ಆ್ಯಪ್ನಗರ

ಮುದ್ದು ಮಕ್ಕಳಿಗೆ ಅರ್ಥಪೂರ್ಣ ಹೆಸರುಗಳನ್ನಿಟ್ಟ ಧ್ರುವ ಸರ್ಜಾ; ಅಭಿಮಾನಿಗಳ ಮೆಚ್ಚುಗೆ

Dhruva Sarja Children's Name: 'ಆ್ಯಕ್ಷನ್ ಪ್ರಿನ್ಸ್' ಧ್ರುವ ಸರ್ಜಾ ಅವರು 2022ರ ಅಕ್ಟೋಬರ್‌ನಲ್ಲಿ ಹೆಣ್ಣು ಮಗುವಿಗೆ ತಂದೆಯಾಗಿದ್ದರು. ಆನಂತರ 2023ರ ಸೆಪ್ಟೆಂಬರ್‌ನಲ್ಲಿ ಗಂಡು ಮಗುವಿಗೆ ಅಪ್ಪನಾಗಿದ್ದರು. ಈ ಮುದ್ದಾದ ಮಕ್ಕಳ ನಾಮಕರಣವನ್ನು ಧ್ರುವ ಸರ್ಜಾ ಮಾಡಿರಲಿಲ್ಲ. ಇದೀಗ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾದ ದಿನವೇ ಮಕ್ಕಳ ನಾಮಕರಣವನ್ನು ನೆರವೇರಿಸಿದ್ದಾರೆ ಧ್ರುವ ಸರ್ಜಾ.

Authored byಅವಿನಾಶ್ ಜಿ. ರಾಮ್ | Vijaya Karnataka Web 22 Jan 2024, 7:32 pm

ಹೈಲೈಟ್ಸ್‌:

  • ರಾಮ ಮಂದಿರ ಉದ್ಘಾಟನೆ ದಿನವೇ ಧ್ರುವ ಸರ್ಜಾ ಮನೆಯಲ್ಲಿ ಸ್ಪೆಷಲ್ ಕಾರ್ಯಕ್ರಮ
  • ಮುದ್ದಿನ ಮಕ್ಕಳ ನಾಮಕರಣವನ್ನು ನೆರವೇರಿಸಿದ ನಟ ಧ್ರುವ ಸರ್ಜಾ
  • ತಮ್ಮ ಇಬ್ಬರು ಮಕ್ಕಳಿಗೆ ವಿಶೇಷ ಹೆಸರುಗಳನ್ನು ಇಟ್ಟ ಧ್ರುವ ಸರ್ಜಾ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಧ್ರುವ ಸರ್ಜಾ ಪ್ರೇರಣಾ
ನಟ ಧ್ರುವ ಸರ್ಜಾ ಅವರ ಮಕ್ಕಳಿಗೆ ನಾಮಕರಣ ಮಾಡಲಾಗಿದೆ. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಇಂದು (ಜ.22) ರಾಮ ಮಂದಿರ ಉದ್ಘಾಟನೆ ನಡೆದಿದೆ ಮತ್ತು ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವು ಭವ್ಯವಾಗಿ ಜರುಗಿದೆ. ಇದೇ ದಿನ ತಮ್ಮ ಇಬ್ಬರು ಮಕ್ಕಳಿಗೆ ನಾಮಕರಣ ಮಾಡುವುದಾಗಿ ನಟ ಧ್ರುವ ಸರ್ಜಾ ತಿಳಿಸಿದ್ದರು. ಇದೀಗ ಅದರಂತೆಯೇ, ಅದೇ ದಿನದಂದು ಮಕ್ಕಳಿಗೆ ಹೆಸರನ್ನಿಟ್ಟಿದ್ದಾರೆ. ಮಗಳಿಗೆ ರುದ್ರಾಕ್ಷಿ ಡಿ ಸರ್ಜಾ ಎಂದು ಹೆಸರನ್ನಿಟ್ಟಿರುವ ಧ್ರುವ ಸರ್ಜಾ, ಮಗನಿಗೆ ಹಯಗ್ರೀವ ಡಿ ಸರ್ಜಾ ಎಂದು ಹೆಸರನ್ನು ಇಟ್ಟಿದ್ದಾರೆ.

ಈ ಹೆಸರುಗಳ ಅರ್ಥವೇನು?

ರುದ್ರಾಕ್ಷಿ ಮತ್ತು ಹಯಗ್ರೀವ ಈ ಎರಡೂ ಹೆಸರುಗಳು ದೇವರಿಗೆ ಸಂಬಂಧಿಸಿದ ಹೆಸರುಗಳಾಗಿವೆ. ರುದ್ರಾಕ್ಷಿ ಎಂಬುದು ಪವಿತ್ರವಾದ ವಸ್ತುವಿನ ಹೆಸರಾಗಿದೆ. ಶಿವನಿಗೆ ಬಹಳ ಪ್ರಿಯವಾದ ರುದ್ರಾಕ್ಷಿ ಮಣಿಗಳು ಶಿವಭಕ್ತರ ಕೊರಳ ಮಣಿ-ಮಾಲೆಯಾಗಿ ಉಪಯೋಗಿಸಲ್ಪಡುತ್ತವೆ. ಇನ್ನು, ಹಯಗ್ರೀವ ಎನ್ನುವುದು ವಿಷ್ಣುವಿನ ಕುದುರೆಮುಖದ ಅವತಾರದ ಹೆಸರಾಗಿದೆ. ಹೀಗೆ ತಮ್ಮ ಮಕ್ಕಳಿಗೆ ಧ್ರುವ ಸರ್ಜಾ ಅವರು ದೇವರ ಕುರಿತ ಹೆಸರುಗಳನ್ನು ನಾಮಕರಣ ಮಾಡಿರುವುದಕ್ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ. ಧ್ರುವ ಸರ್ಜಾ ಅವರ ಈ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

Kannada Films: ಒಂದೇ ಬ್ಯಾನರ್‌ನಲ್ಲಿ ರೆಡಿ ಆಗುತ್ತಿವೆ ದರ್ಶನ್, ಯಶ್, ಧ್ರುವ ಸರ್ಜಾ ಸಿನಿಮಾಗಳು!

ಧ್ರುವ ಫಾರ್ಮ್‌ಹೌಸ್‌ನಲ್ಲಿ ನಡೆದ ಕಾರ್ಯಕ್ರಮ

2022ರ ಅಕ್ಟೋಬರ್ 2 ರಂದು ಹೆಣ್ಣು ಮಗುವಿನ ತಂದೆಯಾಗಿದ್ದರು ನಟ ಧ್ರುವ ಸರ್ಜಾ. ಹಾಗೆಯೇ, ಅವರು 2023ರ ಸೆಪ್ಟಂಬರ್‌ನಲ್ಲಿ ಗಂಡು ಮಗುವಿಗೆ ತಂದೆಯಾಗಿದ್ದರು. ಆದರೆ ಮಕ್ಕಳ ಹೆಸರುಗಳೇನು ಎಂಬುದನ್ನು ಅವರು ಎಲ್ಲಿಯೂ ಹೇಳಿರಲಿಲ್ಲ. ಮಗನಿಗೆ ಈ ನಾಲ್ಕು ತಿಂಗಳು ತುಂಬಿದ್ದರೆ, ಮಗಳಿಗೆ ಆಗಲೇ ಒಂದೂವರೆ ವರ್ಷ ತುಂಬಿದೆ. ಇದೀಗ ಈ ಇಬ್ಬರು ಕಂದಮ್ಮಗಳ ನಾಮಕರಣ ಸಮಾರಂಭವನ್ನು ಕನಕಪುರ ರಸ್ತೆಯಲ್ಲಿರುವ ತಮ್ಮ ಫಾರ್ಮ್‌ ಹೌಸ್‌ನಲ್ಲಿ ಧ್ರುವ ಸರ್ಜಾ ಅವರು ಅದ್ದೂರಿಯಾಗಿ ನೆರವೇರಿಸಿದ್ದಾರೆ. ಈ ಹಿಂದೆ ಪತ್ನಿಯ ಸೀಮಂತ ಸಮಾರಂಭವನ್ನು ಕೂಡ ಇದೇ ಫಾರ್ಮ್‌ ಹೌಸ್‌ನಲ್ಲಿ ಧ್ರುವ ಸರ್ಜಾ ಅವರು ನೆರವೇರಿಸಿದ್ದರು.

'ಮಗ ಹುಟ್ಟಿದಕೂಡಲೇ ಅಣ್ಣ ಚಿರುಗೆ ಫೋನ್ ಮಾಡೋಕೆ ಹೋದೆ'- ನಟ Dhruva Sarja

ನಾಮಕರಣ ಸಮಾರಂಭಕ್ಕೆ ಬಂದ ಸಂಜಯ್ ದತ್

ಇನ್ನು, ಧ್ರುವ ಸರ್ಜಾ ಅವರ ಮಕ್ಕಳ ನಾಮಕರಣ ಸಮಾರಂಭಕ್ಕೆ ಬಾಲಿವುಡ್ ನಟ ಸಂಜಯ್ ದತ್ ಅವರು ಆಗಮಿಸಿದ್ದು ವಿಶೇಷವಾಗಿತ್ತು. ಅಂದಹಾಗೆ, ಧ್ರುವ ಸರ್ಜಾ ಜೊತೆಗೆ 'ಕೆಡಿ' ಸಿನಿಮಾದಲ್ಲಿ ಸಂಜಯ್ ದತ್ ಬಣ್ಣ ಹಚ್ಚಿದ್ದಾರೆ. ಇನ್ನು, 'ಜೋಗಿ' ಪ್ರೇಮ್, ರಕ್ಷಿತಾ ಪ್ರೇಮ್, ನಿರ್ಮಾಪಕ ಸುಪ್ರೀತ್ ಮುಂತಾದವರು ಸಮಾರಂಭಕ್ಕೆ ಆಗಮಿಸಿದ್ದರು. ಪುತ್ರ ರಾಯನ್ ರಾಜ್ ಸರ್ಜಾ ಜೊತೆಗೆ ನಟಿ ಮೇಘನಾ ರಾಜ್ ಸರ್ಜಾ ಅವರು ಧ್ರುವ ಮಕ್ಕಳ ನಾಮಕರಣ ಸಮಾರಂಭದಲ್ಲಿ ಭಾಗಿಯಾದರು.

ಮತ್ತೊಮ್ಮೆ ಪಾಲಕರಾದ Dhruva Sarja; 'ಪ್ರೇರಣಾ ಶಂಕರ್‌, ಮಗು ಆರೋಗ್ಯವಾಗಿದ್ದಾರೆ' ಎಂದ 'ಆಕ್ಷನ್ ಪ್ರಿನ್ಸ್'
ಇನ್ನು, ಧ್ರುವ ಸರ್ಜಾ ಅವರ ಸಿನಿಮಾಗಳ ಬಗ್ಗೆ ಹೇಳುವುದಾದರೆ, ಅವರ 'ಮಾರ್ಟಿನ್' ಮತ್ತು 'ಕೆಡಿ' ಸಿನಿಮಾಗಳ ಶೂಟಿಂಗ್ ಕೆಲಸಗಳು ಬಿರುಸಿನಿಂದ ಸಾಗಿದ್ದು, ಇದೇ ವರ್ಷ ಎರಡೂ ಸಿನಿಮಾಗಳು ತೆರೆಗೆ ಬರುವ ನಿರೀಕ್ಷೆ ಇದೆ.
ಲೇಖಕರ ಬಗ್ಗೆ
ಅವಿನಾಶ್ ಜಿ. ರಾಮ್
'ವಿಜಯ ಕರ್ನಾಟಕ' ಡಿಜಿಟಲ್ ವಿಭಾಗದಲ್ಲಿ 2019ರ ಸೆಪ್ಟೆಂಬರ್‌ನಿಂದ ಪತ್ರಕರ್ತನಾಗಿ ಅವಿನಾಶ್ ಜಿ. ರಾಮ್ ಕೆಲಸ ಮಾಡುತ್ತಿದ್ದಾರೆ. ಚಿನ್ನದ ಪದಕದೊಂದಿಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ ಕಳೆದ 10 ವರ್ಷಗಳಿಂದ ಸಿನಿಮಾ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದೆ. ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ನಾಲ್ಕು ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಅವಿನಾಶ್‌ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ಪ್ರವಾಸ, ಓದು, ಸಂಗೀತ ಕೇಳುವುದು ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌