ್ಮರಿಸುತ್ತಾರೆ.

also read: ಭಾವುಕರಾಗಿ ವೇದಿಕೆಯಲ್ಲೇ ಕಣ್ಣೀರು ಹಾಕಿದ 'ನವರಸ ನಾಯಕ' ಜಗ್ಗೇಶ್‌! ಇದಕ್ಕೆ ಕಾರಣ ಏನು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌