Thalaivi trailer launch: ವೇದಿಕೆ ಮೇಲೆ ಗಳಗಳನೆ ಅತ್ತಿದ್ಯಾಕೆ ನಟಿ ಕಂಗನಾ?
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾರವರ ಜೀವನಚರಿತ್ರೆ ಆಧಾರಿತ ಸಿನಿಮಾ 'ತಲೈವಿ'. ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಇಂದು ನಡೆಯಿತು. ಈ ವೇಳೆ ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ ನಟಿ ಕಂಗನಾ ರನೌತ್.
Vijaya Karnataka Web 23 Mar 2021, 4:02 pm
ಹೈಲೈಟ್ಸ್:
- ಕಂಗನಾ ಜನ್ಮದಿನದ ಪ್ರಯುಕ್ತ ಬಿಡುಗಡೆಯಾಗಿದೆ 'ತಲೈವಿ' ಟ್ರೈಲರ್
- ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಭಾವುಕರಾದ ನಟಿ ಕಂಗನಾ
- ನಿರ್ದೇಶಕ ವಿಜಯ್ ಬಗ್ಗೆ ಮಾತನಾಡಿ ಕಣ್ಣೀರಿಟ್ಟ ಕಂಗನಾ ರನೌತ್
ಬಾಲಿವುಡ್ ನಟಿ ಕಂಗನಾ ರನೌತ್ ಅಭಿನಯದ 'ತಲೈವಿ' ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಇವತ್ತು ನಟಿ ಕಂಗನಾ ರನೌತ್ ಜನ್ಮದಿನದ ಪ್ರಯುಕ್ತ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ 'ತಲೈವಿ' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಜೀವನಚರಿತ್ರೆ ಆಧಾರಿತ ಚಿತ್ರ 'ತಲೈವಿ'. ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಇಂದು ಚೆನ್ನೈನಲ್ಲಿ ನಡೆಯಿತು. ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ವಿಜಯ್ ಬಗ್ಗೆ ಮಾತನಾಡುವಾಗ ನಟಿ ಕಂಗನಾ ರನೌತ್ ಗಳಗಳನೆ ಅತ್ತಿದ್ದಾರೆ.
ಟ್ರೈಲರ್ ಲಾಂಚ್ ಮಾಡಿದ ಬಳಿಕ ವೇದಿಕೆ ಮೇಲೆ ನಟಿ ಕಂಗನಾ ರನೌತ್ ಮಾತಿಗಿಳಿದರು. ಈ ವೇಳೆ ನಿರ್ದೇಶಕ ವಿಜಯ್ ಬಗ್ಗೆ ಮಾತಿಗಿಳಿದ ನಟಿ ಕಂಗನಾ, ''ನನ್ನ ಪ್ರತಿಭೆ ಬಗ್ಗೆ ನನಗೆ ನಂಬಿಕೆ ಮೂಡಿಸಿದ್ದು ನಿರ್ದೇಶಕ ವಿಜಯ್. ಅವರ ಬಗ್ಗೆ ಮಾತನಾಡಿದರೆ ನಾನು ಭಾವುಕಳಾಗುತ್ತೇನೆ. ನಟಿಯರ ಜೊತೆಗೆ ನಿರ್ದೇಶಕರು ಹೀಗೆ ಗೌರವಯುತವಾಗಿ ನಡೆದುಕೊಳ್ಳುವುದು ತೀರಾ ಅಪರೂಪ. ನಿರ್ದೇಶಕರಿಂದ ನಾನು ತುಂಬಾ ಕಲಿತಿದ್ದೇನೆ'' ಎಂದು ಹೇಳಿ ವೇದಿಕೆ ಮೇಲೆ ಕಣ್ಣೀರು ಹಾಕಿದರು ನಟಿ ಕಂಗನಾ.
ಇದೇ ವೇಳೆ 'ತಲೈವಿ' ಚಿತ್ರದ ಬಗ್ಗೆ ಮಾತನಾಡಿದ ನಟಿ ಕಂಗನಾ, ''ತಮಿಳುನಾಡಿನ ರಾಜಕೀಯದ ಬಗ್ಗೆ ನನಗೆ ಎಳ್ಳಷ್ಟೂ ಗೊತ್ತಿರಲಿಲ್ಲ. ಹೀಗಾಗಿ ಈ ಪಾತ್ರವನ್ನು ನಿರ್ವಹಿಸುವ ಬಗ್ಗೆ ನನಗೆ ಸಂಶಯವಿತ್ತು'' ಎಂದೂ ಕಂಗನಾ ರನೌತ್ ಹೇಳಿಕೊಂಡಿದ್ದಾರೆ.
ಇನ್ನೂ ನೆಪೋಟಿಸಂ ಬಗ್ಗೆ ಕಾಮೆಂಟ್ ಮಾಡಿದ ಕಂಗನಾ, ''ದಕ್ಷಿಣ ಭಾರತದಲ್ಲೂ ನೆಪೋಟಿಸಂ ಇರಬಹುದು. ಆದರೆ ಇಲ್ಲಿ ಗ್ರೂಪಿಸಂ ಅಥವಾ ಗ್ಯಾಂಗಿಸಂ ಇಲ್ಲ. ದಕ್ಷಿಣದಲ್ಲಿ ಇನ್ನೂ ಹೆಚ್ಚು ಚಿತ್ರಗಳನ್ನು ಅಭಿನಯಿಸುವ ಆಸೆ ನನಗಿದೆ'' ಎಂದಿದ್ದಾರೆ.
ಅಂದ್ಹಾಗೆ, 'ತಲೈವಿ' ಚಿತ್ರದಲ್ಲಿ ಕಂಗನಾ ರನೌತ್ ಜೊತೆಗೆ ಅರವಿಂದ್ ಸ್ವಾಮಿ, ನಾಸ್ಸರ್, ಭಾಗ್ಯಶ್ರೀ, ಸಮುದ್ರಖಣಿ, ಮಧುಬಾಲಾ ಮುಂತಾದವರ ದೊಡ್ಡ ತಾರಾಬಳಗವಿದೆ. ವಿಜಯ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜಿ.ವಿ.ಪ್ರಕಾಶ್ ಸಂಗೀತ ನೀಡಿದ್ದಾರೆ. ಏಪ್ರಿಲ್ 23 ರಂದು 'ತಲೈವಿ' ಬಿಡುಗಡೆಯಾಗಲಿದೆ. ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ 'ತಲೈವಿ' ನಿಮ್ಮ ಮುಂದೆ ಬರಲಿದ್ದಾರೆ.
ಟ್ರೈಲರ್ ಲಾಂಚ್ ಮಾಡಿದ ಬಳಿಕ ವೇದಿಕೆ ಮೇಲೆ ನಟಿ ಕಂಗನಾ ರನೌತ್ ಮಾತಿಗಿಳಿದರು. ಈ ವೇಳೆ ನಿರ್ದೇಶಕ ವಿಜಯ್ ಬಗ್ಗೆ ಮಾತಿಗಿಳಿದ ನಟಿ ಕಂಗನಾ, ''ನನ್ನ ಪ್ರತಿಭೆ ಬಗ್ಗೆ ನನಗೆ ನಂಬಿಕೆ ಮೂಡಿಸಿದ್ದು ನಿರ್ದೇಶಕ ವಿಜಯ್. ಅವರ ಬಗ್ಗೆ ಮಾತನಾಡಿದರೆ ನಾನು ಭಾವುಕಳಾಗುತ್ತೇನೆ. ನಟಿಯರ ಜೊತೆಗೆ ನಿರ್ದೇಶಕರು ಹೀಗೆ ಗೌರವಯುತವಾಗಿ ನಡೆದುಕೊಳ್ಳುವುದು ತೀರಾ ಅಪರೂಪ. ನಿರ್ದೇಶಕರಿಂದ ನಾನು ತುಂಬಾ ಕಲಿತಿದ್ದೇನೆ'' ಎಂದು ಹೇಳಿ ವೇದಿಕೆ ಮೇಲೆ ಕಣ್ಣೀರು ಹಾಕಿದರು ನಟಿ ಕಂಗನಾ.
ಇದೇ ವೇಳೆ 'ತಲೈವಿ' ಚಿತ್ರದ ಬಗ್ಗೆ ಮಾತನಾಡಿದ ನಟಿ ಕಂಗನಾ, ''ತಮಿಳುನಾಡಿನ ರಾಜಕೀಯದ ಬಗ್ಗೆ ನನಗೆ ಎಳ್ಳಷ್ಟೂ ಗೊತ್ತಿರಲಿಲ್ಲ. ಹೀಗಾಗಿ ಈ ಪಾತ್ರವನ್ನು ನಿರ್ವಹಿಸುವ ಬಗ್ಗೆ ನನಗೆ ಸಂಶಯವಿತ್ತು'' ಎಂದೂ ಕಂಗನಾ ರನೌತ್ ಹೇಳಿಕೊಂಡಿದ್ದಾರೆ.
ಇನ್ನೂ ನೆಪೋಟಿಸಂ ಬಗ್ಗೆ ಕಾಮೆಂಟ್ ಮಾಡಿದ ಕಂಗನಾ, ''ದಕ್ಷಿಣ ಭಾರತದಲ್ಲೂ ನೆಪೋಟಿಸಂ ಇರಬಹುದು. ಆದರೆ ಇಲ್ಲಿ ಗ್ರೂಪಿಸಂ ಅಥವಾ ಗ್ಯಾಂಗಿಸಂ ಇಲ್ಲ. ದಕ್ಷಿಣದಲ್ಲಿ ಇನ್ನೂ ಹೆಚ್ಚು ಚಿತ್ರಗಳನ್ನು ಅಭಿನಯಿಸುವ ಆಸೆ ನನಗಿದೆ'' ಎಂದಿದ್ದಾರೆ.
ಅಂದ್ಹಾಗೆ, 'ತಲೈವಿ' ಚಿತ್ರದಲ್ಲಿ ಕಂಗನಾ ರನೌತ್ ಜೊತೆಗೆ ಅರವಿಂದ್ ಸ್ವಾಮಿ, ನಾಸ್ಸರ್, ಭಾಗ್ಯಶ್ರೀ, ಸಮುದ್ರಖಣಿ, ಮಧುಬಾಲಾ ಮುಂತಾದವರ ದೊಡ್ಡ ತಾರಾಬಳಗವಿದೆ. ವಿಜಯ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜಿ.ವಿ.ಪ್ರಕಾಶ್ ಸಂಗೀತ ನೀಡಿದ್ದಾರೆ. ಏಪ್ರಿಲ್ 23 ರಂದು 'ತಲೈವಿ' ಬಿಡುಗಡೆಯಾಗಲಿದೆ. ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ 'ತಲೈವಿ' ನಿಮ್ಮ ಮುಂದೆ ಬರಲಿದ್ದಾರೆ.